ಪಾಲಿಗೆ ಬಂದಿದ್ದೇ ಪಂಚಾಮೃತ ಬಕೆಟ್‌ ಹಿಡಿಯಲ್ಲ; ಅವಕಾಶ ಕೇಳಲ್ಲ


Team Udayavani, Sep 23, 2017, 3:24 PM IST

Mamatha-Rahuth-(4).jpg

ಬಹುಶಃ ಕನ್ನಡದಲ್ಲಿ ಪ್ರತಿ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ನಟಿಸುವ ಹೀರೋಯಿನ್‌ ಎಂದರೆ ಅದು ಮಮತಾ ರಾಹುತ್‌ ಇರಬೇಕು. ಪ್ರತಿವರ್ಷ ಆಕೆಯ ಐದಾರು ಚಿತ್ರಗಳಾದರೂ ಬಿಡುಗಡೆಯಾಗುತ್ತವೆ. ಆ ಚಿತ್ರಗಳು ಆರಕ್ಕೇರುವುದಿಲ್ಲ, ಮೂರಕ್ಕಿಳಿಯುವುದಿಲ್ಲ. ಆದರೂ ಮಮತಾ ರಾಹುತ್‌ಗೆ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ಮಮತಾ ಅಭಿನಯದ “ರೂಪಾ’ ಎಂಬ ಚಿತ್ರ ಬಿಡುಗಡೆಯಾಗಿದೆ. ಇನ್ನು ಸದ್ಯದಲ್ಲೇ “ಗ್ಯಾಪಲ್ಲೊಂದು ಸಿನಿಮಾ’, “ನಮ್ಮೂರ ಹೈಕ್ಳು’ ಎಂಬ ಚಿತ್ರಗಳು ಬಿಡುಗಡೆಯಾಗಿವೆ. “ಶಿವನ ಪಾದ’ ಎಂಬ ಚಿತ್ರ ಸೆಟ್ಟೇರಿದೆ. 

ಇನ್ನು “ಧರ್ಮಸ್ಯ’ದಲ್ಲೊಂದು ಐಟಂ ಸಾಂಗು, ಇನ್ನಾವುದೋ ಚಿತ್ರದಲ್ಲೊಂದು ಕಾಮಿಡಿ ಸೀನು … ಹೀಗೆ ಮಮತಾ ರಾಹುತ್‌ ಒಂದಲ್ಲ ಒಂದು ಸಿನಿಮಾ ಮತ್ತು ಒಂದಲ್ಲೊಂದು ಪಾತ್ರದಲ್ಲಿ ಬಿಝಿಯಾಗಿಯೇ ಇದ್ದಾರೆ. ಎಲ್ಲಾ ಸರಿ, ಇದುವರೆಗೂ ಅಭಿನಯಿಸಿದ ಸಿನಿಮಾಗಳ ಸಂಖ್ಯೆ ಎಷ್ಟಾಗಿರಬಹುದು ಎಂದರೆ, ಕಾಮಿಡಿ ಪಾತ್ರಗಳಲ್ಲಿ 40 ಮತ್ತು ನಾಯಕಿಯಾಗಿ 60 ಎಂಬ ಉತ್ತರ ಅವರಿಂದ ಬರುತ್ತದೆ. ಅಲ್ಲಿಗೆ, ಸಂಖ್ಯೆ 60 ದಾಟುತ್ತದೆ.

ಅಷ್ಟೊಂದಾಗಿದೆಯಾ ಎಂದು ಆಶ್ಚರ್ಯವಾಗಬಹುದು. ಅದಕ್ಕೆ ಅವರ ಉತ್ತರ ಹೀಗಿದೆ. “ನಾನು ಚಿತ್ರರಂಗಕ್ಕೆ ಬಂದು 14 ವರ್ಷಗಳಾಯಿತು. 2005ರಲ್ಲಿ ಬಿಡುಗಡೆಯಾದ “ಪುಟಾಣಿ ಫೋರ್ಸ್‌ ಎ ಟು ಝಡ್‌’ ನನ್ನ ಮೊದಲ ಸಿನಿಮಾ. ಆಗ ಅವಕಾಶ ಸಿಗೋದೇ ಕಷ್ಟವಾಗಿತ್ತು. ಸಿಕ್ಕಿದ್ದನ್ನು ಮಾಡಿದೆ. ತುಂಬಾ ಚಿತ್ರಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ನಟಿಸಿದೆ. ಎಷ್ಟೋ ಜನ ಅವಮಾನ ಮಾಡಿದ್ರು, ಕಾಲೆಳೆದ್ರು. ನಾನು ಏನಾದ್ರೂ ಸಾಧನೆ ಮಾಡಬೇಕು ಎಂದು ಅದ್ಯಾವ ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ಕೆಲಸ ಮಾಡುತ್ತಾ ಹೋದೆ’ ಎನ್ನುತ್ತಾರೆ ಅವರು.

ಹೀಗೇ ಅಭಿನಯಿಸುವಾಗ ಕ್ರಮೇಣ ಹೀರೋಯಿನ್‌ ಪಾತ್ರಗಳು ಸಿಕ್ಕವಂತೆ. ಅದೂ ಸಹ ದೊಡ್ಡ ಚಿತ್ರಗಳೇನಲ್ಲ. “ಕನ್ನಡದವರಿಗೆ ಅದ್ಯಾಕೆ ಅವಕಾಶ ಸಿಗುವುದಿಲ್ಲವೋ ಗೊತ್ತಿಲ್ಲ. ಅದೇನೋ ಹೇಳ್ತಾರಲ್ಲ, ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಬೇರೆ ಕಡೆ ತುಪ್ಪಕ್ಕೆ ಹುಡುಕ್ತಾರೆ ಅಂತ. ನಮ್ಮದೂ ಅದೇ ಪರಿಸ್ಥಿತಿ. ಎಲ್ಲೆಂಲಿಂದಲೋ ನಾಯಕಿಯರನ್ನು ಹುಡುಕಿಕೊಂಡು ಬರ್ತಾರೆ. ಹಾಗಂತ ನಾನು ಧೂಷಣೆ ಮಾಡೋಲ್ಲ. ಏಕೆಂದರೆ, ನಾನು ಸಹ ತೆಲುಗು ಸಿನಿಮಾದಲ್ಲಿ ಮಾಡಿದ್ದೀನಿ. ನಾನು ಮೂಲತಃ ಇಲ್ಲಿಯವಳಾದರೂ, ಹೈದರಾಬಾದ್‌ ನನ್ನ ಎರಡನೆಯ ಮನೆ ಆಗಿಬಿಟ್ಟಿದೆ. ಇನ್ನೂ ಎರಡೂಮೂರು ತೆಲುಗು ಚಿತ್ರಗಳಲ್ಲಿ ನಟಿಸುವುದಕ್ಕೆ ಆಫ‌ರ್‌ ಬಂದಿದೆ. ಒಂದೇ ಸಿನಿಮಾದಲ್ಲಿ ನಾನು ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ನಟಿಸುವ ಸಾಧ್ಯತೆ ಇದೆ’ ಎನ್ನುತ್ತಾರೆ ಮಮತಾ.

ಮಮತಾಗೆ ಸಿನಿಮಾ ಹಿನ್ನೆಲೆ ಇಲ್ಲವಂತೆ. ತಂದೆ ನೇಕಾರರು, ಗಾರ್ಮೆಂಟ್ಸ್‌ ಇಟ್ಟುಕೊಂಡವರು. ಈಗ ಅವರಿಗೆ ರೆಸ್ಟ್‌ ಕೊಟ್ಟು, ಮನೆಯ ಜವಾಬ್ದಾರಿ ಇವರು ತಗೊಂಡಿದ್ದಾರಂತೆ. “ಅವರು ನಮಗಾಗಿ ಸಾಕಷ್ಟು ದುಡಿದಿದ್ದಾರೆ. ಹಾಗಾಗಿ ಈಗ ಅವರಿಗೆ ರೆಸ್ಟ್‌. ನನ್ನ ಸಂಭಾವನೆ ಎಲ್ಲಾ ಅವರೇ ನೋಡ್ಕೊತಾರೆ. ನಾನು ಅವರ ಬಳಿ ತಿಂಗಳಿಗೆ ಇಷ್ಟು ಅಂತ ಪಾಕೆಟ್‌ ಮನಿ ತಗೋತೀನಿ. ಇಷ್ಟು ಸಿನಿಮಾಗಳಲ್ಲಿ ನಟಿಸಿರಬೇಕಾದರೆ, ತುಂಬಾ ದುಡ್ಡು ದುಡಿದಿರಬಹುದು ಅಂತ ಎಲ್ಲರೂ ಅಂದೊಳ್ಳೋದು ಸಹಜ. ಆದರೆ, ನಮಗೆ ಅಷ್ಟೊಂದು ಸಂಭಾವನೆ ಯಾರು ಕೊಡುತ್ತಾರೆ ಹೇಳಿ. ಎಲ್ಲರೂ ಲೋ ಬಜೆಟ್‌ ಸಿನಿಮಾ ಮಾಡ್ತೀವಿ ಅಂತಲೇ ಬರುತ್ತಾರೆ. ಇನ್ನು ಕಡಿಮೆ ಕೊಟ್ಟರೂ, ಬರಬೇಕಾಗಿರೋದೇ 15 ಲಕ್ಷದವರೆಗೂ ಇದೆ. ಅದೆಲ್ಲಾ ಹೇಗೆ ಕೇಳ್ಳೋದು ಹೇಳಿ’ ಎಂಬ ಪ್ರಶ್ನೆ ಅವರಿಂದ ಬರುತ್ತದೆ.

ದೊಡ್ಡ ಚಿತ್ರಗಳಲ್ಲಿ ಮತ್ತು ದೊಡ್ಡ ಹೀರೋಗಳ ಜೊತೆಗೆ ಅವಕಾಶ ಸಿಕ್ಕಿಲ್ಲ ಎಂಬ ಸಣ್ಣ ಬೇಸರವಿದ್ದರೂ, ಮಮತಾ ತೋರಿಸಿಕೊಳ್ಳುವುದಿಲ್ಲ. “ದೊಡ್ಡ ಅವಕಾಶ ಸಿಗದಿದ್ದರೂ ಪರವಾಗಿಲ್ಲ. ನಾನು ಬಕೆಟ್‌ ಹಿಡಿಯುವುದಿಲ್ಲ. ಅವಕಾಶ ಕೊಡಿ ಅಂತ ಕೇಳಲ್ಲ. ಸಿನಿಮಾ ಇಲ್ಲ ಅಂದ್ರೂ ನೋ ಪ್ರಾಬ್ಲಿಮ್‌. ಟ್ಯೂಶನ್‌ ಹೇಳಿಕೊಡಬಲ್ಲೆ. ಅಡುಗೆ ಮಾಡಬಲ್ಲೆ. ಅದರಿಂದಲೇ ಬದುಕು ಕಟ್ಟಿಕೊಳ್ಳಬಹುದು ಅಂತ ನಂಬಿಕೆ ಇದೆ’ ಎನ್ನುತ್ತಾರೆ ಮಮತಾ.

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.