ಅರಗಿಸಿಕೊಳ್ಳಲಾಗದ ದುರಂತ


Team Udayavani, Dec 9, 2021, 6:00 AM IST

ಅರಗಿಸಿಕೊಳ್ಳಲಾಗದ ದುರಂತ

ಮೂರು ಸಶಸ್ತ್ರ ಪಡೆಗಳ ಮೊಟ್ಟ ಮೊದಲ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಅವರ ನಿಧನ ದೇಶ ಅಷ್ಟು ಸುಲಭದಲ್ಲಿ ಅರಗಿಸಿಕೊಳ್ಳಲಾಗದ ದುರಂತ. ರಕ್ಷಣ ಕ್ಷೇತ್ರದಲ್ಲಿ ಸುಧಾರಣೆಯ ಬೀಜ ಬಿತ್ತಿದ್ದ ಜ| ಬಿಪಿನ್‌ ರಾವತ್‌ ಅವರು, ಕರ್ತವ್ಯದಲ್ಲಿದ್ದಾಗಲೇ ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇವರ ಜತೆಗೆ ಪತ್ನಿ ಮಧುಲಿಕಾ ರಾವತ್‌ ಮತ್ತು ಕಾಪ್ಟರ್‌ ಸಿಬಂದಿಯೂ ಸೇರಿ ಒಟ್ಟು 14 ಮಂದಿಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಜ| ಬಿಪಿನ್‌ ರಾವತ್‌ ಅವರಿದ್ದ ಹೆಲಿಕಾಪ್ಟರ್‌ ದುರಂತ ಹಲವು ಆತಂಕಕಾರಿ ಪ್ರಶ್ನೆಗಳನ್ನು ಎದುರಿಟ್ಟಿದೆ. ಸೇನಾ ಮುಖ್ಯಸ್ಥರು, ಪ್ರಧಾನಿ, ರಾಷ್ಟ್ರಪತಿ ಅವರನ್ನು ಹೊತ್ತೂಯ್ಯಬಲ್ಲ ಸಾಮರ್ಥ್ಯದ ಅತ್ಯಂತ ಸುರಕ್ಷಿತ ಎಂದೇ ಪರಿಗಣಿಸಲ್ಪಡುವ ಈ ಹೆಲಿಕಾಪ್ಟರ್‌ ದುರಂತಕ್ಕೀಡಾಗಿದ್ದು, ಸಾಮಾನ್ಯ ಸಂಗತಿಯಲ್ಲ. ಈ ಘಟನೆಗೆ ಏನು ಕಾರಣ ಎಂಬ ಲೆಕ್ಕಾಚಾರಗಳು, ಊಹೆಗಳು ಈಗ ಮೇಲುಗೈ ಸಾಧಿಸುತ್ತಿವೆ. ಈ ಕುರಿತು ಭಾರತೀಯ ವಾಯುದಳ ತನಿಖೆಗೆ ಆದೇಶಿಸಿದ್ದು, ಈ ದುರ್ಘ‌ಟನೆ ಹಿಂದಿನ ಸತ್ಯ ಹೊರಬೀಳುವವರೆಗೆ ದೇಶಕ್ಕೆ  ನೆಮ್ಮದಿ ಇಲ್ಲ. ಘಟನೆ ಹಿಂದೆ ವಿದ್ರೋಹಿಗಳ ಸಂಚು ಇದೆ ಎಂಬ ವ್ಯಾಖ್ಯಾನಗಳೂ ಕೇಳಿಬಂದವಾದರೂ, ಸತ್ಯಾಸತ್ಯತೆ ಹೊರಬೀಳುವ ತನಕ ಕಾಯಲೇಬೇಕು.

ಭಾರತೀಯ ಸೇನೆಯಲ್ಲಿ ಹೊಸ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ  ಜ| ಬಿಪಿನ್‌ ರಾವತ್‌ ಅವರ ದುರಂತ ಸಾವು ಈ ದೇಶ ಇತಿಹಾಸದುದ್ದಕ್ಕೂ ಮರೆಯಲಾಗದ ಸಂಗತಿ. ಸೇನೆಗೆ ಬೇಕಾಗಿರುವ ಶಸ್ತ್ರಾಸ್ತ್ರಗಳಿಗಾಗಿ ವಿದೇಶಿ ಅವಲಂಬನೆ ಬಿಟ್ಟು, ಸ್ವದೇಶಿಯಾಗಿಯೇ ತಯಾರಿಸಬೇಕು ಎಂಬುದು ಇವರ ಮಹದಾಸೆಯಾಗಿತ್ತು. ಅಲ್ಲದೇ, ಸ್ವತಂತ್ರ ಭಾರತದಲ್ಲಿಯೇ ಮೊದಲ ಬಾರಿಗೆ ಇಂಥ ಸುಧಾರಣೆಗೆ ಜ|ರಾವತ್‌ ಅವರು ಕೈಹಾಕಿದ್ದರು.

ಇದನ್ನೂ ಓದಿ:ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ

2019ರ ಆರಂಭದಲ್ಲೇ ಸಿಡಿಎಸ್‌ ಅಧಿಕಾರ ವಹಿಸಿಕೊಂಡಿದ್ದ ಜ|ರಾವತ್‌ ಅವರು, ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ನಡುವಿನ ಸಮನ್ವಯಕ್ಕಾಗಿ ಶ್ರಮಿಸುತ್ತಿದ್ದರು. ಅಲ್ಲದೆ, ಈ ಮೂರು ದಳಗಳನ್ನು ಒಳಗೊಂಡ ಕಮಾಂಡ್‌ವೊಂದನ್ನು ರಚಿಸಲು ಯೋಜನೆ ರೂಪಿಸಿದ್ದರು. ಇದನ್ನು ಪೂರ್ವ ಮತ್ತು ಪಶ್ಚಿಮದ ಮುಂಚೂಣಿ ನೆಲೆಗಳಲ್ಲಿ ಸ್ಥಾಪಿಸಲು ಮುಂದಾಗಿದ್ದರು. ಅಂದರೆ, ಪಾಕಿಸ್ತಾನ ಮತ್ತು ಚೀನಾದ ಯಾವುದೇ ಚಿತಾವಣೆಗೆ ತಕ್ಕ ಎದಿರೇಟು ನೀಡುವುದು ಇವರ ಆಲೋಚನೆಯಾಗಿತ್ತು. ಸದ್ಯ ದೇಶದಲ್ಲಿ 17 ಕಮಾಂಡ್‌ಗಳಿದ್ದು, ಭಾರತೀಯ ಸೇನೆ ಮತ್ತು ವಾಯುಸೇನೆಗೆ ತಲಾ 7 ಕಮಾಂಡ್‌ಗಳು ಮತ್ತು ನೌಕಾದಳಕ್ಕೆ ಮೂರು ಕಮಾಂಡ್‌ಗಳಿವೆ.

ಇದರ ಜತೆಗೆ ಮೂರು ದಳಗಳನ್ನು ಒಳಗೊಂಡ ಥಿಯೇಟರ್‌ ಕಮಾಂಡ್‌ ರಚನೆಗೂ ಜ|ರಾವತ್‌ ಅವರು ಮುಂದಾಗಿದ್ದರು. ಅಂದರೆ ನೌಕಾದಳ ಮತ್ತು ವಾಯು ಸೇನೆಗೆ ಸಮ್ಮಿಳಿತ ಕಮಾಂಡ್‌ಗಳನ್ನು ರಚಿಸುವ ಯೋಜನೆ ರೂಪಿಸಿದ್ದರು. ಇದಕ್ಕೆ ವಾಯುಸೇನೆಯ ಒಳಗೆ ಟೀಕೆಯೂ ವ್ಯಕ್ತವಾಗಿತ್ತು. ಆದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಜ|ರಾವತ್‌ ಅವರು, ನೌಕಾದಳಕ್ಕಾಗಿ ಮೊದಲ ಸಮ್ಮಿಳಿತ ಕಮಾಂಡ್‌ ರಚನೆಯ ನಿರ್ಧಾರ ಮಾಡಿದ್ದರು. ಇದು 2022ರ ಮಧ್ಯಭಾಗದಲ್ಲಿ ಜಾರಿಗೆ ಬರಬೇಕಾಗಿತ್ತು.

2016ರಲ್ಲಿ ಭಾರತ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್‌ ದಾಳಿ ನಡೆಸಿದಾಗ, ಇದರ ಯೋಜನೆ ರೂಪಿಸಿದ್ದವರು ಜ|ರಾವತ್‌ ಅವರು. ಅಲ್ಲದೆ ಈಶಾನ್ಯ ಭಾರತದಲ್ಲಿನ ಉಗ್ರವಾದ ಮಟ್ಟಹಾಕುವಲ್ಲಿಯೂ ಇವರ ಪಾತ್ರ ಗಣನೀಯವಾಗಿದೆ. ಯುದ್ಧತಂತ್ರ ವಿಚಾರದಲ್ಲಿ ನಿಪುಣರಾಗಿದ್ದ ಜ|ರಾವತ್‌ ಅವರು, ಸದಾ ಹಸನ್ಮುಖೀ. ಅಂದ ಹಾಗೆ, ಇವರು ಮಾಧ್ಯಮ ಮತ್ತು ಸಂವಹನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.