“ಹುಲಿರಾಯ’ನಿಂದ ಲಾಸ್‌ ಆಗಿದ್ದು ಎಷ್ಟು ಗೊತ್ತಾ?


Team Udayavani, Nov 10, 2017, 6:25 PM IST

hulira.jpg

ಇದುವರೆಗೂ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನ್‌ ಯಾವುದೇ ಚಿತ್ರದಲ್ಲೂ ದುಡ್ಡು ಕಳೆದುಕೊಂಡಿರಲಿಲ್ಲ. ಮೊದಲ ಚಿತ್ರ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಒಂದಿಷ್ಟು ಕೋಟಿ ಲಾಭ ಮಾಡಿದ್ದರು. ನಂತರ, “ಕಿರಿಕ್‌ ಪಾರ್ಟಿ’ ಚಿತ್ರದಲ್ಲೂ ಅವರು ಒಳ್ಳೆಯ ಲಾಭವನ್ನೇ ನೋಡಿದರು. ಈಗ ಮೊದಲ ಬಾರಿಗೆ ಅವರು “ಹುಲಿರಾಯ’ ಚಿತ್ರದ ಮೂಲಕ ನಷ್ಟವನ್ನು ನೋಡಿದ್ದಾರೆ.

ಹೌದು, “ಹುಲಿರಾಯ’ ಚಿತ್ರದ ವಿತರಣೆಯನ್ನು ಪುಷ್ಕರ್‌ ಮಲ್ಲಿಕಾರ್ಜುನ್‌ ಮತ್ತು ರಕ್ಷಿತ್‌ ಶೆಟ್ಟಿ ಜೊತೆಯಾಗಿ ಮಾಡಿದ್ದರು. ಇದರಿಂದ ಅವರು ಕಳೆದುಕೊಂಡಿದ್ದೆಷ್ಟು ಗೊತ್ತಾ? 37 ಲಕ್ಷ ರೂಪಾಯಿಗಳು. ಹೇಗೆಂದು ಸ್ವತಃ ಪುಷ್ಕರ್‌ ಅವರೇ ಲೆಕ್ಕ ಕೊಡುತ್ತಾರೆ ಕೇಳಿ. “ಆ ಚಿತ್ರವನ್ನು ನಾನು ಮತ್ತು ಪುಷ್ಕರ್‌ 50 ಲಕ್ಷ ಕೊಟ್ಟು ವಿತರಣೆಗೆ ಖರೀದಿಸಿದ್ದೆವು. ಅದರಿಂದ ನಿರ್ಮಾಪಕರು ಸೇಫ್ ಆದರು. ಇನ್ನು 42 ಲಕ್ಷದಷ್ಟು ಪ್ರಚಾರಕ್ಕೆ ಖರ್ಚಾಗಿತ್ತು.

ಅದರಿಂದ ನಮಗೆ ಬಂದ ಹಣ ಕೇವಲ ದಯ ಲಕ್ಷ ಮಾತ್ರ. ಇನ್ನು ಟಿವಿ ರೈಟ್ಸ್‌ ಮತ್ತು ಹಿಂದಿ ರೀಮೇಕ್‌ ಹಕ್ಕುಗಳಿಂದ ಒಂದಿಷ್ಟು ಬಂತು. ಒಟ್ಟಾರೆ 37 ಲಕ್ಷ ಲಾಸ್‌ ಆಯ್ತು. ನನ್ನ ಪ್ರಕಾರ ಆ ಚಿತ್ರ ಒಂದು ಲೆವೆಲ್‌ಗೆ ಹೋಗಬೇಕಿತ್ತು. ಆದರೆ, ಪಾತ್ರ ಮತ್ತು ಹೆಸರು ನೋಡಿ, ಮಲ್ಟಿಪ್ಲೆಕ್ಸ್‌ ಪ್ರೇಕ್ಷಕರು ಇದು ನಮ್ಮ ಸಿನಿಮಾವಲ್ಲ ಎಂದು ದೂರವಾದರೇನೋ? ಹಾಗಾಗಿ ಒಳ್ಳೆಯ ಓಪನಿಂಗ್‌ ಸಿಗಲೇ ಇಲ್ಲ’ ಎನ್ನುತ್ತಾರೆ ಪುಷ್ಕರ್‌. 

ಈ ತರಹದ ಅನುಭವಗಳಾದಾಗ, ಯಾಕೆ ಬೇಕು ರಿಸ್ಕಾ ಅಂತನಿಸುವುದುಂಟು ಎನ್ನುತ್ತಾರೆ ಪುಷ್ಕರ್‌. “ಹೊಸಬರು ಮತ್ತು ವಿಭಿನ್ನ ಚಿತ್ರಗಳನ್ನು ಸಪೋರ್ಟ್‌ ಮಾಡೋಣ ಅಂತ ನಾವು ಈ ಚಿತ್ರದ ವಿತರಣೆ ಮಾಡಿದೆವು. ಆದರೆ, ಇದಕ್ಕೆ ಒಳ್ಳೆಯ ಪ್ರೋತ್ಸಾಹ ಸಿಗದಿದ್ದಾಗ, ಸಹಜವಾಗಿ ಯಾತಕ್ಕೆ ಇವೆಲ್ಲಾ ಬೇಕು ಅಂತನಿಸುತ್ತದೆ. ಇಷ್ಟಕ್ಕೂ ನಾವು ಸಿನಿಮಾ ನೋಡದೆ, ತಗೊಂಡಿಲ್ಲ.

ಸಿನಿಮಾ ನೋಡಿ ಇಷ್ಟಪಟ್ಟೇ ವಿತರಣೆ ಮಾಡಿದ್ದು. ಹಾಗಂತ ಈ ಚಿತ್ರದ ಬಗ್ಗೆ ಬೇಸರವಿಲ್ಲ. ಸರಿಯಾಗಿ ಪ್ರೊಜೆಕ್ಟ್ ಆಗಲಿಲ್ಲ ಎಂಬ ಬೇಸರ ಆಯ್ತು ಅಷ್ಟೇ. ಅದು ಬಿಟ್ಟು ನಿರ್ಮಾಣ, ವಿತರಣೆ ಎಲ್ಲವೂ ಸಹಜವಾಗಿಯೇ ಮುಂದುವರೆಯುತ್ತದೆ’ ಎನ್ನುತ್ತಾರೆ ಪುಷ್ಕರ್‌.

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.