ಕಿರಾತಕ -2 ಟೈಟಲ್‌ ಕೊಡಲ್ಲ: ಪ್ರದೀಪ್‌ ರಾಜ್‌


Team Udayavani, Aug 7, 2018, 11:04 AM IST

pradeepraj.jpg

ಬಹುತೇಕ “ಕೆಜಿಎಫ್’ ಚಿತ್ರ ಮುಗಿಸಿರುವ ಯಶ್‌, ಮುಂದಿನ ಚಿತ್ರ “ಕಿರಾತಕ-2’ಗೆ ತಯಾರಾಗುತ್ತಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಸಹಜವಾಗಿಯೇ ಅವರ ಅಭಿಮಾನಿಗಳು ಖುಷಿಯಾಗಿದ್ದರು. ಏಕೆಂದರೆ “ಕಿರಾತಕ’ ಚಿತ್ರ ಯಶ್‌ಗೆ ದೊಡ್ಡ ಮಟ್ಟದಲ್ಲಿ ಬ್ರೇಕ್‌ ಕೊಟ್ಟಿತ್ತು. ಈಗ ಅದೇ ಟೈಟಲ್‌ನಡಿ “ಕಿರಾತಕ-2′ ಬರುತ್ತಿರುವುದರಿಂದ ಸಿನಿಮಾ ಇನ್ನೂ ಮಜವಾಗಿರಬಹುದೆಂದು ಅಭಿಮಾನಿಗಳು ಕಾಯುತ್ತಿದ್ದರು.

ಆದರೆ, ಯಶ್‌ “ಕಿರಾತಕ-2′ ಟೈಟಲ್‌ನಡಿ ಸಿನಿಮಾ ಮಾಡುತ್ತಿಲ್ಲ ಎಂಬ ವಿಚಾರ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಸತ್ಯ. ಈ ಹಿಂದೆ “ಕಿರಾತಕ’ ಚಿತ್ರವನ್ನು ಪ್ರದೀಪ್‌ರಾಜ್‌ ನಿರ್ದೇಶಿಸಿದ್ದರು. ಅದೇ ಸಮಯದಲ್ಲಿ ಅವರು “ಕಿರಾತಕ-2′ ಟೈಟಲ್‌ ಅನ್ನು ಕೂಡಾ ತಮ್ಮ “ಇಂದ್ರಜಾಲ್‌ ಅಡ್ವಟೈರ್ಸ್‌ ಸೊಲ್ಯುಶನ್ಸ್‌’ ಬ್ಯಾನರ್‌ನಡಿ ನೋಂದಾಯಿಸಿದ್ದರು.
 

ಪ್ರತಿ ವರ್ಷ ಆ ಶೀರ್ಷಿಕೆಯನ್ನು ನವೀಕರಿಸುತ್ತಾ ಬಂದಿದ್ದಾಂತೆ. ಯಶ್‌ ಜೊತೆಗೇ “ಕಿರಾತಕ-2′ ಮಾಡಬೇಕೆಂಬ ಆಸೆ ಪ್ರದೀಪ್‌ರಾಜ್‌ ಅವರಿಗಿತ್ತು. ಆದರೆ, ಕಾರಣಾಂತರಗಳಿಂದ ಅದು ಕೂಡಿ ಬಾರದ ಹಿನ್ನೆಲೆಯಲ್ಲಿ ಪ್ರದೀಪ್‌ರಾಜ್‌, ಹೊಸಬರನ್ನು ಹಾಕಿಕೊಂಡು “ಕಿರಾತಕ-2′ ಶುರುಮಾಡಿದ್ದಾರೆ. ಅವರೇ ಹೇಳುವಂತೆ, ಈಗಾಗಲೇ ನಾಲ್ಕು ದಿನಗಳ ಕಾಲ ಚಿತ್ರೀಕರಣ ಕೂಡಾ ಆಗಿದೆ.

ಆದರೆ, ಈಗ ಯಶ್‌ “ಕಿರಾತಕ-2′ ಟೈಟಲ್‌ನಡಿ ಸಿನಿಮಾ ಮಾಡುತ್ತಿದ್ದಾರೆಂಬ ಸುದ್ದಿ ಓಡಾಡುತ್ತಿರುವುದರಿಂದ ಪ್ರದೀಪ್‌ರಾಜ್‌ ಸಹಜವಾಗಿಯೇ ಟೆನ್ಷನ್‌ನಲ್ಲಿದ್ದಾರೆ.”ಕಿರಾತಕ-2′ ಟೈಟಲ್‌ ನಮ್ಮ ಬ್ಯಾನರ್‌ನಲ್ಲಿದೆ. ನಮ್ಮಲ್ಲಿ ಆ ಟೈಟಲ್‌ ಇರುವಾಗ ಮತ್ತೂಬ್ಬರು ಹೇಗೆ ಮಾಡಲು ಸಾಧ್ಯ’ ಎಂದು ಪ್ರಶ್ನಿಸುತ್ತಾರೆ ಪ್ರದೀಪ್‌ ರಾಜ್‌. ಈಗಾಗಲೇ ಪ್ರದೀಪ್‌ ರಾಜ್‌ ತಮ್ಮ ಟೈಟಲ್‌ ಅನ್ನು ಬೇರೆಯವರು ಬಳಕೆ ಮಾಡದಂತೆ ಹಾಗೂ ಗೊಂದಲ ಸೃಷ್ಟಿಸದಂತೆ ನೋಡಿಕೊಳ್ಳಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಹಾಗಾದರೆ, ಪ್ರದೀಪ್‌ರಾಜ್‌ ಯಾವ ಕಾರಣಕ್ಕೂ “ಕಿರಾತಕ-2′ ಟೈಟಲ್‌ ಅನ್ನು ಬಿಟ್ಟುಕೊಡುವುದಿಲ್ಲವೇ ಎಂದು ನೀವು ಕೇಳಬಹುದು. ಆದರೆ, ಪ್ರದೀಪ್‌ರಾಜ್‌ ಮಾತ್ರ ಯಾವುದೇ ಕಾರಣಕ್ಕೂ ಟೈಟಲ್‌ ಬಿಟ್ಟುಕೊಡುವುದಿಲ್ಲ. ಅದೇ ಕಾರಣದಿಂದ ಆ ಟೈಟಲ್‌ನಡಿ ಸಿನಿಮಾ ಆರಂಭಿಸಿದ್ದೇನೆ ಎನ್ನುತ್ತಾರೆ. “ನಾನು ಯಶ್‌ ಅವರಲ್ಲೇ ಹೇಳಿದ್ದೇನೆ, “ಕಿರಾತಕ-2′ ಚಿತ್ರವನ್ನು ನೀವು-ನಾನು ಸೇರಿಕೊಂಡು ಮಾಡುವುದಾದರೆ ಕೊಡುತ್ತೇನೆ.

ಬೇರೆ ಯಾವ ನಿರ್ದೇಶಕರು ಮಾಡುವುದಾದರೂ ಕೊಡುವುದಿಲ್ಲ’ ಎಂದಿದ್ದೇನೆ. ಆ ಮಾತಿಗೆ ನಾನು ಬದ್ಧನಾಗಿದ್ದೇನೆ’ ಎನ್ನುತ್ತಾರೆ ಪ್ರದೀಪ್‌ ರಾಜ್‌. ಹಾಗಾದರೆ, ಯಶ್‌ ಅವರ “ಕಿರಾತಕ-2′ ಬದಲು ಬೇರ್ಯಾವ ಟೈಟಲ್‌ನಡಿ ಸಿನಿಮಾ ಮಾಡುತ್ತಾರೆಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಸದ್ಯ ಬೇರೆ ಯಾವ ಶೀರ್ಷಿಕೆಯೂ ಅಂತಿಮವಾಗಿಲ್ಲ. ಮುಂದೇನಾಗುತ್ತೋ ಕಾದು ನೋಡಬೇಕು. 

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.