ರಣಹೇಡಿ: ಮತ್ತೆ ಗ್ರಾಮ್ಯ ಸೊಗಡಿನ ಸಂಗೀತದೊಂದಿಗೆ ಮಿಂಚಿದ ಮನೋಹರ್!
Team Udayavani, Nov 6, 2019, 11:50 AM IST
ವಿ. ಮನೋಹರ್ ಕನ್ನಡ ಚಿತ್ರರಂಗಕ್ಕೆ ಹೊಸಾ ಬಗೆಯ ಹಾಡುಗಳಿಂದ ಶೃಂಗರಿಸಿದ ಸಂಗೀತ ಮಾಂತ್ರಿಕ. ಇವರ ಗರಡಿಯಿಯಲ್ಲಿ ಪಳಗಿದ ಪ್ರತಿಭೆಗಳೇ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಮಿಂಚುತ್ತಿದ್ದಾರೆ. ಈ ಕಾರಣದಿಂದಲೇ ಮನೋಹರ್ ಒಂದು ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆಂದರೆ ಆ ಬಗ್ಗೆ ಕುತೂಹಲ ಮೂಡಿಕೊಳ್ಳುತ್ತದೆ. ಇದೀಗ ಇದೇ ನವೆಂಬರ್ 22ರಂದು ಬಿಡುಗಡೆಗೆ ರೆಡಿಯಾಗಿರೋ ರಣಹೇಡಿ ಕೂಡಾ ಈ ಕಾರಣದಿಂದಲೇ ಗಮನ ಸೆಳೆದುಕೊಂಡಿತ್ತು. ಈ ಚಿತ್ರದ ವಿ ಮನೋಹರ್ ಸಂಗೀತ ನಿರ್ದೇಶನದ ಹಾಡುಗಳೆಲ್ಲವೂ ಈಗ ಹಿಟ್ ಆಗಿವೆ. ಈ ಮೂಲಕವೇ ಸದರಿ ಸಿನಿಮಾ ಬಗ್ಗೆ ಪ್ರೇಕ್ಷಕರೆಲ್ಲ ಆಕರ್ಷಿತರಾಗಿದ್ದಾರೆ.
ಇದು ಸುರೇಶ್ ನಿರ್ಮಾಣ ಮಾಡಿ, ಮನು ಕೆ ಶೆಟ್ಟಿಹಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಈವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಕರ್ಣ ಕುಮಾರ್ ಈ ಮೂಲಕ ನಾಯಕನಾಗಿ ಭಡ್ತಿ ಪಡೆದಿದ್ದಾರೆ. ನಾಯಕ ಅಂದರೆ ಬಿಲ್ಡಪ್ಪು ಬಡಿದಾಟ ಅಂದುಕೊಂಡರೆ ಇಲ್ಲಿನ ಹೀರೋ ಅದೆಲ್ಲಕ್ಕಿಂತ ಭಿನ್ನ. ಯಾಕೆಂದರೆ, ಕರ್ಣ ಇಲ್ಲಿ ರೈತನಾಗಿ ನಟಿಸಿದ್ದಾರೆ. ನಾಯಕಿ ಐಶ್ವರ್ಯಾ ರಾವ್ ಕೂಲಿಕಾರ ಹೆಣ್ಣುಮಗಳಾಗಿ ಅವರಿಗೆ ಸಾಥ್ ಕೊಟ್ಟಿದ್ದಾರೆ.
ಇದು ರೈತರ ಕಷ್ಟ ಸುಖಗಳಿಗೆ ಕಣ್ಣಾಗುವಂಥಾ ವಿಭಿನ್ನ ಕಥಾ ಹಂದರ ಹೊಂದಿರೋ ಚಿತ್ರ. ವಿ ಮನೋಹರ್ ಒಂದಷ್ಟು ಕಾಲ ಸಂಗೀತ ನಿರ್ದೇಶನದಿಂದ ದೂರ ಉಳಿದುಕೊಂಡಿದ್ದರೂ ಕೂಡಾ ಈ ಕಥೆಯ ಸೊಗಸಿನ ಕಾರಣದಿಂದಲೇ ಒಪ್ಪಿಕೊಂಡಿದ್ದರಂತೆ. ನಂತರ ಈ ಕಥೆಗೆ ತಕ್ಕುದಾದ ಸಂಗೀತದ ಪಟ್ಟುಗಳನ್ನು ಹಾಕಿ ಹಾಡುಗಳನ್ನು ರೂಪಿಸಿದ್ದಾರೆ. ವಿಭಿನ್ನ ಸೌಂಡಿಂಗ್ ಹೊಂದಿರೋ ಈ ಹಾಡುಗಳೆಲ್ಲ ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಈ ಎಲ್ಲ ಹಾಡುಗಳೂ ಕೂಡಾ ಮಾಧುರ್ಯದಿಂದಲೇ ಮೋಡಿ ಮಾಡಿವೆ. ಹೀಗೆ ಎಲ್ಲ ಥರದಲ್ಲಿಯೂ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಈ ಚಿತ್ರ ಇದೇ ತಿಂಗಳ 22ರಂದು ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ