ಬನ್ನಿರಿ ಬೆಂಗಳೂರಿಗೆ… : ಮೇಡ್‌ ಇನ್‌ ಬೆಂಗಳೂರು ಹಾಡು ಬಿಡುಗಡೆ


Team Udayavani, Aug 17, 2022, 3:21 PM IST

tdy-9

ಬೆಂಗಳೂರು ಮಹಾನಗರಕ್ಕೆ “ಗಾರ್ಡನ್‌ ಸಿಟಿ’, “ಸಿಲಿಕಾನ್‌ ಸಿಟಿ’ ಎಂಬ ಹಲವು ಬಿರುದುಗಳಿವೆ. ಇತ್ತೀಚೆಗೆ ಜಾಗತಿಕ ಭೂಪಟದಲ್ಲಿ ಬೆಂಗಳೂರು “ಸ್ಟಾರ್ಟಪ್‌ ಹಬ್‌’ ಎಂದೇ ಕರೆಸಿಕೊಳ್ಳುತ್ತಿದೆ. ಅದರಲ್ಲೂ ಕಳೆದ ಏಳೆಂಟು ವರ್ಷಗಳಿಂದ ನೂರಾರು ಸ್ಟಾರ್ಟಪ್ಸ್‌ ಬೆಂಗಳೂರಿನಲ್ಲಿ ಆರಂಭಗೊಂಡು, ವಿಶ್ವವಿಖ್ಯಾತವಾಗುತ್ತಿವೆ. ಈಗ ಇದೇ ಬೆಂಗಳೂರಿನ ಸ್ಟಾರ್ಟಪ್‌ ವಿಷಯವನ್ನು ಇಟ್ಟುಕೊಂಡು, ಇಲ್ಲೊಂದು ಹೊಸಬರ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

ಅಂದಹಾಗೆ, ಆ ಸಿನಿಮಾದ ಹೆಸರು, “ಮೇಡ್‌ ಇನ್‌ ಬೆಂಗಳೂರು’. ಸ್ಟಾರ್ಟಪ್‌ ಶುರುಮಾಡಬೇಕಾದರೆ, ಎದುರಾಗುವ ಸಮಸ್ಯೆ, ಸವಾಲುಗಳು, ಅದೆಲ್ಲವನ್ನು ಎದುರಿಸುವ ರೀತಿ ಹೀಗೆ ಎಲ್ಲವನ್ನು ಈ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದಿಡಲು ಹೊರಟಿದೆ ಚಿತ್ರತಂಡ. ಈಗಾಗಲೇ ಸದ್ದಿಲ್ಲದೆ “ಮೇಡ್‌ ಇನ್‌ ಬೆಂಗಳೂರು’ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮೊದಲ ಹಾಡನ್ನು ಬಿಡುಗಡೆಗೊಳಿಸಿದೆ.

ಹಿರಿಯ ನಿರ್ದೇಶಕ ಭಗವಾನ್‌ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು, “ಮೇಡ್‌ ಇನ್‌ ಬೆಂಗಳೂರು’ ಸಿನಿಮಾದ ಮೊದಲ ಪೋಸ್ಟರ್‌ ಮತ್ತು ಹಾಡನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. “ರಜನಿ ಥರ್ಸ್‌ಡೇ ಸ್ಟೋರಿಸ್‌’ ಬ್ಯಾನರ್‌ನಲ್ಲಿ ಬಾಲಕೃಷ್ಣ ಬಿ. ಎಸ್‌ ನಿರ್ಮಿಸುತ್ತಿರುವ “ಮೇಡ್‌ ಇನ್‌ ಬೆಂಗಳೂರು’ ಸಿನಿಮಾಕ್ಕೆ ಪ್ರದೀಪ್‌ ಶಾಸ್ತ್ರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಹಿರಿಯ ನಟ ಅನಂತ ನಾಗ್‌, ಮಧುಸೂದನ್‌ ಗೋವಿಂದ, ಸಾಯಿಕುಮಾರ್‌, ಪ್ರಕಾಶ್‌ ಬೆಳವಾಡಿ, ಪುನೀತ್‌ ಮಂಜ, ವಂಶೀಧರ್‌, ಹಿಮಾಂಶಿ ವರ್ಮಾ, ಶಂಕರ್‌ ಮೂರ್ತಿ, ವಿನೀತ್‌, ಮಂಜುನಾಥ ಹೆಗ್ಡೆ, ರಮೇಶ್‌ ಭಟ್‌ ಮೊದಲಾದವರು “ಮೇಡ್‌ ಇನ್‌ ಬೆಂಗಳೂರು’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ, “ಮೇಡ್‌ ಇನ್‌ ಬೆಂಗಳೂರು’ ಸಿನಿಮಾದ “ಬನ್ನಿರಿ ಬೆಂಗಳೂರಿಗೆ…’ ಎಂಬ ಹಾಡಿನಲ್ಲಿ ಬೆಂಗಳೂರಿನ ಜನ- ಜೀವನ ಮತ್ತು ಭಾಷಾ ವೈವಿಧ್ಯತೆಯನ್ನು ತೆರೆದಿಡಲಾಗಿದೆ. ಅಶ್ವಿ‌ನ್‌ ಪಿ. ಕುಮಾರ್‌ ಸಂಗೀತ ಸಂಯೋಜನೆಯ, ಈ ಒಂದೇ ಹಾಡಿನಲ್ಲಿ ಸುಮಾರು ಹನ್ನೊಂದು ವಿವಿಧ ಭಾಷೆಯ ಸಾಲುಗಳನ್ನು ಬಳಸಿ ಸಾಹಿತ್ಯ ರಚಿಸಲಾಗಿದೆ.

ಹರ್ಷ ಕಂಬದ ರಂಗಯ್ಯ ಮೊದಲಾದ ಗಾಯಕರು ಈ ಹಾಡಿಗೆ ಧ್ವನಿಯಾಗಿರುವುದರ ಜೊತೆಗೆ, ಹಾಡಿನಲ್ಲಿ ತೆರೆಮೇಲೂ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ಚಿತ್ರದ ನಿರ್ಮಾಪಕ ಬಾಲಕೃಷ್ಣ ಬಿ. ಎಸ್‌, ನಟರಾದ ಮಧುಸೂದನ್‌ ಗೋವಿಂದ್‌, ಪುನೀತ್‌ ಮಂಜ, ವಂಶೀಧರ್‌, ಸಂಕಲನಕಾರ ಪ್ರಶಾಂತ್‌ ನಾಯಕ್‌ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ತಮ್ಮ ಅನುಭವ ಹಂಚಿಕೊಂಡರು. ಸದ್ಯ ಪ್ರಚಾರ ಕಾರ್ಯದಲ್ಲಿರುವ “ಮೇಡ್‌ ಇನ್‌ ಬೆಂಗಳೂರು’ ಸಿನಿಮಾವನ್ನು ಸೆಪ್ಟೆಂಬರ್‌ ವೇಳೆಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

ಟಾಪ್ ನ್ಯೂಸ್

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.