ಮಹತ್ವ ಪಡೆದುಕೊಂಡಿದೆ ಮೂಡೀಸ್‌ ವರದಿ: ಸಾಧನೆಗೆ ಸಮರ್ಥನೆ


Team Udayavani, Nov 18, 2017, 10:40 AM IST

18-11.jpg

ನಮ್ಮಲ್ಲಿ ಸಂಘಟಿತ ವಲಯಕ್ಕಿಂತಲೂ ಅಸಂಘಟಿತ ವಲಯವೇ ದೊಡ್ಡದಾಗಿದೆ. ಜಿಎಸ್‌ಟಿ ಮತ್ತು ನೋಟು ರದ್ದು ನಿರ್ಧಾರಗಳಿಂದ ದೊಡ್ಡ ಹೊಡೆತ ಬಿದ್ದಿರುವುದು ಕೂಡ ಈ ವಲಯಕ್ಕೆ..

ಅಮೆರಿಕದ ಮೂಡೀಸ್‌ ಇನ್ವೆಸ್ಟರ್ ಸರ್ವಿಸಸ್‌ ಸಂಸ್ಥೆ ಬಿಡುಗಡೆಗೊಳಿಸಿರುವ ವರದಿ ಕೇಂದ್ರದ ನರೇಂದ್ರ ಮೋದಿ ಸರಕಾರದ ಸಾಧನೆಗೆ ನೀಡಿದ ಸಮರ್ಥನೆಯಂತಿದೆ. ಸುಮಾರು ಒಂದು ದಶಕದ ಬಳಿಕ ಭಾರತದ ಸೊವರಿನ್‌ ಕ್ರೆಡಿಟ್‌ ರೇಟನ್ನು ಮೂಡೀಸ್‌ ಬಿಎಎ3 ಹಂತದಿಂದ ಬಿಎಎ2ಗೆ ಏರಿಸಿದೆ. ನೋಟು ರದ್ದು, ಸರಕು ಮತ್ತು ಸೇವಾ ತೆರಿಗೆ ಸೇರಿ ಹಲವು ಆರ್ಥಿಕ ಸುಧಾರಣಾ ಕ್ರಮಗಳಿಗೆ ವಿಪಕ್ಷಗಳಿಂದ ತೀವ್ರ ವಾಗ್ಧಾಳಿ ಎದುರಿಸುತ್ತಿರುವ ಸಂದರ್ಭದಲ್ಲೇ ಸರಕಾರಕ್ಕೆ ಮೂಡೀಸ್‌ ವರದಿ ಆನೆಬಲ ನೀಡಿರುವುದರಲ್ಲಿ ಅನುಮಾನವಿಲ್ಲ. ವರದಿ ಬಹಿರಂಗವಾಗುತ್ತಿದ್ದಂತೆಯೇ ಮೋದಿ, ಹಣಕಾಸು ಸಚಿವ ಅರುಣ್‌ ಜೇತ್ಲೀ ಸೇರಿದಂತೆ ಹಲವು ಸಚಿವರು ಈ ಕುರಿತು ಹೇಳಿಕೆ ನೀಡಿರುವುದೇ ಇದಕ್ಕೆ ಸಾಕ್ಷಿ. ಈ ತಿಂಗಳಲ್ಲಿ ಮೋದಿ ಸರಕಾರದ ನೈತಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಂದಿರುವ ಮೂರನೇ ವರದಿಯಿದು. ಕೆಲ ದಿನಗಳ ಹಿಂದೆಯಷ್ಟೇ ವಿಶ್ವಬ್ಯಾಂಕ್‌ನ ಉದ್ಯಮ ಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ 139ರಿಂದ 100ಕ್ಕೆ ಜಿಗಿದಿತ್ತು. ಬರೀ ಒಂದು ವರ್ಷದಲ್ಲಾಗಿರುವ ಈ ಸಾಧನೆಗೆ ಸರ್ವತ್ರ ಪ್ರಶಂಸೆ ವ್ಯಕ್ತವಾಗಿದೆ. ಇದರ ಬೆನ್ನಿಗೆ ಅಮೆರಿಕದ ಪ್ಯೂ ರೀಸರ್ಚ್‌ ಸೆಂಟರ್‌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈಗಲೂ ಮೋದಿಯೇ ಭಾರತೀಯರ ನೆಚ್ಚಿನ ನಾಯಕ ಎಂಬ ಅಂಶ ತಿಳಿದು ಬಂದಿದೆ. ಮೂರು ವರ್ಷದ ಆಳ್ವಿಕೆಯಲ್ಲಿ ಮೋದಿಯ ವರ್ಚಸ್ಸು ಮುಕ್ಕಾಗಿಲ್ಲ ಎನ್ನುವುದನ್ನು ಈ ಸಮೀಕ್ಷೆ ದೃಢಪಡಿಸಿದೆ. ಇದೀಗ ಮೂಡೀಸ್‌ ಮೋದಿ ಕೈಗೊಂಡಿರುವ ಆರ್ಥಿಕ ಮತ್ತು ರಾಜಕೀಯ ನಿರ್ಧಾರಗಳು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿವೆ ಎನ್ನುತ್ತಿರುವುದು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ ಇನ್ನಷ್ಟು ದೃಢವಾಗುವ ಮುನ್ಸೂಚನೆಯನ್ನು ನೀಡಿದೆ. 

ಮೂಡೀಸ್‌ ವರದಿ ಹಲವು ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ. ನೋಟು ರದ್ದು ಮತ್ತು ಜಿಎಸ್‌ಟಿಯಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂದು ಕೂಗಾಡುತ್ತಿರುವ ವಿಪಕ್ಷಗಳಿಗೆ ಈ ವರದಿ ತಕ್ಕ ಉತ್ತರ ನೀಡಿದೆ. ಜತೆಗೆ ಆರ್ಥಿಕತೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ, ಈ ಕುರಿತು ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಿದೆ. 2004ರಲ್ಲಿ ಮೂಡೀಸ್‌ ಭಾರತದ ಶ್ರೇಯಾಂಕವನ್ನು ಬಿಎಎ 3ಕ್ಕೇರಿಸಿತ್ತು. ಆ ಬಳಿಕ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ಸತತ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಮೂಡೀಸ್‌ ರೇಟಿಂಗ್‌ನಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಬಿಎಎ3 ಎಂದರೆ ಹೂಡಿಕೆ ಮಾಡಲು ಕನಿಷ್ಠ ಸಾಧ್ಯತೆಯಿರುವ ದೇಶ ಎಂದು ಅರ್ಥ. ಮೂಡೀಸ್‌ ರೇಟಿಂಗ್‌ ದೇಶದ ಆರ್ಥಿಕ ಮತ್ತು ರಾಜಕೀಯ ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ. ಬಿಎಎ2ಕ್ಕೇರುವುದರಿಂದ ಸ್ಥಿರ ಆರ್ಥಿಕತೆಯಿಂದ ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಬಡ್ತಿ ಪಡೆದುಕೊಂಡಂತೆ. ಪ್ರಸ್ತುತ ಭಾರತ ಮೂಡೀಸ್‌ ಪಟ್ಟಿಯಲ್ಲಿ ಸ್ಪೈನ್‌, ಇಟಲಿ, ಒಮಾನ್‌, ಫಿಲಿಪ್ಪೆ„ನ್ಸ್‌, ಪನಾಮ, ಬಲ್ಗೇರಿಯ, ಉರುಗ್ವೇ, ಕೊಲಂಬಿಯಾ ಮತ್ತಿತರ ಮುಂದುವರಿದ ದೇಶಗಳ ಸಾಲಿನಲ್ಲಿದೆ. ಮೋದಿ ಸರಕಾರದ ಸುಧಾರಣಾ ಕಾರ್ಯಸೂಚಿಯನ್ನು ಮೂಡೀಸ್‌ ಮೆಚ್ಚಿಕೊಂಡಿದೆ. ನೋಟು ರದ್ದು, ಜಿಎಸ್‌ಟಿ ಮತ್ತು ಆಧಾರ್‌ ಆಧಾರಿತ ನಗದುರಹಿತ ವಹಿವಾಟುಗಳಿಗೆ ಸರಕಾರ ನೀಡುತ್ತಿರುವ ಉತ್ತೇಜನವನ್ನು ಮೂಡೀಸ್‌ ಶ್ಲಾ ಸಿದ್ದು, ಸದ್ಯ ಕುಸಿತ ಕಂಡಿರುವ ಜಿಡಿಪಿ ಮುಂದಿನ ವರ್ಷಗಳಲ್ಲಿ ಚೇತರಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದೆ. 

ಮೂಡೀಸ್‌ ಶ್ರೇಯಾಂಕ ನಿಗದಿಪಡಿಸುವುದು ಸಾಲದ ಜಿಡಿಪಿ ಅನುಪಾತದ ಮೇಲೆ. ಈ ದರ ಹೆಚ್ಚಾದರೆ ದೇಶದ ಬ್ಯಾಂಕಿಂಗ್‌ ಕ್ಷೇತ್ರದ ಆರೋಗ್ಯ ಚೆನ್ನಾಗಿದೆ ಎಂದು ಅರ್ಥ. ಆದರೆ ಸಾಲಗಳು ವಸೂಲಾಗದ ಸಾಲವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾತ್ರ ಬ್ಯಾಂಕುಗಳ ಮೇಲಿರುತ್ತದೆ. ಸ್ಪೈನ್‌, ಇಟಲಿ ಮತ್ತಿತರ ಐರೋಪ್ಯ ದೇಶಗಳು ಭಾರೀ ಸಾಲದ ಸುಳಿಯ ವಿರುದ್ಧ ಹೋರಾಡಿ ಬಿಎಎ2 ರೇಟಿಂಗ್‌ ಪಡೆದುಕೊಂಡಿವೆ. ಸದ್ಯಕ್ಕೆ ಸಾಲದ ಹೊರೆ ಕೈಮೀರಿ ಹೋಗಿಲ್ಲ ಎನ್ನುವ ಅಂಶ ರೇಟಿಂಗ್‌ನಿಂದ ತಿಳಿದುಬಂದಿದೆ. ಇತ್ತೀಚೆಗಷ್ಟೇ ಸರಕಾರ ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ ಘೋಷಿಸಿರುವುದು ರೇಟಿಂಗ್‌ ಮೇಲೆ ಸಕಾರಾತ್ಮಕವಾದ ಪರಿಣಾಮ ಬೀರಿದೆ. ಆದರೆ ಮೂಡೀಸ್‌ ಆಗಲಿ ಇನ್ಯಾವುದೇ ರೇಟಿಂಗ್‌ ಏಜೆನ್ಸಿ ಆಗಲಿ ದರಗಳನ್ನು ನಿರ್ಧರಿಸುವುದು ದೇಶದ ಸಂಘಟಿತ ಆರ್ಥಿಕ ಕ್ಷೇತ್ರದ ವ್ಯವಹಾರಗಳನ್ನು ನೋಡಿಕೊಂಡು. ಆದರೆ ನಮ್ಮಲ್ಲಿ ಸಂಘಟಿತ ವಲಯಕ್ಕಿಂತಲೂ ಅಸಂಘಟಿತ ವಲಯವೇ ದೊಡ್ಡದಾಗಿದೆ. ಜಿಎಸ್‌ಟಿ ಮತ್ತು ನೋಟು ರದ್ದು ನಿರ್ಧಾರಗಳಿಂದ ದೊಡ್ಡ ಹೊಡೆತ ಬಿದ್ದಿರುವುದು ಕೂಡ ಈ ವಲಯಕ್ಕೆ ಈ ವಲಯದ ಅಭಿವೃದ್ಧಿಯಾದರೆ ಮಾತ್ರ ನಿಜವಾದ ವಿಕಾಸವನ್ನು ಸಾಧಿಸಲು ಸಾಧ್ಯ.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.