ಚಿತ್ರಮಂದಿರದತ್ತ ಪ್ರೇಕ್ಷಕ: ಇನ್ಸ್ಪೆಕ್ಟರ್ ವಿಕ್ರಂ ಹೌಸ್ಫುಲ್ ಶೋ
Team Udayavani, Feb 8, 2021, 11:03 AM IST
ವಿಕ್ರಮನ ಮೊಗದಲ್ಲಿ ನಗುಮೂಡಿದೆ. ಈ ನಗು ಇಡೀ ಚಿತ್ರರಂಗದಲ್ಲಿ ಭರವಸೆಗೆ ಕಾರಣವಾಗಿದೆ. ಹೌದು, ಫೆ.5ರಂದು ತೆರೆಕಂಡ ಪ್ರಜ್ವಲ್ ದೇವರಾಜ್ ನಟನೆಯ “ಇನ್ಸ್ಪೆಕ್ಟರ್ ವಿಕ್ರಂ’ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಮೂಲಕ ಚಿತ್ರ ಬಹುತೇಕ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ ಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಹನ್ನೊಂದು ತಿಂಗಳಿನಿಂದ ಯಾವುದೇ ಸಿನಿಮಾಗಳನ್ನು ನೋಡದೇ, ಚಿತ್ರಮಂದಿರದಿಂದ ದೂರವಿದ್ದ ಪ್ರೇಕ್ಷಕರು ಈಗ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರದತ ದಾಪುಗಾಲು ಹಾಕುತ್ತಿದ್ದಾರೆ. ಅದರಲ್ಲೂ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕು, ಚಿತ್ರಮಂದಿರದಲ್ಲಿ ಶಿಳ್ಳೆ, ಕೇಕೆ, ಜೈಕಾರದೊಂದಿಗೆ ಎಂಜಾಯ್ ಮಾಡಬೇಕೆಂದು ಕೊಂಡ ಪ್ರೇಕ್ಷಕರು ಈಗ ಆ ಆಸೆಯನ್ನು “ಇನ್ಸ್ಪೆಕ್ಟರ್ ವಿಕ್ರಂ’ ಚಿತ್ರದ ಮೂಲಕ ಈಡೇರಿಸುತ್ತಿದ್ದಾರೆ.
ಇದನ್ನೂ ಓದಿ:ಅತೀ ಹೆಚ್ಚು ಡೌನ್ ಲೋಡ್: ಟಿಕ್ ಟಾಕ್ ಹಿಂದಿಕ್ಕಿ ಅಗ್ರಸ್ಥಾನ ಪಡೆದ ಟೆಲಿಗ್ರಾಂ
ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ವೀರೇಶ್ ಜೊತೆಗೆ ಹುಬ್ಬಳ್ಳಿಯ ಅನೇಕ ಚಿತ್ರಮಂದಿರ ಗಳು ಹೌಸ್ಫುಲ್ ಪ್ರದರ್ಶನ ಕಂಡಿದೆ. “ಇನ್ಸ್ಪೆಕ್ಟರ್ ವಿಕ್ರಂ’ ಚಿತ್ರ ಮಾಸ್ ಎಂಟರ್ ಟೈನರ್ ಜೊತೆಗೆ ಫ್ಯಾಮಿಲಿ ಆಡಿಯನ್ಸ್ಗೆ ಇಷ್ಟವಾಗುವ ಅಂಶಗಳಿ ರುವು ದರಿಂದ ಈಗ ನಿಧಾನವಾಗಿ ಚಿತ್ರಕ್ಕೆ ಫ್ಯಾಮಿಲಿ ಆಡಿಯನ್ಸ್ ಬರಲಾರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ಈ ಚಿತ್ರದಲ್ಲಿ ನಟ ದರ್ಶನ್ ಕೂಡಾ ಪ್ರಮುಖ ಪಾತ್ರ ಮಾಡಿದ್ದರಿಂದ ತಮ್ಮ ನೆಚ್ಚಿನ ನಟನನ್ನು ತೆರೆಮೇಲೆ ನೋಡಲು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಸಿನಿ ಮಾಕ್ಕೆ ಬರುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ “ಇನ್ಸ್ಪೆಕ್ಟರ್ ವಿಕ್ರಂ’ ಕ್ರೇಜ್ ಹೆಚ್ಚುತ್ತಿದೆ. ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳ ಸಂಖ್ಯೆಯಲ್ಲೂ ಏರಿಕೆಯಾಗಲಿದೆ. ಇನ್ನು ಮತ್ತಷ್ಟು ಮಂದಿ ಸೆಲೆಬ್ರೆಟಿಗಳು ಸಿನಿಮಾ ನೋಡುವ ಸಾಧ್ಯತೆ ಇದೆ.
ಚಿತ್ರವನ್ನು ವಿಖ್ಯಾತ್ ನಿರ್ಮಿಸಿದ್ದು, ನರಸಿಂಹ ನಿರ್ದೇಶಿಸಿದ್ದಾರೆ. ಭಾವನಾ ಈ ಚಿತ್ರದ ನಾಯಕಿ. ಒಟ್ಟಾರೆ ಯಾಗಿ 11 ತಿಂಗಳ ನಂತರ ಬಿಡುಗಡೆಯಾದ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರರಂಗಕ್ಕೆ ಭವಿಷ್ಯದ ಭರವಸೆ ಮೂಡಿರೋದಂತೂ ಸುಳ್ಳಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ