ಅಂತರ್ಜಲ ಮಟ್ಟ ಸುಧಾರಣೆಗೆ ಅಟಲ್‌ ಯೋಜನೆ


Team Udayavani, Feb 13, 2021, 1:59 PM IST

ಅಂತರ್ಜಲ ಮಟ್ಟ ಸುಧಾರಣೆಗೆ ಅಟಲ್‌ ಯೋಜನೆ

ರಾಮನಗರ: ಅಂತರ್ಜಲ ಮಟ್ಟ ಸುಧಾರಿಸಲು ಸರ್ಕಾರ ಅಟಲ್‌ ಭೂಜಲ ಯೋಜನೆ ಜಾರಿಗೊಳಿಸಿದೆ ಎಂದು ಜಿಪಂ ಸಿಇಒ ಇಕ್ರಂ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಟಲ್‌ ಭೂಜಲ ಯೋಜನೆ ಜಾರಿಗೆ ಚಾಲನೆ ನೀಡಿ ಮಾತನಾಡಿ ದ ಅವರು, ನೀರು ಜಗತ್ತಿನ ಜೀವ ಸಂಕುಲಗಳ ಇರುವಿಕೆಗೆ ಅತ್ಯಗತ್ಯ ಮೂಲ ವಸ್ತು. ನೀರಿನ ಬಳಕೆ ಹಾಗೂ ಅಂತರ್ಜಲ ಅಭಿವೃದ್ಧಿಗೆ ಪ್ರಥಮ ಪ್ರಶಸ್ತ್ಯ ನೀಡಬೇಕು ಎಂದು ಹೇಳಿ ದರು. ಭೂಮಿ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದ್ದರೂ‌ ಶೇ.2.50 ಸಿಹಿ ನೀರು ಲಭ್ಯವಿದ್ದು, ಶೇ.0.30 ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ.

ದೇಶ ಕೃಷಿ ಆಧಾರಿತ ದೇಶವಾಗಿದ್ದು, ಬಹುತೇಕ ನಾಗರಿಕರು ಜೀವನೋಪಾಯಕ್ಕೆ ಕೃಷಿ, ತೋಟಗಾರಿಕೆ, ಹೈನುಗಾರಿಕೆಯನ್ನು ಅವಲಂಭಿಸಿದ್ದಾರೆ. ಹೀಗಾಗಿ ಅಂತರ್ಜಲ ವೃದ್ಧಿ ಎಲ್ಲರ ಪ್ರಾಶ ಸ್ತ್ಯ ವಾ ಗ ಬೇಕು ಎಂದರು.

ಹುಣಸನ ಹಳ್ಳಿ ಯಲ್ಲಿ ಅಧ್ಯಯನಕ್ಕೆ ಕೊಳವೆ ಬಾವಿ:

ಅಟಲ್‌ ಭೂ ಜಲ ಯೋಜನೆಯ ನೋಡಲ್‌ ಅಧಿಕಾರಿ ಸಿ.ಪಿ.ರವಿ ಮಾತನಾಡಿ, ನೀರಿನ ಮಿತವ್ಯಯ ಸಾಧಿಸುವುದು, ಅಂತರ್ಜಲ ಅಭಿವೃದ್ಧಿಯ ಸನ್ನಿವೇಶ ರೂಪಿಸಿವುದು, ಪರಿಣಾಮಕಾರಿ ಅಂತರ್ಜಲನಿರ್ವಹಣೆ ಮತ್ತು ಸಾಂಸ್ಥಿಕ ಚೌಕಟ್ಟನ್ನುಬಲಪಡಿಸುವುದು, ಸಮರ್ಪಕ ನೀರಿನ ಬಳಕೆಗೆ ಉತ್ತಮ ಕ್ರಮ ಅಳವಡಿಸಿಕೊಳ್ಳುವುದು ಯೋಜನೆ ಉದ್ದೇಶ. ಇದಕ್ಕಾಗಿ ಅಧ್ಯಯನ ಕೊಳವೆ ಬಾವಿ ನಿರ್ಮಿಸಲಾಗುತ್ತಿದೆ. ಇಂದು ಸಂಕೇತಿಕವಾಗಿ ಹುಣಸನಹಳ್ಳಿಯಲ್ಲಿ ಅಧ್ಯಯನ ಕೊಳವೆ ಬಾವಿ  ನಿರ್ಮಿಸಿ ಅಧ್ಯಯನ ಪ್ರಾರಂಭಿಸಲಾಗಿದೆ. ಯೋಜನೆಅನುಷ್ಠಾನಕ್ಕೆ ತಕ್ಕಂತೆ ಅನುದಾನಕ್ಕೆ ಪ್ರಸ್ತವಾನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜೆ.ಸಿ.ಮಾಧುಸ್ವಾಮಿ ಚಾಲನೆ: ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ರಾಜ್ಯ ಮಟ್ಟ ದಲ್ಲಿ ಯೋಜನೆ ಉದ್ಘಾಟಿಸಿದರು. ಜಿಪಂ ಭವನದಲ್ಲಿ ಉದ್ಘಾಟನೆ ಸಂದರ್ಭದ ನೇರ ಪ್ರಸಾರಕ್ಕೆ ವ್ಯವ ಸ್ಥೆ ಮಾಡಲಾಗಿತ್ತು. ಜೆಸಿಎಂ ಯೋಜನೆ ಉದ್ಘಾಟಿಸಿದ ಬಳಿಕ ಜಿಲ್ಲಾ ಮಟ್ಟದಲ್ಲಿ ಕಾರ್ಯ ಕ್ರಮ ಆರಂಭ ವಾಯಿತು. ಹಿರಿಯ ಭೂ ವಿಜಾnನಿ ರಾಜಶ್ರೀ, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕೊಟ್ರೇಶ್‌, ಜಿಲ್ಲಾ ಉದ್ಯೋಗಾಧಿಕಾರಿ ಶಿವಮೂರ್ತಿ ಉಪಸ್ಥಿತರಿದ್ದರು.

30 ಗ್ರಾಮಗಳಿಗೆ ಯೋಜನೆ :

ಜಿಲ್ಲೆಯಲ್ಲಿ ಕನಪುರ ತಾಲೂಕಿನ ಅರೆಕಟ್ಟೆ ದೊಡ್ಡಿ, ಚೊಡಹಳ್ಳಿ, ಕಬ್ಟಾ ಳು, ಚಾಕನಹಳ್ಳಿ, ಅರಕೆರೆ, ದೊಡ್ಡ ಮರಳವಾಡಿ, ಯಲಚನವಾಡಿ, ಹೆರಿಂದ್ಯಾಪ್ಪನಹಳ್ಳಿ, ಕೋಳಗೊಂಡನಹಳ್ಳಿ, ಬನವಾಸಿ, ಹುಣಸನಹಳ್ಳಿ, ಕೊಡಿಹಳ್ಳಿ, ತೋಕಸಂದ್ರ, ಅಚಲು, ಬುದಿಗುಪ್ಪೆ, ಹೊನ್ನಿಗನಹಳ್ಳಿ, ಹೊಸದುರ್ಗ, ಹೂಕುಂದ, ನಾರಾಯಣಪುರ, ಸಾತನೂರು, ಶಿವನಹಳ್ಳಿ, ಟಿ.ಬೇಕುಪ್ಪೆ, ಹಳ್ಳಿಮಾರನಹಳ್ಳಿ, ಕಗ್ಗಲಹಳ್ಳಿ, ಟಿ.ಹೊಸಹಳ್ಳಿ, ಬನ್ನಿಮುಕೂಡೂ, ದ್ಯಾವಸಂದ್ರ, ಕಲ್ಲಹಳ್ಳಿ, ಸೊಮಂದ್ಯಾಪನಹಳ್ಳಿ, ತುಂಗಣಿ ಸೇರಿದಂತೆ ಒಟ್ಟು 30 ಗ್ರಾಮವನ್ನು ಯೋಜನೆಗೆ ಗುರಿತಿಸಲಾಗಿದೆ. ರಾಮನಗರ ತಾಲೂಕಿನ ಅಕ್ಕೂರು, ದೊಡ್ಡಂಗನವಾಡಿ, ಹರಿಸಂದ್ರ, ಜಾಲಮಂಗಲ, ಕೂಟಗಲ್‌, ಲಕ್ಷಿಪುರ, ಸುಗ್ಗನಹಳ್ಳಿ, ಬಿಳಗುಂಬ, ಮಯಗಾನಹಳ್ಳಿ, ಶ್ಯಾನುಬೊಗನಹಳ್ಳಿ, ಬನ್ನಿಕುಪ್ಪೆ(ಕೆ), ಬನ್ನಿಕುಪ್ಪೆ(ಬಿ), ವಿಬೂತಿಕೆರೆ, ಮಂಚನಾಯಕನಹಳ್ಳಿ, ಹುಣಸನಹಳ್ಳಿ, ಕಂಚನಕುಪ್ಪೆ, ಗೋಪಹಳ್ಳಿ, ಕಂಚುಗಾರನಹಳ್ಳಿ, ಬೈರಮಂಗಲ ಸೇರಿದಂತೆ ಒಟ್ಟು 19 ಗ್ರಾಮ ಗುರುತಿಸಲಾಗಿದೆ.

1,199 ಗ್ರಾಪಂನಲ್ಲಿ ಜಾರಿ :

ಅಟಲ್‌ ಭೂಜಲ್‌ ಯೋಜನೆಯಡಿ ಗುಜರಾತ್‌, ಹರಿಯಾಣ, ಕರ್ನಾಟಕ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳ ಅಂತರ್ಜಲ ಅತಿಶೋಷಿತ ಪ್ರದೇಶಗಳಲ್ಲಿನ ತಾಲೂಕುಗಳ ಮೇಲೆ ಗಮನ ಹರಿಸಲಾಗಿದೆ. ರಾಜ್ಯದ 14 ಜಿಲ್ಲೆಗಳ ಪೈಕಿ 41 ತಾಲೂಕುಗಳ 1,199 ಗ್ರಾಪಂನ 39,703 ಚದರ ಕಿಮೀ ವಿಸ್ತಾರ ಪ್ರದೇಶಗಳನ್ನು ಯೋಜನೆಗೆ ಗುರುತಿಸಲಾಗಿದೆ. ಇದು ಕೇಂದ್ರ ವಲಯ ಯೋಜನೆಯಾಗಿದ್ದು, ರಾಜ್ಯಗಳಿಗೆ ಅನುದಾನ ಸಹಾಯವಾಗಿ ಸಿಗಲಿದೆ. ರಾಜ್ಯಕ್ಕೆ ಹೂಡಿಕೆ ಮತ್ತು ಪ್ರೋತ್ಸಾಹ ಎರಡೂ ಘಟಕಗಳಿಂದ 1,201.52 ಕೋಟಿ ರೂ. ಅನುದಾನ ರೀತಿಯಲ್ಲಿ ಹಂಚಿಕೆಯಾಗಲಿದೆ ಎಂದು ನೋಡಲ್‌ ಅಧಿಕಾರಿ ಸಿ.ಪಿ.ರವಿ ತಿಳಿಸಿದರು.

ಟಾಪ್ ನ್ಯೂಸ್

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.