ಹೆಂಡ್ತಿಗೆ ಹೆಲ್ಪ್ ಮಾಡೋದು ಬಿಡಿ
Team Udayavani, Jan 17, 2018, 10:45 AM IST
“ಮೊದಲು ಹೆಂಡ್ತಿಗೆ ಹೆಲ್ಪ್ ಮಾಡೋದು ಬಿಟ್ಟು, ಹೊರಗೆ ಬನ್ನಿ. ನಿಮ್ಮ ಮುಂದೆ ಯಾರೂ ನಿಲ್ಲೋಕೆ ಆಗಲ್ಲ …’ ಹಾಗಂತ ಜಗ್ಗೇಶ್ ಸಲಹೆ ನೀಡಿದ್ದು ನಟ ದೇವರಾಜ್ಗೆ. “ಸಾಗುವ ದಾರಿಯಲ್ಲಿ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಜಗ್ಗೇಶ್ ಮತ್ತು ದೇವರಾಜ್ ಇಬ್ಬರೂ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಅವರಿಬ್ಬರೂ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜಗ್ಗೇಶ್, ದೇವರಾಜ್ ಎಂತಹ ಅದ್ಭುತ ನಟ ಎಂದು ಹೇಳಿದರು. ಹಾಗೆ ಹೇಳುವಾಗಲೇ, ದೇವರಾಜ್ ಅವರು ಸ್ವಲ್ಪ ಚಳಿ ಬಿಟ್ಟರೆ, ದೊಡ್ಡ ಹೆಸರು ಮಾಡಬಹುದು ಎಂದು ಹೇಳಿದರು. “ನಾನು, ದೇವರಾಜ್, ಅವಿನಾಶ್, ಶಶಿಕುಮಾರ್ ಎಲ್ಲ ಹಳೆಯ ಸ್ನೇಹಿತರು. ಕೆ.ವಿ. ರಾಜು ಅವರ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದವರು.
ರಾಜು ಯಾವ ಚಿತ್ರ ಮಾಡಿದರೂ, ಮೊದಲು ದೇವರಾಜ್ ಹೆಸರು ಬೀಳ್ಳೋದು. ನನಗೆ ಯಾವ ಪಾತ್ರ ಕೊಡ್ಲಿಲ್ಲ ಅಂತ ಒಮ್ಮೊಮ್ಮೆ ಟೆನ್ಶನ್ ಆಗೋದು. ಅವರು ಬರೀ ಇಲ್ಲಲ್ಲ, ಆಂಧ್ರಕ್ಕೆ ಹೋಗಿ ನಂದಿ ಅವಾರ್ಡ್ ತಗೊಂಡವರು ಅವರು. ಅವರು ಸರಿಯಾಗಿ ನಿಂತಿದ್ದರೆ, ರೈ ಮುಂತಾದವರಿಗೆ ಬೇರೆ ಭಾಷೆಗಳಲ್ಲಿ ಚಾನ್ಸ್ ಸಿಗ್ತಿರಲಿಲ್ಲ.
ದೇವರಾಜ್ ಸ್ವಲ್ಪ ದಿನ ನಟಿಸೋದು ಕಡಿಮೆ ಆಯಿತು. ಅವರಿಗೆ ತಮ್ಮ ಹೆಂಡ್ತಿ ಕಂಡರೆ ಪ್ರೀತಿ ಜಾಸ್ತಿ. ಪ್ರೀತಿ ಮಾಡೋದನ್ನ ಸ್ವಲ್ಪ ಕಡಿಮೆ ಮಾಡಿ, ಹೊರಗೆ ಬನ್ನಿ. ಹೇಳ್ತೀನಿ ಕೇಳಿ, ಅವರನ್ನ ಮುಟ್ಟೋಕೆ ಆಗಲ್ಲ. ಅವರೊಬ್ಬ ಅದ್ಭುತ ನಟ. ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಅವರು ದೊಡ್ಡ ಆಸ್ತಿ. ‘ ಎಂದು ಜಗ್ಗೇಶ್ ಒಂದೇ ಉಸಿರನಲ್ಲಿ ಹೇಳಿದರು.
ದೇವರಾಜ್ ಅವರನ್ನು ಕೊಂಡಾಡಿದ ಅವರು, “ಅವರಿಗೆ ಅದ್ಭುತವಾಗ ಮುಖಚರ್ಯೆ ಇದೆ. ಅಣ್ಣ, ಅಪ್ಪ, ತಾತ … ಹೀಗೆ ಯಾವ ಪಾತ್ರಕ್ಕೆ ಬೇಕಾದ್ರೂ ಅವರು ಸೂಟ್ ಆಗ್ತಾರೆ. ಅವರು ಬಿಟ್ಟ ಪಾತ್ರಗಳು, ಬೇರೆಯವರಿಗೆ ಸಿಕ್ಕಿದ್ದು ಎಲ್ಲರಿಗೂ ಗೊತ್ತೇ ಇದೆ’ ಎಂದು ಯಾರ ಹೆಸರನ್ನೂ ಹೇಳದೆಯೇ ಮಾತು ಮುಗಿಸಿದರು ಜಗ್ಗೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ