ನಾಗಾರಾಧನೆಯೆಂದರೆ ಪ್ರಕೃತಿ ಪೂಜೆ


Team Udayavani, Jul 25, 2020, 6:15 AM IST

ನಾಗಾರಾಧನೆಯೆಂದರೆ ಪ್ರಕೃತಿ ಪೂಜೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನಾಗ-ಭೂಮಿ-ವೃಕ್ಷದ ನಡುವೆ ಅವಿನಾಭಾವ ಸಂಬಂಧವಿದೆ. ಮಾನವನಿಂದ ಮೊತ್ತಮೊದಲು ದೈವೀಕರಿಸಲ್ಪಟ್ಟ ಶಕ್ತಿ ನಾಗವಾಗಿದೆ.

ಪ್ರಾಚೀನ ಕಾಲದಿಂದಲೂ ನಾಗ ದೇವತೆಗಳನ್ನು ಆರಾಧಿಸಿಕೊಂಡು ಬರಲಾಗುತ್ತಿದ್ದು, ನಾಗರ ಪಂಚಮಿಯಂದು ವಿಶೇಷವಾಗಿ ನಾಗ ದೇವರನ್ನು ಪೂಜಿಸಲಾಗುತ್ತದೆ.

ನಾಗನ ಆಚರಣೆಯೆಂದರೆ ಪ್ರಕೃತಿಯ ಆಚರಣೆಯೇ ಆಗಿದೆ.

ಸಮೃದ್ಧವಾದ ಬೆಟ್ಟ ಗುಡ್ಡಗಳಿಂದ ಆವೃತವಾದ ಭೂಭಾಗ ತುಳುನಾಡು. ಇದು ಉರಗ ಸಂತತಿಯ ಬೆಳವಣಿಗೆಗೆ ಸಹಜವಾಗಿ ಅನುಕೂಲಕರವಾಗಿದೆ. ನಿಸರ್ಗ ಶಕ್ತಿಗಳ ಮುಂದೆ ಭಯ ಭಕ್ತಿಯಿಂದ ನಾಗನನ್ನು ಆರಾಧಿಸಿಕೊಂಡು ಬರಲಾಗಿದೆ. ಪರಿಸರ -ಕಾಡು ಬಗೆಗಿನ ಒಂದು ರೀತಿಯ ಭಯ-ಭಕ್ತಿ ಪೂರ್ವಜರಿಂದಲೂ ಇತ್ತು.

ಕಾಡು ಪ್ರಾಣಿಗಳ ಸಂತತಿಯನ್ನು ಉಳಿಸಿಕೊಂಡು ಮಾನವ ತನ್ನ ಜೀವನವನ್ನು ಸಾಂಗವಾಗಿ ಸಾಗಿಸುವ ನಿಟ್ಟಿನಲ್ಲಿ ಹಲವಾರು ಆರಾಧನೆಗಳನ್ನು ನಡೆಸುತ್ತಾ ಬಂದಿದ್ದಾನೆ. ಆದರಲ್ಲಿ ಪ್ರಮುಖವಾದುದು ನಾಗಾರಾಧನೆ. ಹೀಗಾಗಿಯೆ ನಾಗ-ವೃಕ್ಷ ಸಂಬಂಧವನ್ನು ಆವಳಿ ಚೇತನಗಳೆಂದು ವ್ಯಾಖ್ಯಾನಿಸಬಹುದು.

ದುಃಖದ ನಡುವೆ ಭಕ್ತಿ ಪ್ರಧಾನ
ನಾಗರ ಪಂಚಮಿ ಅಂಗವಾಗಿ ದೇವಸ್ಥಾನ ಮತ್ತು ನಾಗಬನಗಳಲ್ಲಿ ನಾಗದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ವರ್ಷವೂ ನಾಗರ ಪಂಚಮಿ ಆಚರಣೆಯು ಶ್ರದ್ಧೆ, ಭಕ್ತಿ, ಭಾವದಿಂದ ಸಂಭ್ರಮದಿಂದ ನಡೆಯುತ್ತಿತ್ತು. ಆದರೆ ಈ ಬಾರಿ ಜಗತ್ತಿಗೆ ಆವರಿಸಿಕೊಂಡ ಕೋವಿಡ್‌-19 ಸೋಂಕು ನಾಡಿನ ಜನತೆಯಲ್ಲಿ ತಲ್ಲಣ ಸೃಷ್ಟಿಸಿದೆ. ಸಂಭ್ರಮದ ಬದಲಿಗೆ ಭಕ್ತಿ ಮಾತ್ರ ಉಳಿದುಕೊಂಡಿದೆ. ಭಕ್ತರಲ್ಲಿ ಸಂಭ್ರಮಕ್ಕಿಂತ ಆತಂಕದ ಕರಿಛಾಯೆ ಆವರಿಸಿರುವುದು ದುಃಖ ತಂದಿದೆ.

ಮನೆಗಳಲ್ಲಿ ಸರಳವಾಗಿ ಆಚರಿಸಿ
ಜೀವಸಂಕುಲಗಳು ಹರಿದಾಡುವ ನಾಗನ ನೆಲೆ, ನಾಗ ಸನ್ನಿಧಿ ಕುಕ್ಕೆಯಲ್ಲಿ ನಾಗರ ಪಂಚಮಿಯಂದು ವಿಶೇಷ ಪ್ರಾರ್ಥನೆ, ಆರಾಧನೆಗಳು ಪೂರ್ವದಿಂದಲೂ ನಡೆಯುತ್ತ ಬರುತ್ತಿದೆ. ಪೂರ್ವ ಸಂಪ್ರದಾಯದಂತೆ ಈ ಬಾರಿಯೂ ನಾಗ ಸನ್ನಿಧಿಯಲ್ಲಿ ದೇವರಿಗೆ ಪೂಜೆ, ತನು, ಸೀಯಾಳ ಸಮರ್ಪಣೆ ಶಿಷ್ಟಾಚಾರದಂತೆ ನಡೆಯಲಿದೆ. ನಾಗರ ಪಂಚಮಿ ದಿನ ದೇವಸ್ಥಾನಗಳಲ್ಲಿ ಸಾಮೂಹಿಕ ಆರಾಧನೆಗೆ ಅಸಾಧ್ಯವಾದ ಸ್ಥಿತಿಯಲ್ಲಿ ಎಲ್ಲರೂ ತಮ್ಮ ಮನೆಗಳಲ್ಲಿ ಸರಳ ಆಚರಣೆಯಲ್ಲಿ ತೊಡಗುವುದು ಉತ್ತಮ.

ಪಂಚಮಿ ತರುವಾಯವೂ ಆರಾಧನೆಗೆ ಯೋಗ್ಯ
ತುಳುನಾಡು ಸಹಿತ ನಾಡಿನ ಬಹುತೇಕ ಕಡೆಗಳಲ್ಲಿ ಭಕ್ತರ ಮನೆಗಳಲ್ಲಿ ನಾಗನ ಮೂರ್ತಿ, ನಾಗಬನಗಳಿವೆ. ಅಂಥವರು ಸಂಪ್ರದಾಯ ಬದ್ಧವಾಗಿ ತಮ್ಮ ಮನೆಗಳಲ್ಲಿ ಸರಳ ಆರಾಧನೆಯಲ್ಲಿ ತೊಡಗಿಕೊಳ್ಳಬೇಕು. ಈ ಮೂಲಕ ಸಂಕಷ್ಟ ಹರಣ, ಸರ್ವದೋಷ ನಿವಾರಕ ಶ್ರೀ ನಾಗ ದೇವರಿಗೆ ಮೊರೆಯಿಡುವುದು ಉತ್ತಮ. ನಾಗಾರಾಧನೆಗೆ ನಾಗರ ಪಂಚಮಿ ದಿನ ವಿಶೇಷವಾಗಿದ್ದರೂ ತರುವಾಯದ ದಿನಗಳಲ್ಲಿ ಕೂಡ ನಾಗ ಸಂಬಂಧಿ ಪೂಜೆ, ವಿಧಿ ವಿಧಾನಗಳಲ್ಲಿ ತೊಡಗಿಸಿಕೊಳ್ಳಬಹುದು.

ಭಕ್ತರಲ್ಲಿ ಆತಂಕ ಬೇಡ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ದಿನ ಪೂರ್ವಶಿಷ್ಟ ಸಂಪ್ರದಾಯದಂತೆ ನಾಗಾರಾಧನೆ ನಡೆಯುತ್ತದೆ. ಭಕ್ತರಿಗೆ ಸಾಮೂಹಿಕ ಪೂಜೆಯಲ್ಲಿ ತೊಡಗಲು ಅವಕಾಶವಿಲ್ಲ ಎಂದು ಯಾರೂ ಆತಂಕ ಪಡಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ, ಪೂಜೆ, ಸೇವೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ.

ದುರಿತ ದೂರವಾಗಲು ಪ್ರಾರ್ಥನೆ
ನಾಗರ ಪಂಚಮಿ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಉಪಯುಕ್ತವಾಗಿದೆ. ಶ್ರಾವಣ ತಿಂಗಳ ಶುಕ್ಲ ಪಕ್ಷದ ಪಂಚಮಿ ದಿನ ನಡೆಯುವ ನಾಗರ ಪಂಚಮಿ ದಿನ ಶ್ರೀನಾಗ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿಕೊಳ್ಳಲಾಗುವುದು.

ಲೋಕ ಕಂಟಕವಾಗಿರುವ ಕೋವಿಡ್‌-19 ದೂರವಾಗಿ, ಪ್ರಾಣಿ-ಪಕ್ಷಿ ಮನುಕುಲದ ದುರಿತಗಳು ದೂರವಾಗಲಿ ಎಂದು ಲೋಕಕಲ್ಯಾಣಾರ್ಥ ಪ್ರಾರ್ಥಿಸಲಾಗುವುದು. ನಾಡಿನ ಸರ್ವರಿಗೂ ಆರೋಗ್ಯಭಾಗ್ಯ ವೃದ್ಧಿಸಿ ಸಮೃದ್ಧಿಯಾಗಲೆಂದು ಪ್ರಾರ್ಥಿಸಲಾಗುವುದು.

– ವೇ|ಮೂ| ಸೀತಾರಾಮ ಎಡಪಡಿತ್ತಾಯ, ಪ್ರಧಾನ ಅರ್ಚಕರು, ತಂತ್ರಿಗಳು, ಕುಕ್ಕೆ ಶ್ರೀ ಸುಬ್ರಹ್ಮಣ್ಯ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.