ಪದ್ಮಾವತ್‌ ವಿವಾದ  ಹದ್ದು ಮೀರಿ ಪ್ರತಿಭಟನೆ 


Team Udayavani, Jan 26, 2018, 10:21 AM IST

26-22.jpg

ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದರೆ ಪರಿಸ್ಥಿತಿ ವಿಷಮಿಸುತ್ತಿರಲಿಲ್ಲ. ಈ ವಿಚಾರದಲ್ಲಿ ರಾಜ್ಯಗಳಷ್ಟೇ ಕೇಂದ್ರವೂ ಹೊಣೆಗೇಡಿತನ ಪ್ರದರ್ಶಿಸಿದೆ.

ಪದ್ಮಾವತ್‌ ಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಎಲ್ಲ ಮಿತಿಯನ್ನು ದಾಟಿರುವಂತೆ ಕಾಣಿಸುತ್ತಿದೆ. ಹರ್ಯಾಣದ ಗುರುಗ್ರಾಮದಲ್ಲಿ ನಿನ್ನೆ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗುಂಪೊಂದು ಶಾಲಾ ಮಕ್ಕಳಿರುವ ಬಸ್‌ಗಳ ಮೇಲೆ ಕಲ್ಲು ತೂರಿದ್ದು ಅಕ್ಷಮ್ಯ ಅಪರಾಧ. ಇವರನ್ನು ಪ್ರತಿಭಟನೆಕಾರರು ಎನ್ನುವುದಕ್ಕಿಂತ ಗೂಂಡಾಗಳು ಎನ್ನುವುದೇ ಹೆಚ್ಚು ಸೂಕ್ತ. ಸುಮಾರು 50ರಷ್ಟಿದ್ದ ಪ್ರತಿಭಟನೆಕಾರರು ಶಾಲೆಯಿಂದ ಕಂದಮ್ಮಗಳನ್ನು ಕರೆದೊಯ್ಯುತ್ತಿದ್ದ ಎರಡು ಬಸ್‌ಗಳ ಮೇಲೆ ಮುಗಿ ಬಿದ್ದಿದ್ದಾರೆ. ಒಂದು ಬಸ್ಸಿನ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಿದ್ದಾರೆ. ತಕ್ಷಣ ಬಸ್ಸಿನಲ್ಲಿದ್ದ ಶಿಕ್ಷಕರು ಮತ್ತು ಚಾಲಕ ಸಮಯ ಪ್ರಜ್ಞೆ ತೋರಿಸದಿರುತ್ತಿದ್ದರೆ ಮುಗ್ಧ ಮಕ್ಕಳು ಅಪಾಯಕ್ಕೀಡಾಗುತ್ತಿದ್ದವು. ಮಕ್ಕಳಿಗೆಲ್ಲ ಸೀಟಿನ ಕೆಳಗೆ ತೂರಿಕೊಳ್ಳುವಂತೆ ಹೇಳಿದುದರಿಂದ ಕಲ್ಲೇಟು ಮತ್ತು ಗಾಜಿನ ತುಂಡುಗಳಿಂದಾಗಬಹುದಾದ ಗಾಯಗಳಿಂದ ಮಕ್ಕಳು ಪಾರಾಗಿವೆ. ಪ್ರತಿಭಟನೆಕಾರರ ಕೈಯಲ್ಲಿ ಪೆಟ್ರೋಲು ಬಾಂಬ್‌ಗಳು ಇದ್ದವು. ಎಲ್ಲಿಯಾದರೂ ಪೊಲೀಸರು ಚದುರಿಸದಿದ್ದರೆ ಅವರು ಬಸ್ಸುಗಳ ಮೇಲೆ ಬಾಂಬ್‌ ಎಸೆಯಲು ಹಿಂಜರಿಯುತ್ತಿರಲಿಲ್ಲ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಈ ರೀತಿಯ ಪ್ರತಿಭಟನೆ ಬೇಕೆ? ಪ್ರತಿಭಟಿಸುವವರಿಗೆ ತಮ್ಮ ಮನೆಯಲ್ಲೂ ಇಂತಹ ಮಕ್ಕಳಿವೆ ಎನ್ನುವ ಕನಿಷ್ಠ ಪ್ರಜ್ಞೆಯೂ ಇರಲಿಲ್ಲವೇ? ಬಾಲಿವುಡ್‌ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಶಾಲಾ ಬಸ್ಸಿನ ಮೇಲೆ ದಾಳಿ ಮಾಡಿರುವುದಕ್ಕೆ ಭಾರೀ ಖಂಡನೆ ವ್ಯಕ್ತವಾಗಿದೆ. ಇದೀಗ ಈ ಮಾದರಿಯ ಪ್ರತಿಭಟನೆಯನ್ನು ಹತ್ತಿಕ್ಕುವುದು ಸರಕಾರದ ಜವಾಬ್ದಾರಿ. ಆದರೆ ಸದ್ಯ ಯಾವ ಸರಕಾರಕ್ಕೂ ಈ ಇರಾದೆ ಇದ್ದಂತಿಲ್ಲ. ಏಕೆಂದರೆ ಪದ್ಮಾವತ್‌ ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಭಾರೀ ಹಿಂಸಾಚಾರ ಸಂಭವಿಸಬಹುದು ಎಂದು ಮೊದಲೇ ಗೊತ್ತಿದ್ದರೂ ತಕ್ಕ ಭದ್ರತಾ ಏರ್ಪಾಡು ಪೊಲೀಸರು ಮಾಡಿಕೊಂಡಿಲ್ಲ ಅಥವಾ ಮಾಡಿಕೊಳ್ಳದಂತೆ ಅವರನ್ನು ತಡೆಯಲಾಗಿದೆ. ಅದರಲ್ಲೂ ಹರಿಯಾಣದ ಪೊಲೀಸರು ಗುಂಪು ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಪದೇ ಪದೇ ವಿಫ‌ಲರಾಗುತ್ತಿದ್ದಾರೆ. ಬಾಬಾ ರಾಮ್‌ ರಹೀಂ ಘಟನೆಯ ಬಳಿಕವೂ ಅವರು ಪಾಠ ಕಲಿತುಕೊಂಡಿಲ್ಲ.  ಸಂಜಯ್‌ ಲೀಲಾ ಭನ್ಸಾಲಿ ನಿರ್ದೇಶಿಸಿದ ಪದ್ಮಾವತ್‌ ಚಿತ್ರ ಚಿತ್ರೀಕರಣ ಸಮಯದಿಂದಲೇ ವಿವಾದಕ್ಕೊಳಗಾಗಿತ್ತು. ರಜಪೂತರ ಹಿತ ರಕ್ಷಿಸುವ ಸಂಘಟನೆ ಎಂದು ಹೇಳಿಕೊಳ್ಳುತ್ತಿರುವ ಕರ್ಣಿ ಸೇನೆ ಚಿತ್ರದ ವಿರುದ್ಧ ಭಾರೀ ಪ್ರತಿಭಟನೆ ನಡೆಸುತ್ತಿದೆ. ಪ್ರಸ್ತುತ ರಾಜಸ್ಥಾನ, ಹರಿಯಾಣ, ಗುಜರಾತ್‌, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಹಿಂದೆ ಕರ್ಣಿ ಸೇನೆಯಿದೆ.ಗಮನಾರ್ಹ ಅಂಶವೆಂದರೆ ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಆಳ್ವಿಕೆಯಿದೆ. ಪದ್ಮಾವತ್‌ನಲ್ಲಿ ರಜಪೂತರು ದೇವತೆ ಎಂದು ಪೂಜಿಸುತ್ತಿರುವ ರಾಣಿ ಪದ್ಮಿನಿಯನ್ನು ಅವಮಾನಕಾರಿಯಾಗಿ ತೋರಿಸಲಾಗಿದೆ ಎನ್ನುವುದು ಕರ್ಣಿ ಸೇನೆಯ ವಿರೋಧಕ್ಕೆ ಕಾರಣ. ವಿವಾದ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿ ಕೊನೆಗೂ ಬಿಡುಗಡೆಗೆ ಅನುಮತಿ ಸಿಕ್ಕಿದೆ. ಚಿತ್ರ ಬಿಡುಗಡೆಯಾಗುವಾಗ ಹಿಂಸಾಚಾರ ನಡೆಯುವುದು ನಿರೀಕ್ಷಿತವೇ ಆಗಿತ್ತು. ಆದರೆ ಅದು ಈ ಮಟ್ಟಕ್ಕೆ ಹೋಗಬಹುದು ಎಂಬ ಕಲ್ಪನೆ ಇರಲಿಲ್ಲ. ಇಡೀ ಉತ್ತರ ಭಾರತ ಈ ಚಿತ್ರದ ಕಾರಣದಿಂದ ಹೊತ್ತಿ ಉರಿಯುತ್ತಿರುವುದು ದುರದೃಷ್ಟಕರ.

ಮನರಂಜನೆ ಒದಗಿಸುವ ಯಕಶ್ಚಿತ್‌ ಒಂದು ಸಿನೇಮಾ ದೇಶದ ರಾಜಕೀಯ ವ್ಯವಸ್ಥೆಯನ್ನು ನಿರ್ದೇಶಿಸುವುದು ಬಹುಶಃ ಭಾರತದಲ್ಲಿ ಮಾತ್ರ ಸಾಧ್ಯವೇನೋ? ಪದ್ಮಾವತ್‌ ಹಿಂಸಾಚಾರದ ಹಿಂದೆ ರಾಜಕೀಯ ಕುಮ್ಮಕ್ಕು ಇಲ್ಲ ಎಂದರೆ ನಂಬುವಷ್ಟು ಮುಗ್ಧರಲ್ಲ ಜನರು. ಅದರಲ್ಲೂ ಸದ್ಯದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಹಿಂಸಾಚಾರ ತೀವ್ರಗೊಂಡಿರುವುದು ಇದನ್ನು ಪುಷ್ಟೀಕರಿಸುತ್ತಿದೆ. ಹೀಗಾಗಿ ಆಡಳಿತ ಪಕ್ಷವಾಗಲಿ ವಿರೋಧ ಫ‌ಕ್ಷವಾಗಲಿ ಹಿಂಸಾಚಾರ ಎಸಗುತ್ತಿರುವವರ ವಿರುದ್ಧ ಮಾತನಾಡುವಾಗ ಎಚ್ಚರಿಕೆ ವಹಿಸುತ್ತಿದ್ದಾರೆ. ಸಾಮಾನ್ಯ ಸಂದರ್ಭದಲ್ಲಾಗಿದ್ದರೆ ತೀವ್ರ ಖಂಡನೆಗೆ ಗುರಿಯಾಗಬೇಕಿದ್ದ ಹಿಂಸಾಚಾರದ ವಿರುದ್ಧ ಈಗ ಎಲ್ಲರೂ “ರಾಜಕೀಯವಾಗಿ ಸರಿಯಾದ’ ಹೇಳಿಕೆಗಳನ್ನು ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಇದು ಹಿಂಸಾನಿರತರಿಗೆ ಇನ್ನಷ್ಟು ಕುಮ್ಮಕ್ಕು ನೀಡಿದೆ. ಕರ್ಣಿ ಸೇನೆ ಇತರ ಕೆಲವು ಸಂಘಟನೆಗಳ ನಾಯಕರು ಬಹಿರಂಗವಾಗಿಯೇ ಮೂಗು ಕತ್ತರಿಸುವ, ರುಂಡ ಚೆಂಡಾಡುವ, ಥಿಯೇಟರ್‌ಗಳಿಗೆ ಬೆಂಕಿ ಹಚ್ಚುವ ಬೆದರಿಕೆಯೊಡ್ಡಿದಾಗಲೇ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದ್ದರೆ ಪರಿಸ್ಥಿತಿ ಇಷ್ಟು ವಿಷಮಿಸುತ್ತಿರಲಿಲ್ಲ. ಈ ವಿಚಾರದಲ್ಲಿ ರಾಜ್ಯಗಳಷ್ಟೇ ಕೇಂದ್ರವೂ ಹೊಣೆಗೇಡಿತನ ಪ್ರದರ್ಶಿಸಿದೆ.ಇನ್ನಾದರೂ ಕಾನೂನು ಮತ್ತು ವ್ಯವಸ್ಥೆ ಪಾಲೆಯನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯಗಳಿಗೆ ಕೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಬೇಕು.

ಟಾಪ್ ನ್ಯೂಸ್

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.