62 ತಾಪಂ ಸ್ಥಾನ ಕಡಿತ, 4 ಜಿಪಂ ಸ್ಥಾನ ಏರಿಕೆ

ಮೈಸೂರು ಜಿಲ್ಲೆಯ ಜಿಪಂ, ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆ › ಎಲ್ಲ ತಾಲೂಕಿನ ತಾಪಂ ಸ್ಥಾನ ಮೈನಸ್‌

Team Udayavani, Feb 15, 2021, 5:33 PM IST

62 ತಾಪಂ ಸ್ಥಾನ ಕಡಿತ, 4 ಜಿಪಂ ಸ್ಥಾನ ಏರಿಕೆ

ಮೈಸೂರು: ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕ್ಷೇತ್ರ ಪುನರ್‌ ವಿಂಗಡಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗವು ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ಹೊಸದಾಗಿ ನಾಲ್ಕು ಜಿಪಂ ಸ್ಥಾನಗಳು ಹೆಚ್ಚಾಗಿದ್ದರೆ, ಜಿಲ್ಲೆಯ ಎಲ್ಲಾ ತಾಲೂಕುಗಳ ತಾಪಂ ಸ್ಥಾನಗಳು ಕಡಿತಗೊಂಡಿವೆ.

ತಾಪಂ ವ್ಯವಸ್ಥೆಯನ್ನೇ ರದ್ದುಗೊಳಿಸುವ ಬಗ್ಗೆ ಪರ-ವಿರೋಧ ಚರ್ಚೆಗಳ ಮಧ್ಯೆಯೇ ರಾಜ್ಯಚುನಾವಣಾ ಆಯೋಗವು ಜಿಪಂ, ತಾಪಂ ಚುನಾವನೆಗೆ ಸಿದ್ಧತೆ ನಡೆಸಿದೆ. ಇದರ ಭಾಗವಾಗಿ ಕ್ಷೇತ್ರಗಳ ಪುನರ್‌ ವಿಂಗಡಣೆ ಮಾಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿ, ಫೆ.22ರೊಳಗೆ ಖಾತೆಗಳ ಪುನರ್‌ ವಿಂಗಡಣೆ ಹಾಗೂ ನಕ್ಷೆ ತಯಾರಿಕೆಗೆ ನಿರ್ದೇಶಿಸಿದೆ.

ಈಗಾಗಲೇ ಜಿಲ್ಲಾ ಚುನಾವಣಾ ವಿಭಾಗದಿಂದ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನಸಂಖ್ಯೆ ವಿವರಗಳನ್ನು ಪಡೆದುಕೊಂಡಿದ್ದು, ಅದರ ಆಧಾರದ ಮೇಲೆ ತಾಲೂಕುವಾರು ಜಿಪಂ, ತಾಪಂ ಸ್ಥಾನಗಳನ್ನು ನಿಗದಿಪಡಿಸಿದೆ. ಅದರಂತೆ ಜಿಲ್ಲೆಯ ಜಿಲ್ಲಾ ಪಂಚಾಯ್ತಿಗೆ ನಾಲ್ಕು ಸದಸ್ಯ ಬಲವನ್ನು ಹೆಚ್ಚಿಸಿದ್ದು, 49 ಸದಸ್ಯರಿಂದ 53ಕ್ಕೆ ಹೆಚ್ಚಿಸಿದೆ. ಆದರೆ, ತಾಲೂಕು ಪಂಚಾಯ್ತಿ ಸದಸ್ಯತ್ವ ಸ್ಥಾನವನ್ನು ಇಳಿಕೆ ಮಾಡಲಾಗಿದ್ದು, 187 ಸದಸ್ಯರಿಂದ 125ಕ್ಕೆ ಇಳಿಸಲಾಗಿದೆ. 62 ಸ್ಥಾನವನ್ನು ಕಡಿತಮಾಡಲಾಗಿದೆ.

ಜಿಪಂ ವಿವರ: ಮೈಸೂರು ತಾಲೂಕಿನಲ್ಲಿದ್ದ 10 ಜಿಪಂ ಸ್ಥಾನಗಳಲ್ಲಿ ಮೂರು ಸ್ಥಾನಗಳು ಕಡಿಮೆಯಾಗಿದ್ದರೆ, 9 ಸ್ಥಾನಗಳನ್ನು ಹೊಂದಿದ್ದ ನಂಜನಗೂಡು ತಾಲೂಕಿನಲ್ಲಿ 1 ಸ್ಥಾನ ಸೇರ್ಪಡೆಯಾಗಿ 10 ಸ್ಥಾನಕ್ಕೇರಿದೆ.6 ಸ್ಥಾನ ಹೊಂದಿದ್ದ ತಿ.ನರಸೀಪುರ, ಹುಣಸುರು, ಕೆ.ಆರ್‌.ನಗರ, ಪಿರಿಯಾಪಟ್ಟಣ ತಾಲೂಕುಗಳಿಗೆ ತಲಾ 1 ಸ್ಥಾನ ಸೇರ್ಪಡೆಯಾಗಿದ್ದು, 7 ಸ್ಥಾನಗಳಿಗೆ ಹೆಚ್ಚಿಸಲಾಗಿದೆ. ಉಳಿದಂತೆ ಎಚ್‌.ಡಿ.ಕೋಟೆ ತಾಲೂಕನ್ನು ವಿಭಜಿಸಿ ಹೊಸದಾಗಿ ಸರಗೂರು ತಾಲೂಕು ಮಾಡಿರುವುದರಿಂದ ಎಚ್‌.ಡಿ.ಕೋಟೆಗೆ ಈ ಹಿಂದೆ ಇದ್ದ 6 ಸ್ಥಾನಗಳ ಪೈಕಿ ಒಂದು ಸ್ಥಾನ ಕಡಿತಗೊಳಿಸಲಾಗಿದೆ, ನೂತನ ತಾಲೂಕು ಸರಗೂರಿಗೆ ಹೆಚ್ಚುವರಿಯಾಗಿ 3 ಸ್ಥಾನ ನೀಡಲಾಗಿದೆ.

ಮೈಸೂರು ತಾಲೂಕಿಗೆ ನಷ್ಟ: ಮೈಸೂರು ತಾಲೂಕಿಗೆಜಿಪಂ ಹಾಗೂ ತಾಲೂಕು ಪಂಚಾಯಿತಿ ಸ್ಥಾನಗಳಲ್ಲಿ ನಷ್ಟವಾಗಿದೆ. ಮೈಸೂರು ವರ್ತುಲ ರಸ್ತೆಯ ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿ,ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುತ್ತಿರುವುದು ಹಾಗೂ ಕೆಲವು ಪ್ರದೇಶಗಳನ್ನು ನಗರಪಾಲಿಕೆ ವ್ಯಾಪ್ತಿಗೆ ಸೇರಿಸುತ್ತಿರುವುದರಿಂದ ಜಿಪಂನಲ್ಲಿ ಮೂರು ಸ್ಥಾನ ಹಾಗೂ ತಾಲೂಕು ಪಂಚಾಯಿತಿಯಲ್ಲಿ 19 ಸ್ಥಾನಕಡಿಮೆಯಾಗಿದೆ. ಮೈಸೂರು ತಾಲೂಕಿನ ತಾಪಂನ 38 ಸ್ಥಾನಗಳಲ್ಲಿ ಬರೋಬ್ಬರಿ 19 ಸ್ಥಾನಗಳು ಕಡಿಮೆಯಾಗಿದ್ದು, ಈಗ 19 ಸ್ಥಾನಗಳು ಮಾತ್ರಉಳಿದುಕೊಂಡಿವೆ. ಡಿಸೆಂಬರ್‌ನಲ್ಲಿ ನಡೆದಿದ್ದ ಗ್ರಾಪಂಚುನಾವಣೆಯಲ್ಲಿ ವರ್ತುಲ ರಸ್ತೆಯ ಅಕ್ಕಪಕದ ‌R ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸದೆ ಬರೀ 26 ಗ್ರಾಪಂಗಳಿಗಷ್ಟೇ ಚುನಾವಣೆ ನಡೆದಿತ್ತು.

ತಾಪಂ ವಿವರ: ಹೊಸ ಮಾರ್ಗಸೂಚಿ ಅನ್ವಯ ಈ ಹಿಂದೆ ಜಿಲ್ಲೆಯಲ್ಲಿದ್ದ 7 ತಾಲೂಕುಗಳಲ್ಲೂ ಬರೋಬ್ಬರಿ62 ತಾಪಂ ಸ್ಥಾನಗಳನ್ನು ಕಡಿತಗೊಳಿಸಲಾಗಿದೆ. 38 ತಾಪಂ ಸ್ಥಾನವಿದ್ದ ಮೈಸೂರು ತಾಲೂಕಿಗೆ 19 ಹಾಗೂ 34 ಸ್ಥಾನ ಹೊಂದಿರು ನಂಜನಗೂಡು ತಾಲೂಕಿಗೆ 27, 24 ಸ್ಥಾನ ಹೊಂದಿದ್ದ ತಿ.ನರಸೀಪುರ ತಾಲೂಕಿಗೆ 19, 23 ಸ್ಥಾನ ಹೊಂದಿರು ಹುಣಸೂರು ತಾಲೂಕಿಗೆ 19 ಹಾಗೂ 22 ಸ್ಥಾನ ಹೊಂದಿದ್ದ ಕೆ.ಆರ್‌. ನಗರ ಮತ್ತು ಪಿರಿಯಾಪಟ್ಟಣ ತಾಲೂಕಿಗೆ 18 ಸ್ಥಾನ ನಿಗದಿಯಾಗಿದೆ.

ಜೊತೆಗೆ 24 ಸ್ಥಾನಗಳನ್ನು ಹೊಂದಿದ್ದ ವಿಭಜಿತ ಎಚ್‌.ಡಿ. ಕೋಟೆ ತಾಲೂಕಿಗೆ 13 ಸ್ಥಾನ ನಿಗದಿ ಮಾಡಿ, ನೂತನ ಸರಗೂರು ತಾಲೂಕಿಗೆ 11 ಸ್ಥಾನ ನೀಡಲಾಗಿದೆ. ಈ ಮೂಲಕ ಜಿಲ್ಲೆಯ 07 ತಾಲೂಕುಗಳ ತಾಪಂ ಸದಸ್ಯರ ಸಂಖ್ಯೆ ಕ್ಷೀಣಿಸಿದೆ.

 

ಸತೀಶ್‌ ದೇಪುರ

ಟಾಪ್ ನ್ಯೂಸ್

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeeqw

Hunsur: ಹಣ್ಣಿನ ತೋಟ ಸೇರಿಕೊಂಡಿದ್ದ ಹೆಣ್ಣುಹುಲಿ ಸೆರೆ

1-ewqqwe

Revanna Case; ಸಾಲ ತೀರಿಸೋಕೆ ಕೂಲಿಗೆ ಬಂದಿದ್ದೀನಿ ಅಂತ ಮಹಿಳೆ ಹೇಳಿದ್ಲು

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.