ಕಿಷ್ಕಿಂಧೆ ಬಳಿಯ ಅತೀ ಎತ್ತರದ ಹನುಮಾನ್ ಮೂರ್ತಿ ಶಿಲೆಗಳಿಗೆ ಪೇಜಾವರ ಶ್ರೀಗಳಿಂದ ಪೂಜೆ !
Team Udayavani, Nov 20, 2020, 8:26 PM IST
ಗಂಗಾವತಿ: ಐತಿಹಾಸಿಕ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಹತ್ತಿರ ಚಿಕ್ಕರಾಂಪೂರ ಬಳಿ ನೂತನ ಹನುಮದ್ ಜನ್ಮಭೂಮಿ ಟ್ರಸ್ಟ್ ಸ್ಥಾಪಿಸಲುದ್ದೇಶಿಸಿರುವ 215 ಅಡಿ ಎತ್ತರದ ಹನುಮಾನ್ ಮೂರ್ತಿಯ ಶಿಲೆಗಳಿಗೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಶುಕ್ರವಾರ ಪೂಜೆ ನೆರವೇರಿಸಿದರು.
ಈ ವೇಳೆ ಅವರು ಮಾತನಾಡಿ, ಕಿಷ್ಕಿಂದಾ ಪ್ರದೇಶ ಪವಿತ್ರ ಭೂಮಿಯಾಗಿದೆ. ಪ್ರಭು ಶ್ರೀರಾಮ, ಲಕ್ಷ್ಮಣ, ಆಂಜನೇಯ ನಡೆದಾಡಿದ ಸ್ಥಳವಾಗಿದೆ. ಪ್ರತಿಯೊಬ್ಬರು ಇಲ್ಲಿಗೆ ಆಗಮಿಸಬೇಕು. ಶ್ರೀ ಹನುಮದ್ ಜನ್ಮಭೂಮಿ ಟ್ರಸ್ಟ್ 215 ಅಡಿ ಎತ್ತರ ಆಂಜನೇಯ ನ ಮೂರ್ತಿ ಸ್ಥಾಪನೆ ಯೋಜನೆ ರೂಪಿಸಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನು ರೀತಿ ಅವಕಾಶ ಕಲ್ಪಿಸಿ ಸಹಕರಿಸುವಂತೆ ಪೂಜ್ಯರು ಹೇಳಿದರು.
ಹನುಮದ್ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಗೋವಿಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ಸ್ಥಳೀಯರು ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: ತುಂಗಭದ್ರಾ ಪುಷ್ಕರಣೋತ್ಸವ: ಪಂಡಿತರ ಆಗಮನ; ಯಶಸ್ವಿ ತುಂಗಭದ್ರಾರತಿ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ
Bailur ಉಮಿಕ್ಕಳ ಬೆಟ್ಟದಲ್ಲಿ ಬೆಂಕಿ ಅವಘಡ; ಪರಶುರಾಮ ಥೀಮ್ಪಾರ್ಕ್ ಸುರಕ್ಷಿತ
Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ
Udupi; ಬ್ಯಾಂಕ್ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ
Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್ ಆಗುವ ಭೀತಿ