Aditya-L1 ದೇಶದ ಚೊಚ್ಚಲ ಸೂರ್ಯ ಶಿಕಾರಿ ಯಶಸ್ವಿಯಾಗಲಿ


Team Udayavani, Sep 2, 2023, 6:00 AM IST

Aditya-L1 ದೇಶದ ಚೊಚ್ಚಲ ಸೂರ್ಯ ಶಿಕಾರಿ ಯಶಸ್ವಿಯಾಗಲಿ

ದೇಶದ ಪ್ರತಿಷ್ಠಿತ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ) ಚಂದ್ರಯಾನ-3 ಯೋಜನೆಯ ಯಶಸ್ಸಿನ ಬೆನ್ನಲ್ಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೂಂದು ಮೈಲುಗಲ್ಲು ಸ್ಥಾಪಿಸಲು ಮುಂದಾಗಿದೆ. ನಮ್ಮ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿಗಳು ದೇಶದ ಪ್ರಪ್ರಥಮ ಸೂರ್ಯಯಾನಕ್ಕೆ ಅಣಿಯಾಗಿದ್ದಾರೆ. ಸೂರ್ಯನ ಸಂಶೋಧನೆಗಾಗಿ ಆದಿತ್ಯ-ಎಲ್‌1 ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಲು ಕ್ಷಣಗಣನೆ ಆರಂಭಿಸಿರುವ ಇಸ್ರೋ ವಿಜ್ಞಾನಿಗಳ ತಂಡ ಶನಿವಾರ ಬೆಳಗ್ಗೆ ಆದಿತ್ಯ-ಎಲ್‌1 ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ಅನ್ನು ಗಗನಕ್ಕೆ ಉಡಾಯಿಸಲು ಸಜ್ಜಾಗಿದ್ದಾರೆ.

ಸೌರ ಮಂಡಲ ಮಾತ್ರವಲ್ಲದೆ ಇಡೀ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೌತುಕಕ್ಕೆ ಕಾರಣವಾಗಿರುವ ಬೆಂಕಿಯ ಉಂಡೆಯಂತಿರುವ ಸೂರ್ಯನ ಸನಿಹಕ್ಕೆ ಉಪಗ್ರಹವನ್ನು ರವಾನಿಸುವ ಮೂಲಕ ಅದರ ಸಮಗ್ರ ಅಧ್ಯಯನ ನಡೆಸುವ ಯೋಚನೆ, ಯೋಜನೆ ನಮ್ಮ ವಿಜ್ಞಾನಿ ಗಳದ್ದಾಗಿದೆ. ಭೂಮಿ ಮತ್ತು ಸೂರ್ಯನ ನಡುವಣ ದೂರದಲ್ಲಿ ಭೂಮಿಗೆ ಸಮೀಪ ಅಂದರೆ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿ ಇವೆರಡರ ಗುರುತ್ವ ನಮ್ಮ ಕೃತಕ ಉಪಗ್ರಹಕ್ಕೆ ಸಮಾನವಾಗಿರಲಿದ್ದು ಇದನ್ನು ಲ್ಯಾಗ್ರಾಂಜಿಯನ್‌ ಪಾಯಿಂಟ್‌ ಎಲ್‌ 1 ಎಂದು ಗುರುತಿಸ ಲಾಗಿದೆ. ಇಲ್ಲಿ ಆದಿತ್ಯ-ಎಲ್‌ 1 ಉಪಗ್ರಹವನ್ನು ಇರಿಸಿ ಸೂರ್ಯನ ಅಧ್ಯಯನದ ದೂರಗಾಮಿ ಚಿಂತನೆ ವಿಜ್ಞಾನಿಗಳದಾಗಿದೆ. ಉಪಗ್ರಹ ನಿಗದಿತ ಕಕ್ಷೆ ಸೇರಿದ ಬಳಿಕ ಅದರಲ್ಲಿನ 7 ಪೇ ಲೋಡ್‌ಗಳ ಪೈಕಿ ಒಂದು ಪೇ ಲೋಡ್‌ ಸೂರ್ಯನ ನಿಖರ ಛಾಯಾಚಿತ್ರಗಳನ್ನು ನಿರಂತರವಾಗಿ ಸೆರೆಹಿಡಿದು ಇಸ್ರೋ ನಿಯಂತ್ರಣ ಕೊಠಡಿಗೆ ರವಾನಿಸಲಿದೆ. ಸೂರ್ಯನ ಹೊರಕವಚದ ಭಾಗಗಳಾಗಿರುವ ಫೋಟೋಸ್ಪಿಯರ್‌, ಕ್ರೋಮೋಸ್ಪಿಯರ್‌ ಮತ್ತು ಕರೊನಾದ ಬಗೆಗೆ ಸಂಶೋಧನೆ ಕೈಗೊಳ್ಳುವ ಜತೆಯಲ್ಲಿ ಸೂರ್ಯನಿಂದ ಚಿಮ್ಮುವ ಕಾಂತಿ ಸಮೂಹ, ಸೌರ ಕಲೆಗಳು, ವಿದ್ಯುತ್ಕಾಂತೀಯ ಕಿರಣಗಳು, ತಾಪಮಾನದಲ್ಲಿನ ಬದಲಾವಣೆಗಳು, ಸೌರ ಮಾರುತಗಳ ಸಹಿತ ವಿವಿಧ ಅಂಶಗಳ ಬಗೆಗೆ ಈ ಉಪಗ್ರಹ ಅಧ್ಯಯನ ನಡೆಸಲು ವಿಜ್ಞಾನಿಗಳಿಗೆ ನೆರವಾಗಲಿದೆ.

ಆದಿತ್ಯ-ಎಲ್‌ 1 ಉಪಗ್ರಹದ ಉಡಾವಣೆಗೆ ಸಜ್ಜಾಗಿರುವ ಭಾರತೀ ಯ ಬಾಹ್ಯಾಕಾಶ ವಿಜ್ಞಾನಿಗಳ ಈ ಸಾಹಸವನ್ನು ಕಣ್ತುಂಬಿಕೊಳ್ಳಲು ದೇಶ ಮಾತ್ರವಲ್ಲದೆ ಇಡೀ ವಿಶ್ವದ ಜನತೆ ಕಾತರವಾಗಿದೆ. ಸೂರ್ಯನ ಸಂಶೋ ಧನೆಯ ಕಾರ್ಯದಲ್ಲಿ ಈಗಾಗಲೇ ವಿದೇಶಿ ಉಪಗ್ರಹಗಳು ತೊಡಗಿಕೊಂಡಿವೆ. ಈ ನಿಟ್ಟಿನಲ್ಲಿ ವಿಶ್ವದ ಬಲಾಡ್ಯ ರಾಷ್ಟ್ರಗಳು ಈ ಹಿಂದೆ ಸಾಕಷ್ಟು ಪ್ರಯತ್ನ ನಡೆಸಿವೆಯಾದರೂ ಹೆಚ್ಚಿನವು ಸೂರ್ಯನ ಉರಿಯಲ್ಲಿ ಸುಟ್ಟು ಭಸ್ಮವಾಗಿವೆ. ಭಾರತ ಮತ್ತು ಇಸ್ರೋದ ಪಾಲಿಗೆ ಇದು ಮೊದಲ ಪ್ರಯತ್ನವಾದರೂ ಬಾಹ್ಯಾಕಾಶಕ್ಕೆ ಈಗಾಗಲೇ ಸಾಕಷ್ಟು ಉಪಗ್ರಹಗಳನ್ನು ರವಾನಿಸಿದ ಅನುಭವ ಹೊಂದಿರುವ ಪರಿಣತ ವಿಜ್ಞಾನಿಗಳು ದಿನಕರನ ಕದ ತಟ್ಟುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

ಸರಕಾರದಿಂದಲೂ ಇಸ್ರೋ ವಿಜ್ಞಾನಿಗಳ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಸಂಪೂರ್ಣ ಸಹಕಾರ ಮತ್ತು ಅಗತ್ಯ ಆರ್ಥಿಕ ನೆರವು ಲಭಿಸಿದ್ದು ದೇಶದ ಜನರೂ ವಿಜ್ಞಾನಿಗಳಿಗೆ ಶುಭಹಾರೈಕೆಗಳ ಸುರಿಮಳೆಗರೆದಿದ್ದಾರೆ. ದೇಶದ ಬಾಹ್ಯಾಕಾಶ ವಿಜ್ಞಾನಿಗಳ ಮಹತ್ವಾಕಾಂಕ್ಷೆ ಈಡೇರಿ ಆದಿತ್ಯ-ಎಲ್‌1 ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಲಿ ಎಂಬುದು ದೇಶವಾಸಿಗಳೆಲ್ಲರ ಹಾರೈಕೆ ಮಾತ್ರವಲ್ಲದೆ ಹೆಬ್ಬಯಕೆ ಕೂಡ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.