ಈಗ ಮೊದಲಿನಂತೆ ಇಲ್ಲ ಮೋದಿ…


Team Udayavani, Apr 12, 2019, 6:00 AM IST

h-31

ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಐದನೇ ಬಾರಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಬಿಜೆಪಿಯೇ ತಮ್ಮ ಪಕ್ಷದ‌ ಪ್ರಮುಖ ಎದುರಾಳಿ ಎನ್ನುತ್ತಿರುವ ಅವರು, ತಮ್ಮ ಹಳೆಯ ಸ್ನೇಹಿತ ನರೇಂದ್ರ ಮೋದಿ ಮೊದಲಿನಂತಿಲ್ಲ, ಬದಲಾಗಿಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ನವೀನ್‌ ಪಟ್ನಾಯಕ್‌ ಎಕನಾಮಿಕ್‌ ಟೈಮ್ಸ್‌ಗೆ ನೀಡಿದ ಸಂದರ್ಶನದ ಆಯ್ದಭಾಗ ಇಲ್ಲಿದೆ.

ಚುನಾವಣೆಗೆ ತಯ್ನಾರಿ ಹೇಗೆ ನಡೆದಿದೆ? ಎಷ್ಟು ಸೀಟುಗಳಲ್ಲಿ ಗೆಲ್ಲುವ ಭರವಸೆ ಇದೆ?
ಭರ್ಜರಿಯಾಗಿ ಈ ಬಾರಿ ಚುನಾವಣೆಯಲ್ಲಿ
ಗೆಲ್ಲುವ ಭರವಸೆಯಲ್ಲಿದ್ದೇವೆ. ರಾಜ್ಯದಲ್ಲಿ ಅದ್ಭುತ ಉತ್ಸಾಹವಿದೆ. ನಾನು ನಿಖರ ನಂಬರ್‌ಗಳನ್ನು ಕೊಡಲಾರೆನಾದರೂ, ನಾವೇ ಗೆಲ್ಲುತ್ತೇವೆ ಎಂದು ಮಾತ್ರ ಹೇಳಬಲ್ಲೆ.

ದೆಹಲಿಯಲ್ಲಿ ಕಿಂಗ್‌ ಮೇಕರ್‌ ಆಗುವಂಥ ಅವಕಾಶ ಎದುರಾದರೆ ಏನು ಮಾಡುತ್ತೀರಿ?
ಅಂಥ ಸನ್ನಿವೇಶ ಬಂದರೆ ನೋಡೋಣ. ಒಂದು ಪ್ರಾದೇಶಿಕ ಪಕ್ಷವಾಗಿ ನಮ್ಮ ಪಾರ್ಟಿಯ ಹಿತಾಸಕ್ತಿಯಂತೂ ಒಡಿಶಾ ಜನರ ಆಕಾಂಕ್ಷೆಗಳನ್ನು ಬೆಂಬಲಿಸುವುದೇ ಆಗಿದೆ.

ಒಡಿಶಾಗೂ ವಿಶೇಷ ಸ್ಥಾನಮಾನ ಸಿಗಬೇಕೆಂದು ಆಗ್ರಹಿಸುತ್ತೀರಾ?
ಖಂಡಿತ. ನಾವು ಮೊದಲಿನಿಂದಲೂ ಆಗ್ರಹಿಸುತ್ತಲೇ ಬಂದಿದ್ದೇವೆ. ವಿಚಿತ್ರವೆಂದರೆ, 2014ರಲ್ಲಿ ಬಿಜೆಪಿಯು ಒಡಿಶಾಗೆ ವಿಶೇಷ ಸ್ಥಾನಮಾನದ ಮನ್ನಣೆ ನೀಡುವುದನ್ನು ತನ್ನ ಆದ್ಯತೆಯೆಂದು ಹೇಳಿತ್ತು. ಆದರೆ ಅದು ತನ್ನ ಮಾತನ್ನು ಉಳಿಸಿಕೊಳ್ಳಲಿಲ್ಲ.

ನಿಮ್ಮ ಪ್ರಬಲ ಎದುರಾಳಿ ಯಾರು- ಬಿಜೆಪಿಯೋ ಅಥವಾ ಕಾಂಗ್ರೆಸ್ಸೋ?
ನಾವು ಇಬ್ಬರಿಂದಲೂ ಸಮಾನ ಅಂತರ ಕಾಯ್ದುಕೊಂಡಿದ್ದೇವೆ. ಆದರೂ ಬಿಜೆಪಿಯೇ ನಮ್ಮ ಪ್ರಮುಖ ಎದುರಾಳಿ.

ತಾನು ಕೇಂದ್ರೀಯ ಯೋಜನೆಗಳ ಮೂಲಕ ಒಡಿಶಾಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡುತ್ತಿರುವುದಾಗಿ ಬಿಜೆಪಿ ಹೇಳುತ್ತಿದೆ…
ನನಗೆ ಗೊತ್ತಿರುವ ಮಟ್ಟಿಗೆ, ಬಿಜೆಪಿಯು ಒಡಿಶಾದ ಅನೇಕ ಕಾರ್ಯಕ್ರಮಗಳ ಫ‌ಂಡಿಂಗ್‌ ಅನ್ನು ನಿಲ್ಲಿಸಿದೆ. ಇದು ನಿಜಕ್ಕೂ ಬೇಸರದ ಸಂಗತಿ.

ಒಟ್ಟು ಮೂವರು ಪ್ರಧಾನಿಗಳೊಂದಿಗೆ(ಅಟಲ್‌ ಬಿಹಾರಿ ವಾಜಪೇಯಿ, ಮನಮೋಹನ್‌ ಸಿಂಗ್‌ ಮತ್ತು ಈಗ ನರೇಂದ್ರ ಮೋದಿ…) ಕೆಲಸ ಮಾಡುವ ಅವಕಾಶ ನಿಮಗೆ ಸಿಕ್ಕಿತ್ತು…
ಐಕೆ ಗುಜರಾಲ್‌ ಜೊತೆಗೂ ಕೆಲಸ ಮಾಡಿದ್ದೇನೆ…

ಯಾರೊಂದಿಗೆ ನಿಮ್ಮ ಅನುಭವ ಉತ್ತಮವಾಗಿತ್ತು?
ವಾಜಪೇಯಿಯವರೊಂದಿಗೆ.

ಹಾಗಿದ್ದರೆ ವಾಜಪೇಯಿ ಮತ್ತು ಮೋದಿಯವರ ಕಾರ್ಯವೈಖರಿಯನ್ನು ನೀವು ಹೇಗೆ ತುಲನೆ ಮಾಡುತ್ತೀರಿ?
ಮೋದಿಯವರಿಗೆ ಒಡಿಶಾ ಬಗ್ಗೆ ಆಸಕ್ತಿ ಇಲ್ಲ ಎಂದಂತೂ ನನಗೆ ಅನಿಸುತ್ತದೆ.

ಪ್ರಧಾನಿಯಾಗಿ ಅವರ ಕಾರ್ಯವೈಖರಿ ಹೇಗಿದೆ?
ಮೋದಿಗಿಂತಲೂ ವಾಜಪೇಯಿಯವರದ್ದು ಎತ್ತರದ ವ್ಯಕ್ತಿತ್ವವಾಗಿತ್ತು. ಮೈತ್ರಿ ಸರ್ಕಾರವನ್ನು ಹೇಗೆ ಯಶಸ್ವಿಯಾಗಿ ನಡೆಸಬೇಕು ಎನ್ನುವುದು ಅವರಿಗೆ ತಿಳಿದಿತ್ತು.

ನೀವು, ನರೇಂದ್ರ ಮೋದಿ ಮತ್ತು ಜಯಲಲಿತಾ ಅವರು ಮುಖ್ಯಮಂತ್ರಿಗಳಾಗಿ ಉತ್ತಮ ಒಡನಾಡಿಗಳಾಗಿದ್ದವರು….ಮೋದಿ ಪ್ರಧಾನಿಯಾದ ನಂತರ ಸ್ಥಿತಿ ಬದಲಾಗಿದೆಯೇ?
ಹೌದು. ಇದು ನಿಜಕ್ಕೂ ನಿರಾಶಾದಾಯಕ ಸಂಗತಿ.

ಹಾಗಿದ್ದರೆ ಮೋದಿ ಬದಲಾಗಿದ್ದಾರಾ?
ಹೌದು

ವಿವರಿಸಿ ಹೇಳುತ್ತೀರಾ?
ನಾನು ಆಗಲೇ ಹೇಳಿದ್ದೇನೆ, ಅವರು ತಾವು ನೀಡಿದ ಭರವಸೆಗಳಾವುವನ್ನೂ ಈಡೇರಿಸಿಲ್ಲ.

ನೋಟ್‌ಬಂದಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನೋಡಿ ಅದು ಉತ್ತಮ ಕ್ರಮವಾಗಿತ್ತು, ಆದರೆ ಅನುಷ್ಠಾನದ ವಿಷಯದಲ್ಲಿ ಬಹಳ ವೈಫ‌ಲ್ಯ ಅನುಭವಿಸಿತು.

 ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಉದಾತ್ತ ಭರವಸೆಗಳ ಬಗ್ಗೆ ಏನನ್ನುತ್ತೀರಿ.
ಆ ಭರವಸೆಗಳು ಭರವಸೆಗಳಾಗಿಯೇ ಉಳಿದು ಹೋಗುತ್ತವೇನೋ ಎಂದೆನಿಸುತ್ತದೆ. ಈ ರೀತಿಯ ಭರವಸೆಗಳನ್ನು ಅನೇಕ ಪಕ್ಷಗಳು ನೀಡಿವೆ.

ಕಾಂಗ್ರೆಸ್‌ನ ಕನಿಷ್ಠ ಆದಾಯ ಯೋಜನೆ “ನ್ಯಾಯ್‌’ ಬಗ್ಗೆ ಏನಂತೀರಿ?
ಇದು ಒಳ್ಳೆಯ ಐಡಿಯಾ. ಆದರೆ ಯಾವ ಸರ್ಕಾರಕ್ಕೆ ಇದನ್ನು ನಿಭಾಯಿಸಲು ಸಾಧ್ಯ ಎನ್ನುವುದು ನನಗೆ ತಿಳಿದಿಲ್ಲ. ಮುಂದೆ ತಿಳಿಯಲಿದೆ.

ಕೇಂದ್ರದ ನೀತಿಗಳ ಬಗ್ಗೆ ನಿಮ್ಮ ನಿಲುವೇನು?
ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಅವರು ಹೇಳಿದರು. ಆದರೆ ಅವರ ಮಾತು ಈಡೇರಲೇ ಇಲ್ಲ.

ನಿಮ್ಮ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 33 ಪ್ರತಿಶತ ಮಹಿಳಾ ಅಭ್ಯರ್ಥಿಗಳನ್ನು ನಿಲ್ಲಿಸಲು ನಿರ್ಧರಿಸಿದೆ. ಈ ವಿಚಾರದಲ್ಲಿ ಜನರ ಪ್ರತಿಕ್ರಿಯೆ ಹೇಗಿದೆ?
ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಒಡಿಶಾದ ಮಹಿಳೆಯರು ಸಂತಸಗೊಂಡಿದ್ದಾರೆ.

ಆದರೆ ಒಡಿಶಾದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಮತ್ತು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಲೇ ಇದೆ ಎನ್ನುತ್ತದಲ್ಲ ಪ್ರತಿಪಕ್ಷ?
ನಾವು 33 ಪ್ರತಿಶತ ಮಹಿಳಾ ಮೀಸಲಾತಿ ನೀಡಿರುವ ಸಂಗತಿಯನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲೂ ನಮ್ಮ ನಿರ್ಧಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ, ಆ ಪಕ್ಷದವರು ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ.

ಇವಿಎಂ ಮತ್ತು ವಿವಿಪ್ಯಾಟ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನೇರವಾಗಿ ಹೇಳಬೇಕೆಂದರೆ, ನನಗೆ ಗೊತ್ತಿಲ್ಲ. ಬಹಳಷ್ಟು ಜನ ಇವುಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ, ಆದರೆ ಚುನಾವಣಾ ಆಯೋಗ ಏನೂ ಸಮಸ್ಯೆಯಿಲ್ಲ ಎನ್ನುತ್ತದೆ.

ನಿಮ್ಮ ಅನೇಕ ಸಹೋದ್ಯೋಗಿಗಳು ಪಕ್ಷ ತೊರೆದು ಬಿಜೆಪಿ ಸೇರಿದ್ದಾರಲ್ಲ?
ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಜನರು ನಮ್ಮ ಜೊತೆಗೆ ಇರುವವರೆಗೂ ನಮಗ್ಯಾವ ಸಮಸ್ಯೆಯೂ ಇಲ್ಲ. ರಾಜಕೀಯವಿರುವುದೇ ಹೀಗೆ, ಇಲ್ಲಿ ಏನೇನೆಲ್ಲವೂ ನಡೆಯುತ್ತಲೇ ಇರುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ರೀತಿಯ ವಿದ್ಯಮಾನಗಳನ್ನು ನಾನು ಅತಿ ಎನ್ನುವಷ್ಟು ನೋಡಿಬಿಟ್ಟಿದ್ದೇನೆ(ಅದರ ಬಗ್ಗೆ ಬೇಸರವೂ ಆಗುತ್ತದೆ)

ಪ್ರಧಾನ ಮಂತ್ರಿ ನರೇದ್ರ ಮೋದಿಯವರ ಅನೇಕ ಭಾಷಣಗಳು ರಾಷ್ಟ್ರೀಯತೆ, ಪುಲ್ವಾಮಾ ಮತ್ತು ಬಾಲ್ಕೋಟ್‌ನ ಮೇಲೆ ಕೇಂದ್ರೀಕೃತವಾಗಿವೆ…
ಇದೆಲ್ಲ ವಿಫ‌ಲವಾಗುತ್ತಿದೆ ಎಂದು ನನಗೆ ಅನಿಸುತ್ತದೆ.

(ಕೃಪೆ: ಎಕನಾಮಿಕ್‌ ಟೈಮ್ಸ್‌)

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.