ಕೋಟ್ಲಾ ಮೈದಾನದಲ್ಲಿ ಜೇಟ್ಲಿ ಪ್ರತಿಮೆ ವಿವಾದ ಕ್ರಿಕೆಟಿಗರೇ ಒಡೆಯರಾಗ‌ಲಿ


Team Udayavani, Dec 26, 2020, 5:40 AM IST

ಕೋಟ್ಲಾ ಮೈದಾನದಲ್ಲಿ ಜೇಟ್ಲಿ ಪ್ರತಿಮೆ ವಿವಾದ ಕ್ರಿಕೆಟಿಗರೇ ಒಡೆಯರಾಗ‌ಲಿ

ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್‌ ಸಂಸ್ಥೆಗಳನ್ನು ರಾಜಕಾರಣಿಗಳು, ಅಧಿಕಾರ ಶಾಹಿಗಳು, ಉದ್ಯಮಿಗಳಿಂದ ಮುಕ್ತ ಮಾಡಬೇಕೆನ್ನುವುದು ಸರ್ವೋಚ್ಚ ನ್ಯಾಯಾಲಯದ ನಿಲುವು. ಅದಕ್ಕಾಗಿಯೇ ಲೋಧಾ ಸಮಿತಿ ಸಿದ್ಧಪಡಿಸಿದ್ದ ಹಲವಾರು ಶಿಫಾರಸುಗಳಿಗೆ ಸಮ್ಮತಿ ನೀಡಿತ್ತು. ಅದರ ಬಗ್ಗೆ ಈಗಲೂ ಬಿಸಿಸಿಐನ ಬಹುತೇಕ ಪಟ್ಟ ಭದ್ರರಿಗೆ ತಕರಾರಿದೆ ಎನ್ನುವುದು ಬೇರೆ ಮಾತು. ಆದರೆ ಸರ್ವೋಚ್ಚ ನ್ಯಾಯಾಲಯದ ಈ ಕ್ರಮ ಶ್ಲಾಘ್ಯ ಎನ್ನುವುದಂತೂ ಸತ್ಯ. ಲೋಧಾ ಸಮಿತಿ ಶಿಫಾರಸನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವುದು ಅಸಾಧ್ಯ ಎಂದು ಬಿಸಿಸಿಐ ಹೇಳುವುದು ಸರಿಯೂ ಹೌದು. ಉದಾಹರಣೆಗೆ ಐಪಿಎಲ್‌ಗಾಗಿಯೇ ಒಂದು ಸ್ವಾಯುತ್ತ, ಸ್ವತಂತ್ರ ಆಡಳಿತ ಮಂಡಳಿ ರಚಿಸಬೇಕೆನ್ನುವುದನ್ನು ಒಪ್ಪುವುದು ಕಷ್ಟ. ಐಪಿಎಲ್‌, ಬಿಸಿಸಿಐನ ಕೂಸಾಗಿರುವಾಗ ಅದನ್ನು ಸ್ವತಂತ್ರವಾಗಿ ಬಿಟ್ಟರೆ ದೇಶದಲ್ಲಿ ಎರಡು ಕ್ರಿಕೆಟ್‌ ಶಕ್ತಿಕೇಂದ್ರಗಳು ಹುಟ್ಟಿಕೊಳ್ಳುತ್ತವೆ! ಇದು ವಾಸ್ತವಿಕವಾಗಿ ಎದುರಾಗುವ ಸಮಸ್ಯೆ. ಅದೇನಾದರೂ ಇರಲಿ ಕ್ರಿಕೆಟ್‌ ಆಡಳಿತದಲ್ಲಿ ಕ್ರಿಕೆಟಿಗರಿಗೆ ಗರಿಷ್ಠ ಆದ್ಯತೆಯಿರಬೇಕು ಎನ್ನುವ ಶಿಫಾರಸು ಹೇಗೆ ತಪ್ಪಾಗಲು ಸಾಧ್ಯ?

ಸದ್ಯ ಈ ಎಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣ, ಮಾಜಿ ಕ್ರಿಕೆಟಿಗ ಬಿಷನ್‌ ಸಿಂಗ್‌ ಬೇಡಿ ಮತ್ತು ದಿಲ್ಲಿ ಕ್ರಿಕೆಟ್‌ ಸಂಸ್ಥೆ ನಡುವೆ ಶುರುವಾಗಿರುವ ಜಗಳ. ದಿಲ್ಲಿ ಸಂಸ್ಥೆ ಅಧೀನದ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ದಿಲ್ಲಿ ಕ್ರಿಕೆಟ್‌ ಸಂಸ್ಥೆಯ ಮಾಜಿ ಅಧ್ಯಕ್ಷ ಅರುಣ್‌ ಜೇಟ್ಲಿಯ ಪ್ರತಿಮೆ ಅನಾವರಣ ಮಾಡಲು, ಪ್ರಸ್ತುತ ಅಧ್ಯಕ್ಷ ರೋಹನ್‌ ಜೇಟ್ಲಿ ತೀರ್ಮಾನಿಸಿದ್ದಾರೆ. ರೋಹನ್‌, ಅರುಣ್‌ ಜೇಟ್ಲಿ ಪುತ್ರನೆನ್ನು ವುದನ್ನು ಇಲ್ಲಿ ಗಮನಿಸಬೇಕು! ಜೇಟ್ಲಿ 1999ರಿಂದ 2013ರವರೆಗೆ ದಿಲ್ಲಿ ಕ್ರಿಕೆಟನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅವರ ಬಗ್ಗೆ ಬಹುತೇಕರಿಗೆ ಗೌರವವಿದೆ. ಆದರೆ ಬಿಷನ್‌ ಸಿಂಗ್‌ ಬೇಡಿ, ಕ್ರಿಕೆಟ್‌ ವ್ಯವಸ್ಥೆಯಲ್ಲಿ ಕ್ರಿಕೆಟಿಗರಿಗಿಂತ ಆಡಳಿತಗಾರರಿಗೆ ಗೌರವ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಅದು ಸತ್ಯ ಕೂಡಾ. ಕ್ರಿಕೆಟ್‌ ವ್ಯವಸ್ಥೆ ಇರಬೇಕಾದದ್ದೇ ಯೋಗ್ಯ ಕ್ರಿಕೆಟಿಗರ ಬಳಿ. ಆದರೆ ಪ್ರಸ್ತುತ ಭಾರತೀಯ ಕ್ರಿಕೆಟ್‌ ವ್ಯವಸ್ಥೆಯಲ್ಲಿ ಉದ್ಯಮಿಗಳು, ರಾಜಕಾರಣಿಗಳೇ ತುಂಬಿಕೊಂಡಿದ್ದಾರೆ. ಅದು ಹಿಂದಿನಿಂದಲೂ ಬಂದ ಪರಂಪರೆ.

ಬಹಳ ಹಿಂದೆ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಬಿಸಿಸಿಐ ಅಧ್ಯಕ್ಷರಾಗಿದ್ದರು. ಕೆಲವು ವರ್ಷಗಳ ಹಿಂದೆ ಬಿಜೆಪಿ ನಾಯಕ, ಸಂಸದ ಅನುರಾಗ್‌ ಠಾಕೂರ್‌ ಮೊದಲು ಕಾರ್ಯದರ್ಶಿಯಾಗಿ, ಆಮೇಲೆ ಅಧ್ಯಕ್ಷರಾಗಿದ್ದರು. ಸರ್ವೋಚ್ಚ ನ್ಯಾಯಾಲಯ ಅವರನ್ನು ಪದಚ್ಯುತಗೊಳಿಸಿತು. ಅದಕ್ಕೂ ಮುನ್ನ ಇಂಡಿಯಾ ಸಿಮೆಂಟ್ಸ್‌ ಮುಖ್ಯಸ್ಥ ಎನ್‌. ಶ್ರೀನಿವಾಸನ್‌ರನ್ನು ಅಧ್ಯಕ್ಷ ಸ್ಥಾನದಿಂದ ಹೊರಹಾಕಿತ್ತು. ಪ್ರಸ್ತುತ ಬಿಸಿಸಿಐ ಕಾರ್ಯದರ್ಶಿಯಾಗಿರುವುದು ಗೃಹ ಸಚಿವ ಅಮಿತ್‌ ಶಾ

ಪುತ್ರ ಜಯ್‌ ಶಾ, ಕಾಂಗ್ರೆಸ್‌ ನಾಯಕ ರಾಜೀವ್‌ ಶುಕ್ಲ ಉಪಾಧ್ಯಕ್ಷ! ಅಲ್ಲಿಗೆ ಪರೋಕ್ಷವಾಗಿ ಆಡಳಿತದಲ್ಲಿ ವೃತ್ತಿಪರತೆ ತರಬೇಕು, ರಾಜಕೀಯ ತೊಲಗಿಸಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಉದ್ದೇಶವೇ ದಾರಿ ತಪ್ಪಿದಂತಾಗಿದೆ. ಈ ಹಿನ್ನೆಲೆಯಲ್ಲಿ ಜೇಟಿÉ ಪ್ರತಿಮೆ ಸ್ಥಾಪಿಸಬಾರದೆಂಬ ಬಿಷನ್‌ ಸಿಂಗ್‌ ಆಗ್ರಹ ಮಹತ್ವ ಹೊಂದಿದೆ. ಸ್ವತಃ ಬಿಸಿಸಿಐ ಸಂವಿಧಾನದಲ್ಲೇ ಸಚಿವರು, ಸರಕಾರಿ ಹುದ್ದೆಯಲ್ಲಿರುವ ಆಡಳಿತದಲ್ಲಿರುವಂತಿಲ್ಲ ಎನ್ನಲಾಗಿದೆ. ಆದರೆ ರಾಜಕಾರಣಿಗಳು ವಿವಿಧ

ರೂಪದಲಿ ನುಸುಳುತ್ತಿದ್ದಾರೆ! ಇಲ್ಲಿ ಯಾವುದೇ ವ್ಯಕ್ತಿ ಮುಖ್ಯವಲ್ಲ, ಕ್ರಿಕೆಟನ್ನು ಒಂದು ವ್ಯವಸ್ಥೆಯಾಗಿ ನೋಡಿದರೆ ಅಲ್ಲಿ ಸ್ವಹಿತಾಸಕ್ತಿ ಇರಬಾರದು. ಇದ್ದರೆ ಅದರಿಂದ ಅಗಣಿತ ಸಂಖ್ಯೆಯ ಪ್ರತಿಭೆಗಳಿಗೆ ಅನ್ಯಾಯವಾಗುತ್ತದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜಕಾರಣಿಗಳ ಪ್ರತಿಮೆ ಅನಾವರಣ ಮಾಡುವುದು, ಪರೋಕ್ಷವಾಗಿ ಅವರ ಹಿಡಿತಕ್ಕೆ ಅವಕಾಶ ಕೊಡುವುದನ್ನು ನಿಲ್ಲಿಸಬೇಕು. ಕ್ರಿಕೆಟ್‌ ಆಟಕ್ಕೆ ಕ್ರಿಕೆಟಿಗರೇ ಆಡಳಿತಗಾರರಾಗಬೇಕು.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.