![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
ಮಾತಿನ ಮಲ್ಲಿ ಈಗ ಗಾಯಕಿ
Team Udayavani, Mar 30, 2020, 1:15 PM IST
![ಮಾತಿನ ಮಲ್ಲಿ ಈಗ ಗಾಯಕಿ](https://www.udayavani.com/wp-content/uploads/2020/03/cinema-tdy-1-4-620x427.jpg)
ಆರ್ಜೆ ರಶ್ಮಿ ಅಂದರೆ ಮಾತಿನ ಮಲ್ಲಿ ಅನ್ನೋದು ಎಲ್ಲರಿಗೂ ಗೊತ್ತು. ಆರ್ಜೆಯಾಗಿ ಪಟ ಪಟ ಮಾತುದುರಿಸುವ ರಶ್ಮಿ ಗಾಯಕಿಯೂ ಹೌದು ಅಂತ ಬಹುತೇಕರಿಗೆ ಗೊತ್ತಿಲ್ಲ. ರಶ್ಮಿ ಒಬ್ಬ ಗಾಯಕಿ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಹೌದು, ಮಿಕ್ಸ್ಡ್ ಸ್ಟ್ರಿಂಗ್ಸ್ ಹೆಸರಿನ ಮ್ಯೂಸಿಕ್ ಸೀರೀಸ್ನಲ್ಲಿ ” ಪಲ್ಲವಿ ಅನುಪಲ್ಲವಿ ‘ ಚಿತ್ರದ “ನಗು ಎಂದಿದೆ ಮಂಜಿನ ಬಿಂದು.. ‘ ಎಂಬ ಹಾಡನ್ನು ಹಾಡುವ ಮೂಲಕ ಮೊದಲ ಹಾಡನ್ನು ತಮ್ಮ ಆರ್ಆರ್ ಪ್ರೊಡಕ್ಷನ್ಸ್ನಿಂದ ಹೊರ ತಂದಿದ್ದಾರೆ. ಈ ಮಿಕ್ಸ್ಡ್ ಸ್ಟ್ರಿಂಗ್ಸ್ಗೆ ಸಂಗೀತ ನಿರ್ದೇಶಕ ಪ್ರದೀಪ್ ವರ್ಮ ಸಾಂಗ್ ಅರೇಂಜ್ಮೆಂಟ್ಸ್ ಮತ್ತು ಮಿಕ್ಸಿಂಗ್ ಮಾಸ್ಟರಿಂಗ್ ಮಾಡಿದ್ದಾರೆ. ಹಾಡಿದ ಬಳಿಕ ಅದೇ ಹಾಡನ್ನು ಚಿತ್ರೀಕರಿಸಿರುವ ರಶ್ಮಿ ತಂಡ, ಅದನ್ನು ಇದೀಗ ಯುಟ್ಯೂಬ್ನಲ್ಲಿ ಲಾಂಚ್ ಮಾಡಿದ್ದಾರೆ.
ತಮ್ಮ ಮೊದಲ ಪ್ರಯತ್ನದ ಬಗ್ಗೆ “ಉದಯವಾಣಿ’ ಜೊತೆ ಹೇಳಿಕೊಂಡ ರ್ಯಾಪಿಡ್ ರಶ್ಮಿ, “ಇದು ಮೊದಲ ಪ್ರಯತ್ನ. ಮಿಕ್ಸ್ಡ್ ಸ್ಟ್ರಿಂಗ್ಸ್ ಎಂಬ ಮ್ಯೂಸಿಕ್ ಸೀರೀಸ್ನಲ್ಲಿ ಎರಡು ಹಾಡನ್ನು ಮಿಕ್ಸ್ ಮಾಡಿ ರೀ ಕ್ರಿಯೇಟ್ ಮಾಡಲಾಗುತ್ತದೆ. ಇಲ್ಲಿ ಚಿತ್ರಗೀತೆ, ಭಾವಗೀತೆ, ಜಾನಪದ ಗೀತೆ ಹೀಗೆ ಬೇರೆ ಬೇರೆ ಜಾನರ್ ಹಾಡುಗಳನ್ನು ತೆಗೆದುಕೊಂಡು ಮಾಡಬಹುದು. ಒಂದೇ ರಾಗದಲ್ಲಿರುವಂತಹ ಹಾಡನ್ನು ಇಲ್ಲಿ ಮ್ಯಾಚ್ ಮಾಡುವುದು ವಿಶೇಷ. ಈಗಾಗಲೇ ಹಿಂದಿಯಲ್ಲಿ ಮಿಕ್ಸ್ಟೇಪ್ ಎಂಬ ಕಾನ್ಸೆಪ್ಟ್ನಲ್ಲಿ ಹಾಡುಗಳು ಬಂದಿವೆ.
ಕನ್ನಡದಲ್ಲಿ ಬೇರೆ ರೀತಿಯ ಪ್ರಯೋಗ ಇರಬಹುದು. ನಾನು ಮಾಡುತ್ತಿರುವ ಮಿಕ್ಸ್ಡ್ಸ್ಟ್ರಿಂಗ್ಸ್ ಬಂದಿಲ್ಲ . ಈ ಸೀರೀಸ್ನಲ್ಲಿ ಸದ್ಯಕ್ಕೆ ನಾಲ್ಕು ಹಾಡುಗಳಿವೆ. ಈಗ ಒಂದು ಆಚೆ ಬಂದಿದೆ. ದರ್ಶನ್ ಹಾಗು ಸುದೀಪ್ ಅಭಿನಯದ ಚಿತ್ರಗಳ ” ಸಾಲುತ್ತಿಲ್ಲವೇ.. ‘ ಹಾಗು ” ಒಂದು ಮಳೆಬಿಲ್ಲೆ ‘ ಎಂಬ ಹಾಡು ಹೊರಬಲಿದೆ. ನಂತರ ಹಿಂದಿಯ ಹಾಡಿನ ಜೊತೆಗೆ “ಏನಮ್ಮಿ ಏನಮ್ಮಿ ‘ ಹಾಡು ಹೊರಬರಲಿದೆ. ಈ ಹಾಡಿನ ರೈಟ್ಸ್ ಆಡಿಯೋ ಕಂಪನಿಯದ್ದೇ ಆಗಿರುತ್ತೆ. ನಾನು ಒರಿಜಿನಲ್ ಮಾಡಿದಾಗ ಮಾತ್ರ ನನ್ನ ಹಕ್ಕು ಆಗಿರುತ್ತೆ ‘ ಎಂದು ವಿವರ ಕೊಡುತ್ತಾರೆ ರಶ್ಮಿ.
ಟಾಪ್ ನ್ಯೂಸ್
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.