ಅವಕಾಶಗಳ ದುರುಪಯೋಗ ಆಗದಂತೆ ಬದುಕಿರಿ…


Team Udayavani, Aug 16, 2020, 7:35 PM IST

India 25

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಸ್ವಾತಂತ್ರ್ಯ – ಇದು ಅಗಾಧ ವಾದ ಪರಿಕಲ್ಪನೆಯನ್ನು ಒಳಗೊಂಡಂತಹ ಒಂದು ಶಬ್ದ.

ಇದು ಕೇವಲ ಶಬ್ದವಲ್ಲ ಜೀವನದ ಅವಿಭಾಜ್ಯ ಅಂಗ.

ಸ್ವಾತಂತ್ರ್ಯ ಬೇಕು ಎಂದು ಪ್ರತಿ ದೇಶ, ಪ್ರತಿ ರಾಜ್ಯ, ಪ್ರತಿ ಮಾನವ, ಇಷ್ಟೇ ಯಾಕೆ ಬದುಕುವ ಪ್ರತಿಯೊಂದು ಜೀವಿಯೂ ಹಂಬಲಿಸುತ್ತದೆ.

ಸ್ವಾತಂತ್ರ್ಯದಿಂದ ಬದುಕುವುದು ಪ್ರತಿಯೊಬ್ಬರ ಹಕ್ಕು ಕೂಡ ಆಗಿದೆ.

ಎಲ್ಲರೂ ಬಯಸುವಂತಹ ಈ ಸ್ವಾತಂತ್ರ್ಯ ವ್ಯಕ್ತಿಗತವಾದದ್ದು ಮತ್ತು ಸರ್ವವಿಧವಾದದ್ದು.

ಜತೆಗೆ ಇದು ಸಮಷ್ಟಿಯೂ ಹೌದು. ಇಲ್ಲಿ ಆರೋಗ್ಯಕರ ಚರ್ಚೆಗೆ, ವಿಷಯ ಮಂಡನೆಗೆ, ಬದುಕುವ ವಿಧಾನಕ್ಕೆ ಅವಕಾಶವಿದೆ.

ಈ ಅವಕಾಶಗಳ ದುರುಪಯೋಗ ಆಗದಂತೆ ಬದುಕುವುದೇ ಜೀವನ. ಆದರೆ ಇಂದು ಸ್ವಾತಂತ್ರ್ಯವನ್ನು ಜನರು ಸ್ವೇಚ್ಛಾಚಾರ ಎಂದು ಅಪಾರ್ಥ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತದೆ. ಮೇಲ್ನೋಟಕ್ಕೆ ಇವೆರಡೂ ಒಂದೇ ಎಂದೆನಿಸಿದರೂ ಸರಿಯಾಗಿ ಗಮನಿಸಿದರೆ ಸ್ವೇಚ್ಛಾಚಾರಕ್ಕೆ ಮತ್ತು ಸ್ವಾತಂತ್ರ್ಯಕ್ಕೆ ಅಜಗಜಾಂತರವಿದೆ. ಪರರ ಗುಲಾಮನಾಗಿ ಬದು ಕದೆ ಇರುವುದು ಒಂದೆಡೆ ಆದರೆ, ಹಕ್ಕು ಮತ್ತು ಕರ್ತವ್ಯದ ಭಾದ್ಯತೆಗೆ ಒಳಗಾಗಿ ಬದುಕುವುದು ಇನ್ನೊಂದೆಡೆ. ಇದು ಎರಡು ವಿಭಿನ್ನ ಪರಿಕಲ್ಪನೆ.

ಇಲ್ಲಿ ಸ್ವಾತಂತ್ರ್ಯ ಎಲ್ಲಿದೆ ಅಂತ ಆಲೋಚನೆ ಮಾಡಿದ್ರೆ ಎರಡು ಕಡೆಗಳಲ್ಲೂ ಇದೆ. ಆದರೆ ಹೇಗೆ? ಎಲ್ಲಿ ಎನ್ನುವುದು ಮತ್ತೂಂದು ಪ್ರಶ್ನೆ. ಇದು ಅರ್ಥವಾಗಬೇಕಾದರೆ ಸ್ವಾತಂತ್ರ್ಯ ಸ್ವೇಚ್ಛಾಚಾರದ ಸೆರಗಿನೊಳಗೆ ಬಂಧಿಯಾಗಿಲ್ಲ ಅನ್ನುವ ವಿಚಾರವನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಪರರ ಗುಲಾ ಮನಾಗಿ ಇರದೆ ಇರುವುದು ಮತ್ತು ಸ್ವೇಚ್ಛಾಚಾರವಲ್ಲದ ನಡುವಣ ಒಂದು ಸಹಜ ಸ್ಥಿತಿಯೇ ಸ್ವಾತಂತ್ರ್ಯ.

ಇದಕ್ಕೊಂದು ಸಣ್ಣ ಉದಾಹರಣೆ, ಹಗಲು ರಾತ್ರಿ ಕಷ್ಟಪಟ್ಟು ಬೆಳೆಸಿದ ನನ್ನ ಅಡಿಕೆಯ ತೋಟ. ಇಲ್ಲಿ ನಾನು ಸ್ವತಂತ್ರ. ಯಾರ ಗುಲಾಮನು ಅಲ್ಲ ಅನ್ನುವ ಆಲೋಚನೆಯಲ್ಲಿ ಕೈ ಬೀಸಿ ನಡೆಯುತ್ತೇನೆ ಅಂತ ಹೊರಟರೆ ಪಕ್ಕದಲ್ಲಿ ಬೆಳೆದಿರುವ ಮರಗಳಿಗೆ ಕೈ ಹೊಡೆಸಿಕೊಂಡು ನಾನೇ ನೋವನ್ನು ಅನುಭವಿಸಬೇಕಾಗುತ್ತದೆ. ತೋಟದಲ್ಲಿ ನಡೆಯುವುದಕ್ಕೂ ಒಂದು ಮಿತಿಯಿದೆ ಮತ್ತೆ ರೀತಿ ಇದೆ.

ಇಂದಿನ ಯುವಪೀಳಿಗೆ ಸ್ವ ಇಚ್ಛೆಯಂತೆ ಬದುಕುವುದನ್ನು ಸ್ವಾತಂತ್ರ್ಯ ಎಂದು ನಂಬಿ ವರ್ತಿಸುತ್ತಿರುವುದು ಬೇಸರದ ಸಂಗತಿ. ತನ್ನ ಕಾಲ ಮೇಲೆ ತಾನು ನಿಂತು ಸುಂದರವಾದ ಬದುಕನ್ನು ಕಟ್ಟಿಕೊಳ್ಳುವುದು ಎಂಬ ಆಲೋಚನೆಯಲ್ಲಿ ಸಂಬಂಧ, ಪ್ರೀತಿ, ಬಾಂಧವ್ಯಕ್ಕೆ ಬೆಲೆ ನೀಡದೇ ಬದುಕುವ ಸ್ವಾತಂತ್ರ್ಯವನ್ನು ಕಲ್ಪಿಸಿಕೊಳ್ಳುವುದು ನಿಜವಾದ ಸ್ವಾತಂತ್ರ್ಯವಲ್ಲ. ಎತ್ತರಕ್ಕೆ ಹಾರಬೇಕಾದಾಗ ನಾವು ಕತ್ತರಿಸಿಕೊಳ್ಳಬೇಕಾದ್ದು ಬಂಧಗಳನ್ನೇ ಹೊರತು, ಹಾರಲು ಬೇಕಾದ ಇಂಧನಗಳನ್ನು ನೀಡುವ ಅನುಬಂಧಗಳನ್ನಲ್ಲ ಎಂಬುದು ಸ್ಪಷ್ಟವಾಗಿ ಅರ್ಥವಾಗಬೇಕು. ಅದೇ ರೀತಿ ದೊಡ್ಡವರು ಆಲೋಚಿಸಬೇಕು, ಸ್ವಾತಂತ್ರ್ಯ ನೀಡಿದೊಡನೆ ಮಕ್ಕಳು ಹಾಳಾಗುವುದಿಲ್ಲ.

ನಿಯಮಿತವಾದ ಪರಿಧಿಯೊಳಗೆ ಇರಿಸಿದಾಕ್ಷಣ ಮಕ್ಕಳು ಸರಿ ಹಾದಿಯನ್ನೇ ಆಯ್ಕೆ ಮಾಡುತ್ತಾರೆ ಎನ್ನುವುದು ಶುದ್ಧ ಸುಳ್ಳು. ಯಾವಾಗ ಹಿರಿಯರಲ್ಲೇ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದ ನಡುವಣ ವ್ಯತ್ಯಾಸದ ಅರಿವು ಮೂಡು ವುದಿಲ್ಲವೋ ಅಲ್ಲಿಯ ತನಕ ಮಕ್ಕಳ ಮನದಲ್ಲಿ ಸ್ವಾತಂತ್ರ್ಯದ ಬಗೆಗಿನ ಸರಿ ಯಾದ ಪರಿಕಲ್ಪನೆಯನ್ನು ಮೂಡಿಸುವುದು ಕಷ್ಟ.

ಒಂದೊಮ್ಮೆ ಭರಪೂರ ಸಂತಸವನ್ನು ನಮ್ಮೆಡೆಗೆ ಹರಿಸಿದಂತೆ ಭಾಸವಾದರೂ ಜೀವನದ ಪರಮ ಗುರಿಯಾದ ಮನಃಶಾಂತಿಯನ್ನು ನೀಡುವುದು ಹಕ್ಕು ಕರ್ತವ್ಯಗಳ ಭಾದ್ಯತೆ ಒಳಪಟ್ಟು ನಡೆಯುವ ಸ್ವಾತಂತ್ರ್ಯದಲ್ಲಿ ಮಾತ್ರ. ಇದು ಬಂಧನವಲ್ಲ ಜೀವನದ ರೀತಿ.
ನಾವು ನಿರ್ಭೀತಿಯಿಂದ ಬದುಕಲು ಮನೆ ಬೇಕು. ನಾಲ್ಕು ಗೋಡೆಗಳ ಮಧ್ಯೆ ಬದುಕುವುದು ಬಂಧನ ಎಂದು ವಿಶಾಲವಾದ ಮೈದಾನದಲ್ಲಿ ಬದುಕಲು ಸಾಧ್ಯ ಇದೆಯಾ? ಹಾಗೆ ಸ್ವಾತಂತ್ರ್ಯ ಕೂಡ ಹಕ್ಕು ಕರ್ತವ್ಯ ರೀತಿ ನೀತಿಗಳೆಂಬ ನಾಲ್ಕು ಗೋಡೆಯ ನಡುವಿನ ಜೀವನ. ಸ್ವೇಚ್ಛಾಚಾರ ಮೈದಾನದಲ್ಲಿ ನಡೆಸುವ ಬದುಕು. ಅಲ್ಲಿಯೂ ಬದುಕಬಹುದು ಆದರೆ ನೆಮ್ಮದಿ ಮತ್ತು ಮನಃಶಾಂತಿ ಎಲ್ಲಿ ಅನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕು.

ಸ್ವಾತಂತ್ರ್ಯ ಎನ್ನುವುದು ಸ್ವೇಚ್ಛಾಚಾರ ವನ್ನು ಮೀರಿರುವಂತಹದ್ದು. ನಮ್ಮ ಸ್ವಾತಂತ್ರ್ಯ ಪರರ ಸ್ವಾತಂತ್ರ್ಯಕ್ಕೆ ಕುತ್ತು ಬರಬಾರದು. ಕರ್ತವ್ಯ, ರೀತಿ ನೀತಿಗಳ ಜತೆಗೆ ಅನುಭವಿಸುವ ಸ್ವಾತಂತ್ರ್ಯ ನಿಜವಾದ ಸ್ವಾತಂತ್ರ್ಯ. ನನ್ನ ದೃಷ್ಟಿಕೋನದಲ್ಲಿ ಇದು ನಿಜವಾದ ಸ್ವಾತಂತ್ರ್ಯದ ಪರಿಕಲ್ಪನೆ.

 ಸಾಯಿ ಶ್ರೀಪದ್ಮ ಡಿ. ಎಸ್‌., ಸಂತ ಫಿಲೋಮಿನಾ ಕಾಲೇಜು, ಮೈಸೂರು

 

ಟಾಪ್ ನ್ಯೂಸ್

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

Sullia ಮರ ಕಡಿಯುತ್ತಿದ್ದಾಗ ದುರ್ಘ‌ಟನೆ; ಮರಗಳ ನಡುವೆ ಸಿಲುಕಿ ವ್ಯಕ್ತಿ ಸಾವು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.