ಮೊದಲ ಚುನಾವಣೆ ನೆನಪು; ಸಜ್ಜನರು ರಾಜಕಾರಣ ಮಾಡುವ ಕಾಲ ಹೋಯಿತು..!


Team Udayavani, Jan 16, 2023, 6:15 AM IST

ಮೊದಲ ಚುನಾವಣೆ ನೆನಪು; ಸಜ್ಜನರು ರಾಜಕಾರಣ ಮಾಡುವ ಕಾಲ ಹೋಯಿತು..!

ಬಾಳಾಸಾಹೇಬ ವಡ್ಡರ, ಮಾಜಿ ಶಾಸಕರು ಚಿಕ್ಕೋಡಿ
ನಮ್ಮಂಥವರು ಚುನಾವಣೆ ಮಾಡೋ ಕಾಲ ಹೋಯ್ತು. ನಾವು ಆಗ ನಿಜವಾದ ಚುನಾವಣೆ ಮಾಡ್ತಿದ್ವಿ. ಈಗ ಚುನಾವಣೆ ಹೆಸರಲ್ಲಿ ಖರೀದಿ ಮತ್ತು ವ್ಯಾಪಾರ ನಡೆದಿದೆ. ರಾಜಕಾರಣ ಎಂಬುದು ನೂರಕ್ಕೆ ನೂರರಷ್ಟು ವ್ಯಾಪಾರವಾಗಿ ಬದಲಾಗಿದೆ. ನಮ್ಮ ಕಾಲದಲ್ಲಿ ಲಕ್ಷ ಲಕ್ಷ ಎಂದರೇ ಹೆದರಿಕೆಯಾಗ್ತಿತ್ತು. ಆದರೆ ಈಗಿನ ನಾಯಕರು ಕೋಟಿ ಕೋಟಿ ಎಂದರೂ ಅಂಜೋದಿಲ್ಲ…

ಇದು 1994ರ ಚುನಾವಣೆಯಲ್ಲಿ ಬೆಳ ಗಾವಿ ಜಿಲ್ಲೆಯ ಚಿಕ್ಕೋಡಿ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳದಿಂದ ಜಯಗಳಿಸಿ ಮೊಟ್ಟಮೊದಲ ಬಾರಿಗೆ ಶಾಸಕರಾಗಿದ್ದ ಬಾಳಾಸಾಹೇಬ ವಡ್ಡರ ಅವರ ಅನುಭವದ ಮಾತು.

ನಮ್ಮ ಚುನಾವಣೆಗೂ ಈಗಿನ ಚುನಾವಣೆಗೂ ಅಜಗಜಾಂತರ. ನಾನು 1994ರಲ್ಲಿ 1.93 ಲಕ್ಷ ರೂ.ಗಳಲ್ಲಿ ಇಡೀ ಚುನಾವಣೆ ಮಾಡಿದ್ದೇನೆ. ಪಕ್ಷದವರು ಚುನಾವಣ ವೆಚ್ಚಕ್ಕಾಗಿ 50 ಸಾವಿರ ರೂ. ನೀಡಿದ್ದರು. ನನ್ನ ಬಳಿ 50 ಸಾವಿರ ರೂ. ಇತ್ತು. ಕೆಲವು ಗೆಳೆಯರು ಸೇರಿಸಿ 40 ಸಾವಿರ ರೂ. ನೀಡಿದ್ದರು. ಇಷ್ಟೇ ಅಲ್ಲ ಅನೇಕ ಜನರು ಖುದ್ದಾಗಿ ಹಣಕಾಸಿನ ಸಹಾಯ ಮಾಡಿದ್ದರು. ಅದರಲ್ಲೇ ಚುನಾವಣ ಪ್ರಚಾರ, ಕಾರ್ಯಕರ್ತರ ಊಟ, ಚಹಾ ಇತ್ಯಾದಿ ನೋಡಿಕೊಂಡಿದ್ದೆ. ನಾವು ಚುನಾವಣೆ ಎದುರಿಸಿದಾಗ ಊಟದ ಪಾರ್ಟಿಗಳಿರಲಿಲ್ಲ. ಇದ್ದರೂ ಬಹಳ ಕಡಿಮೆ, ಬಾಡೂಟ ಬಹಳ ವಿರಳ.

ಬಹುತೇಕ ಕಡೆ ಚಹಾ ಮತ್ತು ಚುರುಮರಿಯಲ್ಲೇ ಕಾರ್ಯಕ್ರಮ ಮುಗಿಸಿದ್ದೇನೆ. ಈಗ ಮೀಸಲು ಕ್ಷೇತ್ರದಲ್ಲೇ ಚುನಾವಣೆ ಮಾಡಬೇಕಾದರೆ ಕನಿಷ್ಠ 25 ಕೋಟಿ ರೂ. ಬೇಕು. ಇನ್ನು ಸಾಮಾನ್ಯ ಕ್ಷೇತ್ರದಲ್ಲಿ ಇದು 30 ಕೋಟಿ ದಾಟುತ್ತದೆ. ಹೀಗಾಗಿ ಈಗಿನ ರಾಜಕಾರಣ, ಚುನಾವಣೆ ಹಾಗೂ ರಾಜಕಾರಣಿಗಳನ್ನು ನೆನಸಿಕೊಳ್ಳುವುದಿರಲಿ ಊಹಿಸಲೂ ಹೆದರಿಕೆಯಾಗುತ್ತದೆ. ಇದು ನಮ್ಮಂಥವರು ಮಾಡುವ ಚುನಾವಣೆ ಅಲ್ಲ.

ಸಜ್ಜನಿಕೆಯ ರಾಜಕಾರಣ ಉಳಿದಿಲ್ಲ. ಸಜ್ಜನ ರಾಜಕಾರಣಿಗಳಿದ್ದರೂ ಅವರಿಗೆ ಯಾವ ಬೆಲೆಯೂ ಇಲ್ಲ. ಜನ ಗುರುತಿಸುತ್ತಾರೆ. ಮರ್ಯಾದೆ ಕೊಡುತ್ತಾರೆ. ಅದು ಒಂದು ಕಡೆ. ಆದರೆ ಪಕ್ಷದವರೇ ಗೌರವದಿಂದ ನಡೆದುಕೊಳ್ಳುವದಿಲ್ಲ. ಇನ್ನು ಅವಕಾಶವಂತೂ ದೂರವೇ ಉಳಿಯಿತು. ನಮ್ಮ ಕಾಲದಲ್ಲಿ ಕಾರ್ಯಕರ್ತರ ದೊಡ್ಡ ಪಡೆಯೇ ಇತ್ತು. ವಿಶೇಷ ಎಂದರೆ ಪ್ರತಿಯೊಬ್ಬ ಕಾರ್ಯಕರ್ತರು ನಾನೇ ಚುನಾವಣೆಗೆ ನಿಂತಿದ್ದೇನೆ ಎನ್ನುವ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದರು. ಪ್ರತಿಯೊಬ್ಬರಲ್ಲೂ ನಿಷ್ಠೆ ಇತ್ತು. ಅದೇ ರೀತಿ ಮತದಾರರೂ ಸಹ. ಆಗ ಅವರಲ್ಲಿ ಯಾವುದೇ ಅಪೇಕ್ಷೆ ಇರಲಿಲ್ಲ. ಈಗ ಎಲ್ಲವೂ ಬದಲಾಗಿದೆ. ದುಡ್ಡು ಕೊಟ್ಟವರ ಕಡೆ ನಿಷ್ಠೆ. ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಗಾಡಿ ಕೊಡಲೇಬೇಕು. ಪ್ರಾಮಾಣಿಕತೆಯ ಚುನಾವಣೆ ಮಾಯವಾಗಿದೆ.

-ಕೇಶವ ಆದಿ

 

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.