ಕೃತಿಯೇ ಮಾತಿನ ಪ್ರತಿನಿಧಿಯಾಗುವ ಆದರ್ಶ 


Team Udayavani, Aug 12, 2022, 6:20 AM IST

ಕೃತಿಯೇ ಮಾತಿನ ಪ್ರತಿನಿಧಿಯಾಗುವ ಆದರ್ಶ 

ವಿಹಾಯ ಕಾಮಾನ್‌ ಯಃ ಸರ್ವಾನ್‌

ಪುಮಾಂಶ್ಚರತಿ ನಿಸ್ಪೃಹಃ|

ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗತ್ಛತಿ||

ಯಾರು ಎಲ್ಲ ವಿಷಯಗಳಿಗೂ ಮನಸೋಲದೆ, ಕೆಟ್ಟ ಆಸೆಗಳಿಗೆ ಬಲಿ ಬೀಳದೆ ನಾನು- ನನ್ನದೆಂಬ ಹಮ್ಮು ತೊರೆದು ಅನುಭವಿಸುತ್ತಾನೆಯೋ ಅವನೇ ಮುಕ್ತಿ ಪಡೆಯುತ್ತಾನೆ.

– ಇದು ವಿಶ್ವದ ಅತಿ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡ ಭಾರತದ ಪ್ರಸಿದ್ಧ ತಣ್ತೀಶಾಸ್ತ್ರೀಯ ಕೃತಿ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಭಗವಾನ್‌ ಹೇಳಿದ ಮಾತು.

ಮಣಿಪಾಲದ ಮಾಂತ್ರಿಕ ಡಾ| ಟಿಎಂಎ ಪೈಯವರ ಜ್ಯೇಷ್ಠ ಪುತ್ರ ಟಿ. ಮೋಹನದಾಸ್‌ ಪೈಯವರು ಜು. 31ರಂದು ತುಂಬು ಬಾಳಿಗೆ ವಿದಾಯ ಹೇಳಿದರು. ಅವರ ಒಟ್ಟು ಜೀವನವನ್ನು ಅವಲೋಕಿಸಿದರೆ ಮೇಲಿನ ಮಾತನ್ನು ಎಂಥವರನ್ನು ಉದ್ದೇಶಿಸಿ ಶ್ರೀಕೃಷ್ಣ ಹೇಳಿದ್ದಿರಬಹುದು ಎಂದು ಅರ್ಥೈಸಬಹುದು. ಶ್ರೀಮದ್ಗಾಂಭೀರ್ಯಕ್ಕೆ ಏನೊಂದೂ ಕೊರತೆ ಇಲ್ಲದಿರುವಾಗ ಮೋಹನದಾಸ್‌ ಪೈಯವರು ಯಾವ ರೀತಿಯ ಆಹಾರ ವಿಹಾರ, ಜೀವನಕ್ರಮವನ್ನು ಅನುಸರಿಸಿದ್ದರು ಎಂಬುದು ಬಹಳ ಮೌಲಿಕವಾಗುತ್ತದೆ. ಮಣಿಪಾಲದಲ್ಲಾಗಲೀ, ದೇಶದಲ್ಲಾಗಲೀ, ವಿದೇಶಗಳಿಗೆ ಹೋದಾಗಲೇ ಆಗಲಿ ನೈತಿಕತೆಯನ್ನು ಬಿಡದೆ ಜೀವನಪೂರ್ತಿಯನ್ನು ಅನುಭವಿಸಿದವರು ಅವರು.

ಗೀತೆಯಲ್ಲಿ ಬರುವ ಇನ್ನೊಂದು ಶ್ಲೋಕ ಇಂತಿದೆ:

ಆರುರುಕ್ಷೋರ್ಮುನೇರ್ಯೋಗಂ

ಕರ್ಮ ಕಾರಣಮುಚ್ಯತೇ|

ಯೋಗಾರೂಢಸ್ಯ ತಸ್ಯೈವ ಶಮಃ ಕಾರಣ ಮುಚ್ಯತೇ||

ಯೋಗ ಸಾಧಕನ ಕುರಿತು ಶ್ರೀಕೃಷ್ಣ ಹೇಳುವಾಗ ಮೋಕ್ಷ ಸಿಗುವವರೆಗೂ ಸಾಧನೆಯನ್ನು ಮುಂದುವರಿಸಬೇಕು. (ಅಪರೋಕ್ಷ) ಜ್ಞಾನ ಬಂದ ಮೇಲೂ ಕರ್ಮವನ್ನು ಬಿಡಬಾರದು. ಹೀಗೆ ಮಾಡಿದರೆ ಮೋಕ್ಷದ ಆನಂದದ ಅಭಿವ್ಯಕ್ತಿಯಲ್ಲಿ ವೃದ್ಧಿಯಾಗುತ್ತದೆ ಎಂಬ ಅಭಿಪ್ರಾಯವನ್ನು ಶ್ರೀಕೃಷ್ಣ ಹೇಳುತ್ತಾನೆ. ಇಲ್ಲಿ ನಾವು ಸಾಮಾನ್ಯವಾಗಿ ಕರ್ಮ ಅಂದರೆ ನಮ್ಮ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಅರ್ಥೈಸುತ್ತೇವೆ. ಈ ವಾಕ್ಯಕ್ಕೆ ಭಾಷ್ಯವನ್ನು ಬರೆಯುವಾಗ ಮಧ್ವಾಚಾರ್ಯರು “ನಾನಾಜನಸ್ಯ ಶುಶ್ರೂಷಾ ಕರ್ತವ್ಯಾ ಕರವನ್ಮಿತೇ’ ಎಂದು ವ್ಯಾಖ್ಯಾನಿಸುತ್ತಾರೆ. ಎಂತಹ ಕರ್ಮವೆಂದರೆ ನಾನಾ ಜನರ ದುಃಖವನ್ನು ನಿವಾರಣೆ ಮಾಡುವ ನಿಸ್ವಾರ್ಥ ಕರ್ಮ. ಇದುವೇ ಭಗವಂತನ ರಾಜ್ಯದ ಪ್ರಜೆಗಳಾದ ನಾವು ತೆರಬೇಕಾದ ತೆರಿಗೆ.

ಮೋಹನದಾಸ್‌ ಪೈಯವರು ತಂದೆಯವರು ಸ್ಥಾಪಿಸಿದ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡಿರುವುದರ ಜತೆ ವಿಶೇಷವಾಗಿ ಮುದ್ರಣ ಮತ್ತು ಮಾಧ್ಯಮ ಸಂಸ್ಥೆಯ ಮೂಲಕ ಅದೆಷ್ಟೋ ಜನರ ಬದುಕಿಗೆ ಊರುಗೋಲಾದರು. ಇಲ್ಲಿ ಉದ್ಯಮಿಯಾಗಿಯೂ ತತ್ತ್ವಜ್ಞಾನದ ರಸಧಾರೆ ಕಂಡುಬರುತ್ತದೆ. ಉದ್ಯಮದಿಂದ ಬಂದ ಲಾಭವನ್ನು ಎಂಜಿಎಂ ಕಾಲೇಜಿನಂತಹ ಸಂಸ್ಥೆಗಳಿಗೆ ದಾನವಾಗಿ ಹಂಚಿದ್ದಾರೆ. ಎಷ್ಟೋ ಬಾರಿ ಶುಲ್ಕ ಏರಿಕೆಯಂತಹ ಸಂದರ್ಭದಲ್ಲಿ ಬಡವರ್ಗದವರಿಗೆ ತೊಂದರೆಯಾಗಬಾರದು ಎಂದು, ನಷ್ಟದಾಯಕ ಸಂಸ್ಥೆಗಳು ಏಕೆ ಎಂಬ ಪ್ರಶ್ನೆ ಬಂದಾಗ ತಡೆಯಾಜ್ಞೆ ಕೊಟ್ಟದ್ದೂ ಟ್ರಸ್ಟ್‌ ಅಧ್ಯಕ್ಷರಾಗಿ ಮೋಹನದಾಸ್‌ ಪೈಯವರೇ. 1990ರ ದಶಕದಲ್ಲಿ ಐಸಿಡಿಎಸ್‌ ಸಂಸ್ಥೆ ಸರಕಾರದ ಕಾನೂನಿಗೆ ಸಿಲುಕಿದಾಗ ಠೇವಣಿದಾರರಿಗೆ ತತ್‌ಕ್ಷಣ ಹಣ ಹಿಂದಿರುಗಿಸಬೇಕು, ಆದರೆ ಕೊಟ್ಟ ಸಾಲವನ್ನು ಹಾಗೆ ವಸೂಲಿ ಮಾಡದೆ ಇರುವ ಸ್ಥಿತಿ ಬಂದೊದಗಿತು. ಸ್ವಂತದ ಆಸ್ತಿಗಳನ್ನು ಮಾರಿ, ಅದರಲ್ಲಿಯೂ ಸಣ್ಣ ಸಣ್ಣ ಠೇವಣಿದಾರರಿಗೆ ಆದ್ಯತೆಯ ಮೇರೆಗೆ ಸುಮಾರು 400 ಕೋ.ರೂ. ಮೊತ್ತವನ್ನು ವಿತರಿಸಿದ ಸಾಧನೆ ಅವರದು. ಇವೆಲ್ಲವನ್ನು ಹೇಳದೆ ಮಾಡಿದ ಹಿರಿಮೆ ಮೋಹನದಾಸ್‌ ಪೈಯವರದು. ಮಾತಿನಂತೆ ಕೃತಿ ಇರಬೇಕು ಎನ್ನುವುದು ಒಂದು ಬಗೆಯ ನೀತಿ, ಇವರದು ಇದಕ್ಕಿಂತ ಒಂದು ಹೆಜ್ಜೆ ಮುಂದಿನದು- ಕೃತಿಯೇ ಮಾತಿನ ಪ್ರತಿನಿಧಿಯಾಗುತ್ತಿತ್ತು… “ಆಡದೆ ಮಾಡುವವನು ರೂಢಿಯೊಳಗುತ್ತಮನು’ ಎಂದು ಸರ್ವಜ್ಞನ ತ್ರಿಪದಿ ಇದೆ.

 

– ಸ್ವಾಮಿ

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.