ಕಂಪ್ಯೂಟರ್ ನಲ್ಲಿ ಕಾಪಿ, ಕಟ್, ಪೇಸ್ಟ್ ಆಯ್ಕೆ ಕಂಡುಹಿಡಿದ ಮಾಂತ್ರಿಕ ಲ್ಯಾರಿ ಟೆಸ್ಲರ್


ಮಿಥುನ್ ಪಿಜಿ, Feb 25, 2020, 6:00 PM IST

TESLER

ಇಂದು ಕಂಪ್ಯೂಟರ್ ಅಥವಾ ಮೊಬೈಲ್ ಕೀ ಬೋರ್ಡ್ ನಲ್ಲಿ ಅತೀ ಹೆಚ್ಚು ಬಳಕೆಯಾಗುವ ಕೀ ಎಂದರೇ ಕಟ್, ಕಾಪಿ, ಪೇಸ್ಟ್. ಒಂದು ಕ್ಷಣ ಈ ಆಯ್ಕೆಗಳು ಇರದಿದ್ದರೇ ಹೇಗೆ ಎಂಬುದನ್ನು ಊಹಿಸಿಕೊಳ್ಳಿ ! ಈ ಫೀಚರ್ ಇಲ್ಲದಿದ್ದರೇ ಯಾವುದೇ ಫೈಲ್ (ಚಿತ್ರ,ವಿಡಿಯೋ, ಇತ್ಯಾದಿ) ಗಳನ್ನು ವರ್ಗಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಡೌನ್ ಲೋಡ್ ಆಯ್ಕೆಯನ್ನು ಹೆಚ್ಚಾಗಿ ಅವಲಂಬಿಸಬೇಕಾಗಿತ್ತು. ಇಂತಹ ಕಟ್, ಕಾಪಿ, ಪೇಸ್ಟ್ ಆಯ್ಕೆಗೆ ನಾಂದಿ ಹಾಡಿದ ಹಾಗೂ ಬ್ರೌಸರ್ ಎಂಬ ಪದ ಹುಟ್ಟು ಹಾಕಿದ ಮಾಂತ್ರಿಕ ವಿಜ್ಞಾನಿ ಎಂದರೇ ಲ್ಯಾರಿ ಟೆಸ್ಲರ್.

ಕಂಪ್ಯೂಟರ್ ಪ್ರೋಗ್ರಾಂನಲ್ಲಿ ಕಟ್, ಕಾಪಿ, ಪೇ್ಸ್ಟ್ ಎಂಬ ಪರಿಕಲ್ಪನೆ ಗಣಕಯಂತ್ರ ಜಗತ್ತಿಗೆ  ಪರಿಚಯಿಸಿದ ನಂತರ ಅದು ಪ್ರಪಂಚದಾದ್ಯಂತ ಬಹುಪಯೋಗಿ ಸೌಲಭ್ಯವಾಗಿ ಮಹತ್ವ ಪಡೆದುಕೊಂಡಿತು.  ಕಟ್, ಕಾಪಿ, ಪೇಸ್ಟ್ ಸೇರಿದಂತೆ ವ್ಯೆಯಕ್ತಿಕ ಕಂಪ್ಯೂಟರಿಂಗ್ ಕ್ಷೇತ್ರದಲ್ಲಿ ಅನೇಕ ಮೊದಲುಗಳನ್ನು ಪರಿಚಯಿಸಿದ ಚಾಣಾಕ್ಷ ಈ ಲ್ಯಾರಿ ಟೆಸ್ಲರ್.  ಸ್ಟೀವ್ ಜಾಬ್ಸ್, ಬಿಲ್ ಗೇಟ್ಸ್ ರಷ್ಟೇ ಖ್ಯಾತರಾದ ಟೆಸ್ಲರ್, ಕಂಪ್ಯೂಟರ್ ಯಂತ್ರಗಳನ್ನು ಇಂಜಿನಿಯರಿಂಗ್ ಮಾಡದೇ ಇರುವವರೂ ಸಹ ಬಳಸಬಲ್ಲದಷ್ಟು ಸರಳೀಕರಣಗೊಳಿಸಿದ್ದರು.

1945 ಏಪ್ರಿಲ್ 24ರಂದು  ನ್ಯೂಯಾರ್ಕ್ ನಲ್ಲಿ ಲಾರೆನ್ಸ್ ಗೋರ್ಡನ್ ಟೆಸ್ಲರ್ ಜನಿಸಿದ. ಈತನ ತಂದೆ ಅರವಳಿಕೆ ತಜ್ಞರಾಗಿದ್ದರು. ಪ್ರೌಢ ಶಾಲೆಯಲ್ಲಿರುವಾಗಲೇ ಟೆಸ್ಲರ್ ಗೆ ಕಂಪ್ಯೂಟರ್ ತಂತ್ರಾಂಶದ ಕಡೆ ಒಲವು ಹೆಚ್ಚಿದ್ದನ್ನು ಗಮನಿಸಿದ ಶಿಕ್ಷಕರು ಅದರ ಕುರಿತೇ ಹೆಚ್ಚಿನ ತರಬೇತಿ ನೀಡಿದ್ದರು. ನಂತರ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸೇರಿದಾಗ ಪ್ರತಿವಾರ ಅರ್ಧಗಂಟೆ ಸಮಯ ಕಂಪ್ಯೂಟರ್ ಮುಂದೆ ಕಳೆಯಲು ಅವಕಾಶ ಸಿಕ್ಕಿತ್ತು. ಇದನ್ನು ಸದುಪಯೋಗ ಪಡಿಸಿಕೊಂಡ ಟೆಸ್ಲರ್ ಪ್ರೋಗ್ರಾಂ ಡಿಸೈನ್ ನತ್ತ ಹೆಚ್ಚಿನ ಗಮನ ಹರಿಸಿದ. ತದನಂತರದಲ್ಲಿ ಸ್ಟ್ಯಾನ್ ಫೋರ್ಡ್ ವಿವಿಯಲ್ಲಿ ಕಂಪ್ಯೂಟರ್ ವಿಜ್ಞಾನ ವ್ಯಾಸಂಗ ಮಾಡಿದ್ದನು. ಅದೇ ವೇಳೆಗೆ(1960)  ಸ್ಟ್ಯಾನ್ ಫೋರ್ಢ್ ಕೃತಕ ಬುದ್ದಿಮತ್ತೆ ಪ್ರಯೋಗಾಲಯದಲ್ಲಿ (ಎಸ್ ಎಐಎಲ್) ವೃತ್ತಿ ಜೀವನ ಆರಂಭಿಸುವ ಅವಕಾಶ ದೊರಕಿತು. 10 ವರ್ಷಗಳ ನಂತರ ಕೃತಕ ಬುದ್ದಿಮತ್ತೆ ಎಂಬುದು ಹಲವು ವರ್ಷಗಳ ಕಾಲ ಬಳಸಬಹುದಾದ ತಂತ್ರಜ್ಞಾನವಲ್ಲ ಎಂದು ಅಭಿಪ್ರಾಯಪಟ್ಟು ರಾಜಿನಾಮೆ ನೀಡಿದನು. ಈ ವೇಳೆಗೆ ತನ್ನ ಕಾಲೇಜು ಗೆಳತಿಯನ್ನು ವಿವಾಹವಾಗಿ ಕೆಲವೇ ವರ್ಷಗಳಲ್ಲಿ ವಿಚ್ಚೇದನ ಪಡೆದನು.

1973ರಲ್ಲಿ ಜೆರಾಕ್ಸ್ ಪಾಲೋ ಅಲ್ಟೋ ಸಂಶೋಧನಾ ಕೇಂದ್ರದಲ್ಲಿ(PARC)  ಕೆಲಸ ಮಾಡುವಾಗ ಕಾಪಿ, ಕಟ್. ಪೇಸ್ಟ್ ಕ್ರಿಯೆಯನ್ನು ಮೊದಲಿಗೆ ಕಂಡು ಹಿಡಿದ ಟೆಸ್ಲರ್, ಆ್ಯಪಲ್ ಕಂಪ್ಯೂಟರ್ ಅಭಿವೃದ್ಧಿ ಹಂತದಲ್ಲಿ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಸುಮಾರು 20 ವರ್ಷಗಳ ಕಾಲ ಆ್ಯಪಲ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. 1983ರಲ್ಲಿ ಆ್ಯಪಲ್ ಕಂಪೆನಿಯು ಈ ತಂತ್ರಗಾರಿಕೆಯನ್ನು ತನ್ನ ಸಾಫ್ಟ್ ವೇರ್ ಗಳಲ್ಲಿ ಆಳವಡಿಸುವ ಮೂಲಕ ಅದನ್ನು ಇನ್ನಷ್ಟು ವ್ಯಾಪಕಗೊಳಿಸಿತು.

ಆ ಬಳಿಕ ಟೈಪಿಂಗ್ ನಲ್ಲಿ ಕಾಪಿ, ಕಟ್ ಪೇಸ್ಟ್ ಸೌಲಭ್ಯ ಬಹಳ ಸಹಕಾರಿಯಾಯಿತು. ಟೈಪಿಂಗ್ ನಲ್ಲಿ ತಪ್ಪುಗಳು ಸಂಭವಿಸಿದಾಗ ಅದನ್ನು ಸರಿಪಡಿಸುವುದು ಬಹಳ ಸುಲಭವಾಯಿತು. ಒಂದೇ ಪದ, ವಾಕ್ಯ, ಹಲವು ಕಡೆ ಬಳಸುವಾಗ ಪದೇ ಪದೇ ಟೈಪ್ ಮಾಡುವ ಪ್ರಮೇಯವೂ ತಪ್ಪಿತು. 1976ರಲ್ಲಿ ಟೆಸ್ಲರ್ ‘ಬ್ರೌಸರ್’ ಎಂಬ ಶಬ್ದವನ್ನು ಹುಟ್ಟು ಹಾಕಿದ್ದರು. ಟೆಕ್ಸ್ ಎಡಿಟರ್ಸ್ ಮತ್ತು ಆರಂಭಿಕ ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್ ಗಳ ಅಭಿವೃದ್ದಿಯಲ್ಲಿ ಈ ಸಂಶೋಧನೆಯೇ ಪ್ರಮುಖ ಪಾತ್ರವಹಿಸಿತ್ತು.

ಲೀಸಾ, ಮ್ಯಾಸಿಂತೋಸ್, ನ್ಯೂಟನ್ ಕಂಪ್ಯೂರ್ ನ  ಇಂಟರ್ ಫೇಸ್ ಡಿಸೈನ್ ಮಾಡುವಲ್ಲಿ ಇವರ  ಕೊಡುಗೆ ದೊಡ್ಡದಿದೆ. 1997ರಲ್ಲಿ ಆ್ಯಪಲ್ ಸಂಸ್ಥೆಯನ್ನು ತೊರೆದು ಲ್ಯಾರಿ ಟೆಸ್ಲರ್ 2001ರಿಂದ 2005ರವರೆಗೂ ಅಮೆಜಾನ್ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅದಾದ ನಂತರ ಯಾಹೂದಲ್ಲಿಯೂ ಕೂಡ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು 2008ರಲ್ಲಿ ವೃತ್ತಿಜೀವನದಿಂದ ದೂರ ಸರಿದಿದ್ದರು. 2009ರಿಂದ ಸ್ವತಂತ್ರ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು.

ಟೆಸ್ಲರ್  74ನೇ  ವಯಸ್ಸಿನಲ್ಲಿ ಫೆಬ್ರವರಿ 16, 2020ರಂದು ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದರು. ಇವರ  ಅಗಲಿಕೆಗೆ ಟೆಕ್ ಲೋಕದ ದಿಗ್ಗಜ ಸಂಸ್ಥೆಗಳಾದ ಜೆರಾಕ್ಸ್, ಆ್ಯಪಲ್, ಸೇರಿದಂತೆ  ಅನೇಕ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿವೆ. 70ರ ದಶಕದಲ್ಲಿ ಕಂಪ್ಯೂಟರ್ ಅಭಿವೃದ್ಧಿ ಮಾಡಲು ಟೆಸ್ಲರ್ ಸಾಕಷ್ಟು ಕೊಡುಗೆ ನೀಡಿದ್ದರು. ಇಂದು ನಿಮ್ಮ ಕೆಲಸ ಸರಳವಾಗಲು ಟೆಸ್ಲರ್ ಅವರ ಕ್ರಾಂತಿಕಾರೀ ಅನ್ವೇಷಣೆಗಳೇ ಕಾರಣ ಎಂದು ಜೆರಾಕ್ಸ್ ಸಂಸ್ಥೆಯು ಅಭಿಪ್ರಾಯಪಟ್ಟಿತ್ತು.

-ಮಿಥುನ್ ಮೊಗೇರ

ಟಾಪ್ ನ್ಯೂಸ್

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

2-thirthahalli

ಪ್ರಜ್ವಲ್ ರೇವಣ್ಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಮಹಿಳಾ ಕಾಂಗ್ರೆಸ್ ಘಟಕ ಆಗ್ರಹ

ಉತ್ತರದವರು ಸಿಎಂ ಆಗಲು ಬಿಜೆಪಿ ಗೆಲ್ಲಿಸಿ; ಬಸನಗೌಡ ಪಾಟೀಲ

ಉತ್ತರದವರು ಸಿಎಂ ಆಗಲು ಬಿಜೆಪಿ ಗೆಲ್ಲಿಸಿ; ಬಸನಗೌಡ ಪಾಟೀಲ

1-sirsi

Modi ಬಂದಿದ್ದು ಕಾಂಗ್ರೆಸ್‌ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.