ಪಿಒಕೆಯ ಶಾರದಾ ಪೀಠದ ಮೃತ್ತಿಕೆ ತರಲು ಚೀನದಿಂದ ಬಂದ ದಂಪತಿ


Team Udayavani, Aug 6, 2020, 8:19 AM IST

ಪಿಒಕೆಯ ಶಾರದಾ ಪೀಠದ ಮೃತ್ತಿಕೆ ತರಲು ಚೀನದಿಂದ ಬಂದ ದಂಪತಿ

ರಾಂಚಿ: ಇಲ್ಲಿನ ತಪೋವನ ಶ್ರೀ ರಾಮ ಮಂದಿರ ದೇಗುಲದಲ್ಲಿ ದೀಪಪ್ರಜ್ವಲಿಸಿ ಸಂಭ್ರಮಾಚರಣೆ

ಮಣಿಪಾಲ: ಅಯೋಧ್ಯೆಯ ರಾಮ ದೇಗುಲದ ಭೂಮಿ ಪೂಜೆಗೆ ದೇಶದ ಮೂಲೆ ಮೂಲೆಗಳಿಂದ ಪವಿತ್ರ ಜಲ ಮತ್ತು ಮಣ್ಣನ್ನು ಅಯೋಧ್ಯೆಗೆ ತಲುಪಿಸಲಾಗಿದೆ. ಪಿಒಕೆಯಲ್ಲಿರುವ ಪವಿತ್ರ ಶಾರದಾ ದೇಗುಲದ ಮೃತ್ತಿಕೆಯನ್ನೂ ಅಯೋಧ್ಯೆಗೆ ಅರ್ಪಿಸಲಾಗಿದೆ.

ಭಾರತದ ಪ್ರಜೆಗಳಿಗೆ ಪಿಒಕೆಗೆ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ. ಆದ್ದರಿಂದ ಚೀನದಲ್ಲಿ ವಾಸಿಸುತ್ತಿರುವ ಭರತವಂಶಿ ವೆಂಕಟೇಶ್‌ ರಾಮನ್‌ ಮತ್ತು ಅವರ ಪತ್ನಿ ಚೀನದಿಂದ ಪಾಸ್‌ಪೋರ್ಟ್‌ ಪಡೆದು ಪಿಒಕೆಗೆ ಆಗಮಿಸಿದ್ದಾರೆ. ಈ ದಂಪತಿಗಳು ಹಾಂಗ್‌ ಕಾಂಗ್‌ನಿಂದ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ (ಪಿಒಕೆ) ರಾಜಧಾನಿ ಮುಜಫ‌ರಾಬಾದ್‌ಗೆ ಬಂದು ಶಾರದಾ ದೇಗುಲ ತಲುಪಿದ್ದಾರೆ. ಅಲ್ಲಿ ಪೂಜೆ ಸಲ್ಲಿಸಿ ಪವಿತ್ರ ಮಣ್ಣಿನೊಂದಿಗೆ ಹಾಂಕಾಂಗ್‌ ಮೂಲಕ ದಿಲ್ಲಿಗೆ ಆಗಮಿಸಿದ್ದರು. ಇಲ್ಲಿ ಅವರು ಈ ಮಣ್ಣನ್ನು ಕರ್ನಾಟಕದ ನಿವಾಸಿ ಮತ್ತು ಸೇವಾ ಶಾರದಾ ಪೀಠದ ಸಕ್ರಿಯ ಸದಸ್ಯೆ ಅಂಜನಾ ಶರ್ಮಾ ಅವರಿಗೆ ಹಸ್ತಾಂತರಿಸಿದರು. ಅವರು ಬುಧವಾರ ಬೆಳಗ್ಗೆ ಅಯೋಧ್ಯೆಗೆ ಮಣ್ಣಿನೊಂದಿಗೆ ಆಗಮಿಸಿದ್ದು, ಭೂಮಿ ಪೂಜೆಗೆ ಸಮರ್ಪಿಸಲಾಗಿದೆ.

ಈ ದೇಗುಲ ಹಿಂದೂಗಳು ಮತ್ತು ಕಾಶ್ಮೀರ ಪಂಡಿತರ ಮೂರು ಪವಿತ್ರ ತಾಣಗಳಲ್ಲಿ ಒಂದಾಗಿದೆ. ಇದು ನೀಲಮಣಿ ನದಿಯ ದಡದಲ್ಲಿದ್ದು, ಭಾರತದ ಉರಿಯಿಂದ 70 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಹೋಗಲು ಎರಡು ಮಾರ್ಗಗಳಿವೆ. ಮೊದಲನೆಯದು ಮುಜಫ‌ರಾಬಾದ್‌ನಿಂದ ಮತ್ತು ಎರಡನೆಯದು ಪೂಂಛ…-ರಾವಲಕೋಟ್‌ನಿಂದ. ಹೆಚ್ಚಾಗಿ ಉರಿಯಿಂದ ಮುಜಫ‌ರಾಬಾದ್‌ಗೆ ಹೋಗುವ ಮಾರ್ಗವನ್ನು ಬಳಸಲಾಗುತ್ತದೆ.

ಪಾಕ್‌ ಸರಕಾರ ಕಳೆದ ವರ್ಷ ಮಾ.25ರಂದು ಕಾರಿಡಾರ್‌ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಇದರಿಂದ ಭಾರತದ ಹಿಂದೂಗಳು ಶಾರದಾ ದೇಗುಲಕ್ಕೆ ತೆರಳಲು ಅನುಕೂಲವಾಗಲಿದೆಎ ಎನ್ನಲಾಗಿತ್ತು. ಇಲ್ಲಿ ಶಾರದಾ ವಿಶ್ವವಿದ್ಯಾಲಯವೂ ಇತ್ತು, ಐದು ಸಾವಿರಕ್ಕೂ ಹೆಚ್ಚು ವಿದ್ವಾಂಸರು ಅಧ್ಯಯನ ಮಾಡುತ್ತಿದ್ದರು. ಆದಿ ಶಂಕರಾಚಾರ್ಯರು ಸಹ ಅಲ್ಲಿ ಅಧ್ಯಯನ ಮಾಡಿದ್ದರು ಎಂಬ ಉಲ್ಲೇಖ ಇದೆ.

ರಾಜ್ಯದಿಂದ ಜಲ ಅರ್ಪಣೆ
ಕರ್ನಾಟಕದ ಅಂಜನಾ ಪರ್ವತದಿಂದ ಪವಿತ್ರ ನೀರನ್ನು ಅಂಜನಾ ಶರ್ಮ ಅವರು ರಾಮ ಜನ್ಮಭೂಮಿಗೆ ಅರ್ಪಿಸಿದ್ದಾರೆ. ಅಂಜನಾ ಪರ್ವತವನ್ನು ರಾಮನ ಭಕ್ತ ಹನುಮನ ಜನ್ಮಸ್ಥಳವೆಂದು ಗುರುತಿಸಲಾಗುತ್ತದೆ. ಶಿವಲಿಂಗವನ್ನು ರಾವಣ ಲಂಕೆಗೆ ಕೊಂಡೊಯ್ಯಲು ಬಳಸಿದ್ದು ಗೋಕರ್ಣದ ದಾರಿಯನ್ನು. ಹೀಗಾಗಿ ಗೋಕರ್ಣದ ಪವಿತ್ರ ನೀರನ್ನೂ ಅಯೋಧ್ಯೆಗೆ ತಲುಪಿಸಲಾಗಿದೆ.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.