ಗೋಲ್ಡನ್ ಸಿನ್ಮಾಗೆ ಪವರ್ ಸಾಂಗ್
ಗೀತಾ ಚಿತ್ರಕ್ಕೆ ಪುನೀತ್ ಹಾಡಿದ ಹಾಡು ಇಂದು ಸಂಜೆ ಬಿಡುಗಡೆ
Team Udayavani, Aug 29, 2019, 3:05 AM IST
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷೆಯ “ಗೀತಾ’ ಚಿತ್ರ ಇದೀಗ ಬಿಡುಗಡೆಯ ತಯಾರಿಯಲ್ಲಿದೆ. ಚಿತ್ರದಲ್ಲಿ ಹಲವು ವಿಶೇಷತೆಗಳ ಬಗ್ಗೆ ಹೇಳಲಾಗಿತ್ತು. ಈಗ ಹೊಸ ವಿಷಯವೆಂದರೆ, ಪುನೀತ್ರಾಜಕುಮಾರ್ ಅವರು ಈ ಚಿತ್ರದ ಪವರ್ಫುಲ್ ಹಾಡೊಂದನ್ನು ಹಾಡಿದ್ದಾರೆ. ಹೌದು, “ಗೀತಾ’ ಚಿತ್ರಕ್ಕಾಗಿ ಸಂತೋಷ್ ಆನಂದರಾಮ್ ಅವರು ಬರೆದ “ಕನ್ನಡ ಕನ್ನಡ ಕನ್ನಡ ಕನ್ನಡವೇ ಸತ್ಯ, ಕನ್ನಡ ಕನ್ನಡ ಕನ್ನಡ ಕನ್ನಡವೇ ನಿತ್ಯ..’ ಎಂಬ ಹಾಡಿಗೆ ಪುನೀತ್ ಧ್ವನಿಯಾಗಿದ್ದಾರೆ.
ಈಗಾಗಲೇ ಸಂತೋಷ್ ಆನಂದರಾಮ್ ಬರೆದ “ರಾಜಕುಮಾರ’ ಹಾಡು ಸೂಪರ್ಹಿಟ್ ಆಗಿದ್ದು ಗೊತ್ತೇ ಇದೆ. ಈಗ ಕನ್ನಡಿಗರಿಗೆ ಇಷ್ಟವಾಗುವ ಅಪ್ಪಟ ಕನ್ನಡ ಹಾಡು ಬರೆದಿದ್ದು, ಪುನೀತ್ ಹಾಡಿರುವುದರಿಂದ ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. ಇನ್ನು, ಅನೂಪ್ ರೂಬಿನ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡು ಆ.29 (ಇಂದು) ರ ಸಂಜೆ 6ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಲಿದೆ.
ಪುನೀತ್ರಾಜಕುಮಾರ್ ಅವರು ಗಣೇಶ್ ಅವರಿಗೆ ಹಾಡಿರುವ ಮೂರನೇ ಹಾಡು ಇದು. ಈ ಹಿಂದೆ ಪುನೀತ್ “ಶೈಲೂ’ ಚಿತ್ರದಲ್ಲಿ ಹಾಡಿದ್ದರು. ಅದಾದ ಬಳಿಕ “ಜೂಮ್’ ಚಿತ್ರದಲ್ಲೂ “ರಾಜಾಧಿರಾಜ ರಾಜ ಮಾರ್ತಾಂಡ…’ ಎಂಬ ಹಾಡು ಹಾಡಿದ್ದರು. ಆ ಹಾಡು ಸೂಪರ್ ಹಿಟ್ ಆಗಿತ್ತು. ಈಗ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ “ಗೀತಾ’ ಚಿತ್ರಕ್ಕೆ “ಕನ್ನಡ ಕಂಪು’ ಸೂಸುವ ಹಾಡನ್ನು ಹಾಡಿದ್ದಾರೆ.
ವಿಶೇಷವೆಂದರೆ, ಚಿತ್ರದಲ್ಲೂ ಗಣೇಶ್ ಅವರು ಅಪ್ಪಟ ಕನ್ನಡ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಗೋಕಾಕ್ ಚಳವಳಿಯ ವಿಶೇಷತೆ ಕೂಡ ಇದರಲ್ಲಿದೆ. “ಪುನೀತ್ರಾಜಕುಮಾರ್ ಹಾಡಿರುವ ಹೈ ವೋಲ್ಟೆಜ್ ಹಾಡು ಇದು ಎನ್ನುವ ಗಣೇಶ್, ನನ್ನ ಸಿನಿಮಾಗಳಲ್ಲಿ ಪುನೀತ್ ಹಾಡಿರುವ ಹಾಡುಗಳು ಹಿಟ್ ಆಗಿವೆ. ಈ ಹಾಡು ಕೂಡ ಅದೇ ಲಿಸ್ಟ್ಗೆ ಸೇರಲಿದೆ. ಕನ್ನಡಿಗರಿಗೆ ಈ ಹಾಡು ಖಂಡಿತವಾಗಿಯೂ ರುಚಿಸಲಿದೆ’ ಎನ್ನುತ್ತಾರೆ ಗಣೇಶ್. “ಗೀತಾ’ ಶಂಕರ್ನಾಗ್ ಅಭಿನಯದ ಸೂಪರ್ ಹಿಟ್ ಸಿನಿಮಾ.
ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಚಿತ್ರದಲ್ಲಿ ಗಣೇಶ್ ಅವರು ಶಂಕರ್ನಾಗ್ ಅವರ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಚಿತ್ರದ ಫಸ್ಟ್ಲುಕ್ನಲ್ಲಿ ಗಣೇಶ್ ಅವರು ಹಾಕಿಕೊಂಡಿರುವ ಕ್ಯಾಪ್, ಗಡ್ಡ ಎಲ್ಲವೂ ಶಂಕರ್ನಾಗ್ ಅವರನ್ನು ಹೋಲುವಂತಿದೆ. ಜೊತೆಗೆ ಶರ್ಟ್ ಮೇಲೆ ಕನ್ನಡದ ಬಾವುಟದ ಸಂಕೇತವಿದೆ. ಚಿತ್ರವನ್ನು ಸೈಯ್ಯದ್ ಸಲಾಂ ಹಾಗೂ ಶಿಲ್ಪಾ ಗಣೇಶ್ ನಿರ್ಮಿಸುತ್ತಿದ್ದಾರೆ. ವಿಜಯ್ ನಾಗೇಂದ್ರ ನಿರ್ದೇಶನವಿದೆ. ಸೆಪ್ಟೆಂಬರ್ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ