Shri Ram Mandir ಸೌಹಾರ್ದ,ರಾಷ್ಟ್ರೀಯತೆಯ ಪ್ರತೀಕ: ಭಕ್ತಸಾಗರದ ಕೊರಗು ನಿವಾರಣೆ


Team Udayavani, Jan 22, 2024, 5:30 AM IST

1-sadasdsa

ವಿಶ್ವದ ಪಾರಂಪರಿಕ ನಗರಿ ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಭೂಮಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಲಲ್ಲಾನ ಪ್ರಾಣಪ್ರತಿಷ್ಠೆ ಜ. 22ರ ಸೋಮವಾರ ನಡೆಯಲಿದೆ. ಈ ಮೂಲಕ ಜಗತ್ತಿನ ಕೋಟ್ಯಂತರ ಜನರ ಐದು ಶತಮಾನಗಳ ಕನಸು ನನಸಾಗುತ್ತಿದೆ. ರಾಮಭಕ್ತರ ಬಲು ನಿರೀಕ್ಷೆಯ ಅಪೇಕ್ಷೆಯೊಂದು ಈಡೇರುತ್ತಿರುವ ಪರ್ವಕಾಲ ಇದಾಗಿದೆ. ಶ್ರೀರಾಮನ ಜನ್ಮಸ್ಥಳದಲ್ಲಿ ಆತನಿಗೊಂದು ಭವ್ಯ ದೇಗುಲವಿಲ್ಲ ಎಂಬ ಭಕ್ತಸಾಗರದ ಕೊರಗು ನಿವಾರಣೆಯಾಗಿ ನಿರ್ಮಾಣಗೊಂಡಿರುವ ಭವ್ಯ ವಾದ, ಬೃಹತ್‌ ದೇಗುಲದಲ್ಲಿ ಬಾಲರಾಮ ಪ್ರತಿಷ್ಠೆಗೊಳ್ಳುತ್ತಿದ್ದಾನೆ. ಈ ಸುಂದರ, ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಅಯೋಧ್ಯೆಯತ್ತ ದೃಷ್ಟಿ ಹರಿಸಿದೆ. ಸಹಜವಾಗಿಯೇ ಜಗತ್ತಿನಾದ್ಯಂತದ ಭಕ್ತರು ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಶ್ರೀರಾಮ ಕೇವಲ ಪುರಾಣ ಪಾತ್ರಕ್ಕಷ್ಟೇ ಸೀಮಿತವಾಗಿರದೆ ಇಡೀ ಸಮಾಜಕ್ಕೆ ಓರ್ವ ಆದರ್ಶಪುರುಷನಾಗಿ ಬೆಳೆದು ನಿಂತಿದ್ದಾನೆ. ಈ ಭರತಖಂಡದಲ್ಲಿ, ವಿಶ್ವದ ಕೋಟ್ಯಂತರ ಭಕ್ತರ, ಅನುಯಾಯಿಗಳ ಪಾಲಿಗೆ ಆರಾಧ್ಯದೇವತೆಯಾಗಿ ತಲೆತಲಾಂತರಗಳಿಂದ ಜನ ಮಾನಸದಲ್ಲಿ ಅಚ್ಚಳಿಯದೆ ಶ್ರೀರಾಮ ಉಳಿದಿ ದ್ದಾನೆಂದರೆ ಆತ ಮಾನುಷಭಾ ವದಲ್ಲಿರುವ ದೈವತ್ವ ಎಂದರೆ ಅದು ಅತಿಶ ಯೋ ಕ್ತಿಯಲ್ಲ. ಇಂತಹ ಮರ್ಯಾದಾ ಪುರುಷೋತ್ತಮನ ಜನ್ಮಸ್ಥಾನದಲ್ಲಿ ಆತನಿಗೊಂದು ಸದೃಢ ದೇವಾಲಯ ನಿರ್ಮಾಣವಾಗಬೇಕೆಂಬ ಶತಮಾನಗಳ ಹೋರಾಟದ ಫ‌ಲಶ್ರುತಿಯಾಗಿ ಸುಂದರ ಮಂದಿರ ತಲೆ ಎತ್ತಿ ನಿಂತಿದೆ. ಚರಿತ್ರೆಯ ಪ್ರಮಾದಗಳನ್ನು ಸರಿಪಡಿಸುವ ಕಾರ್ಯವಾಗಿದೆ. ಶ್ರೀರಾಮನ ಜೀವನಗಾಥೆಯನ್ನು ನಾವು ಸಂಪೂರ್ಣವಾಗಿ ಮನನ ಮಾಡಿಕೊಂಡದ್ದೇ ಆದಲ್ಲಿ ಶ್ರೀರಾಮನ ಪಾಲಿಗೆ ಇದು ಅಸಹಜವೇನಲ್ಲ. ಆತ ತನ್ನ ಜೀವನದುದ್ದಕ್ಕೂ ಸಾಕಷ್ಟು ಸಂಕಷ್ಟ, ಸಮಸ್ಯೆ, ಪರೀಕ್ಷೆ, ಸವಾಲುಗಳನ್ನು ಎದುರಿಸಿಕೊಂಡೇ ಬಂದವನು. ಅದೇ ದೃಷ್ಟಿಕೋನದಲ್ಲಿ ನೋಡುವುದಾದರೆ ಇದು ಕೂಡ ಶ್ರೀರಾಮನ ಶಕ್ತಿಯನ್ನು ಮತ್ತೂಮ್ಮೆ ಸಾಬೀತುಪಡಿಸಿದಂತಾಗಿದೆ. ತನ್ಮೂಲಕ ಶ್ರೀರಾಮನ ಮತ್ತೂಂದು ವನವಾಸವೂ ಅಂತ್ಯಗೊಂಡು, ಪುರುಷೋತ್ತಮನ ಪುನರಾಗಮನಕ್ಕೆ ಅಯೋಧ್ಯೆ ಮಾತ್ರವಲ್ಲ ಇಡೀ ವಿಶ್ವವೇ ಸಾಕ್ಷಿಯಾ ಗುತ್ತಲಿದೆ.

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮ ಮಂದಿರ ಕೇವಲ ಸನಾತನ ಧರ್ಮೀಯರ ನಂಬಿಕೆ, ಭಕ್ತಿಗಷ್ಟೇ ಸೀಮಿತವಾಗಿರದೆ, ಸಮಸ್ತ ಭರತ ಕೋಟಿಯ ರಾಷ್ಟ್ರಭಕ್ತಿಯ, ರಾಷ್ಟ್ರೀಯತೆಯ ಸಂಕೇತವೂ ಹೌದು. ಶ್ರೀರಾಮ ಸಂಯಮ, ಧರ್ಮನಿಷ್ಠೆ, ವೀರತ್ವ, ಸಭ್ಯತೆ, ಮಾನವೀಯತೆ, ಸಚ್ಚಾರಿತ್ರ್ಯ, ಕರುಣಾಮಯಿ…ಹೀಗೆ ಸಕಲ ಗುಣ ಸಂಪನ್ನ. ಈ ಕಾರಣದಿಂದಾಗಿಯೇ ಆತ ಧರ್ಮಾತೀತ, ದೇಶಾತೀತ, ಕಾಲಾತೀತ ಆದರ್ಶ ಪುರುಷ. ಈ ಕಾರಣಕ್ಕಾಗಿ ರಾಮ ಮಂದಿರ ದೇಶಗಳ ಗಡಿಯ ಎಲ್ಲೆಯನ್ನು ಮೀರಿ ವಿಶ್ವಾದ್ಯಂತದ ಜನರ ಗಮನವನ್ನು ಸೆಳೆದಿದೆ. ಜನ್ಮಸ್ಥಳದಲ್ಲಿ ಶ್ರೀರಾಮನ ದೇಗುಲ ನಿರ್ಮಾಣಗೊಂಡು ಶ್ರೀರಾಮ ಅಲ್ಲಿ ನೆಲೆಯಾಗುತ್ತಿದ್ದಾನೆ. ಇಲ್ಲಿಗೆ ನಮ್ಮನ್ನಾಳುವವರು, ಧರ್ಮ ಸಂಸ್ಥಾಪಕರು, ಶ್ರೀರಾಮ ಭಕ್ತರು ವಿರಮಿಸುವಂತಿಲ್ಲ. ಶ್ರೀರಾಮ ಪ್ರತಿಯೊಂದು ಸಂಕಷ್ಟ, ಸವಾಲುಗಳನ್ನು ಎದುರಿಸಿದ ಬಳಿಕ ಆ ನೆಲದಲ್ಲಿ ಶಾಂತಿಯನ್ನು ಪುನರ್‌ ಸ್ಥಾಪಿಸಿದ್ದೇ ಅಲ್ಲದೆ ಮಾದರಿ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಿದ್ದನು. ಇಂತ ಹುದೇ ರಾಮರಾಜ್ಯವನ್ನು ಕಾಣುವ ಸೌಭಾಗ್ಯ ಈ ದೇಶವಾಸಿಗಳದ್ದಾಗಬೇಕು. ಈ ದಿಸೆಯಲ್ಲಿ ಇಡೀ ವ್ಯವಸ್ಥೆ ಒಗ್ಗೂಡಿ ಕಾರ್ಯೋನ್ಮುಖವಾಗಬೇಕು. ಶ್ರೀರಾಮನ ಭವ್ಯ ದೇಗುಲ ರಾಷ್ಟ್ರೀಯತೆ, ಸೌಹಾರ್ದತೆಯ ಪ್ರತೀಕವಾಗಿ ಮುಂದಿನ ದಿನಗಳಲ್ಲಿ ಪ್ರಜ್ವಲಿಸಲಿ ಎಂಬುದು ದೇಶವಾಸಿಗಳ ಸದಾಶಯ.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.