ಮಗನ ತಲೆಯನ್ನು ಜಜ್ಜಿ, ಮಸಾಲೆ ಹಾಕಿ ಬೇಯಿಸಿದ ತಾಯಿ: ಎದೆನಡುಗಿಸುವ ಘಟನೆ !
Team Udayavani, Dec 13, 2020, 6:20 PM IST
ನವದೆಹಲಿ: ತಾಯಿಯೊಬ್ಬಳು ತಾನು ಜನ್ಮನೀಡಿದ ಮಗನ ತಲೆಯನ್ನು, ಬೀಸುವ ಕಲ್ಲಿನಿಂದ ಜಜ್ಜಿ ಅದಕ್ಕೆ ಮಸಾಲೆ ಹಾಗೂ ಕರ್ಪೂರ ಬೆರೆಸಿ ಬೇಯಿಸಿದ ಕ್ರೂರ ಘಟನೆ ಪಶ್ಚಿಮ ಬಂಗಾಳ ನಡೆದಿದೆ ಎಂದು ವರದಿಯಾಗಿದೆ.
ಆರೋಪಿಯನ್ನು ಗೀತಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಹಿರಿಯ ಮಗ ಅರ್ಜುನ್ (25) ನನ್ನು ಭೀಕರವಾಗಿ ಹತ್ಯೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಇದನ್ನೂ ಓದಿ:ಸಾರಸ್ವತ ಲೋಕದ ಅಗಾಧ ಪ್ರತಿಭೆ ಡಾ. ಬನ್ನಂಜೆ ಗೋವಿಂದಾಚಾರ್ಯ: ಸುರೇಶ್ ಕುಮಾರ್ ಸಂತಾಪ
ಆರೋಪಿಗೆ ಎರಡು ಜನ ಗಂಡು ಮಕ್ಕಳಿದ್ದು, ಹಿರಿಯ ಮಗ ಅರ್ಜುನ್ ಎಂಬಾತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. 2019ರಲ್ಲಿ ಗೀತಾ ಮತ್ತು ಪತಿ ಅನಿಲ್ ನಡುವೆ ಸಾಂಸಾರಿಕ ಕಲಹ ಏರ್ಪಟ್ಟು, ಅನಿಲ್ ಆಕೆಯನ್ನು ಬಿಟ್ಟು ತೆರಳಿದ್ದ. ಆದರೆ ಕೆಲವು ದಿನಗಳಿಂದ ತನ್ನ ಮಗನನ್ನು ಕಾಣದೆ ಹೋದಾಗ ಪತ್ನಿಯ ಮೇಲೆ ಅನುಮಾನಗೊಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಈತನ ದೂರಿನನ್ವಯ ಪೊಲೀಸರು ಗೀತಾಳ ಮನೆಗೆ ಬಂದು ಪರೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣವೇ ಗೀತಾ ಮತ್ತು ಆಕೆಯ ಕಿರಿಯ ಮಗ ವಿಧುರನನ್ನು ಬಂಧಿಸಿದ್ದಾರೆ.
ವಿಚಾರಣೆಯ ವೇಳೆ, ತಾನು ತಂತ್ರ -ಮಂತ್ರಗಳಲ್ಲಿ ನಂಬಿಕೆ ಉಳ್ಳವಳಾಗಿದ್ದು, ಅದರ ಪೂಜೆಗಾಗಿ ಮಗನನ್ನು ಬಲಿಕೊಟ್ಟಿದ್ದೇನೆ. ಆದರೆ ಮೃತದೇಹದ ದುರ್ವಾಸನೆ ಬರಬಾರದು ಎಂದು ಆತನ ತಲೆಯನ್ನು ಜಜ್ಜಿ, ಮಸಾಲೆ ಹಾಕಿ ಬೇಯಿಸಿದೆ ಎಂದು ಒಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿ ಮೇಲೆ ಐಪಿಸಿ ಸೆಕ್ಷನ್ 302, 364, 120B, ಹಾಗೂ 34 ಅನ್ವಯ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ನ ಗೋಡೆ ಕುಸಿದು 7 ಮಂದಿ ಸಾವು
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
Bhupal: ʼಭೂಪೇಂದ್ರ ಜೋಗಿʼ ರೀಲ್ಸ್ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ
Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು
ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು
MUST WATCH
ಹೊಸ ಸೇರ್ಪಡೆ
Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ಮೆಂಟ್ನ ಗೋಡೆ ಕುಸಿದು 7 ಮಂದಿ ಸಾವು
ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ
ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ
ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು
ಪ್ರಜ್ವಲ್ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ