ಅಮಿತ್‌ ಶಾ ಹಾದಿಯಲ್ಲಿ ಫೈರ್‌ ಬ್ರಾಂಡ್‌ ಸಂಘ್ವಿ


Team Udayavani, Dec 20, 2022, 6:10 AM IST

ಅಮಿತ್‌ ಶಾ ಹಾದಿಯಲ್ಲಿ ಫೈರ್‌ ಬ್ರಾಂಡ್‌ ಸಂಘ್ವಿ

ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರ ನೂತನ ಸಂಪುಟದಲ್ಲಿ ಯುವ ನಾಯಕ ಪ್ರಖರವಾಗ್ಮಿ ಹರ್ಷ್‌ ಸಂಘ್ವಿಅವರಿಗೆ ಗೃಹ ಖಾತೆಯ ಜವಾಬ್ದಾರಿ ವಹಿಸಲಾಗಿದೆ. ರಾಜ್ಯದಲ್ಲಿ ಅಮಿತ್‌ ಶಾ ಅವರ ಉತ್ತರಾಧಿಕಾರಿ ಯಂತೆ ಹರ್ಷ್‌ ಅವರನ್ನು ಬಿಂಬಿಸಲಾಗಿದ್ದು, ಸಂಪುಟ ದಲ್ಲಿ ನಂ 2 ಸ್ಥಾನ ನೀಡಲಾಗಿದೆ.

ಹಗಲು-ರಾತ್ರಿ ಎನ್ನದೇ ಪಕ್ಷದ ಕೆಲಸದಲ್ಲಿ ಸದಾ ತಲ್ಲೀನರಾಗುವ ಅವರ ನಾಯಕತ್ವ ಗುಣವನ್ನು ಮೆಚ್ಚಿ, ಹಿಂದಿನ ಸಂಪುಟದಲ್ಲೂ ಗೃಹ ಖಾತೆ ಸೇರಿದಂತೆ ಬರೋಬ್ಬರಿ 9 ಖಾತೆಗಳ ಉಸ್ತುವಾರಿ ನೀಡಲಾಗಿತ್ತು.

ವಿಜಯ್‌ ರೂಪಾಣಿ ಅವರ ಸ್ಥಾನದಲ್ಲಿ ಭೂಪೇಂದ್ರ ಪಟೇಲ್‌ ವಿರಾಜಮಾನ ರಾದ ಅನಂತರ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸದಾ ಉತ್ಸಾಹಿಯಾದ ಹರ್ಷ್‌ ಅವರಿಗೆ ಗೃಹ ಖಾತೆಯ ಜತೆಗೆ ಅಬಕಾರಿ, ಸಾರಿಗೆ, ಕ್ರೀಡೆ ಮತ್ತು ಯುವಜನ ಖಾತೆ, ಗಡಿ ಭದ್ರತೆ ಮತ್ತು ಬಂದೀಖಾನೆ, ಹೋಂಗಾರ್ಡ್‌, ವಿಲೇಜ್‌ ಗಾರ್ಡ್‌, ನಾಗರಿಕ ರಕ್ಷಣೆ, ಪೊಲೀಸ್‌ ವಸತಿ, ಗುಜರಾತಿ ಎನ್‌ಆರ್‌ಐ ಮತ್ತು ಪ್ರಕೃತಿ ವಿಕೋಪ ನಿರ್ವಹಣೆ ಖಾತೆಯ ಜವಾಬ್ದಾರಿ ವಹಿಸಲಾಗಿತ್ತು.

ಜೈನ ಧರ್ಮಕ್ಕೆ ಸೇರಿದ ವಜ್ರದ ವ್ಯಾಪಾರಿ ರಮೇಶ್‌ ಬುರಾಲಾಲ್‌ ಸಂಘ್ವಿ ಮತ್ತು ದೇವೇಂ ದ್ರಬೆನ್‌ ಸಂಘ್ವಿ ಪುತ್ರನಾಗಿ 1985ರ ಜ.8ರಂದು ಸೂರತ್‌ನಲ್ಲಿ ಜನಿಸಿದ ಹರ್ಷ್‌ಗೆ ಚಿಕ್ಕ ವಯಸ್ಸಿ ನಿಂದಲೇ ದೇಶಭಕ್ತಿ ಮತ್ತು ಸಮಾಜಕ್ಕೆ ಸದಾ ಮಿಡಿಯುವ ಮನಸ್ಸಿತ್ತು. ಉಗ್ರ ಪೀಡಿತ ಕಾಶ್ಮೀ ರದ ಲಾಲ್‌ ಚೌಕ್‌ದಲ್ಲಿ ಧೈರ್ಯವಾಗಿ ರಾಷ್ಟ್ರ ಧ್ವಜವನ್ನು ಹಾರಿಸಿದ ಯುವಕರ ಪೈಕಿ ಹರ್ಷ್‌ ಕೂಡ ಒಬ್ಬರು. ಸಾಮಾಜಿಕವಾಗಿ ಕೆಲಸ ಮಾಡಬೇಕೆಂಬ ಹಪಾಹಪಿಯಲ್ಲಿದ್ದ ಇವರು ಸೂರತ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಿದರು. ಅನಂತರ ಇವರು ಬಿಜೆಪಿ ಯುವ ಮೋರ್ಚಾಗೆ ಸೇರ್ಪಡೆ ಯಾದರು. ಬಳಿಕ ಅವರನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾ ಯಿತು. ಹರ್ಷ್‌ ಅವರು ಈ ಹುದ್ದೆಗೆ ಏರಿದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ. ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌ ಮತ್ತು ಪೂನಂ ಮಹಾ ಜನ್‌ ಅವರೊಂದಿಗೆ ಸೇರಿ ಹರ್ಷ್‌ ಪಕ್ಷದ ಸಂಘಟನೆಯಲ್ಲಿ ತೊಡಗಿದರು.

2012ರ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ತಮ್ಮ 27ನೇ ವಯಸ್ಸಿನಲ್ಲೇ ಸೂರತ್‌ ನಗರದ ಮಜುರಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಈ ಮೂಲಕ ರಾಜ್ಯದ ಅತ್ಯಂತ ಕಿರಿಯ ಶಾಸಕ ಎಂಬ ಖ್ಯಾತಿಗೆ ಪಾತ್ರರಾದರು. ಇದಾದ ಅನಂತರ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಸತತ ವಾಗಿ 4ನೇ ಬಾರಿ ಅವರು ದಾಖಲೆಯ ಮತ ಗಳೊಂದಿಗೆ ಗುಜರಾತ್‌ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2013ರಲ್ಲಿ ಅವರನ್ನು ಯುವ ಮೊರ್ಚಾದ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಲಾಯಿತು. 2017ರಲ್ಲಿ ಯುವ ಮೊರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಿಸಲಾಯಿತು.ಪಕ್ಷ ವಹಿ ಸಿದ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅವರನ್ನು 2021 ಸೆ.18ರಂದು ಮಹತ್ವದ ಗೃಹ ಖಾತೆ ನೀಡಲಾಯಿತು. ಗೃಹ ಸಚಿವರಾಗಿ ಗುಜರಾತ್‌ನ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಯಾವುದೇ ಲೋಪ ಇಲ್ಲದೇ ಯಶಸ್ವಿಯಾಗಿ ನಿಭಾಯಿಸಿದ ಹರ್ಷ್‌ ಅವರಿಗೆ ನೂತನ ಸಂಪುಟದಲ್ಲೂ ಅದೇ ಖಾತೆ ನೀಡಲಾಗಿದೆ. ಸದಾ ಬತ್ತದ ಉತ್ಸಾಹದಿಂದ ಸಂಘಟನೆಯಲ್ಲಿ ತೊಡಗುವ ಹರ್ಷ್‌ ಅವರನ್ನು ಬಾವಿ ಮುಖ್ಯಮಂತ್ರಿ, ಅಮಿತ್‌ ಶಾ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.