ಐಎನ್‌ಎಸ್‌ ವಿಕ್ರಾಂತ್‌ ; ಭಾರತಕ್ಕೆ ದೇಶೀಯ ಯುದ್ಧನೌಕೆಯ ಶಕ್ತಿ

ಮಹಿಳಾ ಅಧಿಕಾರಿಗಳು ಸೇರಿದಂತೆ 1,700 ಸಿಬ್ಬಂದಿಗೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

Team Udayavani, Apr 9, 2022, 3:09 PM IST

ಐಎನ್‌ಎಸ್‌ ವಿಕ್ರಾಂತ್‌ ; ಭಾರತಕ್ಕೆ ದೇಶೀಯ ಯುದ್ಧನೌಕೆಯ ಶಕ್ತಿ

ಒಂದು ಕಡೆ ಸದಾ ಕಾಲು ಕೆರೆದುಕೊಂಡು ನಿಲ್ಲುವ ಪಾಕಿಸ್ಥಾನ; ಮತ್ತೂಂದು ಕಡೆ ಮಾತುಕತೆಯ ಬೂಟಾಟಿಕೆ ಜತೆಗೇ ಬೆನ್ನಿಗೆ ಚೂರಿ ಇರಿಯುವ ಚೀನ… ಈ ಎರಡು ದೇಶಗಳನ್ನು ಸಮರ್ಥವಾಗಿ ಎದುರಿಸಲು ಭಾರತಕ್ಕೆ ಸರಿಯಾದ ಶಸ್ತ್ರಾಸ್ತ್ರಗಳೇ ಬೇಕು. ಇಡೀ ಜಗತ್ತಿನಲ್ಲೇ ನಮ್ಮ ಭೂಸೇನೆ ಅತ್ಯಂತ ಬಲಯುತವಾದದ್ದು, ಹಾಗೆಯೇ ವಾಯುಸೇನೆಗೂ ಎಂಥದ್ದೇ ಅಪಾಯ ಬಂದರೂ ಎದುರಿಸುವ ಶಕ್ತಿ ಇದೆ. ಇನ್ನೂ ನೌಕಾ ಸೇನೆ ಕೂಡ ಅಷ್ಟೇ ಬಲವಾಗಿದೆ. ನೌಕಾದಳವನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ಐಎನ್‌ಎಸ್‌ ವಿಕ್ರಾಂತ್‌ ಅನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ.

ಅಗ್ರ ರಾಷ್ಟ್ರಗಳ ಗುಂಪಿಗೆ ಭಾರತ
ಜಗತ್ತಿನ ಕೆಲವೇ ಕೆಲವು ದೇಶಗಳು ಮಾತ್ರ ಸಮರ ನೌಕೆಯನ್ನು ನಿರ್ಮಿಸಿಕೊಳ್ಳುವ ಶಕ್ತಿಹೊಂದಿವೆ. ಭಾರತವೂ ಇದುವರೆಗೆ ಬೇರೊಂದು ದೇಶದ ಮೇಲೆ ಅವಲಂಬಿತವಾಗಿತ್ತು. ಈಗ ಐಎನ್‌ಎಸ್‌ ವಿಕ್ರಾಂತ್‌ ಅನ್ನು ಸ್ವದೇಶೀಯವಾಗಿಯೇ ನಿರ್ಮಿಸಲಾಗಿದೆ. ಹೀಗಾಗಿ, ಎಲೈಟ್‌ ಗುಂಪಿಗಳ ಸಾಲಿಗೆ ಭಾರತವೂ ಸೇರಿದೆ.

ಆಗಸ್ಟ್‌ನಲ್ಲಿ ನೌಕಾಪಡೆಗೆ ಸೇರ್ಪಡೆ
ಐಎನ್‌ಎಸ್‌ ವಿಕ್ರಾಂತ್‌ ಅನ್ನು ಆಗಸ್ಟ್‌ ವೇಳೆಗೆ ನೌಕಾಪಡೆಗೆ ನೀಡಲಾಗುತ್ತದೆ. ಸೋಮವಾರವಷ್ಟೇ ಐಎನ್‌ಎಸ್‌ ವಿಕ್ರಾಂತ್‌ನ ಮೂರನೇ ಸುತ್ತಿನ ಪ್ರಯೋಗವನ್ನು ಮುಗಿಸಿ ವಾಪಸ್‌ ಬಂದಿದೆ ಎಂದು ನೌಕಾದಳ ಟ್ವಿಟರ್‌ ಮೂಲಕ ಮಾಹಿತಿ ನೀಡಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಐದು ದಿನಗಳ ಪ್ರಯೋಗ ನಡೆಸಿತ್ತು. ಬಳಿಕ ಅಕ್ಟೋಬರ್‌ನಲ್ಲಿ ಎರಡನೇ ಸುತ್ತಿನ 10 ದಿನಗಳ ಕಾಲ ಸಾಗರದಲ್ಲಿದ್ದು, ಯಶಸ್ವಿಯಾಗಿ ಪ್ರಯೋಗ ಮುಗಿಸಿತ್ತು. ಈಗ ಮೂರನೇ ಸುತ್ತಿನ ಪ್ರಯೋಗವೂ ಮುಗಿದಿದೆ.

ಐಎನ್‌ಎಸ್‌ ಗಾತ್ರವೇನು?
262 ಮೀಟರ್‌ ಉದ್ದ, 62 ಮೀಟರ್‌ ಅಗಲವಿರುವ ಈ ವಿಕ್ರಾಂತ್‌ ಎರಡು ಫ‌ುಟ್ಬಾಲ್‌ ಮೈದಾನದಷ್ಟು ದೊಡ್ಡದಿದೆ. 59 ಮೀಟರ್‌ ಎತ್ತರವಿರುವ ಇದರಲ್ಲಿ 14 ಡೆಕ್‌ಗಳಿದ್ದು, 2,300 ಕಂಪಾರ್ಟ್‌ಮೆಂಟ್‌ಗಳಿವೆ. ಇವುಗಳಲ್ಲಿ ಮಹಿಳಾ ಅಧಿಕಾರಿಗಳು ಸೇರಿದಂತೆ 1,700 ಸಿಬ್ಬಂದಿಗೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇದು 40,000 ಟನ್‌ನಷ್ಟು ಭಾರವಿದ್ದು, ಗಂಟೆಗೆ 50 ಕಿ.ಮೀ. ವೇಗದಲ್ಲಿ ಚಲಿಸುತ್ತದೆ.

ವಿಕ್ರಾಂತ್‌ನ ವೈಶಿಷ್ಟ್ಯಗಳು
ಈ ನೌಕೆಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಆಸ್ಪತ್ರೆಯೇ ಇದೆ. ಇದರಲ್ಲಿ ಎರಡು ಆಪರೇಷನ್‌ ಥಿಯೇಟರ್‌ಗಳೂ ಇವೆ. ಅಲ್ಲದೆ, ಇದರಲ್ಲಿರುವ ಅಡುಗೆ ಮನೆಯಲ್ಲಿ ಏಕಕಾಲದಲ್ಲಿ ಸುಮಾರು 2,000 ಮಂದಿಗೆ ಅಡುಗೆ ಮಾಡಬಹುದು.

ಇದು ಹೇಗೆ ಸ್ವದೇಶಿ?
ಇದರ ವಿನ್ಯಾಸದಿಂದ ಹಿಡಿದು, ಬಳಕೆ ಮಾಡಲಾಗಿರುವ ವಸ್ತುಗಳು ಕೂಡ ಸ್ವದೇಶಿಯಾಗಿವೆ. ಅಂದರೆ, ಶೇ.76ರಷ್ಟು ಸಲಕರಣೆಗಳು ಮತ್ತು 21,500 ಟನ್‌ನಷ್ಟು ವಿಶೇಷ ಗ್ರೇಡ್‌ನ‌ ಕಬ್ಬಿಣವನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ಅಲ್ಲದೆ, ಈ ಮಾದರಿಯ ಕಬ್ಬಿಣವನ್ನು ಇದೇ ಮೊದಲ ಬಾರಿಗೆ ಭಾರತೀಯ ನೌಕಾ ಹಡಗಿನಲ್ಲಿ ಬಳಕೆ ಮಾಡಲಾಗಿದೆ. ನೌಕೆಯ ನಿರ್ಮಾಣಕ್ಕೂ ಮುನ್ನ, 3ಡಿ ತಂತ್ರಜ್ಞಾನದಲ್ಲಿ ಮಾದರಿಯನ್ನು ನಿರ್ಮಿಸಲಾಗಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ 3ಡಿ ಮಾದರಿ ತಯಾರಿಸಿ ಸಮರ ನೌಕೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

50 ಕಂಪೆನಿಗಳು ಭಾಗಿ
ಭಾರತೀಯ ನೌಕಾ ಪಡೆಯ ಪ್ರಕಾರ, ಈ ಸಮರ ನೌಕೆ ನಿರ್ಮಾಣದಲ್ಲಿ ಸುಮಾರು 50 ಭಾರತೀಯ ಕಂಪೆನಿಗಳು ನೇರವಾಗಿ ಭಾಗಿಯಾಗಿವೆ. ಇದರಿಂದಾಗಿ ಸುಮಾರು 40 ಸಾವಿರ ಸಿಬ್ಬಂದಿ ಪ್ರತ್ಯೇಕ್ಷವಾಗಿ ಅಥವಾ ಪರೋಕ್ಷವಾಗಿ ಇದರಲ್ಲಿ ಕೆಲಸ ಮಾಡಿದ್ದಾರೆ. ಈ ಮೂಲಕ ನಾಲ್ಕರಲ್ಲಿ ಮೂರು ಭಾಗದಷ್ಟು ನಿರ್ಮಾಣ ವೆಚ್ಚವನ್ನು ಭಾರತೀಯ ಆರ್ಥಿಕತೆಗೇ ವಾಪಸ್‌ ನೀಡಿದಂತಾಗಿದೆ ಎಂದಿದೆ.

ಯಾವೆಲ್ಲಾ ಯುದ್ಧ ವಿಮಾನಗಳ ಬಳಕೆ?
ಈ ಸಮರ ನೌಕೆಯಲ್ಲಿ ರಷ್ಯಾ ನಿರ್ಮಿತ ಯುದ್ಧ ವಿಮಾನ ಮಿಗ್‌-29ಕೆ ಫೈಟರ್‌ ಜೆಟ್‌, ಕಮೋವ್‌-31, ಸುಧಾರಿತ ಲಘು ಹೆಲಿಕಾಪ್ಟರ್‌, ಎಂಎಚ್‌ 60ಆರ್‌ ಮಲ್ಟಿರೋಲ್‌ ಹೆಲಿಕಾಪ್ಟರ್‌ ಅನ್ನು ಬಳಕೆ ಮಾಡಬಹುದು.

ಐಎನ್‌ಎಸ್‌ ವಿಕ್ರಾಂತ್‌ ರಚಿಸಿದ್ದು ಹೇಗೆ?
ಈ ಸಮರ ನೌಕೆಯನ್ನು 2009ರಲ್ಲಿ ನಿರ್ಮಾಣ ಮಾಡಲು ಆರಂಭಿಸಲಾಯಿತು. ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌ ಇದರ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಇದರ ನಿರ್ಮಾಣ ವೆಚ್ಚ 23 ಸಾವಿರ ಕೋಟಿ ರೂ. ಇದನ್ನು ಸಂಪೂರ್ಣವಾಗಿ ವಿನ್ಯಾಸ ಮಾಡಿದ್ದು ಭಾರತೀಯ ನೌಕಾಪಡೆಯ ನೌಕಾ ವಿನ್ಯಾಸ ಮಹಾನಿರ್ದೇಶನಾಲಯ. ಕೊಚ್ಚಿಯ ಅರ್ಧ ಭಾಗ ಬಳಕೆ ಮಾಡುವ ವಿದ್ಯುತ್‌ ಅನ್ನು ಇದೊಂದೇ ನೌಕೆ ಬಳಕೆ ಮಾಡುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದರಲ್ಲಿರುವ ವಿದ್ಯುತ್‌ ಕೇಬಲ್‌ಗಳ ಅಳತೆ 2,600 ಕಿ.ಮೀ. ಎಂದು ಈ ನೌಕೆಯ ವಿನ್ಯಾಸಕ ಮೇಜರ್‌ ಮನೋಜ್‌ ಕುಮಾರ್‌ ಹೇಳಿದ್ದಾರೆ. ಅಲ್ಲದೆ, ಇದಕ್ಕೆ ಬಳಸಲಾಗಿರುವ ಕಬ್ಬಿಣದಿಂದ ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ನಂಥ ಮೂರನ್ನು ನಿರ್ಮಿಸಬಹುದು ಎಂದು ತಿಳಿಸಿದ್ದಾರೆ. ಜತೆಗೆ 150 ಕಿ.ಮೀ.ನಷ್ಟು ಪೈಪ್‌ಗಳನ್ನು ಬಳಕೆ ಮಾಡಲಾಗಿದೆ.

ಭಾರತದಲ್ಲಿರುವ ಇತರ ಯುದ್ಧನೌಕೆಗಳು

  1. ಐಎನ್‌ಎಸ್‌ ವಿಕ್ರಮಾದಿತ್ಯ
  2. ಐಎನ್‌ಎಸ್‌ ವಿಕ್ರಾಂತ್‌
  3. ಐಎನ್‌ಎಸ್‌ ಚಕ್ರ
  4. ಐಎನ್‌ಎಸ್‌ ಅರಿಹಂತ್‌
  5. ಐಎನ್‌ಎಸ್‌ ದಿಲ್ಲಿ
  6. ಐಎನ್‌ಎಸ್‌ ಮೈಸೂರು
  7. ಐಎನ್‌1. ಐಎನ್‌ಎಸ್‌ ವಿಕ್ರಮಾದಿತ್ಯ
  8. ಐಎನ್‌ಎಸ್‌ ವಿಕ್ರಾಂತ್‌
  9. ಐಎನ್‌ಎಸ್‌ ಚಕ್ರ
  10. ಐಎನ್‌ಎಸ್‌ ಅರಿಹಂತ್‌
  11. ಐಎನ್‌ಎಸ್‌ ದಿಲ್ಲಿ
  12. ಐಎನ್‌ಎಸ್‌ ಮೈಸೂರು
  13. ಐಎನ್‌ಎಸ್‌ ರಾಣಾ ಎಸ್‌ ರಾಣಾ

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.