ಉಪವಾಸ, ಜಾಗರಣೆ, ಧ್ಯಾನದ ಸಂಗಮ ಮಹಾಶಿವರಾತ್ರಿ


Team Udayavani, Feb 22, 2017, 10:20 PM IST

22-ANKANA-1.jpg

ಶಿವರಾತ್ರಿಯ ಜಾಗರಣೆಯೆಂದರೆ ಅದು ಭಗವಂತನ ಧ್ಯಾನ ಹಾಗೂ ಆರಾಧನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಾಗೃತವಾಗಿರುವುದು ಎಂದರ್ಥ. ಶಿವರಾತ್ರಿಯಂದು ನಡೆಯಬೇಕಾಗಿರುವುದು ಪೂಜ್ಯಾರ್ಥ ಜಾಗರಣೆ ಹಾಗೂ ಉಪವಾಸ.

ಆಧ್ಯಾತ್ಮಿಕ ನಂಟಿನ ಕರುಳಬಳ್ಳಿಯ ಬಂಧ ಹೊಂದಿರುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಹಾಗೂ ಮಹತ್ವಪೂರ್ಣವಾದ ಹಲವಾರು ಅಂಶಗಳು ಅಡಕವಾಗಿವೆ. ನಿರ್ಮಲವಾದ ಭಕ್ತಿ, ಶ್ರದ್ಧೆ, ಆರಾಧನೆ ಹಾಗೂ ಸಂಸ್ಕಾರಗಳ ಮೂಲಕವಷ್ಟೇ ಆಧ್ಯಾತ್ಮಿಕತೆಯ ನೈಜ ಸಾರವನ್ನು ಅನುಭವ ವೇದ್ಯವನ್ನಾಗಿಸಿಕೊಳ್ಳಬಲ್ಲ ಆಚರಣೆಗಳು ಚಾಲ್ತಿಯಲ್ಲಿರುವ ನಾಡು ನಮ್ಮದು. ಇದಕ್ಕೆ ಹೊರತಾದ ಪ್ರಯತ್ನಗಳು ಕೇವಲ ಡಾಂಭಿಕತೆಯ ಶುಷ್ಕ ಪ್ರದರ್ಶನವೆನಿಸಿ ಉಪೇಕ್ಷೆಗೀಡಾದ ಉದಾಹರಣೆಗಳೂ ಇವೆ. 

ಉದಾತ್ತ ಸಂಸ್ಕೃತಿ ಹಾಗೂ ಆಧ್ಯಾತ್ಮಿಕತೆಯ ಹಿನ್ನೆಲೆಯಲ್ಲಿ ರೂಪುಗೊಂಡಿರುವ ನಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಜೀವನ ಕ್ರಮದಲ್ಲಿ ಹಬ್ಬ ಹರಿದಿನಗಳಿಗೆ ವಿಶೇಷ ಪ್ರಾಧಾನ್ಯವಿದೆ. ನಮ್ಮ ಯಾವುದೇ ಹಬ್ಬದ ಆಚರಣೆಗಳು ಕೇವಲ ಲೌಕಿಕ ಸಂತೃಪ್ತಿಗಷ್ಟೇ ಸೀಮಿತವಾಗದೆ ಅಲೌಕಿಕತೆಯ ಅನುಭೂತಿಯನ್ನು ಸುರಿಸುತ್ತವೆ. ಮಹಾಶಿವರಾತ್ರಿಯೂ ಅಂತಹ ಹಬ್ಬಗಳಲ್ಲಿ ಒಂದಾಗಿದೆ. ಮಹಾಪರ್ವ ಮಹಾಶಿವರಾತ್ರಿಯನ್ನು ವ್ರತರಾಜ ಎಂದೂ ಕರೆಯುವುದುಂಟು.

ಶಿವನಿಗೆ ಪ್ರಿಯವಾದ, ವರ್ಷದ ಪ್ರತೀ ಕೃಷ್ಣಪಕ್ಷದ ಚತುರ್ದಶಿಯೂ ಶಿವರಾತ್ರಿ ಎಂದೇ ಕರೆಸಿಕೊಂಡರೂ ಮಾಘ ಮಾಸದಲ್ಲಿನ ಕೃಷ್ಣಪಕ್ಷದ ಚತುರ್ದಶಿಯು ಅತ್ಯಂತ ವಿಶೇಷವಾಗಿರುವುದರಿಂದ ಅದು ಮಹಾಶಿವರಾತ್ರಿ. ಇದು ಅತ್ಯಂತ ಮಹತ್ವದ್ದೂ ಹೌದು. ಶಿವನೇ ಪ್ರಧಾನವಾಗಿರುವ ಈ ಪರ್ವವು ಬಹುಮುಖ್ಯವಾಗಿ ಶೈವರಿಗೇ ವಿಶೇಷವಾದದ್ದಾದರೂ ವೈಷ್ಣವರೂ ಸೇರಿದಂತೆ ಅನ್ಯ ದೇವತೆಗಳ ಉಪಾಸಕರೂ ಈ ಸಂದರ್ಭ, ವ್ರತ, ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸುತ್ತಾರೆ.

ಉಪವಾಸದ ಹಬ್ಬ
ನಮ್ಮ ಬಹುತೇಕ ಹಬ್ಬಗಳಲ್ಲಿ ಸಾಮಾನ್ಯವಾಗಿ ಭಕ್ಷ್ಯ-ಭೋಜನವು ಬಹುಮುಖ್ಯವಾಗಿರುತ್ತದೆ. ಅದರ ಜತೆಗೇ ನೆಂಟರು ಬಂಧುಗಳ ಸಮಾಗಮ ಕೂಡ. ಆದರೆ ಶಿವರಾತ್ರಿ ಹಬ್ಬ ಇದಕ್ಕೆ ನೇರ ಅಪವಾದವೇ ಸರಿ. ಈ ಹಬ್ಬದ ವ್ರತಾಚರಣೆಯಲ್ಲಿ  ಏಕಾದಶಿಯಂತೆ ಉಪವಾಸವೂ ಪ್ರಮುಖ ಅಂಗವಾಗಿರುವುದರಿಂದ ಇದು “ಉಪವಾಸದ ಹಬ್ಬ’ ಎಂದೂ ಹೆಸರಿಸಲ್ಪಡುತ್ತದೆ. ನಮ್ಮಧಾರ್ಮಿಕ ನಿಲುವುಗಳ ಪ್ರಕಾರ ದೇವತಾ ಪೂಜೆಗೆ ರಾತ್ರಿ ಕಾಲ ಪ್ರಶಸ್ತವಲ್ಲ. ಆದರೆ ಶಿವರಾತ್ರಿ  ನಾಮಧೇಯಕ್ಕೆ ಅನ್ವರ್ಥವೆಂಬಂತೆ ಅಂದು ಮಾತ್ರ ರಾತ್ರಿಯ ನಾಲ್ಕೂ ಜಾವಗಳು (ಒಂದು ಜಾವ ಎಂದರೆ ದಿನದ ಎಂಟನೇ ಒಂದು ಭಾಗ) ದೇವರ ಆರಾಧನೆಗೆ ಅತ್ಯಂತ ಪ್ರಶಸ್ತವಾದ ಕಾಲವಾಗಿದೆ. 

 “”ಕೃತೋಪವಾಸಾಯೇತಸ್ಯಾಂ ಶಿವಮರ್ಚನಿ¤ ಜಾಗ್ರತಾಃ|
 ಬಿಲ್ವಪತ್ತೈಶ್ಚತುರ್ಯಾಮಂತೇಯಾನಿ¤ ಶಿವತುಲ್ಯತಾಂ”
ಎಂದು ಶಿವನನ್ನು ಆರಾಧಿಸಲಾಗುತ್ತದೆ. ಅಂದರೆ ಅದು ಸರ್ವಪಾಪಗಳನ್ನೂ ಪರಿಹರಿಸುವುದು. ಅಂದು ಉಪವಾಸ ಮಾಡಿ ಜಾಗರಣೆಯಲ್ಲಿದ್ದು ಬಿಲ್ವಪತ್ರೆಗಳಿಂದ ಶಿವನನ್ನು ನಾಲ್ಕು ಯಾಮಗಳಲ್ಲೂ ಅರ್ಚಿಸಿ, ಪೂಜಿಸುವವರು ಶಿವನಿಗೇ ಸಮಾನರಾಗಿಬಿಡುತ್ತಾರೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಇದು ಈ ದಿನದ ಆರಾಧನೆಯಲ್ಲಿ ಮಾಡುವ ವ್ರತ, ಜಾಗರಣೆ ಹಾಗೂ ಉಪವಾಸಗಳ ಮಹತ್ವವೇನು ಎನ್ನುವುದರ ಸಂಕೇತ. ಉಪವಾಸ ಹಾಗೂ ಜಾಗರಣೆಯು ಶಿವರಾತ್ರಿಯನ್ನು ಶಿವಮಯವನ್ನಾಗಿ ಮಾಡಿಕೊಳ್ಳುವುದಕ್ಕೆ ಪೂರಕವಾಗಬಲ್ಲ ಎರಡು ವಿಶೇಷ ಸಾಧನಗಳಾಗಿವೆ. 

ಶಿವರಾತ್ರಿಯ ಆಚರಣೆಯಲ್ಲಿ ನಡೆಯುವ ಪೂಜೆ, ಉಪವಾಸ ಹಾಗೂ ಜಾಗರಣೆ ಈ ಮೂರರಲ್ಲಿ ಯಾವುದು ಮುಖ್ಯ ಎಂಬ ಪ್ರಶ್ನೆಗೆ ಭಕ್ತನ ವಿವೇಕವೇ ಪರಿಹಾರದಾಯಿ. ಸ್ಥೂಲವಾಗಿ ಉಪವಾಸ, ಜಾಗರಣೆ ಹಾಗೂ ಶಿವಧ್ಯಾನಗಳ ತ್ರಿವೇಣಿ ಸಂಗಮವೇ ಮಹಾಶಿವರಾತ್ರಿ ಎನ್ನಬಹುದು. ದಯೆ, ಅಸೂಯೆ ಇಲ್ಲದಿರುವಿಕೆ, ಶುಚಿತ್ವ, ಅನಾಯಾಸ, ಕಾರ್ಪಣ್ಯವಿಲ್ಲದಿರುವಿಕೆ, ದುರಾಸೆ ಇಲ್ಲದಿರುವುದು, ಕ್ಷಮಾಗುಣ ಮತ್ತು ಮಂಗಳ ಇವೇ ಅಷ್ಟ ಆತ್ಮಗುಣಗಳೊಂದಿಗೆ, ಶಿವನಿಗೆ ಪ್ರಿಯವಾದ ಧ್ಯಾನಾನಂದಗಳ ಮೂಲಕ ಶಿವರಾತ್ರಿಯನ್ನು ಆಚರಿಸುವುದರಿಂದ ಶಿವನ ಸಂಪ್ರೀತಿಗೆ ಒಳಗಾಗಬಹುದು. “”ಅಲಂಕಾರ ಪ್ರಿಯೋಃ ವಿಷ್ಣು, ಅಭಿಷೇಕ ಪ್ರಿಯಃ ಶಿವ”ಎಂಬಂತೆ ವೈದಿಕ ಉಪಚಾರಗಳಲ್ಲಿ ಅಭಿಷೇಕವು ಶಿವನಿಗೆ ಅತ್ಯಂತ ಪ್ರಿಯವಾದುದು. ಬಿಲ್ವಪತ್ರೆ, ಪದ್ಮ ಪುಷ್ಪ, ತುಂಬೆ ಹೂವು ಹಾಗೂ ಕೆಂಪು ದಾಸವಾಳಗಳು ಶಿವನ ಪೂಜೆಯಲ್ಲಿ ಪ್ರಮುಖವಾಗಿ ಇರಬೇಕಾದವು. ಅದು ಆತನಿಗೆ ಅತ್ಯಂತ ಇಷ್ಟವಾದವುಗಳು ಎಂಬುದು ಪ್ರತೀತಿ.

ಧ್ಯಾನಪ್ರಿಯ ಶಿವ
ಸದಾಶಿವನಿಗೆ ಅದೇ ಧ್ಯಾನ ಎಂಬಂತೆ ಶಿವನು ಧ್ಯಾನ ಪ್ರಿಯ. ಪರಮಾತ್ಮ ಧ್ಯಾನದ ಅಂತರಂಗ ಪೂಜೆ ಶಿವನೊಲುಮೆಗೆ ಪಾತ್ರವಾಗುವಲ್ಲಿ ಮಹತ್ವ ಪೂರ್ಣವಾದುದು. ಶಿವಧ್ಯಾನ ಹಾಗೂ ಆರಾಧನೆಗೆ ಬೇಕಾದ ಮಾನಸಿಕ ಶುದ್ಧಿಗಾಗಿ ಉಪವಾಸವನ್ನೂ ವಿಶೇಷ ಪೂಜೆ ಹಾಗೂ ಸ್ಮರಣೆಗಾಗಿ ರಾತ್ರಿಯ ಜಾಗರಣೆಗಳನ್ನೂ ಯಥಾನುಶಕ್ತಿ ಆಚರಿಸುವುದು ಉತ್ತಮ.

ಧ್ಯಾನ ಹಾಗೂ ಬಾಹ್ಯ ಪೂಜೆಗಳಿಗೆ ಪೂರಕವಾಗಿರುವುದೇ ನಿರಾಹಾರ ರೂಪವಾದ ಉಪವಾಸ. ಇದಕ್ಕೆ ಪೌರಾಣಿಕ, ವೈಜ್ಞಾನಿಕ ಹಾಗೂ ಜನಜೀವನದ ಸಾಂಸ್ಕೃತಿಕ ಮೌಲ್ಯಗಳ ಹಿನ್ನೆಲೆಯೂ ಇದೆ. ಲೋಕ ಕಲ್ಯಾಣಕ್ಕಾಗಿ ಶಿವನು ನಂಜನ್ನು (ವಿಷ) ಉಂಡು ನಂಜುಂಡನಾದ ಪೌರಾಣಿಕ ಘಟನೆಗೂ ಶಿವರಾತ್ರಿಯಂದು ಆಚರಿಸುವ ಜಾಗರಣೆ ಹಾಗೂ ಉಪವಾಸಕ್ಕೂ ಪರಸ್ಪರ ಅಂತರ್‌ಸಂಬಂಧವಿದೆ. ಇದರಲ್ಲಿ ಒಂದಷ್ಟು ವೈಜ್ಞಾನಿಕ ನೆಲೆಗಟ್ಟಿನ ಅಂಶಗಳೂ ಸಮ್ಮಿಳಿತವಾಗಿರುವುದು ಕಾಣಬಹುದು.  ಯಾವುದೇ ಕಾರಣದಿಂದ ವಿಷವು ಮಾನವ ದೇಹದೊಳಗೆ ಪ್ರವೇಶಿಸಿದರೆ ಅದು ದೇಹಾದ್ಯಂತ ವ್ಯಾಪಿಸದಂತೆ ತಡೆಯಲು ನಿದ್ರಿಸಗೊಡಬಾರದು ಹಾಗೂ ವಿಷದ ತೀವ್ರತೆಯನ್ನು ಕುಗ್ಗಿಸುವ ಸಲುವಾಗಿ ಎಳನೀರು, ಪಾನಕ ಹಾಗೂ ಹಣ್ಣುಗಳನ್ನಷ್ಟೇ ಸೇವಿಸಲು ನೀಡಬೇಕು. 

ವಿಜ್ಞಾನವೂ ಇದನ್ನೇ ಹೇಳುತ್ತದೆ. ಅಂದ ಮೇಲೆ ನಂಜುಂಡನ ಸ್ತುತಿ ಹಾಗೂ ಸ್ಮರಣೆಯೇ ಅತ್ಯಂತ ಪ್ರಧಾನವಾದ ಶಿವರಾತ್ರಿಯಂದು ಮಾಡುವ ಜಾಗರಣೆ ಮತ್ತು ಉಪವಾಸದ ಔಚಿತ್ಯ ಏನೆನ್ನುವುದು ಅರಿವಾಗುತ್ತದೆ. ಉಪವಾಸವಿದ್ದು ಹಸಿವಾದಾಗಲಷ್ಟೇ ಆಹಾರದ ನೈಜ ಬೆಲೆ ಅರಿವಿಗೆ ಬರುತ್ತದೆ ಎಂಬ ಸಾಮಾಜಿಕ ದೃಷ್ಟಿಯೂ ಇದರಲ್ಲಿ ಹುದುಗಿದೆ. ಹೊಟ್ಟೆಯನ್ನು ಖಾಲಿ ಬಿಡಬಾರದೆಂದು ಹಿರಿಯರು ಹೇಳುತ್ತಾರೇನೋ ನಿಜ. ಆದರೆ ಅದಕ್ಕೆ ಸಮಾನಾಂತರವಾಗಿ ಉಪವಾಸ ದೀಕ್ಷೆಯ ಅಗತ್ಯ, ಅದರ ಮಹತ್ವವೂ  ಪ್ರಸ್ತಾಪವಾಗಿದೆಯಲ್ಲವೇ? ಪೌರಾಣಿಕ ಹಾಗೂ ಆಧ್ಯಾತ್ಮಿಕವಾಗಿ ಉಪವಾಸ ಶಕ್ತಿಶಾಲಿ ಎಂದೇ ಪರಿಗಣಿಸಲ್ಪಡುತ್ತದೆ. ಆಧುನಿಕ ವೈದ್ಯ ವಿಜ್ಞಾನ ಲೋಕವೂ ಒಂದು ನಿಯಮಿತ ಉಪವಾಸವನ್ನು ಪುರಸ್ಕರಿಸುತ್ತದೆ.

ಶಿವಧ್ಯಾನದ ಜಾಗರಣೆ
ನಿದ್ರೆಯು  ಒಂದು ತಮೋಗುಣವುಳ್ಳ ಕಾರ್ಯವೆನಿಸಿಕೊಂಡಿದೆ. ಶಿವರಾತ್ರಿಯಂದು ಜನರು ಇಡೀ ರಾತ್ರಿ ಶಿವನ ಆರಾಧನೆಗೆ ವಿನಿಯೋಗಿಸಲ್ಪಡಬೇಕು ಎಂಬ ಉದ್ದೇಶದಿಂದ ಜಾಗರಣೆ ಮಾಡುವುದು ಸೂಕ್ತ ಎನ್ನುವುದು ಶಾಸ್ತ್ರದ ಪ್ರತಿಪಾದನೆ. ಈ ಅಂಶಕ್ಕೆ ವ್ಯತಿರಿಕ್ತವೆಂಬಂತೆ, ಅನಿಷ್ಟ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ, ಕೆಟ್ಟ ಕಾರ್ಯಗಳ ಮೂಲಕ ರಾತ್ರಿಯೆಲ್ಲ ಎಚ್ಚರವಾಗಿರುವವರಿದ್ದಾರೆ. ಶಿವರಾತ್ರಿಯಂತಹ ಪವಿತ್ರ, ಪುಣ್ಯದಿನದಂದು ಕೆಟ್ಟ ಕಾರ್ಯಗಳಲ್ಲಿ ಭಾಗಿಯಾಗುವುದು ಪಾಪ ಕಾರ್ಯಗೈದಂತೆಯೇ ಸರಿ. ಶಿವರಾತ್ರಿಯ ಜಾಗರಣೆಯೆಂದರೆ ಅದು ಭಗವಂತನ ಧ್ಯಾನ ಹಾಗೂ ಆರಾಧನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಾಗೃತವಾಗಿರುವುದು ಎಂದರ್ಥ. 

 ಶಿವರಾತ್ರಿಯಂದು ನಡೆಯಬೇಕಾಗಿರುವುದು ಪೂಜ್ಯಾರ್ಥ ಜಾಗರಣೆ ಹಾಗೂ ಉಪವಾಸ. ಅದರ ಆಚರಣೆಯ ಆದರ್ಶಗಳನ್ನು ಯಾವ ಶಿವರಾತ್ರಿ ಮಹಾತ್ಮ ಕಥೆಗಳೂ ಭಕ್ತರಿಗೆ ಬೋಧಿಸುವುದಿಲ್ಲ. ಭಗವಂತನ ಅನುಗ್ರಹಕ್ಕೆ ಭಾಜನವಾಗುವ ಉದ್ದೇಶ ಸಾಕಾರದ ಧ್ಯೇಯವು ಭಕ್ತರಲ್ಲಿ ಯಾವುದು ವಿಧಿ- ಯಾವುದು ನಿಷೇಧ ಎನ್ನುವ ಸ್ವಯಂ ತಿಳಿವಳಿಕೆಯನ್ನು ಮೂಡಿಸಬೇಕಷ್ಟೇ.
ಯಾವುದೇ ಒಂದು ಜನಾಂಗದ ದೇವತೆಯಾಗಿರದೆ ಸರ್ವಭೂತಗಳಿಗೂ ಒಡೆಯನಾಗಿ, ವೈದಿಕ ಹಾಗೂ ತಾಂತ್ರಿಕವಾಗಿ ನಾನಾ ವಿಧಗಳಿಂದ ಆರಾಧಿಸಲ್ಪಡುವ ಭಗವಂತನಾದ ಶಿವನನ್ನು ಮಹಾಶಿವರಾತ್ರಿಯಂದು ಯಥಾನುಶಕ್ತಿ, ವಿಧಿವತ್ತಾಗಿ ಭಕ್ತಿಯಿಂದ ಆರಾಧಿಸುವ ಮೂಲಕ ಅವನ ಒಲುಮೆ ಹಾಗೂ ಅನುಗ್ರಹಗಳಿಗೆ ಪಾತ್ರರಾಗೋಣ.

ಸಂದೇಶ್‌ ಎಚ್‌. ನಾಯ್ಕ, ಹಕ್ಲಾಡಿ

ಟಾಪ್ ನ್ಯೂಸ್

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

ಔತಣಕೂಟದಲ್ಲಿ ಯುವತಿಯ ವೀಡಿಯೋ ಮಾಡಿದ ಆರೋಪ: ಹಲ್ಲೆ-ಇತ್ತಂಡಗಳಿಂದ ದೂರು, ಪ್ರಕರಣ ದಾಖಲು

ಔತಣಕೂಟದಲ್ಲಿ ಯುವತಿಯ ವೀಡಿಯೋ ಮಾಡಿದ ಆರೋಪ: ಹಲ್ಲೆ-ಇತ್ತಂಡಗಳಿಂದ ದೂರು, ಪ್ರಕರಣ ದಾಖಲು

Kadaba ಮಹಿಳೆಯ ಮೊಬೈಲ್‌ ನಂಬರ್‌ ಕೇಳಿದವನಿಗೆ ಹಲ್ಲೆ

Kadaba ಮಹಿಳೆಯ ಮೊಬೈಲ್‌ ನಂಬರ್‌ ಕೇಳಿದವನಿಗೆ ಹಲ್ಲೆ

ಹಲ್ಲೆಗೈದು ಮನೆಯಿಂದ ಕಳವು ಪ್ರಕರಣ: 2 ವರ್ಷಗಳ ಬಳಿಕ ಆರೋಪಿಗಳ ಸೆರೆ

Madikeri ಹಲ್ಲೆಗೈದು ಮನೆಯಿಂದ ಕಳವು ಪ್ರಕರಣ: 2 ವರ್ಷಗಳ ಬಳಿಕ ಆರೋಪಿಗಳ ಸೆರೆ

Somwarpet ಮರ ಬಿದ್ದು ಕಾರ್ಮಿಕ ಸಾವು

Somwarpet ಮರ ಬಿದ್ದು ಕಾರ್ಮಿಕ ಸಾವು

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Fraud Case ಷೇರು ಮಾರುಕಟ್ಟೆ ಹೆಸರಿನಲ್ಲಿ ಮಹಿಳೆಗೆ ವಂಚನೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

Udupi; ಬ್ಯಾಂಕ್‌ ಅಧಿಕಾರಿ ಖಾತೆಯಿಂದ ಲಕ್ಷಾಂತರ ರೂ.ವರ್ಗಾವಣೆ

ಔತಣಕೂಟದಲ್ಲಿ ಯುವತಿಯ ವೀಡಿಯೋ ಮಾಡಿದ ಆರೋಪ: ಹಲ್ಲೆ-ಇತ್ತಂಡಗಳಿಂದ ದೂರು, ಪ್ರಕರಣ ದಾಖಲು

ಔತಣಕೂಟದಲ್ಲಿ ಯುವತಿಯ ವೀಡಿಯೋ ಮಾಡಿದ ಆರೋಪ: ಹಲ್ಲೆ-ಇತ್ತಂಡಗಳಿಂದ ದೂರು, ಪ್ರಕರಣ ದಾಖಲು

Kadaba ಮಹಿಳೆಯ ಮೊಬೈಲ್‌ ನಂಬರ್‌ ಕೇಳಿದವನಿಗೆ ಹಲ್ಲೆ

Kadaba ಮಹಿಳೆಯ ಮೊಬೈಲ್‌ ನಂಬರ್‌ ಕೇಳಿದವನಿಗೆ ಹಲ್ಲೆ

ಹಲ್ಲೆಗೈದು ಮನೆಯಿಂದ ಕಳವು ಪ್ರಕರಣ: 2 ವರ್ಷಗಳ ಬಳಿಕ ಆರೋಪಿಗಳ ಸೆರೆ

Madikeri ಹಲ್ಲೆಗೈದು ಮನೆಯಿಂದ ಕಳವು ಪ್ರಕರಣ: 2 ವರ್ಷಗಳ ಬಳಿಕ ಆರೋಪಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.