ಕೋವಿಡ್‌ನಿಂದ ನಲುಗುತ್ತಿದೆ ಜಿಲ್ಲೆಯ ಆರ್ಥಿಕತೆ


Team Udayavani, Oct 25, 2020, 4:20 PM IST

uk-tdy-2

ಹೊನ್ನಾವರ: ಕೋವಿಡ್‌ ಪಾರ್ಶ್ವ ಪರಿಣಾಮ ದೇಹದ ಕಣ್ಣು, ಹೃದಯ, ಪುಪ್ಪುಸ, ನರಮಂಡಲ ಮೊದಲಾದ ಸೂಕ್ಷ್ಮಅಂಗಗಳ ಮೇಲೆ ಆಗುತ್ತದೆ. ಮೊದಲೇ ಈ ಅಂಗಗಳಲ್ಲಿ ಕಾಯಿಲೆ ಇದ್ದವರು ಬದುಕಿಬರುವುದು ಪುಣ್ಯ ಎಂಬುದನ್ನು ವೈದ್ಯರೂ, ವಿಜ್ಞಾನಿಗಳು ಹೇಳುತ್ತಿದ್ದಾರೆ.

ಸ್ಪಂಜಿನಂತೆ ಮಿದುವಾಗಿ ಇರುತ್ತಿದ್ದ ಪುಪ್ಪುಸ ಗಟ್ಟಿಕಟ್ಟಿಗೆ ಯಾಗುತ್ತದೆ ಎನ್ನುತ್ತಾರೆ ಕೋವಿಡ್‌ ರೋಗಿಯ ಮರಣೋತ್ತರ ಶವಪರೀಕ್ಷೆ ಮಾಡಿದ ವೈದ್ಯರು. ಹೃದಯದ ಏರಿಳಿತದಲ್ಲಿ ಬದಲಾವಣೆ, ಅನಿಯಂತ್ರಿತ ಮಧು ಮೇಹ, ದೃಷ್ಟಿದುರ್ಬಲತೆ ಇದು ಸಾಮಾನ್ಯ ಎಂಬುದು ಕೋವಿಡ್‌ ಗುಹೆ ಹೊಕ್ಕಿ ಕನಿಷ್ಠ5 ದಿನ ರೆಮಿಡಿಸಿವಿರ್‌ ಚುಚ್ಚುಮದ್ದು ಪಡೆದವರ ಅನುಭವ, ಸುಧಾರಿಸುತ್ತಾರೆ ಅನ್ನುತ್ತಾರೆ ವೈದ್ಯರು. ಆದ್ದರಿಂದ ಕೋವಿಡ್‌ ಗೆದ್ದೆ ಎಂದು ಬೀಗುವುದಕ್ಕಿಂತ ಆರೋಗ್ಯ ಕಾಳಜಿ ಮುಖ್ಯ ಎಂಬುದನ್ನು ಜನ ಮರೆಯಬಾರದು. ಪಾರ್ಶ್ವ  ಪರಿಣಾಮಗಳೇ ಗಂಭೀರತೆಗೆ ಒಯ್ಯಬಹುದು. ತುಂಬಾ ಜನ ಕೋವಿಡ್‌ ಬಂದು ಹೋದರೆ ನಮಗೆ ಮತ್ತೆ ಬರುವುದಿಲ್ಲ, ಬೇರೆಯವರಿಂದಲೂ ತಗಲುವುದಿಲ್ಲ ಎಂದು ಕೈಬೀಸಿಕೊಂಡು ನಡೆಯುತ್ತ ನಿತ್ಯದ ವ್ಯವಹಾರದಲ್ಲಿ ತೊಡಗುವವರಿಗೆ ಇದು ವೈದ್ಯರು ಹೇಳುವ ಎಚ್ಚರಿಕೆಯ ಮಾತು.

ಜಿಲ್ಲೆಯಲ್ಲಿ 12,374 ಜನರಿಗೆ ಸೋಂಕು ತಗಲಿದೆ. 11,144 ಜನ ಗುಣಮುಖರಾಗಿದ್ದಾರೆ. ನಿತ್ಯ 250 ಜನ ಸೋಂಕಿತರು ಕಂಡುಬರುತ್ತಿದ್ದ ದಿನ ಕಳೆದು60ಕ್ಕೆ ಇಳಿಕೆಯಾಗಿದೆ. ಮೂರು ವಾರಗಳಿಂದ ಕೋವಿಡ್ ಇಳಿಮುಖವಾಗಿದೆ. ಆದರೂ ಪೂರ್ತಿ ನಿವಾರಣೆಯಾಗಿಲ್ಲ. ಹೋದವರು ಹೋದರು, ಅವರ ಕುಟುಂಬಕ್ಕೆ ದೇವರೇ ದಿಕ್ಕು. ಹಬ್ಬದ ದಿನಗಳಲ್ಲಿ ಸೋಂಕಿನಿಂದ ದೂರವಿರುವ ಮಾತ್ರವಲ್ಲ, ಸೋಂಕಿನಿಂದ ಹೊರಬಂದವರಲ್ಲಿಯೂ ಕೂಡ ಹೆಚ್ಚುಕಾಳಜಿ ಅಗತ್ಯ. ಇಲ್ಲವಾದರೆ ಕಾಯಂ ಆಸ್ಪತ್ರೆಗೆ ಅಲೆಯಬೇಕಾದೀತು. ಪ್ರಧಾನಿ ಮೋದಿ 7ನೇ ಬಾರಿ ಕೋವಿಡ್‌ ದಾಳಿಯ ಕುರಿತು ಎಚ್ಚರಿಕೆ ನೀಡಿದ್ದಾರೆ.

ಲಾಕ್‌ಡೌನ್‌ ಮುಗಿದ ಮೇಲೆ ಯಥಾಸ್ಥಿತಿಯತ್ತ ಮರಳುವ ಹಂತದಲ್ಲಿದ್ದಾಗ ಕೆಲವರು ಅತಿಬುದ್ಧಿವಂತಿಕೆಯಿಂದ ಅರ್ಧದಿನ ಲಾಕ್‌ಡೌನ್ಘೋಷಿಸಿ ವ್ಯವಹಾರವನ್ನ  ಮಣ್ಣುಪಾಲು ಮಾಡಿದರು. ಹಳ್ಳಿಯ ನಾಲ್ಕಾರು ಜನ ರಿಕ್ಷಾ ಬಾಡಿಗೆಗೆ ಪಡೆದು ಪೇಟೆಗೆ ಬಂದು ಬೇಗ ಕೆಲಸ ಮುಗಿಸಿಕೊಂಡು ಹೋಗಲು ಕಲಿತರು. ಎಲ್ಲ ಮನೆಗಳಲ್ಲಿ ಬೈಕ್‌ ಮೇಲೆ ಬಂದು ಹೊರಟು ಹೋಗುತ್ತಾರೆ. ಮಧ್ಯಾಹ್ನ ಪೇಟೆ ಬಣಬಣ. ಹೊಟೆಲ್‌ಗ‌ಳಲ್ಲಿ ವ್ಯಾಪಾರವಿಲ್ಲ, ಐಸ್‌ಕ್ರೀಂ ತಿನ್ನುವವರಿಲ್ಲ. ಬಹುಪಾಲು ಟೆಂಪೋ ಚಾಲಕ, ಮಾಲಕರು ಸಾರಿಗೆಯ ಆಸೆ ಬಿಟ್ಟಿದ್ದು ಬೇರೆ ವ್ಯಾಪಾರದಲ್ಲಿ ತೊಡಗಿದ್ದಾರೆ,ಕೆಲವರು ಅಂಗಡಿ ಇಟ್ಟಿದ್ದಾರೆ.

ಹಬ್ಬದ ದಿನಗಳಲ್ಲಿ 1500-2000 ರೂ. ಪಡೆಯುತ್ತಿದ್ದ ಬೆಂಗಳೂರಿಗೆ ಹೋಗಿಬರುವ ಖಾಸಗಿ ಬಸ್‌ಗಳು ಕೇವಲ 500 ರೂ.ಗೆಇಳಿಸಿದರೂ ಹೋಗಿಬರುಪ್ರಯಾಣಿಕರಿಲ್ಲ. ಅದ್ದೂರಿಯ ಮದುವೆ,  ಗೃಹಪ್ರವೇಶ ಮಾಡುವವರು ಇನ್ನೂ ಕಾಯಲಾರದೆ ಅದರ ಆಸೆಬಿಟ್ಟು ಮನೆಯ ಅಂಗಳದಲ್ಲಿ 100 ಜನರನ್ನು ಕರೆದು ಮದುವೆ ಮಾಡಿಸುತ್ತಿದ್ದಾರೆ. ಹಣವೂ ಉಳಿತಾಯ. ಮಂಗಲ ಕಾರ್ಯಗಳನ್ನೇ ನಂಬಿದ ಅಡುಗೆಯವರು, ಡೆಕೊರೇಟರ್‌ ಗಳು, ವಾದ್ಯದವರು ಕೆಲಸ ಇಲ್ಲದೆ ಕುಳಿತು 7ತಿಂಗಳಾಯಿತು. ನವೆಂಬರ್‌ನಲ್ಲಿ ಪರಿಸ್ಥಿತಿ ಸುಧಾರಿಸುವ ಲಕ್ಷಣ ಇಲ್ಲ. ಫೆಬ್ರವರಿಯಲ್ಲಿ ಕೋವಿಡ್‌ ಹೆಚ್ಚುವ ಸಂಭವ ಇದೆ ಎಂಬ ವರದಿ ಎಲ್ಲರನ್ನೂ ಕಂಗೆಡಿಸಿದೆ.

ಜಿಲ್ಲೆಯಲ್ಲಿ ದೊಡ್ಡ, ಮಧ್ಯಮ ಕೈಗಾರಿಕೆಗಳಿಲ್ಲ, ಗುಡಿಕೈಗಾರಿಕೆ ಉತ್ಪನ್ನಗಳಿಗೆ ಗ್ರಾಹಕರಿಲ್ಲ. ಕೃಷಿಕೂಲಿಕಾರರು ಕೋವಿಡ್‌ ಭಯದಿಂದ ಕೆಲಸಕ್ಕೆ ಹೋಗುತ್ತಿಲ್ಲ. ಹೋದರೂ ಅರ್ಧ ಕೂಲಿ ದೊರೆಯುತ್ತದೆ. ಜನಸಂಖ್ಯೆ ಪ್ರಮಾಣದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೋವಿಡ್‌ ತಗಲಿದವರ, ಮೃತಪಟ್ಟವರ ಸಂಖ್ಯೆ ಕಡಿಮೆಯಾದರೂ ಮೊದಲೇ ಆರ್ಥಿಕ ಚಲಾವಣೆಯಿಲ್ಲದ ಜಿಲ್ಲೆಯಲ್ಲಿ ಬಹುಪಾಲು ವ್ಯವಹಾರಗಳುಸ್ಥಗಿತವಾಗಿವೆ. ಈ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂಬುದು ಎಲ್ಲರ ಚಿಂತೆ. ಕೆಲವರಲ್ಲಿ ಮಾನಸಿಕ ತೊಂದರೆಯನ್ನುಂಟು ಮಾಡಿದೆ.

ಕೋವಿಡ್‌ ಬಂದ ಮೇಲೆ ಮಾನಸಿಕ ವೈದ್ಯರನ್ನು ಕಾಣುವವರ ಸಂಖ್ಯೆ ಹೆಚ್ಚಿದೆ. ಮಾನಸಿಕವಾಗಿ ಗಟ್ಟಿಯಾದರೆ ವ್ಯವಹಾರದ ವರ್ಧನೆಗೂ ದಾರಿಕಾಣಬಹುದು. ಅಲ್ಲಿಯವರೆಗೆ ಬದುಕು ಖಾಲಿ ಸರ್ಕಾರಿ ಬಸ್ಸುಗಳ ಓಡಾಟದಂತೆ. ಜನ ಓಡಾಟ ಆರಂಭಿಸಿದ್ದಾರೆ ಆದರೆ ಎಲ್ಲವೂ ಖಾಲಿಖಾಲಿ. ಇದು ಎಲ್ಲರ ಸಮಸ್ಯೆಯೂ ಹೌದು. ಲಸಿಕೆ, ಔಷಧ ಬರಬೇಕು, ಅದನ್ನು ಪಡೆದು ಜನ ಸುಧಾರಿಸಿಕೊಂಡ ಮೇಲೆ ಜಿಲ್ಲೆ ಮಾಮೂಲು ಸ್ಥಿತಿಗೆ ಬಂದೀತೇ?

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.