ಬಾಲ್ಕನಿಂದ ಕೆಳಗೆ ಬಿದ್ದು ಮೃತಪಟ್ಟ ಹಸುಗೂಸು: ಅಂಗಾಂಗ ದಾನಮಾಡಿ 5 ಜೀವ ಉಳಿಸಿದ ಧನಿಷ್ಥಾ


ಸುಹಾನ್ ಶೇಕ್, Feb 17, 2021, 8:00 PM IST

Untitled-18

ಬದುಕುವವರೆಗೆ ಬದುಕಿನಲ್ಲಿ ಸಾರ್ಥಕ ಕೆಲಸಗಳನ್ನು ‌ಮಾಡಿ ಸತ್ತ‌ ಮೇಲೂ ಹೆಸರು ಉಳಿಯುವಂತೆ ಬದುಕುವುದು ನೂರರಲ್ಲಿ ಕೈ ಲೆಕ್ಕಕ್ಕೆ ಸಿಗುವಷ್ಟು ಜನ ಮಾತ್ರ.

ಬದುಕು ಅರಳುವ ಮುನ್ನ,ಕನಸು ಚಿಗುರುವ ಮುನ್ನ ದೇಹ ಕಮರಿ ಹೋದಾಗ, ಅಂಗಾಂಗ ದಾನ ಮಾಡಿ ಇತರ ದೇಹಕ್ಕೆ ಜೀವ ನೀಡುವ ವ್ಯಕ್ತಿಗಳು ಮಾದರಿಯೆನ್ನಿಸಿಕೊಳ್ಳುತ್ತಾರೆ. ಅಂಥ ಮಾದರಿ ಆಗಿ, ಇಪ್ಪತ್ತು ತಿಂಗಳು ಬದುಕಿ ಅನಿರೀಕ್ಷಿತವಾಗಿ ಇಹಲೋಕ ತ್ಯಜಿಸಿದ ಧನಿಷ್ಥಾ ಎಂಬ ಪುಟ್ಟ ಬಾಲಕಿಯ ಕಥೆಯಿದು.

ಆಗಷ್ಟೇ ಅಂಬೆಗಾಲಿಟ್ಟು, ಅಮ್ಮನ ಮಡಿಲಲ್ಲಿ ನಲಿಯುತ್ತಾ, ಅಪ್ಪನ ಬೆಚ್ಚಗಿನ ಹೆಗಲಿನಲ್ಲಿ ‌ನಿದ್ರಿಸಬೇಕಾದ ಧನಿಷ್ಥಾ ಅದೊಂದು ದಿನ, ಆಡುತ್ತಾ, ತೆವಳುತ್ತಾ, ಮನೆಯ ಬಾಲ್ಕನಿಯಿಂದ ಕೆಳಗೆ ಬೀಳುತ್ತಾಳೆ. ಆ ಕೂಡಲೇ ಮಗುವನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ರವಾನಿಸುತ್ತಾರೆ. ಜನವರಿ 11 ರಂದು ಧನಿಷ್ಥಾ ಕೊನೆಯುಸಿರೆಳೆಯುತ್ತಾಳೆ.

ಆಸ್ಪತ್ರೆಯ ವೈದ್ಯರು, ಧನಿಷ್ಥಾಳ ಮೆದುಳು ಸ್ಥಗಿತಗೊಂಡಿದೆ ಎಂದು ಹೇಳುತ್ತಾರೆ. ವೈದ್ಯರು ನಿಮ್ಮ ‌ಮಗಳು ಬದುಕುವುದಿಲ್ಲ ಎನ್ನುವ ಸಿಡಿಲಿನ ಆಘಾತದ ಸುದ್ದಿಯನ್ನು ಹೇಳಿ, ಭಾರತದಲ್ಲಿ ಅಂಗಾಂಗ ಪ್ರತಿ ವರ್ಷ ಅಂಗಾಂಗಗಳಿಲ್ಲದೆ 5 ಲಕ್ಷ ಜನ ಸಾಯುತ್ತಾರೆ. ನಿಮ್ಮ ಮಗಳ ಅಂಗಾಂಗವನ್ನು ದಾನ ಮಾಡಿ ಇತರರಿಗೆ ಜೀವ ಕೊಡಬಹುದೇ ಎಂದು ಕೇಳುತ್ತಾರೆ.

ಅನಿರೀಕ್ಷಿತವಾಗಿ ಮಗಳನ್ನು ಕಳೆದುಕೊಂಡ ಮಾಸದ ದುಃಖ‌ ಒಂದು ‌ಕಡೆಯಾದರೆ,ಅಂಗಾಂಗ ದಾನವನ್ನು ಮಾಡಿ ಇತರರ ಜೀವ ಉಳಿಸುವ ನಿರ್ಧಾರ ‌ಇನ್ನೊಂದು ಕಡೆ. ಧನಿಷ್ಥಾಳ ಅಪ್ಪ ‌ಅಮ್ಮ ಮಗಳ ಅಂಗಾಂಗ ದಾನವನ್ನು ‌ಮಾಡಲು ಒಪ್ಪುತ್ತಾರೆ. ಧನಿಷ್ಥಾಳ ಅಂಗಾಂಗಳು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಅದನ್ನು ವೈದ್ಯರು ಕಸಿ ಮಾಡುತ್ತಾರೆ.

ಧನಿಷ್ಥಾಳ ಹೃದಯ,ಯಕೃತ್ತು,ಎರಡು ಮೂತ್ರ ಪಿಂಡ, ಮತ್ತು ಎರಡು ಕಾರ್ನಿಯಾಗಳನ್ನು ಆಸ್ಪತ್ರೆಯಲ್ಲಿ ತೆಗೆದು ಅಗತ್ಯವಿದ್ದ ರೋಗಿಗಳಿಗೆ ನೀಡಲಾಯಿತು. ಮೂತ್ರ ಪಿಂಡಗಳನ್ನು ವಯಸ್ಕರಿಗೆ ‌ನೀಡಿದರೆ, ಹೃದಯ ಹಾಗೂ ಯಕೃತ್ತು ಮಕ್ಕಳಿಗೆ ನೀಡಲಾಗಿದೆ.

ಅಂಗಾಂಗ ದಾನದಿಂದ ಧನಿಷ್ಥಾ ಭಾರತದ ಮೊದಲ ಕಿರಿಯ ಕ್ಯಾಡಾವೆರ್ ಡೊನರ್ ಆಗಿದ್ದಾಳೆ‌.

ಟಾಪ್ ನ್ಯೂಸ್

Prajwal Revanna ದುಬಾೖಗೆ ಹೋಗಿದ್ದು ಗೊತ್ತಿಲ್ಲ: ಡಾ| ಪರಮೇಶ್ವರ್‌

Prajwal Revanna ದುಬಾೖಗೆ ಹೋಗಿದ್ದು ಗೊತ್ತಿಲ್ಲ: ಡಾ| ಪರಮೇಶ್ವರ್‌

1-weweqwe

IPL; ವಾಂಖೇಡೆಯಲ್ಲಿ ಬೌಲರ್‌ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ

Pen drive ಹಂಚಿಕೆ ಜಾಲದ ಸುಳಿವು ಕೊಟ್ಟಿದ್ದೇನೆ: ದೇವರಾಜೇ ಗೌಡ

Pen drive ಹಂಚಿಕೆ ಜಾಲದ ಸುಳಿವು ಕೊಟ್ಟಿದ್ದೇನೆ: ದೇವರಾಜೇ ಗೌಡ

NDA ಕೂಟದಿಂದ ಜೆಡಿಎಸ್‌ ಹೊರ ಹಾಕಿ: ಶಿವರಾಮೇ ಗೌಡ

NDA ಕೂಟದಿಂದ ಜೆಡಿಎಸ್‌ ಹೊರ ಹಾಕಿ: ಶಿವರಾಮೇ ಗೌಡ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna ದುಬಾೖಗೆ ಹೋಗಿದ್ದು ಗೊತ್ತಿಲ್ಲ: ಡಾ| ಪರಮೇಶ್ವರ್‌

Prajwal Revanna ದುಬಾೖಗೆ ಹೋಗಿದ್ದು ಗೊತ್ತಿಲ್ಲ: ಡಾ| ಪರಮೇಶ್ವರ್‌

1-weweqwe

IPL; ವಾಂಖೇಡೆಯಲ್ಲಿ ಬೌಲರ್‌ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ

Pen drive ಹಂಚಿಕೆ ಜಾಲದ ಸುಳಿವು ಕೊಟ್ಟಿದ್ದೇನೆ: ದೇವರಾಜೇ ಗೌಡ

Pen drive ಹಂಚಿಕೆ ಜಾಲದ ಸುಳಿವು ಕೊಟ್ಟಿದ್ದೇನೆ: ದೇವರಾಜೇ ಗೌಡ

NDA ಕೂಟದಿಂದ ಜೆಡಿಎಸ್‌ ಹೊರ ಹಾಕಿ: ಶಿವರಾಮೇ ಗೌಡ

NDA ಕೂಟದಿಂದ ಜೆಡಿಎಸ್‌ ಹೊರ ಹಾಕಿ: ಶಿವರಾಮೇ ಗೌಡ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.