ಸುವರ್ಣ ಯುಗಕ್ಕೆ ಇಚ್ಛಾಶಕ್ತಿಯೇ ಇಂಧನ


Team Udayavani, Aug 25, 2022, 6:15 AM IST

ಸುವರ್ಣ ಯುಗಕ್ಕೆ ಇಚ್ಛಾಶಕ್ತಿಯೇ ಇಂಧನ

ಬ್ರಿಟಿಷರಿಂದ ನಮ್ಮ ದೇಶ ಸ್ವತಂತ್ರಗೊಂಡ ತರುವಾಯ ಹಳ್ಳಿ-ನಗರಗಳ ಅಭಿವೃದ್ಧಿಯ ದೆಸೆಯಲ್ಲಿ ಅಧಿಕಾರ ವಿಕೇಂದ್ರೀಕರಣ ಪರಿಕಲ್ಪನೆ ವಿವಿಧ ಹಂತಗಳಲ್ಲಿ ಸಾಗಿದೆ. ಹೊಸ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್‌ಗಳ ರಚನೆಯೂ ಅದರ ಒಂದು ಭಾಗ. ಪ್ರತಿ ಪ್ರದೇಶಗಳ ಸಮಗ್ರ ಅಭಿವೃದ್ಧಿಯೇ ಮೂಲ ಉದ್ದೇಶ.

ಸಣ್ಣ ಜಿಲ್ಲೆಗಳು ಆಡಳಿತ ಹಾಗೂ ಅಭಿವೃದ್ಧಿಗೂ ಪೂರಕ ಎಂಬ ಆಲೋಚನೆಯಲ್ಲೇ 1984ರಲ್ಲಿ ನ್ಯಾಯವಾದಿ ಟಿ.ಎಂ. ಹುಂಡೇಕರ್‌ ಅಧ್ಯಕ್ಷತೆಯಲ್ಲಿ ಜಿಲ್ಲಾ ಪುನರ್‌ ವಿಂಗಡಣೆ ಸಮಿತಿಯನ್ನು ನೇಮಿಸಿತು. ಸಮಿತಿಯು 1986ರಲ್ಲಿ ವರದಿ ನೀಡಿ ದ್ದರೂ ಜಾರಿಗೆ ಬಂದದ್ದು 11 ವರ್ಷಗಳ ಬಳಿಕ. 1997ರ ಆಗಸ್ಟ್‌ 25ರಂದು ಉಡುಪಿ ಸಹಿತ ಹೊಸ 7 ಜಿಲ್ಲೆಗಳನ್ನು ಆಗಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲರು ಘೋಷಿಸಿದರು. ಇಂದು (ಆ. 25) ಉಡುಪಿ ಜಿಲ್ಲೆಗೆ 25 ವರ್ಷ. ರಜತ ಕ್ಷಣಗಳಿಂದ ಸುವರ್ಣ ಕಾಲಕ್ಕೆ ಅಭಿವೃದ್ಧಿಯ ಮುನ್ನುಡಿ ಬರೆಯಲೂ ಇದು ಸಕಾಲ.

ಹಾಗೆ ನೋಡುವುದಾದರೆ ಉಡುಪಿ ಸ್ವತಂತ್ರ ಗೊಳ್ಳುವಾಗಲೂ ಕರ್ನಾಟಕದ ಇತರ ಭಾಗದ ಕೆಲವು ಜಿಲ್ಲೆ  ಗಳಂತೆ ದಕ್ಷಿಣ ಕನ್ನಡ ಜಿಲ್ಲೆ ಹಿಂದುಳಿದ ಪಟ್ಟಿ ಯನ್ನೇನೂ ಅಂಟಿಸಿಕೊಂಡಿರಲಿಲ್ಲ. ಆದರೆ ಹೊಸ ಜಿಲ್ಲೆ ಸೃಷ್ಟಿಯಾದದ್ದು ಭವಿತವ್ಯಕ್ಕಾಗಿ. ಈ ದೃಷ್ಟಿಯಲ್ಲಿ 25 ವರ್ಷದ ಪಯಣವನ್ನು ನಿಷ್ಕರ್ಷಿಸ ಬೇಕಾದುದು ಮುಂದಿನ ಪಯಣಕ್ಕೆ ಅನುಕೂಲ.

ಆಡಳಿತವನ್ನಾಗಲೀ, ಆದರ್ಶ ಪರಿ ಕಲ್ಪನೆ ಯನ್ನಾ ಗಲೀ ಪರರಿಂದ ಹೇಳಿಸಿ ಕೊಂಡು ಅನು ಷ್ಠಾನ ಮಾಡುವಂಥ ಸ್ಥಿತಿ ಜಿಲ್ಲೆಯ ಆಡ ಳಿತಗಾರ ರಿಗಾಗಲೀ, ಜನಪ್ರತಿನಿಧಿ ಗಳಿ ಗಾಗಲೀ ಇರಲಿಲ್ಲ. ತಲೆಯ ಮೇಲೆ ಮಲ ಹೊರು ವಂಥ ಅನಿಷ್ಠ ಪದ್ಧತಿಯನ್ನು ದೇಶದಲ್ಲೇ ಮೊದಲು ನಿಷೇಧಿಸಿದ್ದು ಉಡುಪಿ ಸ್ಥಳೀಯ ಆಡ ಳಿತ. ಇದಕ್ಕಿಂತ ದೊಡ್ಡ ಆದರ್ಶ ಕಲ್ಪನೆ ಇನ್ನೆಲ್ಲಿಂದ ಸಿಕ್ಕೀತು?

ಇವೆಲ್ಲವನ್ನೂ ತೂಗಿ ನೋಡುವಾಗ 25 ವರ್ಷ ಗಳ ಸಾಧನೆ ಸಮ್ಮಿಶ್ರ ಭಾವ. ಒಂದಿಷ್ಟು ರಸ್ತೆಗಳು ಹೆದ್ದಾರಿ ಗಳಾ ಗಿವೆ, ಮತ್ತೊಂದಿಷ್ಟು ಕಟ್ಟಡಗಳು, ಕಚೇರಿಗಳು ಬಂದಿವೆ, ಬಂದರು ಅಭಿವೃದ್ಧಿ, ಜವುಳಿ ಪಾರ್ಕ್‌ ಉದ್ಯಮ, ಪಾದೂರು ತೈಲಾಗಾರದಂಥ ಯೋಜನೆಗಳು ಜಾರಿಗೊಂಡಿವೆ. ಇವಿಷ್ಟೇ ಸಮಗ್ರ ಅಭಿ ವೃದ್ಧಿಯ ಪರಿಕಲ್ಪನೆಯೇ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಿಕೊಳ್ಳಬೇಕಿದೆ.

ಒಂದು ನಗರ, ಜಿಲ್ಲೆಗೆ ಬೇಕಾದ ಪ್ರಾಥಮಿಕ ಸೌಕರ್ಯ ಒಳಚರಂಡಿ ಯೋಜನೆ ಇನ್ನೂ ಶೈಶವಾ ವಸ್ಥೆ ಯಲ್ಲಿದೆ. ಪ್ರವಾಸೋದ್ಯಮದ ಮೂಲ  ನೆಲೆಗಳಾದ ನದಿ, ಸಾಗರ, ಪರಿಸರದ ಸುಸ್ಥಿರತೆಯ ಮೌಲ್ಯವನ್ನು ಅರಿತಿಲ್ಲ, ಸ್ಥಳೀಯ ಆರ್ಥಿಕತೆಯ ಬೇರನ್ನು ಗಟ್ಟಿಗೊಳಿಸಲು ವಿಶೇಷ ಆಸಕ್ತಿ ಕಂಡು ಬರುತ್ತಿಲ್ಲ, ಪ್ರವಾ ಸೋದ್ಯಮ, ಉದ್ಯಮಕ್ಕೆ ಪೂರಕ ವಾದ ವಿಮಾನ ನಿಲ್ದಾಣ ಇನ್ನೂ ಈಡೇರ ಬೇಕಾದ ಬೇಡಿಕೆಯ ಪಟ್ಟಿಯಲ್ಲಿದೆ. ಘನ ತ್ಯಾಜ್ಯವನ್ನೂ ಆದಾ ಯವನ್ನಾಗಿಸಿಕೊಳ್ಳುವ ಸಮರ್ಪಕ ವಿಲೇವಾರಿ ವಿಧಾನಕ್ಕೆ ಮುಂದಾಗಿಲ್ಲ. 1980ರಲ್ಲಿ ಶಂಕು ಸ್ಥಾಪನೆ ಗೊಂಡ ವಾರಾಹಿ ಕುಡಿಯುವ ನೀರಿನ ಯೋಜನೆ ಇನ್ನೂ ಪೂರ್ಣಗೊಳ್ಳುವ ಲೆಕ್ಕಾಚಾರದಲ್ಲೇ ಇದೆ.

ವ್ಯವಸ್ಥೆಯ ಶುದ್ಧೀಕರಣದಲ್ಲೂ ಬಹಳ ದೂರ ಸಾಗಬೇಕಿದೆ. ಸರಕಾರಿ ಕಚೇರಿಗಳ ಕಾರ್ಯ ವಿಳಂಬ, ಭ್ರಷ್ಟಾಚಾರದ ಬಗ್ಗೆ ಜನರ ಆಕ್ರೋಶ ಹೆಚ್ಚುತ್ತಿದೆ. ಕೆಲವು ಭ್ರಷ್ಟರು ಕರಾವಳಿ ಭಾಗವನ್ನು “ತಕರಾರಿಲ್ಲದ ವಲಯ’ ಹಾಗೂ ಸುರಕ್ಷಿತ ಪ್ರದೇಶ  ಎಂದು ಭಾವಿಸಿದ್ದಾರೆ. ಈ ಸ್ಥಿತಿಗೆ ನಾಗರಿಕರು ಹಾಗೂ ಜನ ಪ್ರತಿನಿಧಿಗಳು ಕಾರಣರು. ಜನರು ದಕ್ಷ ಸೇವೆಗೆ ಪಟ್ಟು ಹಿಡಿಯಬೇಕು. ಜನಪ್ರತಿನಿಧಿಗಳು ಅದನ್ನು ನೀಡಲು ಅಧಿಕಾರಶಾಹಿಯನ್ನು ಹುರಿಗೊಳಿಸಬೇಕು.

ಇನ್ನೇನಿದ್ದರೂ ನಮ್ಮ ಪಯಣ ಸುವರ್ಣಯುಗದ ಕಡೆಗೆ. ಇಲ್ಲಿ ಇಂಧನವೇ ಇಚ್ಛಾಶಕ್ತಿ. ಹಾಗಾಗಿ ಜಿಲ್ಲೆ ಯನ್ನು ಎಲ್ಲ ಪರಿಸ್ಥಿತಿಗೆ ಸಜ್ಜುಗೊಳಿಸಿ ಅಭಿವೃದ್ಧಿ ಸಾಧಿಸುವುದೇ ಗುರುತರ ಸವಾಲು. ಜಿಲ್ಲೆಯ ಪಟ್ಟಣ ಗಳೆಲ್ಲ ನಗರಗಳಾಗುತ್ತಿವೆ. ಅವು ಕೊಂಪೆಗಳಾಗದಂತೆ ಸೂಕ್ತ ಯೋಜನೆಗಳನ್ನು ರೂಪಿಸಬೇಕು. ಜಿಲ್ಲೆಯಲ್ಲಿ ಸಂಪನ್ಮೂಲಗಳಿಗೆ ಕೊರತೆಯಿಲ್ಲ. ಅವುಗಳ ಮೌಲ್ಯವನ್ನು ಅರಿತು ಸದ್ಬಳಕೆಗೆ ಅಣಿ ಯಾಗುವ ದೃಷ್ಟಿ ಮತ್ತು ನಾಯಕತ್ವ ಬೇಕು. ಆಡಳಿತ ಗಾರರ ಕ್ರಿಯಾಶಕ್ತಿ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಪ್ರಗತಿಯ ದಿಸೆಯನ್ನು ನಿರ್ಧರಿಸುತ್ತದೆ. ಪ್ರತಿ ನಾಗರಿಕನ ಸಕ್ರಿಯ ಪಾಲ್ಗೊಳ್ಳುವಿಕೆ ಪ್ರಗತಿಯ ಪರಿಣಾಮವನ್ನು ನಿರ್ಧರಿಸಬಲ್ಲದು. ಹಾಗಾಗಿ ಜಿಲ್ಲೆಯ ಭವಿತವ್ಯದ ಪಯಣದಲ್ಲಿ ನಾಗರಿಕರು ಹಾಗೂ ಜನಪ್ರತಿನಿಧಿಗಳು ಒಟ್ಟಾಗಿ ಸಾಗುವುದು ತುರ್ತು ಅಗತ್ಯ. ಅದು ಪ್ರಾಮಾಣಿಕವಾಗಿ ಸಾಧ್ಯವಾದರೆ ಅಭಿವೃದ್ಧಿಯ ಪುಟಗಳಲ್ಲಿ ಹೊಸ ಸಾಧ್ಯತೆಗಳನ್ನು ಸಾಧಿಸುವ ಮೂಲಕ ದೇಶಕ್ಕೆ ಮಾದರಿಯಾಗುವ ಅವಕಾಶ ಉಡುಪಿ ಜಿಲ್ಲೆಗಿದೆ. ನಮ್ಮೆಲ್ಲರ ಆ ನಿರೀಕ್ಷೆ ಈಡೇರಲಿ.
– ಸಂಪಾದಕ

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.