ದಿನಭವಿಷ್ಯ: ಇಂದು ಈ ರಾಶಿಯವರು ವಾಹನ, ಗ್ಯಾಸ್, ವಿದ್ಯುತ್ ಗಳಿಂದ ಜಾಗರೂಕರಾಗಿರಿ…
Team Udayavani, Feb 22, 2021, 7:30 AM IST
ಮೇಷ: ಆರ್ಥಿಕವಾಗಿ ಹಣವು ಹೆಚ್ಚು ಒಗ್ಗೂಡಿದರೂ ಖರ್ಚು ಅಷ್ಟೇ ಕಂಡುಬರುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಹಾಗೂ ಅದಕ್ಕಾಗಿ ಖರ್ಚುಗಳು ಕೂಡಾ ಬರುವುದು. ಆರೋಗ್ಯದಲ್ಲಿ ಏರುಪೇರು.
ವೃಷಭ: ನಿರುದ್ಯೋಗಿಗಳಿಗೆ ಸಿಕ್ಕಿದ ಉದ್ಯೋಗದಲ್ಲಿ ತೃಪ್ತಿ ಪಡಬೇಕಾದೀತು. ಖರ್ಚು ಅತಿಯಾಗಿ ಕಂಡು ಬಂದು ತೆಲೆಕೆಟ್ಟು ಹೋದೀತು. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಸಹಕಾರವು ದೊರಕಲಿದೆ.
ಮಿಥುನ: ಅಧಿಕಾರಿ ವರ್ಗದವರಿಂದ ಅನಾವಶ್ಯಕ ಜವಾಬ್ದಾರಿಯು ತಲೆಗೆ ಬರಲಿದೆ. ಆದರೆ ಅದನ್ನು ನಿಭಾಯಿಸಿಕೊಂಡು ಹೋಗುವುದರಲ್ಲಿ ನಿಮ್ಮ ಜಾಣ್ಮೆ ಅಡಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಮುಂಭಡ್ತಿ ದೊರಕಲಿದೆ.
ಕರ್ಕ: ಸಾಮಾಜಿಕ ರಂಗದಲ್ಲಿ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಮಯವೇ ಸಾಲದಾಗಲಿದೆ. ಸಣ್ಣಪುಟ್ಟ ಬದಲಾವಣೆಗಳು ಶಿಕ್ಷಣ ಕ್ಷೇತ್ರದಲ್ಲಿ ಕಂಡು ಬರಲಿದೆ. ಸಾಂಸಾರಿಕವಾಗಿ ತೃಪ್ತಿ ಇದೆ.
ಸಿಂಹ: ಸಾಂಸಾರಿಕವಾಗಿ ದಾಯಾದಿಗಳ ಪೀಡೆಗಳು ಕಡಿಮೆಯಾಗಿ ದಾಂಪತ್ಯದಲ್ಲಿ ಸುಖ ಸಮಾಧಾನಗಳು ಕಂಡು ಬರುವುದು. ಆದರೂ ತಲೆಯಲ್ಲಿ ಉದ್ವೇಗವು ಇರುವುದು. ಸಮಾಧಾನಕ್ಕಾಗಿ ಗಾಯತ್ರಿ ಮಂತ್ರ ಹೇಳಿರಿ.
ಕನ್ಯಾ: ಅವಿವಾಹಿತರಿಗೆ ವೈವಾಹಿಕ ಭಾಗ್ಯವು ನಿರ್ವಿಘ್ನವಾಗಿ ನೆರವೇರಲಿದೆ. ಆರ್ಥಿಕವಾಗಿ ಖರ್ಚು ಕಂಡು ಬಂದರೂ ಹಣವು ಕೈ ಸೇರಲಿದೆ. ವ್ಯಾಪಾರ, ಉದ್ಯಮದಲ್ಲಿ ಲಾಭಾಂಶವು ಹಂತ ಹಂತವಾಗಿ ಏರಲಿದೆ.
ತುಲಾ: ಅವಿವಾಹಿತರಿಗೆ ಇದು ಸಕಾಲವಲ್ಲ. ಸಾಂಸಾರಿಕ ಜೀವನದಲ್ಲಿ ಸ್ವಲ್ಪ ವಿರಸ ಮೂಡಬಹುದು. ನೂತನ ಕಾರ್ಯಾರಂಭಕ್ಕೆ ದುಡುಕದಿರಿ. ತಾಳ್ಮೆ ಸಮಾಧಾನವಿರಲಿ. ಮಕ್ಕಳಿಗೆ ಉತ್ತಮ ಭವಿಷ್ಯವಿರುವುದು.
ವೃಶ್ಚಿಕ: ಪ್ರಯತ್ನಕ್ಕೆ ಹೆಚ್ಚಿನ ಒತ್ತು ನೀಡಿದ್ದಲ್ಲಿ ನಿಮ್ಮ ಕಾರ್ಯವು ಕೈಗೂಡಲಿದೆ. ವೃತ್ತಿರಂಗದಲ್ಲಿ ನಿಮ್ಮ ಸ್ಥಾನಮಾನಗಳು ವೃದ್ಧಿಯಾಗುತ್ತಲೇ ಹೋಗುವುದು. ಕೌಟುಂಬಿಕವಾಗಿ ಸಂತೋಷ, ಖುಶಿ ದೊರಕಲಿದೆ.
ಧನು: ನೀವು ಸದಾಕಾಲ ಚಟುವಟಿಕೆಯಿಂದ ಕಾರ್ಯಪ್ರವೃತ್ತರಾಗಬೇಕಾಗುತ್ತದೆ. ದೂರ ಸಂಚಾರದಿಂದ ನಿಮಗೆ ಪ್ರಗತಿಯು ಕಂಡು ಬರುವುದು. ಸಾಮಾಜಿಕ ರಂಗದಲ್ಲಿ ಉನ್ನತ ಸ್ಥಾನಮಾನ ದೊರಕಲಿದೆ.
ಮಕರ: ಆರ್ಥಿಕ ಸ್ಥಿತಿಯು ಒಂದು ಹಂತದಲ್ಲಿ ಅಭಿವೃದ್ಧಿ ಮಾಡುತ್ತಿದ್ದರೂ. ಗೃಹ ಯಾ ನಿವೇಶನ ಖರೀದಿ ನಡೆದು ಕೈ ಖಾಲಿಯಾಗಲಿದೆ. ಆರೋಗ್ಯ ಸ್ಥಿತಿಯು ತೃಪ್ತಿದಾಯಕವಾಗಿದ್ದರೂ ತಾಪತ್ರಯಗಳು ಮುಗಿಯುವುದಿಲ್ಲ.
ಕುಂಭ: ವಿದ್ಯಾರ್ಥಿಗಳಿಗೆ ತಕ್ಕಮಟ್ಟಿನ ಯಶಸ್ಸು ಕಂಡು ಬರಲಿದೆ. ಮಕ್ಕಳಿಂದ ಜಾಗ ಖರೀದಿಯ ಮಾತುಕತೆ ನಡೆದೀತು. ವೃತ್ತಿರಂಗದಲ್ಲಿ ನಿರ್ಧಿಷ್ಟವಾದ ಯೋಜನೆಗಳು ನಕಾರ್ಯಗತವಾಗಲಿದೆ. ಲಾಭಾಂಶ ಕಡಿಮೆ.
ಮೀನ: ಹಿರಿಯರ ಸಲಹೆಗಳು ನಿಮಗೆ ಮಾರ್ಗದರ್ಶನ ಕೊಡಲಿದೆ. ವಾಹನ, ಗ್ಯಾಸ್, ವಿದ್ಯುತ್ ಗಳಿಂದ ಸ್ವಲ್ಪ ಜಾಗ್ರತೆ ಮಾಡಿರಿ. ಮಂಗಲ ಕಾರ್ಯಕ್ಕೆ ಸಕಾಲವಿದು. ಒಪ್ಪಿಗೆ ಕೊಡುವುದು ನಿಮ್ಮ ಕೈಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ