19 ಏಜಿನ ಆವೇಗಕ್ಕೆ ಸೆನ್ಸಾರ್ ಮಂಡಳಿಯ ಮೆಚ್ಚುಗೆ!
Team Udayavani, Nov 9, 2019, 7:40 PM IST
ಕಳೆದ ಒಂದಷ್ಟು ದಿನಗಳಿಂದ ಹೊಸಬರೇ ಸೇರಿ ರೂಪಿಸಿರುವ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಭಾರೀ ಸೌಂಡು ಮಾಡುತ್ತಿದೆ. ಹೇಳಿಕೇಳಿ ಇದೀಗ ಕನ್ನಡ ಚಿತ್ರರಂಗ ಹೊಸ ಅಲೆಯ ಚಿತ್ರಗಳಿಂದ ಸಮೃದ್ಧಗೊಂಡಿದೆ. ಈ ಘಳಿಗೆಯಲ್ಲಿ ಹೊಸಾ ತಂಡವೊಂದು ಎಂಟ್ರಿ ಕೊಟ್ಟಿತೆಂದರೆ ಪ್ರೇಕ್ಷಕರ ಚಿತ್ತ ತಾನೇ ತಾನಾಗಿ ಅದರತ್ತ ನೆಟ್ಟುಕೊಳ್ಳುತ್ತದೆ. 19 ಏಜ್ ಈಸ್ ನಾನ್ಸೆನ್ಸ್ ಚಿತ್ರದತ್ತ ಪ್ರೇಕ್ಷಕರು ಹೊರಳಿ ನೋಡುತ್ತಿರೋದೂ ಕೂಡಾ ಈ ಕಾರಣದಿಂದಲೇ. ಹೊಸಬರೇ ಸೇರಿ ರೂಪಿಸಿರೋ ಈ ಸಿನಿಮಾ ಸೆನ್ಸಾರ್ ಅನ್ನೂ ಇದೀಗ ಮುಗಿಸಿಕೊಂಡಿದೆ. ವಿಶೇಷವೆಂದರೆ ಈ ಚಿತ್ರ ಖುದ್ದು ಸೆನ್ಸಾರ್ ಅಧಿಕಾರಿಗಳಿಂದಲೇ ಮೆಚ್ಚುಗೆ ಪಡೆದುಕೊಂಡಿದೆ.
ಸೆನ್ಸಾರ್ ಅಧಿಕಾರಿಗಳು ತಿಂಗಳೊಂದಕ್ಕೆ ಹತ್ತಾರು ಚಿತ್ರಗಳನ್ನು ನೋಡುತ್ತಾರೆ. ಆದರೆ ಅವರ ಕಡೆಯಿಂದಲೇ ಮೆಚ್ಚುಗೆ ಪಡೆದುಕೊಳ್ಳೋ ಸಿನಿಮಾಗಳು ವಿರಳ. 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಅಂಥಾ ವಿರಳ ಸಿನಿಮಾಗಳ ಸಾಲಿನಲ್ಲಿ ಸೇರಿಕೊಂಡಿದೆ. ಈ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ಕೊಟ್ಟಿರೋ ಸೆನ್ಸಾರ್ ಮಂಡಳಿ ಅಧಿಕಾರಿಗಳು ಚಿತ್ರತಂಡದ ಶ್ರಮವನ್ನು, ಕ್ರಿಯೇಟಿವಿಟಿಗಳನ್ನು ಮೆಚ್ಚಿಕೊಂಡಿದ್ದಾರೆ. ಈ ಉತ್ತೇಜಕ ಮಾತುಗಳಿಂದ ಇಡೀ ಚಿತ್ರತಂಡ ಖುಷಿಗೊಂಡಿದೆ. ಈ ಮೂಲಕವೇ ಹೊಸಬರ ತಂಡಕ್ಕೆ ಗೆಲುವು ಸಿಗೋದು ಗ್ಯಾರೆಂಟಿ ಎಂಬಂಥಾ ನಂಬಿಕೆಯೂ ಹುಟ್ಟಿಕೊಂಡಿದೆ.
ಇದು ಲೋಕೇಶ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಚೊಚ್ಚಲ ಚಿತ್ರ. ಇಲ್ಲಿ ಲೋಕೇಶ್ ಅವರ ಪುತ್ರ ಮನುಷ್ ನಾಯಕನಾಗಿ ನಟಿಸಿದ್ದಾನೆ. ಈ ಸಿನಿಮಾದ ಕಥೆ ಹತ್ತೊಂಬತ್ತರ ಹರೆಯದ ಸುತ್ತ ಗಿರಕಿ ಹೊಡೆಯುವಂಥಾದ್ದು. ಆದ್ದರಿಂದಲೇ ಅದೇ ವಯೋಮಾನದ ಮನುಷ್ನನ್ನು ನಾಯಕನನ್ನಾಗಿಸಲಾಗಿದೆ. ಹಾಗೆಂದು ಇದೀಗ ತಾನೇ ಬಿಕಾಂ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರೋ ಮನುಷ್ ಏಕಾಏಕಿ ನಾಯಕನಾಗಿಲ್ಲ. ನಿರ್ಮಾಪಕ ಲೋಕೇಶ್ ಆತನಿಗೆ ಸೂಕ್ತವಾದ ತರಬೇತಿ ಕೊಡಿಸಿದ್ದಾರೆ. ಈ ಬಲದಿಂದಲೇ ಮನುಷ್ ಚೆಂದಗೆ ನಟಿಸಿದ್ದಾನಂತೆ. ಇದೆಲ್ಲ ಅಂಶಗಳು ಸೇರಿಕೊಂಡು ಸೆನ್ಸಾರ್ ಮಂಡಳಿಯಿಂದ ಈ ಸಿನಿಮಾಗೆ ಶಹಬ್ಬಾಸ್ಗಿರಿ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ