ವೈಮಾನಿಕ ದಾಳಿಗೆ ಸಜ್ಜಾಗಿತ್ತೇ ಚೀನ?

ಗಡಿ ಸಮೀಪದ ಕಶ್ಗರ್‌ ವಾಯು ನೆಲೆಗೆ ಚೀನ ಆಧುನಿಕ ಸ್ಪರ್ಶ

Team Udayavani, Aug 4, 2020, 9:10 AM IST

ವೈಮಾನಿಕ ದಾಳಿಗೆ ಸಜ್ಜಾಗಿತ್ತೇ ಚೀನ?

ಲಡಾಖ್‌/ ನವದೆಹಲಿ: ಲಡಾಖ್‌ನಲ್ಲಿ ಇತ್ತೀಚೆಗೆ ಭಾರತ ಹಾಗೂ ಚೀನ ಸೈನಿಕರು ಪರಸ್ಪರ ಮುಖಾಮುಖಿಯಾಗುವುದಕ್ಕೆ ಸುಮಾರು ತಿಂಗಳುಗಳ ಮುಂಚೆಯೇ ಚೀನ ಸರಕಾರ ತನ್ನಲ್ಲಿನ ಕಶ್ಗರ್‌ ವಾಯು ನೆಲೆಯನ್ನು ಆಧುನೀಕರಣಗೊಳಿಸಿರುವ ವಿಚಾರ ಬೆಳಕಿಗೆ ಬಂದಿದೆ. ಲಡಾಖ್‌ನಲ್ಲಿನ ಮುಖಾಮುಖಿಗೂ ಮುನ್ನವೇ ಗಡಿ ಪ್ರದೇಶದಲ್ಲಿನ ಈ ವಾಯು ನೆಲೆಯನ್ನು ಆಧುನೀಕ ರಣಗೊಳಿಸಿರುವ ಚೀನದ ಕ್ರಮದ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಗಳು ಭಾರತೀಯ ರಕ್ಷಣಾ ವಲಯದ ತಜ್ಞರಲ್ಲಿ ಹುಟ್ಟುಹಾಕಿವೆ.

ಏನೇನು ಆಧುನೀಕರಣ?: ಜೂನ್‌ ಆರಂಭದಲ್ಲೇ ಲಭ್ಯವಾದ ಉಪಗ್ರಹ ಚಿತ್ರಗಳ ಮೂಲಕ ಇದು ಗೊತ್ತಾಗಿದೆ. ವಾಯು ನೆಲೆಯನ್ನು ಆಧುನೀಕರಣ ಗೊಳಿಸುವುದರ ಜತೆಗೆ, ಅಲ್ಲಿ ದೊಡ್ಡದಾಡ ಭೂಗತ ವೈಮಾನಿಕ ನಿಲುಗಡೆ ವ್ಯವಸ್ಥೆಯನ್ನು ನಿರ್ಮಿಸ ಲಾಗಿದೆ. ಕಳೆದ ವರ್ಷಾಂತ್ಯದಲ್ಲೇ ಅದನ್ನು ಅಲ್ಲಿ ನಿರ್ಮಿಸಿರಬಹುದು ಎಂದು ಊಹಿಸಲಾಗಿದೆ. ಭೂಮಿ ಯಿಂದ 49 ಅಡಿ ಆಳದಲ್ಲಿರುವ ಆ ನಿಲುಗಡೆ ವ್ಯವಸ್ಥೆಯಲ್ಲಿ ಎರಡು ಅಂತಸ್ತುಗಳಿದ್ದು, ಅಲ್ಲಿ ಅತ್ಯಂತ ಶಕ್ತಿಶಾ ಲಿಯಾದ “ಎಚ್‌-6′ ಬಾಂಬರ್‌ ವಿಮಾ ನಗಳನ್ನು ತಂದು ನಿಲ್ಲಿಸಲಾಗಿದೆ. ಅಲ್ಲದೆ, ಈ ಎಲ್ಲಾ ಹೊಸ ವ್ಯವಸ್ಥೆಗಳು ಉಪಗ್ರಹಗಳು ಅಥವಾ ಏರಿಯರ್‌ ಅಬ್ಸರ್ವೇಟರಿಗಳಿಗೆ ತಿಳಿಯದಂತೆ ಮಾಡಲು ಹಾರ್ಡೆಂಡ್‌ ಏರ್‌ಕ್ರಾಫ್ಟ್ ಶೆಲ್ಟರ್ಸ್‌ (ಎಚ್‌ಎಎಸ್‌) ಹೊದಿಕೆಗಳನ್ನು ಅಳವಡಿಸಲಾಗಿದೆ.

ತಾಂತ್ರಿಕವಾಗಿ ಮಹತ್ವದ ನೆಲೆ
ಆ ವಾಯು ನೆಲೆ, ಭಾರತ-ಚೀನ ಗಡಿ ಬಳಿಯ ಕಾರಕೋರಂ ಪಾಸ್‌ನಿಂದ ಕೇವಲ 475 ಕಿ.ಮೀ. ದೂರದಲ್ಲಿದೆ. ಇತ್ತ, ಪಂಗ್ಯೊಂಗ್‌ ಸರೋವರದ ಫಿಂಗರ್‌ 4ನಿಂದ 690 ಕಿ.ಮೀ. ದೂರದಲ್ಲಿದೆ. ಪೂರ್ವ ಲಡಾಖ್‌ನಲ್ಲಿ ಭಾರತದ ವಾಯು ನೆಲೆ ಇರುವ ದೌಲತ್‌ ಬೆಗ್‌ ಓಲ್ಡಿಯಿಂದ 490 ಕಿ.ಮೀ. ದೂರದಲ್ಲಿದೆ. ಅಲ್ಲಿಂದ ನೇರವಾಗಿ ಭಾರತದ ಕಡೆ ದಾಳಿ ನಡೆಸಲು ಅನುಕೂಲವಿದೆ. ಹಾಗಾಗಿಯೇ, ಲಡಾಖ್‌ ಘಟನೆಗಳನ್ನು ನೆಪವಾಗಿಟ್ಟುಕೊಂಡು ಭಾರತದ ಮೇಲೆ ವೈಮಾನಿಕ ದಾಳಿ ನಡೆಸಲು ಚೀನ ಸಿದ್ಧವಾಗಿತ್ತೇ ಎಂಬ ಪ್ರಶ್ನೆಗಳೆದ್ದಿವೆ.

ಶಾಶ್ವತ ಪರಿಹಾರಕ್ಕೆ ಯತ್ನ:ಗಡಿ ಸಮೀಪದ ಕಶ್ಗರ್‌ ವಾಯು ನೆಲೆಗೆ ಚೀನ ಆಧುನಿಕ ಸ್ಪರ್ಶ ಪೂರ್ವ ಲಡಾಖ್‌ನ 1,597 ಕಿ.ಮೀ. ಉದ್ದದ ಎಲ್‌ಎಸಿಯಲ್ಲಿ ಗಾಲ್ವಾನ್‌ ಮಾದ ರಿಯ ಘರ್ಷಣೆಗಳನ್ನು ತಪ್ಪಿಸಲು ಭಾರತ- ಚೀನದ ರಾಜತಾಂತ್ರಿಕರು ಶಾಶ್ವತ ಪರಿಹಾರ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ಗಸ್ತು ದಾರಿ: ಉಭಯ ರಾಷ್ಟ್ರಗಳು ತಮ್ಮ ಸೇನೆಯ ಉಪಸ್ಥಿತಿ ಸೂಚಿಸುವ ನಕ್ಷೆಗಳನ್ನು ವಿನಿಮಯ ಮಾಡಿಕೊಳ್ಳಬೇಕು. ನಂತರ ಪ್ರೊಟೊಕಾಲ್‌ ಆಧರಿಸಿ, ಗಸ್ತು ಆರಂಭಿಸುವುದೇ ಬಿಕ್ಕಟ್ಟು ವಲಯಗಳಿಗೆ ಶಾಶ್ವತ ಪರಿಹಾರ ಎಂಬ ಅಭಿಪ್ರಾಯ ನವದೆಹಲಿಯ ರಾಜ ತಾಂತ್ರಿಕ ವಲಯದಲ್ಲಿ ಕೇಳಿಬಂದಿದೆ.

ಪಾಕ್‌ನಿಂದ ಫೇಕ್‌ನ್ಯೂಸ್‌ ಟೆರರಿಸಂ
ಲಡಾಖ್‌ ಗಡಿಯಲ್ಲಿನ ಉದ್ವಿಗ್ನತೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲ ತಾ ಣಗಳಲ್ಲಿ ಚೀನದ ಖಾತೆಗಳು ಸುಳ್ಳು ಮಾಹಿತಿಗಳನ್ನು ಹಬ್ಬಿಸುತ್ತಿದ್ದವು. ಆದರೆ, ಈ ಫೇಕ್‌ನ್ಯೂಸ್‌ ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡ ವಿದೆ ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಗಾಲ್ವಾನ್‌ ಸಂಘರ್ಷದ ವೇಳೆ ಟ್ವಿಟರಿನಲ್ಲಿ ಭಾರತೀಯ ಸೇನೆ ವಿರುದ್ಧ ಚೀನೀ ಹೆಸರಿನ ಖಾತೆಗಳು ಫೇಕ್ ‌ವಿಡಿಯೊ, ಫೋಟೊಗಳನ್ನು ಪೋಸ್ಟ್‌ ಮಾಡುತ್ತಿದ್ದವು. ಆದರೆ, ಈ ಖಾತೆಗಳ ಮೂಲ ಹುಡುಕುತ್ತಾ ಹೋದಾಗ ಅವು ಪಾಕಿಸ್ತಾನದ ಖಾತೆಗಳೆಂಬ ಸಂಗತಿ ಬಯಲಾಗಿದೆ. ಭಾರತೀಯ ಸೇನೆ ವಿರುದ್ಧ ಅಪ ಪ್ರಚಾರ ಮಾಡುತ್ತಿದ್ದ “ಕ್ಸಿಯಿಂಗ್‌637′ ಎಂಬ ಖಾತೆ ಕೆಲವು ತಿಂಗಳ ಹಿಂದೆ “ಹಿನಾರ್ಬಿ 2′ ಎಂಬ ಉರ್ದು ಲಿಪಿಯ ಬಳಕೆದಾರ ನಿರ್ವಹಿಸುತ್ತಿದ್ದ.

ಟಾಪ್ ನ್ಯೂಸ್

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.