ದುನಿಯಾ ವಿಜಯ್ ಈಗ ಸಲಗ
Team Udayavani, Dec 26, 2018, 11:20 AM IST
ದುನಿಯಾ ವಿಜಯ್ ಅವರ ನಟನೆ ಮತ್ತು ನಿರ್ಮಾಣದಲ್ಲಿ “ಕುಸ್ತಿ’ ಚಿತ್ರ ಸೆಟ್ಟೇರಲಿದೆ ಎಂಬ ಸುದ್ದಿ ಜೋರಾಗಿಯೇ ಇತ್ತು. ಅದಕ್ಕೆ ಅವರ ಮತ್ತು ಅವರ ಪುತ್ರನ ತಯಾರಿಯೂ ಜೋರಾಗಿತ್ತು. ಆದರೆ, ಅದೇಕೋ ದುನಿಯಾ ವಿಜಯ್ ಮಾತ್ರ ಅಖಾಡಕ್ಕೆ ಇಳಿಯುವ ಮುನ್ಸೂಚನೆಯೇ ಬರಲಿಲ್ಲ. ಈಗ ಹೊಸ ಸುದ್ದಿ ಅಂದರೆ, ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ಆ ಚಿತ್ರಕ್ಕೆ “ಸಲಗ’ ಎಂದು ನಾಮಕರಣ ಮಾಡಿದ್ದಾರೆ.
ಇನ್ನು, “ಕುಸ್ತಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದ ರಾಘು ಶಿವಮೊಗ್ಗ, “ಸಲಗ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಹಾಗಾದರೆ, “ಕುಸ್ತಿ’ ಪ್ರದರ್ಶನವಿಲ್ಲವೇ? ಈ ಪ್ರಶ್ನೆ ಸಹಜವಾಗಿಯೇ ಮೂಡಿಬರುತ್ತೆ. ಆದರೆ, “ಕುಸ್ತಿ’ ನಿಂತಿಲ್ಲ. ನಿಲ್ಲಲ್ಲ. ಮುಂದಕ್ಕೆ ಹೋಗಿದೆ ಎಂಬುದು ನಿರ್ದೇಶಕ ರಾಘು ಶಿವಮೊಗ್ಗ ಅವರ ಮಾತು. “ಸಲಗ’ ಮಾರ್ಚ್ನಲ್ಲಿ ಶುರುವಾಗಲಿದೆ. ಈ ಚಿತ್ರದ ಕಥೆ ಬಗ್ಗೆ ಹೇಳಿಕೊಳ್ಳುವ ನಿರ್ದೇಶಕ ರಾಘು ಶಿವಮೊಗ್ಗ, “ಇದೊಂದು ಆ್ಯಕ್ಷನ್ ಥ್ರಿಲ್ಲರ್ ಜಾನರ್ನಲ್ಲಿ ಸಾಗುವ ಚಿತ್ರ.
ದುನಿಯಾ ವಿಜಯ್ ಅವರಿಗೆ ಇಲ್ಲಿ ಮೂರು ವಿಶೇಷ ಗೆಟಪ್ಗ್ಳಿವೆ. ಈವರೆಗೆ ನೋಡದಂತಹ ಎರಡು ಗೆಟಪ್ನಲ್ಲಿ ದುನಿಯಾ ವಿಜಯ್ ಅವರು ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಬೇರೆಯದ್ದೇ ರೀತಿಯ ಕಥೆ ಎನ್ನುವ ನಿರ್ದೇಶಕರು, ಇದು ಸಂಪೂರ್ಣ ಮಾಸ್ ಚಿತ್ರ. ವಿಜಯ್ ಅಭಿಮಾನಿಗಳಿಗಷ್ಟೇ ಅಲ್ಲ, ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಅಂಶಗಳಿರುವ ಚಿತ್ರವಿದು. ಭರ್ಜರಿ ಆ್ಯಕ್ಷನ್ ಪ್ಯಾಕೇಜ್ ಇಲ್ಲಿದೆ.
ಸಮಾಜದ ಪರ ಮತ್ತು ಭ್ರಷ್ಟರ ವಿರುದ್ಧ ಹೋರಾಡುವ ನಾಯಕನೊಬ್ಬನ ಕಥೆ. “ಸಲಗ’ ಅಂದರೆ, ಇಲ್ಲಿ ವಿಜಯ್ ಅವರು ಒನ್ ಮ್ಯಾನ್ ಆರ್ಮಿಯಂತೆ ಒಬ್ಬರೇ ಹೋರಾಡುತ್ತಾರೆ. ಎಲ್ಲರಿಗೂ “ಸಲಗ’ ಅಂದರೆ, ಕಾಡಲ್ಲಿ ನಡೆಯೋ ಕಥೆ ಇರಬಹುದಾ ಎಂಬ ಪ್ರಶ್ನೆ ಮೂಡುತ್ತೆ. ಆದರೆ, ಇದು ಸಂಪೂರ್ಣ ಸಿಟಿಯಲ್ಲಿ ನಡೆಯುವ ಕಥೆ. ಜೊತೆಗೆ ಒಂದು ಹಳ್ಳಿಯಲ್ಲೂ ಕಥೆ ಸಾಗಲಿದೆ.
ಕಥೆ, ಚಿತ್ರಕಥೆ ಸಂಭಾಷಣೆ ಜೊತೆಗೆ ನಿರ್ದೇಶನ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದು ವಿವರ ಕೊಡುವ ರಾಘು ಶಿವಮೊಗ್ಗ, ದುನಿಯಾ ಟಾಕೀಸ್ ಬ್ಯಾನರ್ನಲ್ಲಿ ಚಿತ್ರ ತಯಾರಾಗುತ್ತಿದೆ ಎನ್ನುತ್ತಾರೆ. ಸದ್ಯಕ್ಕೆ ದುನಿಯಾ ವಿಜಯ್ ಇಲ್ಲಿ ಹೀರೋ. ಉಳಿದಂತೆ ಕಲಾವಿದರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ನವೀನ್ ಸಜ್ಜು ಸಂಗೀತವಿದೆ. ಶಾಂತಿ ಸಾಗರ್ ಛಾಯಾಗ್ರಹಣವಿದೆ. ಪ್ರಕಾಶ್ ಅವರು ಸಂಕಲನ ಮಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ