“ಸ್ಕಿಮ್ಮಿಂಗ್’: ಎಟಿಎಂ ಬಳಕೆದಾರರೇ ಎಚ್ಚರ! ಸೈಬರ್ ಅಪರಾಧ ಹೆಚ್ಚಳ
Team Udayavani, Feb 10, 2021, 7:00 AM IST
ಮಂಗಳೂರು: ಕರಾವಳಿ ಸಹಿತ ರಾಜ್ಯದ ಹಲವೆಡೆ ಎಟಿಎಂ “ಸ್ಕಿಮ್ಮಿಂಗ್’ ನಡೆಸಿ ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುವ ದುಷ್ಕೃತ್ಯ ಹೆಚ್ಚುತ್ತಿದ್ದು, ಎಟಿಎಂ ಬಳಕೆದಾರರು ಹೆಚ್ಚು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.
ಮಂಗಳೂರು ನಗರ ಮತ್ತು ಹೊರ ವಲಯದ ಒಟ್ಟು 3 ಎಟಿಎಂಗಳಲ್ಲಿ “ಸ್ಕಿಮ್ಮಿಂಗ್’ ನಡೆಸಿ ಎಟಿಎಂ ಬಳಕೆದಾರರ ಖಾತೆಗಳಿಂದ ಹಣ ವಿದ್ಡ್ರಾ ಮಾಡಿರುವ ಘಟನೆ ಈಚೆಗೆ ಸಂಭವಿಸಿದೆ. ಉಡುಪಿ ಭಾಗದಲ್ಲೂ ಇಂಥ ಪ್ರಕರಣ ವರದಿಯಾಗಿವೆ.
ಎಟಿಎಂ ಯಂತ್ರಗಳಲ್ಲಿ ಸೂಕ್ಷ್ಮ ಉಪಕರಣ ಅಳ ವಡಿಸಿ ಎಟಿಎಂ ಕಾರ್ಡ್ಗಳ ಮಾಹಿತಿ ಕದ್ದು ಅನಂತರ ನಕಲಿ ಕಾರ್ಡ್ ತಯಾರಿಸಿ ಹಣ ವಿದ್ಡ್ರಾ ಮಾಡುವುದಕ್ಕೆ “ಸ್ಕಿಮ್ಮಿಂಗ್’ ಎನ್ನಲಾಗುತ್ತದೆ. ಇದಕ್ಕಾಗಿ ವಂಚಕರು ಅಳವಡಿಸುವ ಉಪಕರಣವು ಬಳಕೆದಾರರು ಎಟಿಎಂ ಕಾರ್ಡ್ ಸ್ವೆ„ಪ್ ಮಾಡಿದಾಗ ಅದರಲ್ಲಿರುವ 16 ಅಂಕಿಗಳ ಸಂಖ್ಯೆ ಮತ್ತು ಸಿವಿಸಿ ಸಂಖ್ಯೆಗಳನ್ನು ದಾಖಲಿಸಿಕೊಳ್ಳುತ್ತದೆ. ನಗರದ ಚಿಲಿಂಬಿ, ನಾಗುರಿ ಮತ್ತು ಕುಳಾçಯ ತಲಾ ಒಂದು ಎಟಿಎಂಗಳಲ್ಲಿ ಈ ರೀತಿ ಸ್ಕಿಮ್ಮಿಂಗ್ ನಡೆದಿದ್ದು, ವಂಚಕರು ನೂರಾರು ಗ್ರಾಹಕರ ಲಕ್ಷಾಂತರ ರೂಪಾಯಿಗಳನ್ನು ಎಗರಿಸಿದ್ದಾರೆ.
ಹಳೆ ಮಾದರಿ ಎಟಿಎಂಗಳು?
ಈ ಕೃತ್ಯಗಳು ನಡೆದಿರುವ ಎಟಿಎಂಗಳೆಲ್ಲ ಹಳೆಯ ಮಾದರಿಯವು ಎಂದು ತಿಳಿದು ಬಂದಿದೆ. ಈ ಎಟಿಎಂ ಗಳಲ್ಲಿ ಸ್ಕಿಮ್ಮಿಂಗ್ ಉಪಕರಣವನ್ನು ಜೋಡಿಸಲು ವಂಚಕರಿಗೆ ಸಾಧ್ಯವಾಗುತ್ತದೆ. ಈ ಎಟಿಎಂಗಳಲ್ಲಿ ಭದ್ರತ ಸಿಬಂದಿಯೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವೆಪ್ ಎಟಿಎಂಗಳು ಅಸುರಕ್ಷಿತ?
ಎನ್ಸಿಆರ್ ಎಟಿಎಂಗಳು, ಅಂದರೆ ಕಾರ್ಡ್ ಸ್ವೆಪ್ ಮಾಡಬಹುದಾದ ಯಂತ್ರಗಳು ಸುರಕ್ಷಿತವಲ್ಲ.
ಬ್ಯಾಂಕ್ನವರೇನು ಮಾಡಬಹುದು?
ಬ್ಯಾಂಕ್ಗಳು ಎಟಿಎಂ ಬಳಕೆದಾರ ರಿಗೆ ಗರಿಷ್ಠ ಸುರಕ್ಷತೆ ಒದಗಿಸುವ ಆವಶ್ಯಕತೆ ಎದುರಾಗಿದೆ.
– ಸ್ಕಿಮ್ಮಿಂಗ್ ಸಾಧ್ಯವಾಗದ ಹೊಸ ಮಾದರಿಯ ಎಟಿಎಂ ಅಳವಡಿಸಬೇಕು.
– ಎಟಿಎಂಗಳಲ್ಲಿ ದಿನದ 24 ತಾಸು ಭದ್ರತ ಸಿಬಂದಿ ಇರಬೇಕು.
– ಸಿಸಿ ಕೆಮರಾ ಅಳವಡಿಸಿ ನಿರಂತರ ನಿರ್ವಹಿಸುತ್ತಿರಬೇಕು.
– ಎಟಿಎಂ ಬಳಕೆ, ಸುರಕ್ಷೆ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು.
– ದೂರು ನೀಡಲು ಬರುವ ಗ್ರಾಹಕರಿಗೆ ತುರ್ತಾಗಿ ಸ್ಪಂದಿಸಬೇಕು, ಅಗತ್ಯ ದಾಖಲೆ (ಸ್ಟೇಟ್ಮೆಂಟ್) ನೀಡಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಹಕರಿಸಬೇಕು.
ಗ್ರಾಹಕರೇನು ಮಾಡಬೇಕು?
– ಎಟಿಎಂನಲ್ಲಿ ಅನುಮಾಸ್ಪಾದವಾದ ಉಪಕರಣ ಜೋಡಣೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
– ಅನುಮಾನ ಬಂದರೆ ಅಲ್ಲಿ ಕಾರ್ಡ್ ಬಳಕೆ ಮಾಡದೆ ಕೂಡಲೇ ಹತ್ತಿರದ ಬ್ಯಾಂಕ್ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು.
– ಸ್ಕಿಮ್ಮಿಂಗ್ ಅನುಮಾನ ಬಂದರೆ ಎಟಿಎಂ ಕಾರ್ಡ್ ಬ್ಲಾಕ್ ಮಾಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ