ಪ್ಯಾನ್‌ – ಆಧಾರ್‌ ವಿವಾಹಕ್ಕೆ ಸುಲಭ ಸೂತ್ರ


Team Udayavani, May 15, 2017, 3:21 PM IST

PAN-Card-11-5.jpg

ಒಬ್ಬ ವ್ಯಕ್ತಿ ಒಂದೇ ಪ್ಯಾನ್‌ ಕಾರ್ಡ್‌ ಹೊಂದಿರಬೇಕು ಎನ್ನುವ ಕಾನೂನು ಇದೆಯಾದರೂ ಒಬ್ಟಾತ ಹಲವು ಕಾರ್ಡುಗಳನ್ನು ಹೊಂದಿರುವುದನ್ನು ತಡೆಗಟ್ಟುವುದು ಹೇಗೆ? ಅದಕ್ಕಾಗಿ ಈ ವಿವಾಹ ಮಾಡಲಾಗುತ್ತಿದೆ.

ಕೆಲವು ವಾರಗಳ ಹಿಂದೆ ಪ್ಯಾನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ಗಳನ್ನು ಲಿಂಕ್‌ ಮಾಡುವ ಕಡ್ಡಾಯ ಕಾನೂನಿನ ಬಗ್ಗೆ ವಿಸ್ತೃತವಾಗಿ ಕಾಕುವಿನಲ್ಲಿ ಬರೆಯಲಾಗಿತ್ತು. ಅದಲ್ಲದೆ ಲಿಂಕ್‌ ಮಾಡುವ ವಿಧಾನ ಹಾಗೂ ಆ ರೀತಿ ಮಾಡುವಲ್ಲಿ ತಲೆದೋರುವ ಸಮಸ್ಯೆಗಳ ಬಗ್ಗೆಯೂ ವಿವರಣೆ ನೀಡಲಾಗಿತ್ತು.

ಆಧಾರ್‌-ಪ್ಯಾನ್‌ ಜೋಡಣೆ: ಹಿಂದೆ ಘೋಷಣೆಯಾದ ಕ್ರಮಾವಳಿಯ ಪ್ರಕಾರ ಈ ಲಿಂಕ್‌ ಮಾಡಬೇಕಿದ್ದಲ್ಲಿ ಆದಾಯ ತೆರಿಗೆ ಇಲಾಖೆಯ ಜಾಲತಾಣಕ್ಕೆ (www.incometaxindiaefiling.gov.in) ಹೋಗಿ ಅಲ್ಲಿ ನಿಮ್ಮ ಖಾತೆಗೆ ಲಾಗ್‌ – ಇನ್‌ ಆಗಬೇಕಿತ್ತು. ಆನ್‌-ಲೈನ್‌ ಖಾತೆ ಇಲ್ಲದವರು ಮೊತ್ತ ಮೊದಲು ರಿಜಿಸ್ಟರ್ಡ್‌ ಆಗಿ ಖಾತೆ ತೆರೆದುಕೊಳ್ಳಬೇಕಿತ್ತು. ಖಾತೆ ಪ್ರವೇಶಿಸುತ್ತಿದ್ದಂತೆ ಎದುರು ಕಾಣಿಸುವ ಪ್ರೊಫೈಲ್‌ ಸೆಟ್ಟಿಂಗ್ಸ್‌ ಗುಂಡಿ ಒತ್ತಿದಾಗ ಒಂದು ಮೆನು ಬರುತ್ತಿತ್ತು. ಆ ಮೆನುವಿನಲ್ಲಿ ಕಟ್ಟಕಡೆಯ ಆಯ್ಕೆ ‘ಲಿಂಕ್‌ ಆಧಾರ್‌’ ಎಂಬುದು. ಅದನ್ನು ಕ್ಲಿಕ್‌ ಮಾಡಿದಾಗ ಇನ್ನೊಂದು ಕಿಟಕಿ ತೆರೆದುಕೊಳ್ಳುತ್ತಿತ್ತು. ಈ ಭಾಗದಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ ಹಾಗೂ ಲಿಂಗದ ವಿವರ ಸ್ವಯಂ ಕಾಣಿಸಿಕೊಳ್ಳುತ್ತಿತ್ತು. ಅವುಗಳ ಕೆಳಗೆ ಬಿಟ್ಟ ಸ್ಥಳಗಳಲ್ಲಿ ನಿಮ್ಮ ಆಧಾರ್‌ ನಂಬರ್‌ ಹಾಗೂ ಅಲ್ಲೇ ಕಾಣಿಸುವ ಕಾಪ್ಷಾ ಕೋಡ್‌ಗಳನ್ನು ತುಂಬಬೇಕಿತ್ತು. ಅವುಗಳನ್ನು ತುಂಬಿ ‘ಲಿಂಕ್‌ ಆಧಾರ್‌’ ಎನ್ನುವ ಗುಂಡಿಯನ್ನು ಕ್ಲಿಕ್‌ ಮಾಡಿ ನಿಮ್ಮ ಕೆಲಸ ಮುಗಿಸಬೇಕಿತ್ತು. 

ಇದೊಂದು ರೀತಿಯ ಅರೇಂಜಡ್‌ ಮ್ಯಾರೇಜ್‌; ಇದರಲ್ಲಿ ಸಮಸ್ಯೆ ಇಲ್ಲದಿರಲಿಲ್ಲ. ಆಧಾರ್‌ ಮತ್ತು ಪ್ಯಾನ್‌ ಲಿಂಕ್‌ ಮಾಡಲು ಹೊರಟ ಬಹುತೇಕ ಮಂದಿಗೆ ಎರರ್‌ ಮೆಸೇಜ್‌ ಬರುತ್ತಿತ್ತು. ಅವು ಲಿಂಕ್‌ ಆಗುತ್ತಿರಲಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ನಿಮ್ಮ ಹೆಸರು, ಜನ್ಮ ದಿನಾಂಕ ಅಥವಾ ಲಿಂಗ ಈ ಎರಡು ಕಾರ್ಡ್‌ಗಳಲ್ಲಿ ಬೇರೆ ಬೇರೆಯಾಗಿರುವುದು. ಬಹುತೇಕ ಇದು ಹೆಸರಿನದ್ದೇ ಹಾವಳಿ. ಹೆಸರಿನ ಹೃಸ್ವ ರೂಪ-ವಿಸ್ತೃತ ರೂಪ ಸರ್ನೇಮ್‌-ಪ್ರಾಪರ್ನೇಂಗಳ ಸ್ಥಾನಪಲ್ಲಟ ಇತ್ಯಾದಿ ಸಣ್ಣಪುಟ್ಟ ಸಮಸ್ಯೆಗಳಿಗೂ ಅವು ತಾಳೆಯಾಗದೆ ಲಿಂಕ್‌ ಮಾಡುವುದು ಅಸಾಧ್ಯವಾಗಿತ್ತು. 

ಇದೀಗ ಹೊಸ ಸುಲಭ ವಿಧಾನ: ಇದೀಗ ಹೆಸರಿನ ಸಮಸ್ಯೆ ಬಗ್ಗೆ (ಮಾತ್ರ) ಆದಾಯ ತೆರಿಗೆ ಇಲಾಖೆ ಗಮನಹರಿಸಿದ್ದು ಸರ್ವರಿಗೂ ಅನ್ವಯಿಸುವ ಒಂದು ಸುಲಭ ಸೂತ್ರದ ಘೋಷಣೆ ಮಾಡಿದೆ. ಪ್ಯಾನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ಗಳಲ್ಲಿ ಹೆಸರು ಹೊಂದಾಣಿಕೆಯಾಗದ ಕೇಸುಗಳಿಗೆ ಆಧಾರ್‌ ಕಾರ್ಡ್‌ ಬದಲಾವಣೆಯಿಲ್ಲದೆಯೇ ಒಟಿಪಿ ಆಧಾರಿತ ಸರಳೀಕೃತ ಜೋಡಣಾ ಪದ್ಧತಿಯನ್ನು ತೆರಿಗೆ ಇಲಾಖೆ ತನ್ನದೇ ಜಾಲತಾಣದಲ್ಲಿ ತೆರೆದಿಟ್ಟಿದೆ. ಇದೀಗ ಘೋಷಣೆಯಾದ ಸುಲಭ ಲಿಂಕ್‌ ವಿಧಾನದಲ್ಲಿ ನೀವು ಆದಾಯ ತೆರಿಗೆ ಇಲಾಖೆಯ ಜಾಲತಾಣದಲ್ಲಿ ಆನ್‌-ಲೈನ್‌ ಖಾತೆ ಹೊಂದಿರುವ ಅಗತ್ಯವಿಲ್ಲ. ನೀವು ಲಾಗ್‌-ಇನ್‌ ಆಗುವ ಅಗತ್ಯವೂ ಇಲ್ಲ. ಕೇವಲ ಜಾಲತಾಣ ಸಂದರ್ಶಿಸಿದರೆ ಸಾಕು. ಹೋಮ್‌ ಪೇಜಿನಲ್ಲಿಯೇ ಎಡಬದಿಯಲ್ಲಿ ‘ಲಿಂಕ್‌ ಆಧಾರ್‌’ ಎನ್ನುವ ಬಟನ್‌ ಇದೀಗ ಹೊಸದಾಗಿ ಕಾಣಿಸುತ್ತದೆ. ಕೇವಲ ಹೆಸರಿನಲ್ಲಿ ಅಲ್ಪಸ್ವಲ್ಪ ಬದಲಾವಣೆ ಇರುವವರು ಈ ಬಟನ್‌ ಮೂಲಕ ಇದೀಗ ಆಧಾರ್‌ ಲಿಂಕ್‌ ಮಾಡುವುದು ಸಾಧ್ಯ. ಲಿಂಗ ಮತ್ತು ಜನ್ಮ ದಿನಾಂಕ ಎರಡೂ ದಾಖಲೆಗಳಲ್ಲಿ ಒಂದೇ ರೀತಿ ಇರಬೇಕಾದುದು ಅಗತ್ಯ. ಈ ವಿಧಾನ ಕೇವಲ ಹೆಸರಿನಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಇರುವ ಸಮಸ್ಯೆ ಮಾತ್ರ ಪರಿಹರಿಸುತ್ತದೆ ಎನ್ನುವುದು ನೆನಪಿರಲಿ. 

ಅಲ್ಲಿ ಲಿಂಕ್‌ ಆಧಾರ ಗುಂಡಿ ಕ್ಲಿಕ್‌ ಮಾಡಿದಾಗ ಒಂದು ಕಿಟಕಿ ತೆರೆದುಕೊಳ್ಳುತ್ತದೆ. ಈ ಭಾಗದಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ ಹಾಗೂ ಲಿಂಗದ ವಿವರ ತುಂಬಬೇಕು. ಅವುಗಳ ಕೆಳಗೆ ಬಿಟ್ಟ ಸ್ಥಳಗಳಲ್ಲಿ ನಿಮ್ಮ ಆಧಾರ್‌ ನಂಬರ್‌ ಹಾಗೂ ಅಲ್ಲೇ ಕಾಣಿಸುವ ಕಾಪ್ಷಾ ಕೋಡ್‌ಗಳನ್ನು ತುಂಬಬೇಕು. ಅವುಗಳನ್ನು ತುಂಬಿ ‘ಲಿಂಕ್‌ ಆಧಾರ್‌’ ಎನ್ನುವ ಗುಂಡಿ ಕ್ಲಿಕ್‌ ಮಾಡಿದರೆ ನಿಮ್ಮ ಆಧಾರನಲ್ಲಿ ರಿಜಿಸ್ಟರ್‌ ಆಗಿರುವ ಮೊಬೈಲ್‌ ನಂಬರಿಗೆ ಒಂದು ದೃಢೀಕರಣದ ಸಂಖ್ಯೆ ಬರುತ್ತದೆ. ಆ ಸಂಖ್ಯೆಯನ್ನು ಜಾಲತಾಣದಲ್ಲಿ ತುಂಬಬೇಕು. ಕೋಡ್‌ ತಾಳೆಯಾದರೆ ನಿಮ್ಮ ಮದುವೆ ಸಮಾರಂಭ ಮುಗಿದಂತೆಯೇ. ಆದರೆ ಲಿಂಗ, ಜನ್ಮ ದಿನಾಂಕ ಅಥವಾ ಹೆಸರಿನಲ್ಲಿ ಬಹಳಷ್ಟು ವ್ಯತ್ಯಾಸ ಇರುವ ಸಂದರ್ಭ ಈ ಸುಲಭ ವಿಧಾನ ಕೆಲಸ ಮಾಡದು. ಅಂತಹವರು ಈ ಮೊದಲೇ ಘೋಷಿಸಲಾದ ದೀರ್ಘ‌ ಪದ್ಧತಿಯಾದ ಆಧಾರ್‌ ಅಥವಾ ಪ್ಯಾನ್‌ ಬದಲಾವಣೆಯ ಅಂತಿಮ ಪರಿಹಾರಕ್ಕೇ ಮೊರೆಹೋಗಬೇಕು. ಬೇರೆ ದಾರಿ ಇಲ್ಲ.

ಅಂತಿಮ ಪರಿಹಾರ: ಹೆಸರಿನ ಅಲ್ಪ ಸ್ವಲ್ಪ ಸಮಸ್ಯೆಯಲ್ಲದೆ ಲಿಂಗ, ಜನ್ಮ ದಿನಾಂಕ ಅಥವಾ ಸಂಪೂರ್ಣವಾದ ಬೇರೆಯೇ ಹೆಸರಿನ ಸಮಸ್ಯೆ ಇರುವವರಿಗೆ ಅಂತಿಮ ಪರಿಹಾರಾರ್ಥ ಅಧಾರನಲ್ಲಿ ಆ ವಿವರಗಳನ್ನು ಪ್ಯಾನ್‌ ದಾಖಲೆಯಂತೆಯೇ ತಿದ್ದುವುದು. (ಅಥವಾ ಪ್ಯಾನ್‌ ಕಾರ್ಡ್‌ ತಿದ್ದುವುದು) ಆಧಾರ್‌ ಕಾರ್ಡ್‌ನಲ್ಲಿ ಹೆಸರು/ಲಿಂಗ/ಜನ್ಮ ದಿನಾಂಕವನ್ನು ಬದಲಾಯಿಸಿಕೊಳ್ಳಲು ಆಧಾರ್‌ ಕಾರ್ಡ್‌ನ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು ಅಥವಾ ಅದರ ಜಾಲತಾಣವಾದ www.uidai.gov.inಗೆ ಹೋಗಬೇಕು. ಆಧಾರ್‌ ಜಾಲತಾಣದ ಮುಖಪುಟದಲ್ಲಿಯೇ ‘update aadhaar details’ ಎಂಬ ಗುಂಡಿ ಇದೆ. ಅದನ್ನು ಒತ್ತಿದರೆ ಬಾಕಿ ಹೆಜ್ಜೆಗಳು ಸ್ವಯಂ ತೆರೆದುಕೊಳ್ಳುತ್ತವೆ. ನಿಮ್ಮ ಆಧಾರ ಸಂಖ್ಯೆ ನಮೂದಿಸಿ send OTP ಗುಂಡಿ ಒತ್ತಿದರೆ ನಿಮ್ಮ ರಿಜಿಸ್ಟರ್ಡ್‌ ಮೊಬೈಲ್‌ ಫೋನ್‌ಗೆ ಒಂದು One Time Password ಬರುತ್ತದೆ. ಅದನ್ನು ನಮೂದಿಸಿ ಮುಂದುವರಿಯಬೇಕು. ಮುಂದಕ್ಕೆ ನಿಮಗೆ ಬೇಕಾದ ಬದಲಾವಣೆ ನಮೂದಿಸಬೇಕು, ಹೊಸ ಬದಲಾವಣೆಗೆ ಪೂರಕ ಪ್ಯಾನ್‌ ಕಾರ್ಡ್‌ ಅಥವಾ ಅನ್ವಯಿಸುವ ಇತರ ದಾಖಲೆಯ ಪ್ರತಿಯೊಂದಕ್ಕೆ ಸಹಿ ಹಾಕಿ ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಬೇಕು. ಬಳಿಕ ಈ ಸೇವೆಯನ್ನು ಯಾವ ಏಜೆನ್ಸಿ ಮಾಡಬೇಕೆನ್ನುವ ಆಯ್ಕೆ ನಮೂದಿಸಬೇಕು. ನಿಮ್ಮ ಕೋರಿಕೆ ಸ್ವೀಕೃತವಾಗಿ ನಿಮಗೆ ಒಂದು URN number ಕಾಣಿಸುತ್ತದೆ. ಅದು ಎಸ್ಸೆಮ್ಮೆಸ್‌ ಮೂಲಕವೂ ಬರುತ್ತದೆ. ಸುಮಾರು 15 ದಿನಗಳಲ್ಲಿ ನಿಮ್ಮ ಹೆಸರು ಬದಲಾವಣೆ ನಡೆಯುತ್ತದೆ. ಈ ಬಗ್ಗೆ ನಿಮಗೆ ಎಸ್ಸೆಮ್ಮೆಸ್‌ ಅಥವಾ ಇ-ಮೈಲ್‌ ಸೂಚನೆ ಬರಬಹುದು. ಯಾವುದಕ್ಕೂ ಬದಲಾವಣೆಯ ಬಗ್ಗೆ ಅಗಾಗ್ಗೆ ಜಾಲತಾಣದಲ್ಲಿ URN Number ಬಳಸಿ ಸ್ಟೇಟಸ್‌ ಚೆಕ್‌ ಮಾಡಿಕೊಂಡು ಇರುವುದು ಒಳ್ಳೆಯದು. 

ಈ ವಿವಾಹ ಯಾಕೆ?: ತೆರಿಗೆ ಪಾವತಿಯಲ್ಲಿ ಯಾವುದೇ ಕಳ್ಳತನವಿಲ್ಲದೆ ಕಟ್ಟಬೇಕಾದ ತೆರಿಗೆಯನ್ನು ಜನಸಾಮಾನ್ಯರಿಂದ ಕಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಕಳೆದ ಕೆಲವು ವರ್ಷಗಳಿಂದ ಬಹಳಷ್ಟು ಕೆಲಸ ಮಾಡುತ್ತಿದೆ. ಮುಂದೆ ಹೋದಂತೆ ಅದು ಇನ್ನಷ್ಟು ಕಠಿಣವಾಗುತ್ತಾ ಹೋಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಪ್ಯಾನ್‌ ಕಾರ್ಡ್‌ ಕಡ್ಡಾಯವಾಗಿ ಜಮಾನವೇ ಆಗಿದೆ. ಕರಕಟ್ಟುವವರು, ರಿಟರ್ನ್ ಫೈಲಿಂಗ್‌ ಮಾಡುವವರು ಹಾಗೂ ನಿರ್ದಿಷ್ಟ ಮೊತ್ತಕ್ಕಿಂತ ಜಾಸ್ತಿ ವ್ಯವಹಾರ ನಡೆಸುವವರು ತಮ್ಮ ಪ್ಯಾನ್‌ ನಂಬರ್‌ ಅನ್ನು ಕಡ್ಡಾಯವಾಗಿ ನಮೂದಿಸಬೇಕು ಎನ್ನುವುದು ಈಗ ಹಳೆಯ ಮಾತು. ಪ್ಯಾನ್‌ ನಂಬರ್‌ ಮೂಲಕ ವ್ಯಕ್ತಿಯ ಕರ ಪಾವತಿ ಸಂಪೂರ್ಣವಾಗಿ ನಡೆದಿದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು ಕರ ಇಲಾಖೆಗೆ ಅನುಕೂಲವಾಗುತ್ತದೆ. ಆದರೆ ಒಂದೇ ವ್ಯಕ್ತಿ ಒಂದಕ್ಕಿಂತ ಜಾಸ್ತಿ ಪ್ಯಾನ್‌ ಕಾರ್ಡ್‌ನ್ನು ಪಡೆದಿದ್ದು, ಬೇರೆ ಬೇರೆ ನಂಬರುಗಳನ್ನು ಸಂದರ್ಭಾನುಸಾರ ಬೇರೆ ಬೇರೆ ವ್ಯವಹಾರಗಳಿಗೆ ನಮೂದಿಸಿ ಕರಕಳ್ಳತನ ಮಾಡುವುದನ್ನು ತಡೆಗಟ್ಟುವುದು ಹೇಗೆ? UIDAI ವತಿಯಿಂದ ನೀಡಲಾಗುವ ಆಧಾರ್‌ ಕಾರ್ಡ್‌ ಮಾತ್ರ ಒಬ್ಬ ವ್ಯಕ್ತಿಗೆ ಒಂದೇ ಒಂದು ಸಿಗಬಲ್ಲದು. ಇದಕ್ಕೆ ಕಾರಣವೆಂದರೆ ಆಧಾರ್‌ ಕಾರ್ಡ್‌ ಮಾಡಿಸಿಕೊಳ್ಳುವಾಗ ಅರ್ಜಿದಾರನ ಹತ್ತೂ ಬೆರಳುಗಳ ಅಚ್ಚು ಹಾಗೂ ಕಣ್ಣುಗಳ ಅಕ್ಷಿಪಟಲಗಳ ಭಾವ ಚಿತ್ರವನ್ನು ಸೆರೆ ಹಿಡಿಯಲಾಗುತ್ತದೆ. ವಿಜ್ಞಾನದ ಪ್ರಕಾರ ಯಾವುದೇ ವ್ಯಕ್ತಿಯ ಬೆರಳಚ್ಚು ಹಾಗೂ ಅಕ್ಷಿಪಟಲಗಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಹೋಲುವುದು ಅಸಾಧ್ಯ. ಹಾಗಾಗಿ ಒಬ್ಬ ವ್ಯಕ್ತಿ ಒಂದೇ ಆಧಾರ್‌ ಹೊಂದುವುದು ಸಾಧ್ಯ. ಆದಕ್ಕಾಗಿಯೇ ಆಧಾರ್‌ ಕಾರ್ಡನ್ನು ಯೂನಿಕ್‌ ಅಥವಾ ವಿಶಿಷ್ಟ ಗುರುತಿನ ಚೀಟಿ ಎಂದು ಕರೆಯುತ್ತಾರೆ. ಇದೀಗ ಪ್ಯಾನ್‌ ಕಾರ್ಡನ್ನು ಆಧಾರ್‌ ಜೊತೆ ಜೋಡಣೆ ಮಾಡುವುದರಿಂದ ಒಬ್ಬ ವ್ಯಕ್ತಿ ಒಂದೇ ಪ್ಯಾನ್‌ ನಂಬರ್‌ ಹೊಂದಿರುವಂತೆ ನೋಡಿಕೊಳ್ಳುವುದು ಸಾಧ್ಯವಾಗುತ್ತಿದೆ.

ಇದೇ ಜೂನ್‌ 30ರ ಒಳಗಾಗಿ ಪ್ಯಾನ್‌ ಕಾರ್ಡ್‌ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯೂ ಅದನ್ನು ತನ್ನ ಆಧಾರ್‌ ನಂಬರಿಗೆ ಜೋಡಿಸಿಕೊಳ್ಳುವುದು ಕಡ್ಡಾಯ. ಆ ದಿನಾಂಕದೊಳಗೆ ಈ ಜೋಡಣೆ ಕಾರ್ಯ ನಡಸದೇ ಇದ್ದಲ್ಲಿ ನಿಮ್ಮ ಪ್ಯಾನ್‌ ಕಾರ್ಡ್‌ಗೆ ಬೆಲೆ ಇರುವುದಿಲ್ಲ. ಅದು ಇದ್ದರೂ ಇಲ್ಲದಿದ್ದಂತೆ. ಒಂದು ರೀತಿಯ ‘Invalid’ ಅಥವಾ ಅಸಿಂಧು ಸ್ಥಿತಿಯಲ್ಲಿ ಇರುತ್ತದೆ. ಪ್ಯಾನ್‌ ಕಾರ್ಡ್‌ ಇಲ್ಲದವರಿಗೆ ಅನ್ವಯವಾಗುವ ಎಲ್ಲ ಕಾನೂನುಗಳೂ ನಿಮಗೆ ಅನ್ವಯವಾಗತೊಡಗುತ್ತದೆ. ಹಾಗಾಗಿ ಇಲ್ಲಿ ನೀಡಿದ ಹೊಸ ಪದ್ಧತಿ ಮೂಲಕ ಒಂದು ಸುಲಭ ಸರಳ ವಿವಾಹಕ್ಕೆ ಈ ಕೂಡಲೇ ಕಂಕಣ ಕಟ್ಟಿರಿ.

– ಜಯದೇವ ಪ್ರಸಾದ ಮೊಳೆಯಾರ ; [email protected]

ಟಾಪ್ ನ್ಯೂಸ್

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಭಯ ಅಂದ್ರೆ ಏನ್ರೀ.. ಎನ್ನುವ ಲೇಡಿ ಜೇಮ್ಸ್‌ ಬಾಂಡ್‌!

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ಕರ ಚೋರರ ಮೇಲೆ ಹದ್ದಿನ ಕಣ್ಣಿಡುವ ಫಾರ್ಮ್ 26ಎಎಸ್‌

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

ವಿದ್ಯಾ ಸಾಲದ ಬಡ್ಡಿ ಮತ್ತು ಕರ ವಿನಾಯಿತಿ

Home-Loan-730

ಗೃಹ ಸಾಲದ ಮೇಲೆ ಕರ ವಿನಾಯಿತಿ

tax-rebate

ಇನ್ನಷ್ಟು 87ಎ ರಿಬೇಟ್‌ಗಳು ಮತ್ತು ಅವುಗಳ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.