ಶುರುವಾಯ್ತು ರಾಜವೀರ ಮದಕರಿನಾಯಕ
ಕೇರಳಕ್ಕೆ ದರ್ಶನ್ ಪಯಣ
Team Udayavani, Feb 11, 2020, 7:05 AM IST
“ರಾಬರ್ಟ್’ ಚಿತ್ರೀಕರಣ ಮುಗಿಸಿ, ಸ್ವಲ್ಪ ದಿನ ಬಿಡುವಿನಲ್ಲಿದ್ದುಕೊಂಡು ಸ್ನೇಹಿತರ ಸಿನಿಮಾ ಕಾರ್ಯಕ್ರಮಗಳಿಗೆ ಹೋಗಿ ಪ್ರೋತ್ಸಾಹ ನೀಡುತ್ತಿದ್ದ ದರ್ಶನ್ ಈಗ ಮತ್ತೆ ಬಿಝಿಯಾಗಿದ್ದಾರೆ. ಅದು ಅವರ ಹೊಸ ಸಿನಿಮಾ ಮೂಲಕ. ದರ್ಶನ್ “ರಾಜವೀರ ಮದಕರಿನಾಯಕ’ ಚಿತ್ರದಲ್ಲಿ ನಟಿಸುತ್ತಿರೋದು ನಿಮಗೆ ಗೊತ್ತೇ ಇದೆ.
ಈಗಾಗಲೇ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಆದರೆ, ಚಿತ್ರೀಕರಣ ಆರಂಭವಾಗಿರಲಿಲ್ಲ. ಈಗ ಚಿತ್ರೀಕರಣ ಆರಂಭವಾಗಿದ್ದು, ಕೇರಳದಿಂದ ಮೊದಲ ಹಂತದ ಚಿತ್ರೀಕರಣ ಆರಂಭವಾಗಿದೆ. ಈಗಾಗಲೇ ಚಿತ್ರತಂಡ ಕೇರಳ ಸೇರಿದ್ದು, ದರ್ಶನ್ ಸೋಮವಾರ ಬೆಳಗ್ಗೆ ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕೇರಳದ ಜಲಪಾತವೊಂದರಲ್ಲಿ ಚಿತ್ರದ ಕೆಲವು ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆಯಂತೆ.
ಕೆಲವು ದಿನಗಳ ಕಾಲ ಕೇರಳದಲ್ಲಿ ಚಿತ್ರೀಕರಣ ನಡೆಸಿ ಬಳಿಕ ಚಿತ್ರತಂಡ ಬೆಂಗಳೂರಿಗೆ ವಾಪಾಸ್ ಆಗಲಿದೆ. ಈ ನಡುವೆಯೇ ದರ್ಶನ್ ಅವರ ಹುಟ್ಟುಹಬ್ಬ (ಫೆ.16) ಇದ್ದು, ಅಭಿಮಾನಿಗಳ ಜೊತೆ ಬೆರೆಯುವ ಸಲುವಾಗಿ ದರ್ಶನ್ ಕೂಡಾ ಚಿತ್ರೀಕರಣದಿಂದ ಬ್ರೇಕ್ ಪಡೆಯಲಿದ್ದಾರೆ. “ರಾಜವೀರ ಮದಕರಿ ನಾಯಕ’ ಚಿತ್ರವನ್ನು ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದು, ರಾಕ್ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ
ಬರ್ತ್ಡೇಗೆ ರಾಬರ್ಟ್ ಟೀಸರ್: ಈಗಾಗಲೇ “ರಾಬರ್ಟ್’ ಚಿತ್ರದ ಫಸ್ಟ್ ಲುಕ್, ಮೋಶನ್ ಪೋಸ್ಟರ್ಗಳು ಬಿಡುಗಡೆಯಾಗಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿವೆ. ಈಗ ಚಿತ್ರದ ಟೀಸರ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ದರ್ಶನ್ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ “ರಾಬರ್ಟ್’ ಚಿತ್ರತಂಡ ಫೆ.16 ರಂದು ಚಿತ್ರದ ಟೀಸರ್ ಬಿಡುಗಡೆ ಮಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?