ಮಡಿಕೇರಿಯಲ್ಲಿ “ದೃಗಾಂತರ’
Team Udayavani, Jan 16, 2020, 7:00 AM IST
ಹೊಸಬರೇ ಸೇರಿ ಮಾಡಿರುವ “ದೃಗಾಂತರ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದಿದೆ. ದೇವನಗರಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ರಂಜಿತ್ ಗೌಡ.ಕೆ, ನಿರ್ಮಾಣವಿರುವ ಚಿತ್ರದಲ್ಲಿ ಶೋಭರಾಜ್, ರಂಜಿತ್ ಗೌಡ ಪ್ರಮುಖ ಪಾತ್ರ ಮಾಡಿದ್ದಾರೆ. ಇವರು ಅಭಿನಯಿಸಿದ ದೃಶ್ಯಗಳನ್ನು ಮಡಿಕೇರಿಯಲ್ಲಿ ಚಿತ್ರಿಸಿಕೊಳ್ಳಲಾಗಿದೆ.
ಮಡಿಕೇರಿಯಲ್ಲಿ ಇವರ ಕಾಂಬಿನೇಷನ್ನಲ್ಲಿ ಹಲವಾರು ದೃಶ್ಯಗಳು ಹಾಗೂ ವಾಗ್ವಾದ ದೃಶ್ಯಗಳು ಚಿತ್ರೀಕರಣಗೊಂಡಿದೆ. ಚಿತ್ರವನ್ನು ಅಂಕಿತ್ ವಿ.ಹೆಗಡೆ ನಿರ್ದೇಶನ ಮಾಡುತ್ತಿದ್ದಾರೆ. ಗೌತಮ್ ಮೋಹನ್ ರಾಜ್ ಅವರ ಕಥೆ ಇದೆ. ಸನಿತ್ ಕುಮಾರ್ ಹಾಡುಗಳನ್ನು ಬರೆದಿದ್ದಾರೆ. ಜಿ.ಆರ್.ರಾಯನ್ ಸಂಗೀತವಿದೆ.
ನಾಗಾರ್ಜುನ್ ಶರ್ಮ, ಅಂಕಿತ್ ವಿ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ಜಗದೀಶ್ ಸಂಕಲನವಿದೆ. ಅನಿಲ್ ಕಲಾನಿರ್ದೇಶನ ಮಾಡಿದ್ದಾರೆ. “ದೃಗಾಂತರ’ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ಚಿತ್ರ. ಚಿತ್ರದಲ್ಲಿ ರಂಜಿತ್ ಗೌಡ, ನಿಖೀತಾ ಸ್ವಾಮಿ, ಶೋಭರಾಜ್, ಲಕ್ಷ್ಮೀ ಭಟ್, ನಂದೀಶ್, ಸಂದೇಶ್ ಮುಂತಾದವರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು