‘Bharat Ratna’ ಪುರಸ್ಕೃತರ ಸಂಖ್ಯೆ 53ಕ್ಕೆ ಏರಿಕೆ: ಒಂದೇ ವರ್ಷ ಐವರಿಗೆ ಇದೇ ಮೊದಲು

1990ರಲ್ಲಿ ನಾಲ್ವರಿಗೆ ಸಂದಿತ್ತು ದೇಶದ ಅತ್ಯುನ್ನತ ಗೌರವ

Team Udayavani, Feb 10, 2024, 6:30 AM IST

1-adsadasd

ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌, ಚರಣ್‌ ಸಿಂಗ್‌ ಮತ್ತು ಹಸುರುಕ್ರಾಂತಿಯ ಹರಿಕಾರ ಎಂ.ಎಸ್‌.ಸ್ವಾಮಿನಾಥನ್‌ ಅವರಿಗೆ ಭಾರತ ರತ್ನ ಘೋಷಣೆಯ ಮೂಲಕ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪುರಸ್ಕೃತರ ಸಂಖ್ಯೆ 53ಕ್ಕೇರಿಕೆಯಾಗಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಗರಿಷ್ಠ ಅಂದರೆ ಐವರಿಗೆ ಈ ಗೌರವ ಸಂದಿದೆ.

1999ರಲ್ಲಿ ನಾಲ್ವರು ಸಾಧಕರಿಗೆ ಭಾರತ ರತ್ನವನ್ನು ಘೋಷಿಸಲಾಗಿತ್ತು. ಅತೀ ಹೆಚ್ಚು ಮಂದಿಗೆ ಭಾರತ ರತ್ನ ಗೌರವ ಘೋಷಣೆಯಾಗಿದ್ದು ಅದೇ ಮೊದಲು ಮತ್ತು ಕೊನೆಯಾಗಿತ್ತು. ಆದರೆ, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ದಾಖಲೆಯನ್ನು ಮುರಿದಿದ್ದು, ಒಂದೇ ವರ್ಷ ಐವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಘೋಷಿಸಿದೆ.

2019ರಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಭಾರತ ರತ್ನ ಘೋಷಿಸಲಾಗಿತ್ತು. ಜತೆಗೆ, ಮರ ಣೋತ್ತರವಾಗಿ ಭೂಪೇಂದ್ರ ಕುಮಾರ್‌ ಹಜಾರಿಕಾ ಮತ್ತು ನಾನಾಜಿ ದೇಶ್‌ಮುಖ್‌ ಅವರಿಗೂ ಅದೇ ವರ್ಷ ಗೌರವ ಸಂದಿತ್ತು. ಅನಂತರದಲ್ಲಿ ಅಂದರೆ 2020ರಿಂದ 2023ರ ಅವಧಿಯಲ್ಲಿ ಯಾರಿಗೂ ಭಾರತ ರತ್ನ ಘೋಷಣೆ ಆಗಿರಲಿಲ್ಲ.

ಬಹುತೇಕ ಸಂದರ್ಭಗಳಲ್ಲಿ ವರ್ಷದಲ್ಲಿ ಗರಿಷ್ಠ ಮೂವರಿಗೆ ಮಾತ್ರ ಭಾರತ ರತ್ನ ಘೋಷಿಸಲಾಗುತ್ತದೆ. 2019, 1997, 1992, 1991, 1955 ಮತ್ತು 1954ರಲ್ಲಿ ತಲಾ ಮೂವರಿಗೆ ಈ ಪ್ರಶಸ್ತಿ ಸಂದಿತ್ತು. 2015, 2014, 2001, 1998, 1990, 1963 ಮತ್ತು 1961ರಲ್ಲಿ ತಲಾ ಇಬ್ಬರು ಭಾರತರತ್ನಕ್ಕೆ ಭಾಜನರಾಗಿದ್ದರು. ಪ್ರಶಸ್ತಿ ಘೋಷಣೆಯೇ ಆಗದಂತಹ ವರ್ಷಗಳೂ ಇವೆ. ಇದೇ ಮೊದಲ ಬಾರಿಗೆ ಐವರು ಸಾಧಕರಿಗೆ ಈ ಪ್ರಶಸ್ತಿ ಸಂದಿದೆ.

ಭಾರತ ರತ್ನ ಪುತ್ರಿಯರ ಸಂಭ್ರಮ

ಹೊಸದಿಲ್ಲಿ: ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಹಾಗೂ ಹಸುರು ಕ್ರಾಂತಿಯ ಹರಿಕಾರ ಡಾ| ಎಂ.ಎಸ್‌. ಸ್ವಾಮಿನಾಥನ್‌ ಅವರ ಪುತ್ರಿಯರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ನರಸಿಂಹ ರಾವ್‌ ಅವರ ಪುತ್ರಿ ವಾಣಿ ದೇವಿ ಮಾತನಾಡಿ, ಪಿ.ವಿ.ಎನ್‌ ಕೇವಲ ತೆಲುಗು ಭೂಮಿಯ ಮಗ ಮಾತ್ರ ಅಲ್ಲ, ಇಡೀ ದೇಶದ ಪುತ್ರ. ಪಕ್ಷಗಳಾಚೆಗೆ ಅಂಥ ಸೇವೆಗಳನ್ನು ಸ್ಮರಿಸಿ, ಪ್ರಶಸ್ತಿ ಘೋಷಿಸಿರುವುದು ಪ್ರಧಾನಿ ಮೋದಿ ಅವರಿಗಿರುವ ಉತ್ತಮ ಮೌಲ್ಯಗಳನ್ನು ಸಾಬೀತು ಪಡಿಸುತ್ತದೆ ಎಂದಿದ್ದಾರೆ.
ಸ್ವಾಮಿನಾಥನ್‌ ಪುತ್ರಿ, ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯಾ ಅವರು ಪ್ರತಿಕ್ರಿಯಿಸಿ, ಹಲವಾರು ಪ್ರಶಸ್ತಿಗಳು ಬಂದರೂ ನನ್ನ ತಂದೆ ಪ್ರತೀ ಬಾರಿ ಸ್ಫೂರ್ತಿ ಪಡೆಯುತ್ತಿದ್ದದ್ದು, ಜನರಿಗಾಗಿ ಅವರು ಮಾಡಿದ ಕಾರ್ಯಗಳು ಫ‌ಲಕೊಟ್ಟಾಗ ಮಾತ್ರ. ಇಂದು ಆ ಎಲ್ಲ ಕಾರ್ಯಗಳನ್ನೂ ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದರು.

ಬಹಳ ಹಿಂದೆಯೇ ಸಲ್ಲಬೇಕಿದ್ದ ಗೌರವ ಇಂದು ಈ ಮೂವರಿಗೆ ಸಂದಿದೆ. ಬಹಳ ಕಾಲದ ಬಳಿಕ ಸರಕಾರವೊಂದು ಮೊದಲ ಬಾರಿಗೆ ಇಂಥ ನಿರ್ಣಯ ತೆಗೆದುಕೊಂಡಿದೆ. ವಿಶೇಷವಾಗಿ ಬಿಜೆಪಿ ಸರಕಾರವು ಇಂಥ ನಿರ್ಧಾರಗಳಲ್ಲಿ ರಾಜಕೀಯದ ಪರಧಿಗಳನ್ನು ಮೀರಿ ಸೇವೆ ಸ್ಮರಿಸುತ್ತದೆ.
ರಾಜನಾಥ ಸಿಂಗ್‌, ರಕ್ಷಣ ಸಚಿವ

ಪಿ.ವಿ.ನರಸಿಂಹ ರಾವ್‌, ಚೌಧರಿ ಚರಣ್‌ ಸಿಂಗ್‌ ಹಾಗೂ ಡಾ| ಎಂ.ಎಸ್‌. ಸ್ವಾಮಿನಾಥನ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸ್ವಾಗತಿಸುತ್ತದೆ. ದೇಶಕ್ಕೆ ಇವರೆಲ್ಲರ ಅಗಾಧ ಕೊಡುಗೆಯನ್ನು ಸದಾ ಸ್ಮರಿಸಲಾಗುತ್ತದೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಭಾರತ ರತ್ನ ಪ್ರಶಸ್ತಿ ಘೋಷಣೆಯು ಸಂತಸ ತಂದಿದೆ. ದೇಶದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಪಿ.ವಿ.ನರಸಿಂಹ ರಾವ್‌ ಅವರು ಅಗಾಧ ಕೊಡುಗೆಯನ್ನು ನೀಡಿದ್ದಾರೆ. ರೈತ ನಾಯಕರಾದ ಚೌಧರಿ ಚರಣ್‌ ಸಿಂಗ್‌ ಹಾಗೂ ಪ್ರಮುಖ ಕೃಷಿ ವಿಜ್ಞಾನಿ ಸ್ವಾಮಿನಾಥನ್‌ ಅವರಿಗೂ ಈ ಪ್ರಶಸ್ತಿ ಸಂದಿರುವುದು ಸ್ವಾಗತಾರ್ಹ.
ರಾಜೀವ್‌ ಶುಕ್ಲಾ, ಕಾಂಗ್ರೆಸ್‌ ನಾಯಕ

ಭಾರತದ ಆರ್ಥಿಕತೆಗೆ, ಕೃಷಿ
ಕ್ಷೇತ್ರಕ್ಕೆ, ಅಭಿವೃದ್ಧಿಗಾಗಿ ಸ್ಮರಿಸಿದ ಭಾರತ ಮಾತೆಯ ಮೂವರು ಪ್ರಿಯ ಪುತ್ರರಿಗೆ ಭಾರತ ರತ್ನ ಘೋಷಣೆಯಾಗಿ ರು ವುದು ಸಂತಸ ತಂದಿದೆ. ಪ್ರಶಸ್ತಿ ಘೋಷಿಸಿದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು.
ಎಂ.ವೆಂಕಯ್ಯ ನಾಯ್ಡು, ಮಾಜಿ ಉಪ ರಾಷ್ಟ್ರಪತಿ

ಉತ್ತಮ ರಾಜಕೀಯ ಮತ್ತು ನೈತಿಕ ಮೌಲ್ಯಗಳನ್ನು ಹೊಂದಿದ್ದ ಅತ್ಯುತ್ತಮ ರಾಜಕಾರಣಿ ಪಿ.ವಿ.ನರಸಿಂಹ ರಾವ್‌ ಅವರಿಗೆ ಅತ್ಯುನ್ನತ ಭಾರತ ರತ್ನ ದೊರೆತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ದೇಶದ ಅಭಿವೃದ್ಧಿ ಪಥಕ್ಕೆ ಅತುತ್ತಮ ಕೊಡುಗೆ ನೀಡಿದ ಸಿಂಗ್‌ ಮತ್ತು ಸ್ವಾಮಿನಾಥನ್‌ ಅವರೂ ಪ್ರಶಸ್ತಿ ಭಾಜನರಾಗಿರುವು ಶ್ಲಾಘನಾರ್ಹ.
ಜಗನ್‌ ಮೋಹನ್‌ ರೆಡ್ಡಿ, ಆಂಧ್ರಪ್ರದೇಶ ಸಿಎಂ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.