ಗ್ರಾಮೀಣ ಭಾಗಕ್ಕೂ ತಲುಪಿದ “ಪದ್ಮ’


Team Udayavani, Jan 27, 2018, 11:43 AM IST

27-40.jpg

ಪ್ರಶಸ್ತಿ/ಪುರಸ್ಕಾರಗಳಿಗೆ ಗೌರವ ಬರುವುದು ಆಯಾಯ ಕಾಲದ ಸರಕಾರಗಳು ತೆಗೆದು ಕೊಳ್ಳುವ ನಿರ್ಧಾರಗಳಿಂದ ಎಂಬುದು ಸ್ಪಷ್ಟ. ನಮ್ಮ ರಾಷ್ಟ್ರೀಯ ಪ್ರಜ್ಞೆ ಅತ್ಯುನ್ನತ ಪುರಸ್ಕಾರಗಳಿಗೆ ಸಾಧಕರನ್ನು ನಿಷ್ಪಕ್ಷಪಾತವಾಗಿ/ ಯಾವುದೇ ಪ್ರಲೋಭನೆ, ಒತ್ತಡಕ್ಕೊಳಗಾಗದೇ ಆಯ್ಕೆ ಮಾಡುವ ಮೂಲಕ ವ್ಯಕ್ತವಾಗಬೇಕು. 

ಈ ಬಾರಿಯ ಗಣರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಗಮನಿಸಿ. ಆ ಪಟ್ಟಿಯಲ್ಲಿರುವ ಬಹಳಷ್ಟು ಗಣ್ಯರ ಹೆಸರು ಅವರು ವಾಸವಾಗಿರುವ ರಾಜ್ಯದಲ್ಲೇ ಬಹಳಷ್ಟು ಮಂದಿಗೆ ಅಪರಿಚಿತ. ಆದರೆ ಅವರು ಮಾಡಿದ ಮತ್ತು ಮಾಡುತ್ತಿರುವ ಸಾಧನೆ, ನೀಡಿದ ಕೊಡುಗೆ ಎಲ್ಲ ಎಲ್ಲೆಗಳನ್ನು ಮೀರಿ ನಿಲ್ಲುವಂತಹದ್ದು. ದೇಶದ ಯಾವುದೋ ಮೂಲೆಯಲ್ಲಿ ಕುಳಿತು ಸುತ್ತಮುತ್ತಲಿನ ಜನರ ಸೇವೆ ಮಾಡುವ, ದೇಶಭಕ್ತಿಯ ಜಾಗೃತಿ ಮೂಡಿಸುವ, ಸರ್ವಧರ್ಮ ಸಾಮರಸ್ಯಕ್ಕೆ ಕೊಡುಗೆ ನೀಡುವ ಅಸಾಧಾರಣ ವ್ಯಕ್ತಿಗಳಿಗೆ ಈ ಭಾರಿ ದೇಶದ ಅತ್ಯುನ್ನತ ಪುರಸ್ಕಾರಗಳು ಲಭಿಸಿವೆ. ಒಂದೆರಡು ವರ್ಷಗಳ ಹಿಂದೆ ಆರಂಭಿಸಿದ ಈ ಸತ್ಸಂಪ್ರದಾಯ ಈ ವರ್ಷವೂ ಮುಂದುವರಿದುಕೊಂಡು ಬಂದಿರುವುದು ಪ್ರಶಂಸಾರ್ಹ.

ಸದಾ ಬದುಕುವ ದಾರಿ ಹೇಳಿಕೊಡುವ ಮತ್ತು ನಾಡಿನುದ್ದ ಗಲಕ್ಕೂ ಸಂಚರಿಸಿ ಪ್ರವಚನಗಳನ್ನು ನಡೆಸಿ ಲಕ್ಷಾಂತರ ಮಂದಿಯ ಬದುಕಿನಲ್ಲಿ ಭರವಸೆ ತುಂಬುತ್ತಿರುವ ಮಹಾನುಭಾವ  ಬಿಜಾಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ದೇವನೊಬ್ಬ ನಾಮ ಹಲವು ಎನ್ನುವ ಮಂತ್ರವನ್ನು ಉಚ್ಚರಿಸುತ್ತಾ ರಾಷ್ಟ್ರಿಯ ಭಾವೈಕ್ಯವನ್ನು ಮೂಡಿಸಲು ಜೀವನವನ್ನೇ ಮುಡಿಪಾಗಿಸಿದ ಕನ್ನಡದ ಕಬೀರ, ಸೂಫಿ ಸಂತ ಎಂದೇ ಖ್ಯಾತ ರಾಗಿರುವ ಗಾಯಕ -ಪ್ರವಚನಕಾರ ಕವಿ ಸಮಾಜ ಸೇವಕ ಮುಧೋಳ ತಾಲೂಕು ಮಹಾಲಿಂಗಪುರದ ಇಬ್ರಾಹಿಂ ಸುತಾರ್‌, 15 ಸಾವಿರಕ್ಕೂ ಹೆಚ್ಚು ಉಚಿತ ಹೆರಿಗೆ ಮಾಡಿಸಿದ ತುಮಕೂರಿನ ಸೂಲಗಿತ್ತಿ ನರಸಮ್ಮ, ಬೆಳಗಾವಿಯಲ್ಲಿ ಮಹಿಳಾ ಅಭಿವೃದ್ಧಿಗಾಗಿ ದುಡಿಯುತ್ತಿರುವ ಸೀತವ್ವ ಜೋಡಟ್ಟಿ ಮೊದಲಾದವರ ಹೆಸರುಗಳನ್ನು ಪುರಸ್ಕೃತರ ಪಟ್ಟಿಯಲ್ಲಿ ನೋಡಿದಾಗ ಅಭಿವೃದ್ಧಿ ಮಾತ್ರವಲ್ಲ ಪ್ರಶಸ್ತಿಗಳು ಗ್ರಾಮೀಣ ಪ್ರದೇಶಕ್ಕೆ ತಲಪುತ್ತಿವೆ ಎಂಬ ಖುಷಿ ನಮ್ಮಲ್ಲಿ ಮೂಡುತ್ತದೆ. 

ಪ್ರಶಸ್ತಿಗಳು, ಪುರಸ್ಕಾರಗಳಿಗೆ ನಿಜವಾದ ಬೆಲೆ, ಗೌರವ ದೊರಕುವುದು ಯಾವುದೇ ಪ್ರತಿಫಲಾಪೇಕ್ಷೆಗಳನ್ನು ನಿರೀಕ್ಷಿಸದೆ ತಮ್ಮ ಬಳಿಗೆ ಬಂದವರ ಮುಖದಲ್ಲಿ ಗೆಲುವಿನ ಮಂದಹಾಸ ಕಂಡು ಖುಷಿ ಪಡುವವರಿಗೆ ದೊರಕಿದಾಗ ಮಾತ್ರ. ಇದರ ಜೊತೆಗೆ ದೇಶದ ಸಮಗ್ರ ಅಭಿವೃದ್ಧಿಗಾಗಿ ದೇಶದೊಳಗೆ, ದೇಶದ ಹೊರಗೆ ದುಡಿಯುವ ಮಹಾನುಭಾವರುಗಳಿಗೂ ಪ್ರಶಸ್ತಿ, ಪುರಸ್ಕಾರಗಳು ದೊರಕಿದರೆ ಅದನ್ನು ನಾವು ಸಂಭ್ರಮದಿಂದ ಸ್ವಾಗತಿಸುವ.

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಹಿಂದಿನ ಸರಕಾರಗಳು ಬೇರೆ ಬೇರೆ ಕಾರಣಕ್ಕಾಗಿ ಅಥವಾ ರಾಜಕೀಯ ಕಾರಣಗಳಿಗಾಗಿ ನೀಡಿದ್ದೂ ಇದೆ. ಕೆಲವೊಂದು ಸಂದರ್ಭದಲ್ಲಿ ಪ್ರಾದೇಶಿಕ ಒತ್ತಡಕ್ಕೆ ಮಣಿದು ಭಾರತ ರತ್ನದಂತಹ ಪ್ರಶಸ್ತಿಗಳು ಬಿಕರಿಯಾದದ್ದೂ ಇದೆ. 1989ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುನ್ನ ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಅಲ್ಲಿನ ಮಹಾನ್‌ ನಾಯಕ ಎಂ.ಜಿ. ರಾಮಚಂದ್ರನ್‌ ಅವರಿಗೆ ಭಾರತ ರತ್ನ ಘೋಷಿಸಿದಾಗ ಭಾರೀ ವಿವಾದ ಉಂಟಾಯಿತು. ಕೆಲವೆಡೆ ಆಕ್ಷೇಪಗಳು ಕೇಳಿಬಂದವು. ಡಾ| ಬಿ. ಆರ್‌. ಅಂಬೇಡ್ಕರ್‌, ವಲ್ಲಭಭಾಯ್‌ ಪಟೇಲ್‌ ಅವರಿಗೆ ನೀಡದೆ ಎಂ.ಜಿ.ಆರ್‌.  ಅವರಿಗೆ ನೀಡಿದ್ದು ಸಹಜವಾಗಿಯೇ ದೇಶದ ಜನತೆಯ ಆಕ್ರೋಶಕ್ಕೆ ಕಾರಣವಾಯಿತು. ನಂತರ ವಿ.ಪಿ. ಸಿಂಗ್‌ ಸರಕಾರ ಈ ಇಬ್ಬರೂ ಮಹಾನುಭಾವರಿಗೆ ಭಾರತ ರತ್ನ ನೀಡಿ ಗೌರವ ಸಲ್ಲಿಸಿತು. ಸ್ವಾತಂತ್ರಾನಂತರ 1989ರ ವರೆಗೆ ದೇಶವಾಳಿದ ಕಾಂಗ್ರೆಸ್‌ ಸರಕಾರ ಈ ಇಬ್ಬರು ಮಹಾನುಭಾವರನ್ನು ನಿರ್ಲಕ್ಷಿಸಿದ್ದು ಒಂದು ದೊಡ್ಡ ಪ್ರಮಾದ. ರಾಜಕೀಯ ಅಧಿಕಾರದ ಬಯಕೆ ಮುಂಚೂಣಿ ಯಲ್ಲಿ ನಿಂತಾಗ ಇಂತಹ “ದುರ್ಘ‌ಟನೆಗಳು’ ಸಂಭವಿಸುತ್ತವೆ. ರಾಜೀವ್‌ ಗಾಂಧಿ ಸರಕಾರ ಮಾತ್ರವಲ್ಲ ಇಂದಿರಾ ಗಾಂಧಿ ಸರಕಾರ ವಿದ್ದಾಗಲೂ 1977ರ ತಮಿಳುನಾಡು ವಿಧಾನ ಸಭೆ ಚುನಾವಣೆ ಯನ್ನು ಗಮನದಲ್ಲಿರಿಸಿ 1976ರಲ್ಲಿ ಅಲ್ಲಿನ ಹಿರಿಯ ನಾಯಕ ಕೆ. ಕಾಮರಾಜ್‌ ಅವರಿಗೆ ಭಾರತರತ್ನ ಪುರಸ್ಕಾರವನ್ನು (ಮರಣೋತ್ತರ ಗೌರವ) ನೀಡಲಾಯಿತು. 

ದೇಶದ ನಾಗರಿಕ ಪ್ರಶಸ್ತಿ/ಪುರಸ್ಕಾರಗಳನ್ನು ಒಬ್ಬ ವ್ಯಕ್ತಿ ದೇಶಕ್ಕೆ /ಸಮಾಜಕ್ಕೆ ನೀಡಿದ ಅತ್ಯುನ್ನತ ಕೊಡುಗೆಯನ್ನು ಗಮನಿಸಿ ನೀಡಿದಾಗ ವಿವಾದಗಳು ಉಂಟಾಗುವುದಿಲ್ಲ. ರಾಜಕೀಯ ಕಾರಣಕ್ಕಾಗಿ, ಚುನಾವಣೆ ದೃಷ್ಟಿಯಿಂದ ಇಂತಹ ಪ್ರಶಸ್ತಿ/ಪುರಸ್ಕಾರಗಳನ್ನು ಯಾವುದೇ ಸರಕಾರ ನೀಡಲು ಮುಂದಾದರೆ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಇನ್ನೂ ವಿಶೇಷವೆಂದರೆ ದೇಶದ ಪ್ರಧಾನಿಯಾಗಿದ್ದಾಗಲೇ ಭಾರತ ರತ್ನ “ಪಡೆದುಕೊಂಡವರ’ ಪರಂಪರೆಯೂ ನಮ್ಮಲ್ಲಿದೆ. 1947ರಿಂದ 1964ರ ತನಕ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರೂ ಅವರು 1955ರಲ್ಲಿ ಭಾರತರತ್ನ ಪಡೆದುಕೊಂಡಿದ್ದರೆ, 1966ರಿಂದ 1977 ಮತ್ತು 1980ರಿಂದ 1984ರ ವರೆಗೆ ಪ್ರಧಾನಿ ಯಾಗಿದ್ದ ಇಂದಿರಾಗಾಂಧಿ ಅವರು 1971ರಲ್ಲಿ ಭಾರತರತ್ನ ಪಡೆದು ಕೊಂಡರು. ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಅಂದರೆ ಮರಣೋತ್ತರ ವಾಗಿ ನೆಹರೂ ಕುಟುಂಬದ, 1984ರಿಂದ 1989ರ ವರೆಗೆ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ಅವರಿಗೂ 1991ರಲ್ಲಿ ಅಂದಿನ ಕಾಂಗ್ರೆಸ್‌ ಸರಕಾರ ಭಾರತ ರತ್ನ ನೀಡಿ ಗೌರವಿಸಿತು. ಇದರೊಂದಿಗೆ ಒಂದೇ ಕುಟುಂಬದ ಮೂವರಿಗೆ “ಭಾರತ ರತ್ನ’ ಲಭಿಸಿದಂತಾಯಿತು. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ಅಂದಿನ ದಿನಗಳಲ್ಲಿ ನಡೆಯಿತು. ರಾಜಕೀಯಕ್ಕಾಗಿ ಇಂತಹ ಉನ್ನತ ಪುರಸ್ಕಾರಗಳನ್ನು ಬಳಸುವ ಬಗ್ಗೆಯೂ ಒಂದಷ್ಟು ಕಾಲ ಚರ್ಚೆ ನಡೆದು ಮತ್ತೆ ತಣ್ಣಗಾಯಿತು.

 ಈ ನಡುವೆ ಭಾರತ ರತ್ನ ಮತ್ತು ಇತರ ನಾಗರಿಕ ಪುರಸ್ಕಾರಗಳನ್ನು ಇಂಥವರಿಗೆ ನೀಡಿದ್ದು ನಮ್ಮ ಸರಕಾರ ಎಂದು ಪ್ರಚಾರ ಮಾಡುವ ಮೂಲಕ ಅವುಗಳನ್ನು ರಾಜಕೀಯಕ್ಕೆ ಬಳಸುವ ಪ್ರಯತ್ನಗಳು ಆಗಾಗ ನಡೆಯುತ್ತಲೇ ಇವೆ. ಉದಾಹರಣೆಗೆ ಸಂವಿಧಾನದ ಪಿತಾಮಹ ಡಾ| ಬಿ. ಆರ್‌. ಅಂಬೇಡ್ಕರ್‌ ಅವರಿಗೆ ವಿ.ಪಿ. ಸಿಂಗ್‌ ಸರಕಾರ ಭಾರತ ರತ್ನ ನೀಡಿ ಅವರಿಗೆ ರಾಷ್ಟ್ರೀಯ ಗೌರವ ಸಲ್ಲಿಸಿತು ಎಂದು ಹೇಳುವ ಮೂಲಕ ಕಾಂಗ್ರೆಸ್ಸೇತ‌ರ ಪಕ್ಷಗಳು ಸಣ್ಣ ಆಂದೋಲನ ನಡೆಸಲು ಮುಂದಾದವು. ಆದರೆ ಅದು ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಎಷ್ಟು ಪರಿಣಾಮ ಕಾರಿಯಾಯಿತು ಎಂಬುದು ಬೇರೆ ವಿಚಾರ. ಕಾಂಗ್ರೆಸ್ಸೇತರ ಪಕ್ಷಗಳು ಅಂಬೇಡ್ಕರ್‌ ವಿಚಾರವನ್ನು ರಾಜಕೀಯ ದೃಷ್ಟಿಯಿಂದ ಕೈಗೆತ್ತಿಕೊಂಡಿದ್ದಲ್ಲಿ ತಪ್ಪೇನಿಲ್ಲ ಅನಿಸುತ್ತದೆ. 1947ರಿಂದ 1990ರ ವರೆಗಿನ 43 ವರ್ಷಗಳ ಅವಧಿಯಲ್ಲಿ ಸುಮಾರು 4-5 ವರ್ಷ ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ದೇಶವಾಳಿದ ಕಾಂಗ್ರೆಸ್‌ ಸರಕಾರಕ್ಕೆ ಡಾ| ಅಂಬೇಡ್ಕರ್‌ ಅವರ ನೆನಪಾಗಲಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.

ಇವೆಲ್ಲವುಗಳನ್ನು ಗಮನಿಸಿದಾಗಿ ಪ್ರಶಸ್ತಿ/ಪುರಸ್ಕಾರಗಳಿಗೆ ಗೌರವ ಬರುವುದು ಆಯಾಯ ಕಾಲದ ಸರಕಾರಗಳು ತೆಗೆದು ಕೊಳ್ಳುವ ನಿರ್ಧಾರಗಳಿಂದ ಎಂಬುದು ಸ್ಪಷ್ಟ. ನಮ್ಮ ರಾಷ್ಟ್ರೀಯ ಪ್ರಜ್ಞೆ ಅತು°ನ್ನತ ಪುರಸ್ಕಾರಗಳಿಗೆ ಸಾಧಕರನ್ನು ನಿಷ್ಪಕ್ಷಪಾತವಾಗಿ/ ಯಾವುದೇ ಪ್ರಲೋಭನೆ, ಒತ್ತಡಕ್ಕೊಳಗಾಗದೇ ಆಯ್ಕೆ ಮಾಡುವ ಮೂಲಕ ವ್ಯಕ್ತವಾಗಬೇಕು. ದೇಶದ ಯಾವುದೋ ಮೂಲೆಯಲ್ಲಿ ಸದ್ದುಗದ್ದಲವಿಲ್ಲದೇ ಕೆಲಸ ಮಾಡುವ ಮಹನೀಯರನ್ನು ಹುಡುಕುವ ಕೆಲಸ ಇನ್ನಷ್ಟು ನಡೆಯಬೇಕಾಗಿದೆ. ಹಳ್ಳಿಗಳಲ್ಲಿ ಆರೋಗ್ಯ ಭಾಗ್ಯ ಒದಗಿಸುತ್ತಿರುವ ನಾಟಿ ವೈದ್ಯರಿಂದ ಹಿಡಿದು ಮಂಗಳನ ಅಂಗಳಕ್ಕೆ ಕಾಲಿಡಲು ಸಿದ್ಧತೆ ನಡೆಸುತ್ತಿರುವ ನಮ್ಮ ವಿಜ್ಞಾನಿಗಳ ವರೆಗಿನ ಸಾಧನೆಗಳು, ಸಾಮರಸ್ಯದ ಬದುಕು ನಡೆಸಲು ಪ್ರೇರಣೆ ನೀಡುವವರು, ದೇಶದ ಸಮಗ್ರತೆ, ರಾಷ್ಟ್ರೀಯತೆಗೆ ಸದಾ ದುಡಿಯುವವರು, ಧಾರ್ಮಿಕ ಗುರುಗಳಿಗೆ, ಚಿಂತಕರಿಗೆ ಗೌರವ ಸಲ್ಲಿಸಿದಾಗ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಅರಿವಾಗುತ್ತದೆ.

ಈ ಹಿಂದೆ ಬಹುತೇಕ ಸಂದರ್ಭಗಳಲ್ಲಿ ಇಂತಹ ರಾಷ್ಟ್ರೀಯ ಪುರಸ್ಕಾರಗಳನ್ನು ಘೋಷಿಸಿದಾಗಲೆಲ್ಲಾ ರಾಜಕೀಯದ ವಾಸನೆ ಬರುತ್ತಿತ್ತು. ಈ ಬಾರಿ ಅಂಥ ಪ್ರಮಾದಗಳಾಗಿಲ್ಲ ಎಂಬುದು ಬಹುತೇಕರ ಅಭಿಪ್ರಾಯ. ರಾಜಕೀಯದಿಂದ ಹೊರ ಬಂದು ಅದರಾಚೆಗೆ ನಾವು ಕೆಲಸ ಮಾಡಿ ತೋರಿಸಬಹುದು ಎಂಬ ಬದ್ಧತೆ ನಮ್ಮನ್ನಾಳುವವರಿಗೆ ಇದ್ದರೆ ಬದಲಾವಣೆ ಸಾಧ್ಯ. ನಮ್ಮನ್ನಾಳು ವವರಿಗೆ ಮಾತ್ರವಲ್ಲ ನಮ್ಮಲ್ಲೂ ಅಂತಹ ಬದ್ಧತೆ ಇರಬೇಕು.

ಎ.ವಿ. ಬಾಲಕೃಷ್ಣ

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.