G20 ; ಜೈವಿಕ ಇಂಧನ ಮೈತ್ರಿ ಅಧಿಕೃತ ಘೋಷಣೆ
Team Udayavani, Sep 10, 2023, 6:50 AM IST
ಜಿ20 ರಾಷ್ಟ್ರಗಳ ಸಮ್ಮೇಳನದ ಮೊದಲ ದಿನವೇ ಜಾಗತಿಕ ಜೈವಿಕ ಇಂಧನ ಮೈತ್ರಿ (ಜಿಬಿಎ) ಘೋಷಣೆಯಾಗಿದೆ. ಹವಾಮಾನ ಬದಲಾವಣೆ ವಿರುದ್ಧ ಭಾರತದ ಹೋರಾಟಕ್ಕೆ ಇದು ಶಕ್ತಿ ತುಂಬಲಿದೆ. ಜೈವಿಕ ಇಂಧನಕ್ಕೆ ಸರಕಾರ ಹೆಚ್ಚು ಒತ್ತು ನೀಡುತ್ತಿರುವುದೇಕೆ? ಈ ಇಂಧನದಿಂದಾಗುವ ಲಾಭವೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಏನಿದು ಜೈವಿಕ ಇಂಧನ?
ಸಸ್ಯಗಳು, ಧಾನ್ಯಗಳು, ಕೃಷಿ ತ್ಯಾಜ್ಯ, ಪಾಚಿ, ಪ್ರಾಣಿಗಳು ಮತ್ತು ಆಹಾರದ ತ್ಯಾಜ್ಯಗಳಿಂದ ಪಡೆಯಲಾಗುವ ದಹನಶೀಲ ದ್ರವ ಅಥವಾ ಅನಿಲವನ್ನು ಜೈವಿಕ ಇಂಧನಗಳು ಎನ್ನುತ್ತಾರೆ.
ಮೊದಲು ಪರಿಚಯವಾಗಿದ್ದು 1890ರಲ್ಲಿ ಪ್ಯಾರಿಸ್ ನಿವಾಸಿ ರುಡಾಲ್ಫ್ ಡೀಸೆಲ್ ಎಂಬವರು ಒಂದು ಎಂಜಿನ್ ಅನ್ನು ಅಭಿವೃದ್ಧಿಪಡಿಸಿದರು. ಕೃಷಿ ಬಳಕೆಗೆಂದು ಅಭಿವೃದ್ಧಿಪಡಿಸಲಾದ ಈ ಆಂತರಿಕ ದಹನಕಾರಿ ಎಂಜಿನ್ ಸಸ್ಯಜನ್ಯ ತೈಲದಿಂದ ಕಾರ್ಯನಿರ್ವಹಿಸುತ್ತಿತ್ತು.
ಜೈವಿಕ ಇಂಧನ ಉತ್ಪಾದನೆ ಹೇಗೆ?
ಕಚ್ಚಾ ಸಾಮಗ್ರಿಗೆ ಅನುಗುಣವಾಗಿ ವಿಶೇಷ ಸಂಸ್ಕರಣಾಗಾರ ಗಳನ್ನು ಈ ರೀತಿ ವಿಂಗಡಿಸಲಾಗಿದೆ: ಮೊದಲ ತಲೆಮಾರಿನ (1ಜಿ) ಘಟಕಗಳು ಕಬ್ಬು ಬೆಳೆ ಮತ್ತು ಧಾನ್ಯಗಳ ಪಿಷ್ಟವನ್ನು ಸಂಸ್ಕರಿಸುತ್ತವೆ. ಖಾದ್ಯೆàತರ ಸಸ್ಯಗಳು, ಕೃಷಿ ತ್ಯಾಜ್ಯಗಳನ್ನು 2ನೇ ತಲೆಮಾರಿನ ಘಟಕಗಳು(2ಜಿ) ಸಂಸ್ಕರಿಸುತ್ತವೆ. ಮೂರನೇ ತಲೆಮಾರಿನ ಘಟಕಗಳು(3ಜಿ) ಪಾಚಿ ಮತ್ತು ಸೂಕ್ಷ್ಮಜೀವಿಗಳಿಂದ ಜೈವಿಕ ಇಂಧನವನ್ನು ತಯಾರಿಸುತ್ತವೆ.
ಬಳಕೆ ಯಾಕೆ ಮುಖ್ಯ?
ಇಂಧನದ ಸುಸ್ಥಿರ ಮೂಲಗಳು ಜಗತ್ತಿನ ಎಲ್ಲ ಪ್ರದೇಶಗಳಲ್ಲೂ ಲಭ್ಯವಿರುತ್ತವೆ. ಅಲ್ಲದೇ ಜೈವಿಕ ಇಂಧನಗಳು ವಾಹನಗಳ ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುತ್ತವೆ, ರೈತರ ಆದಾಯ ಹೆಚ್ಚಿಸುತ್ತವೆ ಮತ್ತು ಭಾರತದಂಥ ದೇಶಗಳು ಆಮದು ಮಾಡಿದ ತೈಲವನ್ನೇ ನೆಚ್ಚಿಕೊಳ್ಳುವ ಆವಶ್ಯಕತೆ ಇರುವುದಿಲ್ಲ.
ಭಾರತದಲ್ಲಿ ಜೈವಿಕ ಇಂಧನ ಕಾರ್ಯಕ್ರಮ ಆರಂಭ ಯಾವಾಗ?
ರಾಷ್ಟ್ರೀಯ ಜೈವಿಕ ಇಂಧನ ನೀತಿ ಮೊದಲು ಜಾರಿಯಾಗಿದ್ದು 2009ರಲ್ಲಿ. ಇದನ್ನು 2022ರಲ್ಲಿ ಪರಿಷ್ಕರಿಸಲಾಯಿತು. ಪೆಟ್ರೋಲ್ ಜತೆ ಶೇ.20 ಎಥೆನಾಲ್ ಮಿಶ್ರಣ ಗೊಳಿಸುವ ಗುರಿಯನ್ನು 2025ರವರೆಗೆ ವಿಸ್ತರಿಸುವ ನಿಟ್ಟಿನಲ್ಲಿ ಈ ಪರಿಷ್ಕರಣೆ ನಡೆಯಿತು. 2023-24ರ ವೇಳೆಗೆ ವರ್ಷಕ್ಕೆ 15 ದಶಲಕ್ಷ ಟನ್ ಅನಿಲ ಉತ್ಪಾದನೆಗಾಗಿ 5 ಸಾವಿರ ಸಿಬಿಜಿ(ಸಂಕ್ಷೇಪಿತ ಜೈವಿಕ ಅನಿಲ) ಸ್ಥಾವರ ನಿರ್ಮಿಸುವ ಯೋಜನೆಯನ್ನು 2018ರಲ್ಲಿ ಅನಾವರಣಗೊಳಿಸಲಾ ಯಿತು.
ಭಾರತದ ಉತ್ಪಾದನೆ
2022ರಲ್ಲಿ ಭಾರತವು ಸುಮಾರು 3 ಶತಕೋಟಿ ಲೀ. ಎಥೆನಾಲ್ ಉತ್ಪಾದಿಸಿದೆ. ಅಮೆ ರಿಕ, ಯುರೋಪ್, ಬ್ರೆಜಿಲ್ ಅನ್ನು ಹೊರತು ಪಡಿಸಿದರೆ ಜಗತ್ತಿನ ಒಟ್ಟಾರೆ ಉತ್ಪಾದನೆಯ ಶೇ.16ರಷ್ಟು.
ಜಗತ್ತಿನ ಪ್ರಮುಖ ಜೈವಿಕ ಇಂಧನ ಉತ್ಪಾದಕರು
2022ರ ಟಾಪ್ ಎಥೆನಾಲ್ ಉತ್ಪಾದಕರು: ಅಮೆರಿಕ (57.5 ಶತಕೋಟಿ ಲೀ.) ಮತ್ತು ಬ್ರೆಜಿಲ್ (35.6 ಶತಕೋಟಿ ಲೀ.)
ಟಾಪ್ ಬಯೋಡೀಸೆಲ್ ಉತ್ಪಾದಕರು: ಯುರೋಪ್(17.7 ಶತಕೋಟಿ ಲೀ.), ಅಮೆರಿಕ (14.5 ಶತಕೋಟಿ ಲೀ.), ಇಂಡೋನೇಷ್ಯಾ (9.3 ಶತಕೋಟಿ ಲೀ.)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?