113 ಕೆಜಿಯಿಂದ 63 ಕೆಜಿವರೆಗೆ ಕಾರ್ಕಳದ ರಜತ್ ಶೆಣೈ ಯಶೋಗಾಥೆ


Team Udayavani, Jul 19, 2018, 10:29 AM IST

rajatha-yana-600.jpg

‘ಮನಸ್ಸಿದ್ದರೆ ಮಾರ್ಗ…’  ಎಂಬ ಆಡುಮಾತಿಗೆ ಸರಿಹೊಂದುವಂತಹ ವಿಚಾರವಿದು. ಕಾರ್ಕಳ ಎಂಬ ಪುಟ್ಟ ಊರಿನ ರಜತ್ ಶೆಣೈ ಎಂಬ 23 ವರ್ಷದ ಯುವಕ ಬರೋಬ್ಬರಿ 113 ಕೆ.ಜಿ.ಗಳಿಂದ 63 ಕೆ.ಜಿಗಳಿಗೆ ತನ್ನ ದೇಹವನ್ನು ಮಾರ್ಪಾಡುಮಾಡಿಕೊಂಡಿರುವ ಹಿಂದೆ ರೋಚಕ ವಿಷಯಗಳಿವೆ. ಒಂದೂವರೆ ವರ್ಷಗಳ ಅವಧಿಯಲ್ಲಿ ರಜತ್ ಅವರ ಕಠಿಣ ಪರಿಶ್ರಮ ಇಂದು ಅವರನ್ನು ‘ಫಿಟ್’ ವ್ಯಕ್ತಿಯನ್ನಾಗಿಸಿದೆ. ಮತ್ತು ತನ್ನ ದೇಹ ಮಾರ್ಪಾಡು ವಿಧಾನಕ್ಕೆ ರಜತ್ ಆರಿಸಿಕೊಂಡಿದ್ದು ನೈಸರ್ಗಿಕ ವಿಧಾನಗಳನ್ನಷ್ಟೆ. ಇವುಗಳಲ್ಲಿ ಈಜು, ಸೈಕ್ಲಿಂಗ್, ಸರಿಯಾದ ರೀತಿಯ ದೇಹ ವ್ಯಾಯಾಮ ಮತ್ತು ಸಮಂಜಸ ಆಹಾರ ಪದ್ಧತಿ ಸೇರಿದೆ. ಹಾಗಾದರೆ ರಜತ್ ಅವರ ಈ ಕಠಿಣ ಪರಿಶ್ರಮದ ಹಿಂದಿದ್ದ ಅಂಶಗಳೇನು ಎಂಬುದನ್ನು ನಾವೀಗ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ಒಂದೂವರೆ ವರ್ಷಗಳ ಹಿಂದೆ…
113 ಕೆ.ಜಿ.ಗಳ ದೇಹ ತೂಕವನ್ನು ಹೊತ್ತುಕೊಂಡು ವಿಧವಿಧವಾಗಿ ಬವಣೆಪಡುತ್ತಿದ್ದ ರಜತ್ ಅವರಿಗೆ ಎಲ್ಲರಂತೆಯೇ ಸ್ಲಿಮ್ ಆ್ಯಂಡ್ ಟ್ರಿಮ್ ಆಗಿರಬೇಕು ಎಂಬ ಕನಸಿದ್ದುದು ಸುಳ್ಳಲ್ಲ. ಆದರೆ ಆ ಸಮಯದಲ್ಲಿ ಅವರ ದೇಹದಲ್ಲಿದ್ದ ಕೊಬ್ಬಿನಾಂಶ 52 ರಿಂದ 55%! ಇಷ್ಟು ಅಗಾಧ ಪ್ರಮಾಣದ ಕೊಬ್ಬನ್ನು ಕರಗಿಸುವ ವಿಧಾನವಾದರೂ ಯಾವುದು? ಜಿಮ್ ಗೆ ಹೋಗುವುದೇ, ತಿನ್ನುವುದನ್ನು ಬಿಡುವುದೇ ಅಥವಾ ಕೊಬ್ಬನ್ನು ಕರಗಿಸುವ ಔಷಧಿಗಳನ್ನ ತೆಗೆದುಕೊಳ್ಳುವುದೇ… ಹೀಗೆ ಗೊಂದಲದಲ್ಲಿದ್ದ ರಜತ್ ಅವರ ಸಹಾಯಕ್ಕೆ ಬಂದಿದ್ದು ಬಾಲಿವುಡ್ ನಟ ಅಮೀರ್ ಖಾನ್. ಹೌದು, ನಟ ಅಮೀರ್ ಖಾನ್ ಅವರು ತಮ್ಮ ‘ದಂಗಲ್’ ಚಿತ್ರದಲ್ಲಿ ಎರಡು ಶೇಡ್ ಗಳ ಪಾತ್ರವನ್ನು ನಿರ್ವಹಿಸಿದ್ದು ಚಿತ್ರಪ್ರೇಮಿಗಳಿಗೆ ತಿಳಿದಿರುವ ವಿಚಾರವೇ. ಅಲ್ಲಿ ಅಮೀರ್ ಖಾನ್ ಬಾಡಿ ಫಾರ್ಮೇಶನ್ ಗೆ ಒಳಗಾಗಿದ್ದರು. ಇದರಿಂದ ಪ್ರೇರೇಪಿತರಾದ ರಜತ್ ಅವರು ದೇಹ ಸ್ವರೂಪ ಬದಲಾವಣೆ ಸಂಬಂಧಿತ ಮಾಹಿತಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಅದೊಂದು ದಿನ ದೃಢ ನಿರ್ಧಾರಕ್ಕೆ ಬಂದೇ ಬಿಟ್ಟರು.

ಶುರುವಾಯ್ತು ಕೊಬ್ಬು ಕರಗಿಸುವ ಮಹಾಯಜ್ಞ!
ತನ್ನ ದೇಹಕ್ಕೊಂದು ಸುಂದರ ರೂಪ ನೀಡಲೇಬೇಕೆಂಬ ಹಠಕ್ಕೆ ಬಿದ್ದ ರಜತ್ ಶೆಣೈ ಬಾಡಿ ಫಾರ್ಮೇಶನ್ ಕಾರ್ಯಕ್ಕೆ ಇಳಿದೇ ಬಿಡುತ್ತಾರೆ. ಬೆಳಿಗ್ಗೆ ಐದೂವರೆಯಿಂದ ಪ್ರಾರಂಭಗೊಂಡ ಅವರ ದಿನಚರಿ ಬಿಸಿನೀರಿನ ಸೇವನೆಯ ಬಳಿಕ, ಒಂದುಗಂಟೆಗಳ ಈಜು, ಬಳಿಕ ಜಿಮ್ ನಲ್ಲಿ ಸರೀಯಾದ ರೀತಿಯ ವರ್ಕೌಟ್, ದಿನಕ್ಕೆ ಕನಿಷ್ಠ 30 ಕಿ,ಮೀ.ಗಳ ಸೈಕಲ್ ಸವಾರಿ, ಪ್ರತೀ 2 ಗಂಟೆಗಳಿಗೊಮ್ಮೆ ಆರೋಗ್ಯಕರ ಆಹಾರ ಸೇವನೆ… ಹೀಗೆ ತನ್ನ ದಿನಚರಿಗೊಂದು ನಿರ್ಧಿಷ್ಠ ಚೌಕಟ್ಟನ್ನು ಹಾಕಿಕೊಂಡು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದ ರಜತ್ ಅವರಿಗೆ ಪ್ರಾರಂಭದಲ್ಲಿ ಅಷ್ಟೇನೂ ಯಶಸ್ಸು ಸಿಗದಿದ್ದರೂ ಹೀಗೆ ಮಾಡಿದರೆ ತನ್ನ ದೇಹ ಬಗ್ಗುತ್ತದೆ ಎಂಬ ವಿಶ್ವಾಸ ಮೂಡಲು ಪ್ರಾರಂಭವಾದದ್ದು ಮಾತ್ರ ಸುಳ್ಳಲ್ಲ.

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.