ಕರ್ಣಾಟಕ ಬ್ಯಾಂಕ್‌ ತೃತೀಯ ತ್ತೈಮಾಸಿಕ ಲಾಭ 135.37 ಕೋ.ರೂ.

ಮುಂಗಡಗಳು ವರ್ಷದಿಂದ ವರ್ಷಕ್ಕೆ ಶೇ. 9.75ರ ದರದಲ್ಲಿ ವೃದ್ಧಿ ಕಂಡು ಮುಂಗಡ ವಿಭಾಗಕ್ಕೆ ಸ್ಥಿರತೆಯನ್ನು ತಂದಿವೆ.

Team Udayavani, Jan 13, 2021, 10:32 AM IST

ಕರ್ಣಾಟಕ ಬ್ಯಾಂಕ್‌ ತೃತೀಯ ತ್ತೈಮಾಸಿಕ ಲಾಭ 135.37 ಕೋ.ರೂ.

ಮಂಗಳೂರು, ಜ. 12: ಕರ್ಣಾಟಕ ಬ್ಯಾಂಕ್‌ ಈ ವಿತ್ತೀಯ ವರ್ಷದ ತೃತೀಯ ತ್ತೈಮಾಸಿಕದಲ್ಲಿ ಶೇ. 9.93 ವೃದ್ಧಿ ದರದೊಂದಿಗೆ 135.37 ಕೋ.ರೂ. ನಿವ್ವಳ ಲಾಭ ಘೋಷಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ಮೊತ್ತ 123.14 ಕೋ.ರೂ.ಗಳಾಗಿದ್ದವು. ಪ್ರಸಕ್ತ ವಿತ್ತೀಯ ವರ್ಷದ ಒಂಬತ್ತು ತಿಂಗಳುಗಳ
ಅವಧಿಯ ನಿವ್ವಳ ಲಾಭವು 451.10 ಕೋ.ರೂ. ಗಳಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ ನಿವ್ವಳ ಲಾಭ 404.47 ಕೋ.ರೂ. ಆಗಿತ್ತು.

ನಗರದಲ್ಲಿರುವ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಮಂಗಳವಾರ ವೆಬೆಕ್ಸ್‌ ಮೂಲಕ ಸಂಪನ್ನಗೊಂಡ ಆಡಳಿತ ಮಂಡಳಿಯ ಸಭೆಯಲ್ಲಿ ತೃತೀಯ
ತ್ತೈಮಾಸಿಕದ ಹಣಕಾಸು ವರದಿಯನ್ನು ಅಂಗೀಕರಿಸಲಾಯಿತು. ಪ್ರಸಕ್ತ ವರ್ಷದ ತೃತೀಯ ತ್ತೈಮಾಸಿಕದ ನಿರ್ವಹಣ ಲಾಭವು 437.96 ಕೋ.ರೂ. ಆಗಿದೆ. ಪ್ರಸಕ್ತ ವಿತ್ತೀಯ ವರ್ಷದ ಒಂಬತ್ತು ತಿಂಗಳುಗಳ ನಿರ್ವಹಣ ಲಾಭವು ಶೇ. 27.67 ವೃದ್ಧಿಯೊಂದಿಗೆ 1,615.34 ಕೋ. ರೂ. ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಅದು 1,265.23 ಕೋ.ರೂ.ಗಳಷ್ಟಿತ್ತು.

ಬ್ಯಾಂಕಿನ ಒಟ್ಟು ವ್ಯವಹಾರವು (31-12-2020ಕ್ಕೆ) 1,27,013.55 ಕೋ.ರೂ. ತಲುಪಿದ್ದು, ಠೇವಣಿಗಳು 73,826.06 ಕೋ.ರೂ. ಮತ್ತು ಮುಂಗಡಗಳು 53,187.49 ಕೋ. ರೂ.ಗಳಷ್ಟಿವೆ. ಸ್ಥೂಲ ಅನುತ್ಪಾದಕ ಸ್ವತ್ತುಗಳು ಇಳಿಕೆ ಕಂಡಿದ್ದು, ಶೇ.3.16 ಆಗಿದ್ದು, ಇದು 31-12-2019ಕ್ಕೆ ಶೇ. 4.99 ಆಗಿತ್ತು. ಅಂತೆಯೇ ನಿವ್ವಳ ಅನುತ್ಪಾದಕ ಸ್ವತ್ತುಗಳು ಕೂಡ ಶೇ. 1.74 ತಲುಪಿದ್ದು, ಕಳೆದ ವರ್ಷ ಇದು ಶೇ. 3.75 ಆಗಿತ್ತು.

ಫಲಿತಾಂಶ ಹರ್ಷದಾಯಕ:
ಮಹಾಬಲೇಶ್ವರ ಎಂ.ಎಸ್‌. ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಮಂಗಳವಾರ ತೃತೀಯ ತ್ತೈಮಾಸಿಕದ ಫಲಿತಾಂಶಗಳನ್ನು ಘೋಷಿಸಿ ಮಾತನಾಡಿದ ಬ್ಯಾಂಕ್‌ನ
ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಚೀಫ್‌ ಎಕ್ಸಿಕ್ಯೂಟಿವ್‌ ಆಫೀಸರ್‌ ಮಹಾಬಲೇಶ್ವರ ಎಂ.ಎಸ್‌. ಅವರು, “ತೃತೀಯ ತ್ತೈಮಾಸಿಕದ ಫಲಿತಾಂಶವು ಹರ್ಷದಾಯಕವಾಗಿದೆ. ಕೋವಿಡ್‌-19ನ ಅಲ್ಲೋಲ ಕಲ್ಲೋಲಗಳ ಹೊರತಾಗಿಯೂ ನಮ್ಮ ಸಕಲ ಯತ್ನಗಳೂ ಫಲಪ್ರದವಾದುದು ಸಮಾಧಾನ ತಂದಿದೆ’ ಎಂದರು.

ರಿಟೇಲ್‌ ಮತ್ತು ಮಿಡ್‌ ಕಾರ್ಪೋರೆಟ್‌ ಮುಂಗಡಗಳು ವರ್ಷದಿಂದ ವರ್ಷಕ್ಕೆ ಶೇ. 9.75ರ ದರದಲ್ಲಿ ವೃದ್ಧಿ ಕಂಡು ಮುಂಗಡ ವಿಭಾಗಕ್ಕೆ ಸ್ಥಿರತೆಯನ್ನು ತಂದಿವೆ.
ತತ್ಪರಿಣಾಮವಾಗಿ ನಮ್ಮ ನಿವ್ವಳ ಬಡ್ಡಿ ಲಾಭ ಕೂಡ ಹೆಚ್ಚಳಗೊಂಡಿದ್ದು, ವರ್ಷದಿಂದ ವರ್ಷಕ್ಕೆ ಶೇ. 14.85 ದರದಲ್ಲಿ ವೃದ್ಧಿ ಕಂಡಿದೆ. ನಿರ್ವಹಣ ಲಾಭವೂ ಶೇ. 27.68ರ ವೃದ್ಧಿದರ ದಾಖಲಿಸಿದೆ. ತನ್ಮೂಲಕ ಬ್ಯಾಂಕಿನ ಪ್ರಾವಿಜನ್‌ ಕವರೇಜ್‌ ರೇಶಿಯೋ (ಪಿಸಿಆರ್‌) ಸಾರ್ವಕಾಲಿಕ ವೃದ್ಧಿ ಯನ್ನು ಕಂಡಿದ್ದು, ಅದು ಶೇ. 80.51 ಆಗಿದೆ.

ಕಳೆದ ವರ್ಷ ಇದು ಶೇ. 59.34ರಷ್ಟಿತ್ತು. ಆರ್ಥಿಕ ಸಂಕಷ್ಟಗಳ ಮಧ್ಯೆಯೂ ಸ್ವತ್ತುಗಳ ಗುಣಮಟ್ಟ ಸ್ಥಿರವಾಗಿದ್ದು, ನಮಗೆ  ತೃಪ್ತಿದಾಯಕವಾದ ತ್ತೈಮಾಸಿಕ ಫಲಿತಾಂಶವನ್ನು ಘೋಷಿಸುವಲ್ಲಿ ಸಹಾಯಕವಾಗಿದೆ. ಈ ತ್ತೈಮಾಸಿಕದ ಅತ್ಯಂತ ಮಹತ್ವದ ಮತ್ತು ಸಂತಸದ ವಿಷಯವೆಂದರೆ ಉಳಿತಾಯ ಮತ್ತು ಚಾಲ್ತಿ ಖಾತೆಗಳ ಠೇವಣಿಗಳು ಸಾರ್ವಕಾಲಿಕ ದಾಖಲೆ ಕಂಡಿದ್ದು, ಅವು ಒಟ್ಟು ಠೇವಣಿಗಳ ಶೇ. 30.07 ಆಗಿದೆ. ಇಂತಹ ಉತ್ತಮ ಉಳಿತಾಯ ಮತ್ತು ಚಾಲ್ತಿ ಖಾತೆಯ ಫಲಿತಾಂಶ ಹೊಂದುವುದು ನಮ್ಮ ಬಹುದಿನಗಳ ಕನಸಾಗಿತ್ತು. ಈ ಗುರಿ ಮೀರಿದ ಸಾಧನೆಗೆ ಕಾರಣರಾದ ನಮ್ಮೆಲ್ಲ ಗ್ರಾಹಕರಿಗೂ ಮನದಾಳದ
ವಂದನೆಗಳು ಎಂದರು.

ನಾವು ವೆಚ್ಚಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿರುವು ದರಿಂದ ಬ್ಯಾಂಕಿನ ವೆಚ್ಚಗಳು ಶೇ. 2.35ಕ್ಕೆ ಇಳಿಕೆ ಕಂಡಿವೆ. “ಕೆಬಿಎಲ್‌- ವಿಕಾಸ್‌’ ಜೈತ್ರಯಾತ್ರೆಯ ಉಪಕ್ರಮಗಳಲ್ಲಿ ಒಂದಾದ ಡಿಜಿಟಲ್‌ ಸಾಲ ವಿತರಣೆಗಳು ಮುನ್ನೆಲೆಯಲ್ಲಿ ಇರುವುದಲ್ಲದೆ ಅತ್ಯಂತ ಜನಪ್ರಿಯವಾಗಿದೆ. ಮುಂಬರುವ
ದಿನಗಳಲ್ಲಿ ಬ್ಯಾಂಕು ತನ್ನ ಸ್ಥಿರತೆ ಮತ್ತು ಸಾಮರ್ಥ್ಯವನ್ನು ಉತ್ತಮ ಗೊಳಿಸುತ್ತ ಅತ್ಯಂತ ಸದೃಢವಾಗಿ ಹೊರಹೊಮ್ಮಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.