ನೀರ್ದೋಸೆ ಆಯ್ತು ಈಗ “ಖಾಲಿದೋಸೆ’
ಹೊಸ ಅವತಾರದಲ್ಲಿ ಶುಭಾ
Team Udayavani, Sep 21, 2019, 3:02 AM IST
ಶುಭಾಪೂಂಜಾ ಸದ್ದಿಲ್ಲದೆಯೇ ಈಗ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದಾ ಒಂದಿಲ್ಲೊಂದು ಸಿನಿಮಾ ಮೂಲಕ ಸುದ್ದಿಯಾಗುತ್ತಿದ್ದ ಅವರು, ಹೊಸ ಚಿತ್ರದ ಮೂಲಕವೂ ಒಂದಷ್ಟು ಕುತೂಹಲ ಮೂಡಿಸಿದ್ದಾರೆ. ಆ ಕುತೂಹಲಕ್ಕೆ ಕಾರಣ, ಸಿನಿಮಾ ಹೆಸರು! ಹೌದು, ಶುಭಾಪೂಂಜಾ ನಟಿಸುತ್ತಿರುವ ಹೊಸ ಚಿತ್ರಕ್ಕೆ “ಖಾಲಿ ದೋಸೆ ಕಲ್ಪನ’ ಎಂದು ಹೆಸರಿಡಲಾಗಿದೆ. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ, ಇದು “ನೀರ್ದೋಸೆ’ ರೀತಿಯ ಸಿನಿಮಾ ಇರಬಹುದಾ? ಎಂಬ ಪ್ರಶ್ನೆ ಎದುರಾಗುವುದು ಸಹಜ.
ಆದರೆ, ಚಿತ್ರದ ಕಥೆ, ಪಾತ್ರ ಹೇಗಿರುತ್ತೆ ಎಂಬುದಕ್ಕೆ ಸಿನಿಮಾ ಬಿಡುಗಡೆಯವರೆಗೂ ಕಾಯಲೇಬೇಕು. ಅಂದಹಾಗೆ, ಈ ಚಿತ್ರವನ್ನು ಶರಣ್ ಕಬ್ಬೂರ್ ನಿರ್ದೇಶನ ಮಾಡುತ್ತಿದ್ದಾರೆ. ಶರಣ್ ಕಬ್ಬೂರ್ ಈ ಹಿಂದೆ ಸಿನಿಮಾವೊಂದನ್ನು ಅನೌನ್ಸ್ ಮಾಡಿದ್ದರು. ಕೊನೆಗೆ ಆ ಚಿತ್ರ ಸೆಟ್ಟೇರಲೇ ಇಲ್ಲ. ಈಗ “ಖಾಲಿದೋಸೆ’ಯ ಕಥೆ ಬರೆದುಕೊಂಡು ಬಂದಿದ್ದಾರೆ. ಶುಭಾ ಇಲ್ಲಿ ಕಲ್ಪನ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ, ಇದು ಸಸ್ಪೆನ್ಸ್ ಚಿತ್ರವೇ ಇರಬಹುದು ಅಂದುಕೊಂಡರೂ ಅಚ್ಚರಿ ಇಲ್ಲ.
ಸದ್ಯಕ್ಕೆ ಪೋಸ್ಟರ್ವೊಂದು ಬಿಡುಗಡೆಯಾಗಿದೆ. ಚಿತ್ರದ ಪೋಸ್ಟರ್ ನೋಡಿದರೆ, ಹುಡುಗ,ಹುಡುಗಿ ಮತ್ತೂಬ್ಬ ಕಾಣಸಿಗುತ್ತಾರೆ. ಹಾಗಾದರೆ, ಇಲ್ಲಿ “ಖಾಲಿದೋಸೆ ಕಲ್ಪನ’ ಕಥೆ ಏನು? ಎಂಬುದೇ ಸಸ್ಪೆನ್ಸ್. ಈ ಚಿತ್ರದ ಮೂಲಕ ಸಂಜಯ್ ಗೌಡ ಎಂಬ ಹೊಸ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದೆ. ಚಿತ್ರಕ್ಕೆ ಅಭಿಮನ್ರಾಯ್ ಸಂಗೀತ ನೀಡುತ್ತಿದ್ದಾರೆ.
ಉಳಿದಂತೆ ಚಿತ್ರದಲ್ಲಿ ಕ್ಲಿಕ್ ಶೀನು, ಸಿ.ಟಿ.ರಾಕೇಶ್ ಕೊಪ್ಪ, ಕೆ.ಎಂ.ಪ್ರಕಾಶ, ಇಸ್ಮಾಯಿಲ್ ಶ್ರೀರಾಜ್, ಸುಧೀಂದ್ರ ಹೊಸಳ್ಳಿ ಇತರರು ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಅದೇನೆ ಇರಲಿ, ಕನ್ನಡದಲ್ಲಿ ತರಹೇವಾರಿ ಶೀರ್ಷಿಕೆಗಳಿರುವ ಚಿತ್ರಗಳ ಸಾಲಿಗೆ “ಖಾಲಿದೋಸೆ ಕಲ್ಪನ’ ಕೂಡ ಸೇರಿದ್ದು, ಸದ್ಯಕ್ಕೆ ಶೀರ್ಷಿಕೆಯಲ್ಲೇ ಒಂದಷ್ಟು ಕುತೂಹಲ ಮೂಡಿಸಿರುವುದಂತೂ ಸುಳ್ಳಲ್ಲ. ಈವರೆಗೆ ಗ್ಲಾಮರಸ್ ಆಗಿಯೇ ಮಿಂಚಿದ್ದ ಶುಭಾಪೂಂಜಾ, ಈ ಚಿತ್ರದ ಮೂಲಕ ಮತ್ತೂಂದು ಮೋಡಿ ಮಾಡಲು ಸಜ್ಜಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್