ಮತ್ತೆ ಹೊಸಬರ ಜೊತೆ ಮಹೇಶ್ ಬಾಬು
Team Udayavani, Oct 1, 2018, 11:50 AM IST
ನಿರ್ದೇಶಕ ಮಹೇಶ್ ಬಾಬು ವಿಚಾರದಲ್ಲಿ ಕನ್ನಡ ಚಿತ್ರರಂಗದಲ್ಲೊಂದು ಮಾತಿದೆ. ಅದೇನೆಂದರೆ ಮಹೇಶ್ ಬಾಬು ಪರಿಚಯಿಸಿದ ಹೊಸಬರು ಮುಂದೆ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾರೆಂದು. ಅದರಲ್ಲೂ ನಾಯಕಿಯರ ವಿಷಯದಲ್ಲಿ ಮಹೇಶ್ ಬಾಬು ಲಕ್ಕಿ ಹ್ಯಾಂಡ್ ಎಂದು. ಅದಕ್ಕೆ ಸಾಕ್ಷಿ ಎಂಬಂತೆ ಮಹೇಶ್ ಬಾಬು ಚಿತ್ರದ ಮೂಲಕ ಲಾಂಚ್ ಆದ ಅನೇಕ ನಟಿಯರು ಇವತ್ತು ಬಿಝಿಯಾಗಿದ್ದಾರೆ. ಈಗ ಯಾಕೆ ಈ ವಿಷಯ ಎಂದರೆ ಮಹೇಶ್ ಬಾಬು ಮತ್ತೆ ಹೊಸಬರತ್ತ ಮುಖ ಮಾಡಿದ್ದಾರೆ.
ಸದ್ಯದಲ್ಲೇ ಹೊಸಬರೇ ತುಂಬಿಕೊಂಡಿರುವ ಅವರ ಚಿತ್ರ ಸೆಟ್ಟೇರಲಿದೆ. ಈ ಬಾರಿ ಅವರು ಪರಿಚಯಿಸುವ ನಾಯಕ-ನಾಯಕಿಗೆ ಯಾವ ರೀತಿ ಅದೃಷ್ಟ ಕೈ ಹಿಡಿಯುತ್ತೋ ನೋಡಬೇಕು. “ಕ್ರೇಜಿಬಾಯ್’ ಚಿತ್ರದ ಮೂಲಕ ದಿಲೀಪ್ ಹಾಗೂ ಆಶಿಕಾ ಅವರನ್ನು ಮಹೇಶ್ ಬಾಬು ಪರಿಚಯಿಸಿದ್ದರು. ಆ ನಂತರ ಚೇತನ್ ಜೊತೆಗೆ “ಅತಿರಥ’ ಚಿತ್ರದ ಮಾಡಿದ ಮಹೇಶ್ ಬಾಬು ಈಗ ಮತ್ತೂಂದು ಹೊಸಬರ ಸಿನಿಮಾಕ್ಕೆ ಅಣಿಯಾಗಿದ್ದಾರೆ.
ಸುಘೋಷ್ ಎಂಬ ಹೊಸ ಪ್ರತಿಭೆ ಮಹೇಶ್ ಬಾಬು ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಸುಘೋಷ್ ಈಗಾಗಲೇ ಚಿತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ. ಈ ಬಾರಿಯೂ ಮಹೇಶ್ ಬಾಬು ಒಂದು ಔಟ್ ಅಂಡ್ ಔಟ್ ಲವ್ಸ್ಟೋರಿ ಹೇಳಲು ಮುಂದಾಗಿದ್ದಾರೆ. ಅವರದೇ ಮಾತಲ್ಲಿ ಹೇಳುವುದಾದರೆ, ರೆಗ್ಯುಲರ್ ಪ್ಯಾಟರ್ನ್ ಬಿಟ್ಟ ಲವ್ಸ್ಟೋರಿ. ಇನ್ನು, ಕಥೆ, ಪಾತ್ರಕ್ಕೆ ಹೊಂದಿಕೆಯಾಗುವ ನಾಯಕಿಯ ಹುಡುಕಾಟದಲ್ಲಿ ಮಹೇಶ್ ಬಾಬು ಬಿಝಿ.
ಈಗಾಗಲೇ ಒಂದಷ್ಟು ನಟಿಯರ ಜೊತೆ ಮಾತುಕತೆಯಾಗಿದ್ದು, ಸದ್ಯದಲ್ಲೇ ಅಂತಿಮವಾಗಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಶೀರ್ಷಿಕೆ, ತಾರಾಗಣ, ತಾಂತ್ರಿಕ ವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ. ಈ ನಡುವೆಯೇ ಮಹೇಶ್ ಬಾಬುಗೆ “ಅತಿರಥ’ ಚಿತ್ರ ಖುಷಿಕೊಟ್ಟಿದೆ. ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಆ ಚಿತ್ರ ಸದ್ದು ಮಾಡದೇ ಹೋದರೂ ಹಿಂದಿ ಡಬ್ಬಿಂಗ್ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆಯಂತೆ. ಟ್ರೆಂಡಿಂಗ್ ಓಟದಲ್ಲಿ “ಅತಿರಥ’ನ ಓಟ ಜೋರಾಗಿದ್ದು, ಮಹೇಶ್ ಬಾಬು ಖುಷಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ