ಟ್ರಂಪ್‌ ಖಾತೆ ರದ್ದು ದ್ವಂದ್ವ ನಿಲುವೇಕೆ?


Team Udayavani, Jan 11, 2021, 6:50 AM IST

ಟ್ರಂಪ್‌ ಖಾತೆ ರದ್ದು ದ್ವಂದ್ವ ನಿಲುವೇಕೆ?

ಟ್ವಿಟರ್‌ ಸಂಸ್ಥೆಯು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಖಾತೆಯನ್ನು ಶಾಶ್ವತವಾಗಿ ತೆಗೆದುಹಾಕಿದ ವಿಚಾರ, ಈಗ ಜಾಗತಿಕ ಚರ್ಚೆಯ ವಿಷಯವಾಗಿ ಬದಲಾಗಿದೆ. ಟ್ರಂಪ್‌ ತಮ್ಮ ಎಗ್ಗಿಲ್ಲದ ಹೇಳಿಕೆಗಳಿಂದ ನಿರಂತರವಾಗಿ ಟೀಕೆಗಳನ್ನು ಎದುರಿಸುತ್ತಲೇ ಬಂದಿರುವುದು ನಿಜವಾದರೂ ಅವರ ವಿಷಯದಲ್ಲಿ ಟ್ವಿಟರ್‌, ಫೇಸ್‌ಬುಕ್‌, ಗೂಗಲ್‌ನಂಥ ಡಿಜಿಟಲ್‌ ದೈತ್ಯ ಕಂಪೆನಿಗಳು ತೆಗೆದುಕೊಳ್ಳುವ ನಿರ್ಧಾರ ಅಭಿವ್ಯಕ್ತಿ ಸ್ವಾತಂತ್ರ್ಯ, ಟೆಕ್‌ ಕಂಪೆನಿಗಳ ಸೈದ್ಧಾಂತಿಕ ವಾಲಿಕೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಒಂದು ವೇಳೆ ಟ್ರಂಪ್‌ ಇನ್ನೂ ನಾಲ್ಕು ವರ್ಷ ಅಧಿಕಾರದಲ್ಲೇ ಇರುತ್ತಾರೆ ಎಂದಾಗಿದ್ದರೆ, ಟ್ವಿಟರ್‌ ಅವರ ಖಾತೆಯನ್ನು ರದ್ದು ಮಾಡುತ್ತಿತ್ತೇ? ಎನ್ನುವ ಪ್ರಶ್ನೆಯ ಜತೆಗೆ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ರಿಗೆ ಹತ್ತಿರವಾಗಲು ಈ ಕಂಪೆನಿಗಳು ಹೀಗೆ ವರ್ತಿಸುತ್ತಿವೆ ಎನ್ನುವ ಆರೋಪವೂ ಎದುರಾಗಿದೆ. ಆದಾಗ್ಯೂ ಯಾವುದೇ ಖಾತೆದಾರರಾಗಲಿ ದ್ವೇಷ ಹರಡುವಂಥ, ಸುಳ್ಳು ಸುದ್ದಿಗಳನ್ನು ಹಬ್ಬಿಸುವಂಥ ಟ್ವೀಟ್‌ ಮಾಡುತ್ತಾರೆ ಎಂದರೆ ಅವರ ಮೇಲೆ ಕ್ರಮ ಕೈಗೊಳ್ಳುವ ಹಕ್ಕು ಖಾಸಗಿ ಸಂಸ್ಥೆಯೊಂದಕ್ಕೆ ಇರುತ್ತದೆ. ಆದರೆ ಇಂಥ ನಿಯಮ ಎಲ್ಲರಿಗೂ ಅನ್ವಯವಾಗಬೇಕಲ್ಲವೇ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಡಿಜಿಟಲ್‌ ವೇದಿಕೆಗಳ ಮೇಲೆ ನಿಯಂತ್ರಣ ಅಗತ್ಯ ಎನ್ನುವ ಚರ್ಚೆ ಬಂದಾಗ ಈ ಕಂಪೆನಿಗಳು “ಅಭಿವ್ಯಕ್ತಿ ಸ್ವಾತಂತ್ರ್ಯ’ದ ಅನಿವಾರ್ಯದ ಬಗ್ಗೆ ಮಾತನಾಡುತ್ತವೆ. ಆದರೆ ಅವೂ ಈ ನಿಯಮಗಳಿಗೆ ಬದ್ಧವಾಗದೇ ಇದ್ದರೆ ಹೇಗೆ? ಇಂದಿಗೂ ಟ್ವಿಟರ್‌ನಲ್ಲಿ ತಾಲಿಬಾನ್‌ ಪರ ವಕ್ತಾರರು ಟ್ವಿಟರ್‌ನ ಮೂಲಕ ದ್ವೇಷ ಹರಡುವ ಕೆಲಸ ಮಾಡುತ್ತಾರೆ, ಇಸ್ರೇಲ್‌ ಅನ್ನು ಸರ್ವನಾಶ ಮಾಡಬೇಕು ಎಂಬ ಪ್ರಚೋದನಾತ್ಮಕ ಟ್ವೀಟ್‌ ಮಾಡುವ ಖೊಮೇನಿಯಂಥವರ ಖಾತೆಗಳೂ ಭದ್ರವಾಗಿಯೇ ಇರುತ್ತವೆ, ಅಮೆರಿಕದ ಸಂಸತ್‌ ಭವನದಲ್ಲಿ ನಡೆದ ಪ್ರತಿಭಟನೆಗಳನ್ನು ಸುಂದರ ದೃಶ್ಯ ಎಂದು ಕರೆಯುವ ಚೀನದ ಬ್ಲೂಟಿಕ್‌ ಖಾತೆಗಳೂ ಇವೆ. ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌ ಪ್ರತಿಭಟನೆಗಳಲ್ಲಿ ಕೋವಿಡ್‌ ಅನ್ನು ಲೆಕ್ಕಿಸದೇ ರಸ್ತೆಗಿಳಿದು ಪ್ರತಿಭಟಿಸಿ ಎಂದು ಕರೆಕೊಟ್ಟ ಎಷ್ಟೋ ಡೆಮಾಕ್ರಾಟ್‌ಗಳ ಖಾತೆಗಳತ್ತಲೂ ಟ್ವಿಟರ್‌ ಗಮನ ಕೊಡಲಿಲ್ಲ ಎನ್ನುವ ಆರೋಪವಿದೆ. ಇದರ ಜತೆಗೇ ಟ್ವಿಟರ್‌, ಫೇಸ್‌ಬುಕ್‌ ಹಾಗೂ ಗೂಗಲ್‌ನಲ್ಲಿರುವ “ಪರಿಶೀಲನ ತಂಡಗಳು’ ಎಡ ಚಿಂತನೆ ಹೊಂದಿರುವುದೇ ಹೀಗೆ ಆಗುತ್ತಿರುವುದಕ್ಕೆ ಕಾರಣ ಎನ್ನುವ ದೂರೂ ಇದೆ. ಪಾರ್ಲರ್‌ನಂಥ ಪರ್ಯಾಯ ಡಿಜಿಟಲ್‌ ವೇದಿಕೆಗಳನ್ನು ಬಳಸಿಕೊಳ್ಳುವುದನ್ನೂ ಡಿಜಿಟಲ್‌ ಕಂಪೆನಿಗಳು ಪರೋಕ್ಷವಾಗಿ ತಡೆಯುತ್ತಿರುವುದು ಆತಂಕದ ವಿಚಾರ. ಗೂಗಲ್‌ ಅಂತೂ ಪಾರ್ಲರ್‌ ಅನ್ನು ತನ್ನ ಆ್ಯಪ್‌ ಸ್ಟೋರ್‌ನಿಂದ ರದ್ದು ಮಾಡಿದೆ.

ಹಾಗೆಂದು, ಸಾಮಾಜಿಕ ಜಾಲತಾಣಗಳು ಅನೇಕ ವಿಚಾರಗಳಲ್ಲಿ ಜವಾಬ್ದಾರಿಯನ್ನೂ ಮೆರೆಯುತ್ತಿವೆ ಎನ್ನುವುದೂ ಸತ್ಯ. ಕೋವಿಡ್‌ ವಿಷಯದಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ಕೂಡಲೇ ಹುಡುಕಿ, ಎಚ್ಚರಿಸುವಂಥ ಉತ್ತಮ ಕೆಲಸಗಳನ್ನೂ ಮಾಡಿವೆ. ಆದರೆ ರಾಜಕೀಯದ ವಿಷಯ ಬಂದಾಗ, ಆರೋಪ ಪ್ರತ್ಯಾರೋಪಗಳು ಇದ್ದದ್ದೇ,  ಚರ್ಚೆಗಳು ನಡೆಯಲೇಬೇಕು. ಬ್ಯಾಲೆಟ್‌ ಪೇಪರ್‌ ಎಣಿಕೆಯಲ್ಲಿ ಮೋಸವಾಗಿದೆ ಎಂದು ಒಬ್ಬರು ಆರೋಪ ಮಾಡುತ್ತಾರೆಂದರೆ ಅದರ ಸತ್ಯಾಸತ್ಯತೆ ಪರಿಶೀಲಿಸುವುದು ಆ ದೇಶದ ಕಾನೂನಿನ ಜವಾಬ್ದಾರಿ. ಹೀಗಿರುವಾಗ ಸಾಮಾಜಿಕ ಜಾಲತಾಣಗಳು ನ್ಯಾಯವಾದಿಗಳ ಪಾತ್ರ ನಿರ್ವಹಿಸುವುದೇಕೆ? ಇಂಥ ಚರ್ಚೆಗಳನ್ನೇ “ಅನುಮಾನಾಸ್ಪದ ವಾದ’ ಎಂದು ಟ್ಯಾಗ್‌ ಮಾಡುತ್ತಾ ಹೋದರೆ ಅಭಿವ್ಯಕ್ತಿ ಸ್ವಾತಂತ್ರ್ಯ ದ ಬಗ್ಗೆ ಅವು ಮಾತನಾಡುವುದೂ ಬಾಲಿಶವಾಗುತ್ತದೆ. ಡಿಜಿಟಲ್‌ ಜಗತ್ತು ದೇಶವೊಂದರ ರಾಜಕೀಯದ ಮೇಲೆ ಪ್ರಭಾವ ಬೀರುವಷ್ಟು ಬಲಶಾಲಿಯಾಗಿದೆ. ಹೀಗಾಗಿ, ಅವುಗಳ ಈ ದ್ವಂದ್ವ ನಿಲುವುಗಳ ಬಗ್ಗೆ ಆತಂಕ ವ್ಯಕ್ತವಾಗಿರುವುದು ಸಹಜ. ಡಿಜಿಟಲ್‌ ಕ್ಷೇತ್ರದಲ್ಲಿ ಕೆಲವೇ ಕಂಪೆನಿಗಳು ಏಕಸ್ವಾಮ್ಯ ಮೆರೆಯುತ್ತಾ ಹೋಗುವುದನ್ನು ತಪ್ಪಿಸಬೇಕಾದ ಅನಿವಾರ್ಯ ಎಲ್ಲ ದೇಶಗಳಿಗೂ ಈಗ ಎದುರಾಗಿದೆ.

ಟಾಪ್ ನ್ಯೂಸ್

Prajwal Revanna Case ಸಂತ್ರಸ್ತೆಯರಿಗೆ ನೆರವಾಗಿ: ಸಿಎಂಗೆ ರಾಹುಲ್‌

Prajwal Revanna Case ಸಂತ್ರಸ್ತೆಯರಿಗೆ ನೆರವಾಗಿ: ಸಿಎಂಗೆ ರಾಹುಲ್‌

CM Siddaramaiah ವಿರುದ್ಧ ಚುನಾವಣ ಆಯೋಗಕ್ಕೆ ಬಿಜೆಪಿ ದೂರು

CM Siddaramaiah ವಿರುದ್ಧ ಚುನಾವಣ ಆಯೋಗಕ್ಕೆ ಬಿಜೆಪಿ ದೂರು

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

Nikhil Kumaraswamy ವೀಡಿಯೋ ನೋಡಲು ಧೈರ್ಯ ಬರಲಿಲ್ಲ

Nikhil Kumaraswamy ವೀಡಿಯೋ ನೋಡಲು ಧೈರ್ಯ ಬರಲಿಲ್ಲ

D. K. Shivakumar”ನನಗೆ ಒಕ್ಕಲಿಗ ನಾಯಕತ್ವ ಪಟ್ಟ ಬೇಡ’

D. K. Shivakumar”ನನಗೆ ಒಕ್ಕಲಿಗ ನಾಯಕತ್ವ ಪಟ್ಟ ಬೇಡ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Editorial:ಮಣಿಪುರ- ಒಡೆದ ಮನಸು‌ ಬೆಸೆಯುವ ಕಾರ್ಯವಾಗಲಿ

Editorial: ಮಣಿಪುರ- ಒಡೆದ ಮನಸು‌ ಬೆಸೆಯುವ ಕಾರ್ಯವಾಗಲಿ

Economy

ಉತ್ಪಾದನ ವಲಯದಲ್ಲಿ ಜಿಗಿತ: ಆರ್ಥಿಕತೆಗೆ ಮತ್ತಷ್ಟು ಬಲ

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

COVID vaccine ಅಡ್ಡಪರಿಣಾಮ ನಿವಾರಣೆ: ಈ ಗಳಿಗೆಯ ತುರ್ತು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna Case ಸಂತ್ರಸ್ತೆಯರಿಗೆ ನೆರವಾಗಿ: ಸಿಎಂಗೆ ರಾಹುಲ್‌

Prajwal Revanna Case ಸಂತ್ರಸ್ತೆಯರಿಗೆ ನೆರವಾಗಿ: ಸಿಎಂಗೆ ರಾಹುಲ್‌

CM Siddaramaiah ವಿರುದ್ಧ ಚುನಾವಣ ಆಯೋಗಕ್ಕೆ ಬಿಜೆಪಿ ದೂರು

CM Siddaramaiah ವಿರುದ್ಧ ಚುನಾವಣ ಆಯೋಗಕ್ಕೆ ಬಿಜೆಪಿ ದೂರು

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.