ಪ್ರತಿಯೊಬ್ಬ ದೇಶಭಕ್ತನ ದೇಣಿಗೆ ಸಲ್ಲಲಿ: ಮಲ್ಲಿಕಾರ್ಜುನ ಹಿಪ್ಪರಗಿ

ಈ ಧಾರ್ಮಿಕ ಕಾರ್ಯವು ಪಕ್ಷಾತೀತವಾಗಿದೆ. ಯಾರು ಬೇಕಾದರೂ ನಿಧಿ ಸಮರ್ಪಿಸಲು ಅವಕಾಶವಿದೆ

Team Udayavani, Jan 16, 2021, 4:09 PM IST

ಪ್ರತಿಯೊಬ್ಬ ದೇಶಭಕ್ತನ ದೇಣಿಗೆ ಸಲ್ಲಲಿ: ಮಲ್ಲಿಕಾರ್ಜುನ ಹಿಪ್ಪರಗಿ

ಮುದ್ದೇಬಿಹಾಳ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರ ರಾಷ್ಟ್ರ ಮಂದಿರ ಆಗಿರಲಿದೆ. ಅಲ್ಲಿ ನಡೆಯುತ್ತಿರುವುದು ರಾಷ್ಟ್ರಮಂದಿರದ ನಿರ್ಮಾಣ ಕಾರ್ಯ. ಇದಕ್ಕೆ ನಾಡಿನ ಪ್ರತಿಯೊಬ್ಬ ದೇಶಭಕ್ತನ ದೇಣಿಗೆ ಸಲ್ಲಬೇಕು ಎಂದು ಆರ್‌ಎಸ್‌ಎಸ್‌ನ ಕುಟುಂಬ ಪ್ರಬೋಧನ ಜಿಲ್ಲಾ ಸಂಚಾಲಕ ಬೌದ್ಧಿಕ ಪ್ರಮುಖ ಮಲ್ಲಿಕಾರ್ಜುನ ಹಿಪ್ಪರಗಿ ಹೇಳಿದರು.

ಪಟ್ಟಣದ ಶ್ರೀರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ಅಡಿ ಶುಕ್ರವಾರ ಏರ್ಪಡಿಸಿದ್ದ ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಮನೆಮನೆ ಸಂಪರ್ಕ ಮೂಲಕ ನಿಧಿ ಸಮರ್ಪಣ ಅಭಿಯಾನದಲ್ಲಿ ಅವರು ಮಾತನಾಡಿದರು.

ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬನ ಸೇವೆ ಸಮರ್ಪಣೆಯಾಗಬೇಕು. ಪ್ರತಿ ಮನೆ, ಮಠ ಮಾನ್ಯಗಳ ಶರಣರು, ಸಂತರು ರಾಷ್ಟ್ರ ಮಂದಿರ ಪುನರುಜ್ಜೀವನ
ಮಾಡಬೇಕಿದೆ. ಈ ನಾಡು ರಾಮರಾಜ್ಯವಾದಾಗ ಮಂದಿರ ನಿರ್ಮಾಣಕ್ಕೆ ಅರ್ಥ ಬರುತ್ತದೆ. ನಮ್ಮ ಮಕ್ಕಳಿಗೆ ದೇಶದ ಸಂಸ್ಕೃತಿ, ಧರ್ಮಾಚರಣೆ ಕಲಿಸಬೇಕು. ಭಾರತದ ವಿಜಯದ ಇತಿಹಾಸ ಜಗತ್ತಿಗೆ ತೋರಿಸಬೇಕು. ಈ ಧಾರ್ಮಿಕ ಕಾರ್ಯವು ಪಕ್ಷಾತೀತವಾಗಿದೆ. ಯಾರು ಬೇಕಾದರೂ ನಿಧಿ ಸಮರ್ಪಿಸಲು ಅವಕಾಶವಿದೆ ಎಂದರು.

ವಿಜಯಪುರ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನದ ಅನ್ನದಾನಭಾರತಿ ಅಪ್ಪಣ್ಣ ಶ್ರೀ, ಕುಂಟೋಜಿ ಘನಮಠೇಶ್ವರ ತಪೋವನದ ವೀರಯ್ಯಶಾಸ್ತ್ರಿ ಮತ್ತಿತರರು ಮಾತನಾಡಿ, ಶ್ರೀರಾಮನ ಆದರ್ಶ ನಾವೆಲ್ಲ ಅಳವಡಿಸಿಕೊಳ್ಳಬೇಕು. ಭಾರತದ ಧರ್ಮ ಹಿಂದೂ ಧರ್ಮವಾಗಿದೆ. ನಮ್ಮಲ್ಲಿ ಬೇರೂರುತ್ತಿರುವ ಹಾಗೂ ಧರ್ಮಕ್ಕೆ ಧಕ್ಕೆ ತಂದೊಡ್ಡುತ್ತಿರುವ ಜಾತೀಯತೆಯ ಅಸ್ಪೃಶ್ಯತೆ ತೊಲಗಬೇಕು. ಎಲ್ಲ ಹಿಂದುಗಳು ಒಂದಾಗಬೇಕು ಎಂದರು.

ರೂಢಗಿಯ ಯಲ್ಲಾಲಿಂಗ ಶ್ರೀ, ಬನೋಶಿಯ ಮೌನೇಶ್ವರ ಶ್ರೀ, ಶರಣಮ್ಮತಾಯಿ, ಆರ್‌ಎಸ್‌ಎಸ್‌ ಪ್ರಮುಖ ಜಗನ್ನಾಥ ಗೌಳಿ ವೇದಿಕೆಯಲ್ಲಿದ್ದರು. ಗಣ್ಯರಾದ ಪ್ರಭು ಕಡಿ, ಮಲಕೇಂದ್ರಗೌಡ ಪಾಟೀಲ, ಮಂಜುನಾಥಗೌಡ ಪಾಟೀಲ, ಚನ್ನಪ್ಪ ಕಂಠಿ, ಗಿರೀಶಗೌಡ ಪಾಟೀಲ, ಮಾಣಿಕಚಂದ ದಂಡಾವತಿ, ವಿಕ್ರಮ ಓಸ್ವಾಲ್‌, ಬಸಯ್ಯ ನಂದಿಕೇಶ್ವರಮಠ, ಡಾ| ವೀರೇಶ ಪಾಟೀಲ, ರಾಜಶೇಖರ ಹೂಳಿ, ಪುನೀತ ಹಿಪ್ಪರಗಿ, ಸುನೀಲ ಇಲ್ಲೂರ, ದೇವೇಂದ್ರ ವಾಲಿಕಾರ, ಸಿ.ಎಸ್‌. ರಾಜಪುರೋಹಿತ, ಜೋಯಾರಾಮ್‌ ಸಾಳುಂಕೆ, ಜಗದೀಶ ವೈಷ್ಣವ, ಗೋಪಾಲ ಪ್ರಜಾಪತಿ, ಪ್ರಭು ನಂದೆಪ್ಪನವರ, ಲಕ್ಷ್ಮಣ ಬಿಜೂರ, ಅನಿಲಕುಮಾರ ತೇಲಂಗಿ, ನಿಂಗರಾಜ ಮಹಿಂದ್ರಕರ, ರಾಮನಗೌಡ ಸಿದರೆಡ್ಡಿ, ವಿಜಯ ಬಡಿಗೇರ, ಕಾಶಿಬಾಯಿ ರಾಂಪೂರ, ಸರಸ್ವತಿ ಪೀರಾಪೂರ, ಬಸಮ್ಮ ಸಿದರೆಡ್ಡಿ ಇನ್ನಿತರರು ಇದ್ದರು.

ಸ್ವಾಮೀಜಿಗಳು ಸೇರಿದಂತೆ ಹಲವರು ತಮ್ಮ ನೆರವಿನ ಮೊತ್ತ ಘೋಷಿಸಿ ಪ್ರೇರಣೆ ನೀಡಿದರು. ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಡಾ| ಪರಶುರಮ ಪವಾರ ರಾಮಭಜನೆ ನಡೆಸಿಕೊಟ್ಟರು. ಪ್ರಕಾಶ ಮಠ ಸ್ವಾಗತಿಸಿದರು. ನಿಧಿ ಅಭಿಯಾನದ ಮಂಡಲ ಪ್ರಮುಖ ಎಂ.ಡಿ. ಕುಂಬಾರ ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ನಿರೂಪಿಸಿದರು. ಮಹಾಂತೇಶ ಸಜ್ಜನವರ ವಂದಿಸಿದರು.

ಮಾಜಿ ಪ್ರಧಾನಿ ವಾಜಪೇಯಿಯವರ ತತ್ವಾದರ್ಶಗಳಿಗೆ, ಪಕ್ಷ ಸಿದ್ಧಾಂತಕ್ಕೆ ಮಾರುಹೋಗಿ ಬಿಜೆಪಿಗೆ ಬಂದಿದ್ದೇನೆ. ಸಂಘ ಮತ್ತು ಪಕ್ಷ ಸಿದ್ಧಾಂತ ಒಂದೇ ಆಗಿದೆ. ಶ್ರೀರಾಮಮಂದಿರ ನಿರ್ಮಾಣಕ್ಕೆ ವೈಯಕ್ತಿವಾಗಿ ಲಕ್ಷ ರೂ. ದೇಣಿಗೆ ಸಲ್ಲಿಸುತ್ತಿದ್ದೇನೆ.
ಪ್ರಭುಗೌಡ ದೇಸಾಯಿ, ಜಿಪಂ
ಉಪಾಧ್ಯಕ್ಷ

ಜ. 15ರಿಂದ ಫೆ. 5ರವರೆಗೆ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತದೆ. ಪ್ರತಿ ಮನೆ ಸಂಪರ್ಕಿಸಲಾಗುತ್ತದೆ. ಹಿಂದೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪಲಾಗುತ್ತದೆ. 10 ರೂ. ದಿಂದ ಎರಡು ಸಾವಿರ ರೂ. ವರೆಗೆ ಕೂಪನ್‌ ಇದ್ದು, ಸಾರ್ವಜನಿಕರು ಶಕ್ತಾನುಸಾರ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು.
ಎಂ.ಡಿ. ಕುಂಬಾರ .ವಕೀಲರು, ಅಭಿಯಾನದ
ಮುದ್ದೇಬಿಹಾಳ ಮಂಡಲ ಪ್ರಮುಖರು

ಟಾಪ್ ನ್ಯೂಸ್

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.