ಇಂದು ಹುಟ್ಟುಹಬ್ಬದ ಸಂಭ್ರಮ: ಉದಯವಾಣಿ ಜೊತೆ ಚಂದನವನದ ಸುಧಾ’ರಾಣಿ’ ಮಾತುಕತೆ   

ಪುಸ್ತಕ ಓದುವುದು ಈ ನಟಿಗೆ ತುಂಬ ಇಷ್ಟವಂತೆ. ಒಟ್ಟೊಟ್ಟಿಗೆ ಮೂರು-ನಾಲ್ಕು ಪುಸ್ತಕಗಳನ್ನು ರಾಶಿ ಹಾಕಿಕೊಂಡು ಓದುತ್ತಾರಂತೆ.

Team Udayavani, Aug 14, 2021, 10:31 AM IST

ಇಂದು ಹುಟ್ಟುಹಬ್ಬದ ಸಂಭ್ರಮ: ಉದಯವಾಣಿ ಜೊತೆ ಚಂದನವನದ ಸುಧಾ’ರಾಣಿ’ ಮಾತುಕತೆ

ಬೆಂಗಳೂರು: ಕನ್ನಡ ಚಿತ್ರರಂಗದ ‘ರಾಣಿ’ ಯಂತಿರುವ ಸ್ನಿಗ್ದ ಸುಂದರಿ ಸುಧಾರಾಣಿಯವರಿಗೆ ಇಂದು (ಆಗಸ್ಟ್ 14)ಹುಟ್ಟು ಹಬ್ಬದ ಸಂಭ್ರಮ. ನವವಸಂತಕ್ಕೆ ಕಾಲಿಡುತ್ತಿರುವ ಈ ಹಿರಿಯ ನಟಿಗೆ ಸ್ನೇಹಿತರು, ಅಭಿಮಾನಿಗಳು ಪ್ರೀತಿಯಿಂದ ಜನುಮ ದಿನದ ಶುಭ ಕೋರುತ್ತಿದ್ದಾರೆ.

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಸುಧಾರಾಣಿಯವರು ಇಂದು ಪೋಷಕ ನಟಿಯಾಗಿಯೂ ಅಭಿನಯಿಸುತ್ತಿದ್ದಾರೆ. ಅಂದಿನಿಂದ ಇಂದಿನವರೆಗೆ ಅವರ ಸಿನಿ ಪಯಣ ಹೇಗಿತ್ತು? ಸೇರಿದಂತೆ ಸಾಕಷ್ಟು ವಿಚಾರಗಳನ್ನು ‘ಉದಯವಾಣಿ’ಯ ತೆರೆದಿದೆ ಮನೆ ಬಾ ಅತಿಥಿ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ್ದರು. ಮಾತುಕತೆಯ ಆಯ್ದ ತುಣುಕು ಇಲ್ಲಿದೆ…

ಅವರೇ ಹೇಳಿಕೊಂಡಿರುವಂತೆ ಸುಧಾರಾಣಿಯವರದು ಸಂಪ್ರದಾಯಸ್ಥ ಕುಟುಂಬ. ಅವರ ಮನೆಯಿಂದ ಯಾರೂ ಕೂಡ ಸಿನಿಮಾರಂಗಕ್ಕೆ ಕಾಲಿಟ್ಟರಲಿಲ್ಲ. ಬಾಲ್ಯದಲ್ಲಿ ಜಾಹೀರಾತುವೊಂದರಲ್ಲಿ ತನ್ನ ಅಣ್ಣನ ಜೊತೆ ಬಣ್ಣ ಹಚ್ಚಿದ ಇವರಿಗೆ ಬಣ್ಣದ ನಂಟು ಹೀಗೆ ಮುಂದುವರೆಯುತ್ತಾ ಹೋಗುತ್ತದೆ. ನಂತರ ಬಾಲನಟಿಯಾಗಿ ಅಭಿನಯಿಸಿ, ಶಿವರಾಜ್ ಕುಮಾರ್ ಅವರ ‘ಆನಂದ್’ ಸಿನಿಮಾಗಳ ಮೂಲಕ ಫುಲ್ ಪ್ಲೆಡ್ಜ್ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು ಕನ್ನಡ ಸಿನಿ ರಸಿಕರಿಗೆ ಗೊತ್ತಿರುವ ವಿಚಾರ.

‘ಆನಂದ್’ ಸಿನಿಮಾದ ಮೂಲಕ ಚಂದನವನದಲ್ಲಿ ‘ಸುಂದರ’ ರಾಣಿ ಎಂದೇ ಫೇಮಸ್ ಆದ ಸುಧಾರಾಣಿಯವರು ಪರಭಾಷೆ ಸಿನಿಮಾಗಳಲ್ಲಿಯೂ ಛಾಪು ಮೂಡಿಸುತ್ತಾರೆ. ಆದರೆ, ನಮ್ಮ ಭಾಷೆಯೇ ನಮಗೆ ಮೇಲು ಎಂದು ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಇವರ ಕಲಾತ್ಮಕ ಅಭಿನಯಕ್ಕೆ ಎರಡು ಬಾರಿ ರಾಜ್ಯ ಪ್ರಶಸ್ತಿ ಒಲಿದು ಬಂದಿದೆ. ಆದರೆ, ಮೂರನೇ ಬಾರಿ ಪ್ರಶಸ್ತಿ ಅಧಿಕೃತವಾಗಿ ಘೋಷಣೆಯಾಗುತ್ತದೆ, ಫೋನ್ ಕರೆ ಮೂಲಕವು ಪ್ರಶಸ್ತಿ ಆಯ್ಕೆ ತಂಡ ಅಭಿನಂದಿಸುತ್ತದೆ. ಆದರೆ, ಮರು ದಿನ ಪತ್ರಿಕೆಗಳಲ್ಲಿ ಇವರ ಹೆಸರಿಗೆ ಬದಲಿಗೆ ಬೇರೆ ನಟಿಗೆ ಪ್ರಶಸ್ತಿ ಘೋಷಣೆಯಾಗಿರುತ್ತದೆ. ಇದನ್ನು ನೆನಪಿಸಿಕೊಳ್ಳುವ ಸುಧಾರಾಣಿ, ಪ್ರಶಸ್ತಿ ಕೈ ತಪ್ಪಿದ್ದಕ್ಕೆ ಬೇರೆ ಕಾರಣಗಳು ಇವೆ. ಈ ಬಗ್ಗೆ ಎಲ್ಲಿಯೂ ನಾ ಮಾತಾಡಿಲ್ಲ ಎನ್ನುತ್ತಾರೆ.ಮತ್ತೊಂದು ಮೈಸೂರು ಮಲ್ಲಿಗೆಗೆ ರಾಷ್ಟ್ರಪ್ರಶಸ್ತಿ ಬರಬೇಕಾಗಿತ್ತು. ಅದು ತಪ್ಪಿ ಹೋಗಿದ್ದು ತುಂಬಾ ಬೇಸರದ ಸಂಗತಿಯಾಗಿದೆ ನನಗೆ ಎಂದು ಮನದಾಳದ ನೋವನ್ನು ಬಿಚ್ಚಿಟ್ಟಿದ್ದರು.

ಸುಧಾರಾಣಿಯವರಿಗೆ ಶ್ರೀನಿವಾಸ್ ಕಲ್ಯಾಣ ಚಿತ್ರದಲ್ಲಿಯ ‘ಪವಡಿಸು ಪರಮಾತ್ಮ’ ಗೀತೆ ಅಚ್ಚುಮೆಚ್ಚು. ತಮಗೆ ಬೇಕೆನಿಸಿದಾಗ ಈ ಹಾಡು ಕೇಳುತ್ತಾರೆ. ಅದರ ಜೊತೆಗೆ ಮೈಸೂರು ಮಲ್ಲಿಗೆ ಸಿನಿಮಾದ ‘ಹಕ್ಕಿಯ ಹಾಡಿಗೆ ತಲೆದೂಗುವ’ ಹಾಡು ಕೂಡ ಇಷ್ಟವಂತೆ.

ಚಿತ್ರರಂಗವೇ ನನ್ನ ಪ್ರಪಂಚ, ಅಭಿನಯ ಬಿಟ್ಟು ನನಗೆ ಏನೂ ಗೊತ್ತಿಲ್ಲ ಎನ್ನುವ ಸುಧಾರಾಣಿಯವರು, ಇದೆ ರಂಗದಲ್ಲಿ ಮುಂದುವರೆಯುವುದಾಗಿ ಹೇಳುತ್ತಾರೆ. ಒಳ್ಳೆಯ ಪಾತ್ರಗಳು ಸಿಕ್ಕರೆ ತುಂಬಾ ಖುಷಿ ಎನ್ನುತ್ತಾರೆ. ಪುಸ್ತಕ ಓದುವುದು ಈ ನಟಿಗೆ ತುಂಬ ಇಷ್ಟವಂತೆ. ಒಟ್ಟೊಟ್ಟಿಗೆ ಮೂರು-ನಾಲ್ಕು ಪುಸ್ತಕಗಳನ್ನು ರಾಶಿ ಹಾಕಿಕೊಂಡು ಓದುತ್ತಾರಂತೆ.

ಇನ್ನು ನಟಿ ಶೃತಿ ಹಾಗೂ ತಾರಾ ಅನುರಾಧ ಜೊತೆಗಿನ ತಮ್ಮ ಗೆಳೆತನವನ್ನು ಮೆಲುಕು ಹಾಕಿರುವ ಅವರು, ನಾವು ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು. ನಾವು ಕ್ಯಾಮರಾ ಮುಂದಷ್ಟೆ ಪೈಪೋಟಿ ಮಾಡುತ್ತಿದ್ದೇವು. ಆಫ್ ದಿ ಸ್ಕ್ರೀನ್ ನಾವು ಒಳ್ಳೆಯ ಸ್ನೇಹಿತರು. ಇಂದಿಗೂ ಕೂಡ ನಾವು ಹಾಗೆ ಇದ್ದೇವೆ ಎಂದರು.

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.